Horoscope Today : 11 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಎಲ್ಲಾ ಪ್ರಶಂಸೆಗಳ ವೈಭವದಲ್ಲಿ ಮತ್ತು ಸಾಮಾಜಿಕ ಸಂಬಂಧಗಳಿಂದ ನಿಮ್ಮತ್ತ ಬರುವ ಮನ್ನಣೆ ಮತ್ತು ವಿವಿಧ ಕ್ಷೇತ್ರಗಳಿಂದ ಸಿಗುವ ಚಾತುರ್ಯವು ಅದೃಷ್ಟಶಾಲಿ ಮೇಷರಾಶಿಯವರನ್ನು ಹಾಯಾಗಿರಿಸುತ್ತದೆ. ಬೌದ್ಧಿಕ ಚರ್ಚೆಗಳು ನಿಮ್ಮನ್ನು ಉತ್ಸಾಹಗೊಳಿಸುತ್ತದೆ ಮತ್ತು ನಿಮ್ಮ ಭಾಗವಹಿಸುವಿಕೆ ಪ್ರಶಂಸಾರ್ಹವಾಗಲಿದೆ.

ಆದರೆ, ನಿಮ್ಮ ವ್ಯಂಗ್ಯದ ಮಾತುಗಳ ಮೇಲೆ ನಿಯಂತ್ರವಿಡುವುದು ಅತೀ ಮುಖ್ಯ. ಇತರರು ಒಪ್ಪದ ಆದರೆ ನೀವು ಅದಕ್ಕೇ ಬದ್ಧರಾಗಲು ಬಯಸುವ ಕೆಲವು ಆದರ್ಶವಾದಗಳ ಕುರಿತಂತೆ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ಹಣಕಾಸಿನ ವಿಚಾರದಲ್ಲಿ ಗ್ರಹಗತಿಗಳು ಅನುಕೂಲಕರವಾಗಿರುತ್ತದೆ ಮತ್ತು ಗೃಹಕ್ಷೇತ್ರವು ನೆಮ್ಮದಿ ಹಾಗೂ ತೃಪ್ತಿಯಿಂದ ಕೂಡಿರುತ್ತದೆ. ಇಂದು ನೀವು ಏನೇ ಪ್ರಯತ್ನಪಟ್ಟರೂ ಅದು ಪರಿಹಾರ ಉದ್ದೇಶವಾಗಿರುವಂತೆ ನೋಡಿಕೊಳ್ಳಿ.

ವೃಷಭ :-

ನಿಮ್ಮ ಸಿಹಿಯಾದ ಸ್ವಭಾವಕ್ಕಾಗಿ ನೀವು ಪ್ರಶಂಸೆ ಪಡೆದುಕೊಳ್ಳುತ್ತಲೇ ಇರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊರಗೆ ಹೋಗಿ ಮಜಾ ಮಾಡೋಣ ಎಂದೆನಿಸಿದಾಗ ಮತ್ತು ಚಿಂತೆ ಮಾಡುವ ಬದಲು ನಿಮಗನಿಸಿದ್ದನ್ನು ಮಾಡುವಾಗ ಮಾನಸಿಕ ಸ್ಥಿರತೆ, ಸ್ಪಷ್ಟತೆ, ಮತ್ತು ಶಾಂತಿ ಮುಂತಾದ ಅಧಿಕ ಪ್ರಯೋಜನಗಳನ್ನು ನೀವು ಪಡೆದುಕೊಳ್ಳುವಿರಿ. ಈ ಸಂತೋಷವು ನಿಮ್ಮ ಕುಟುಂಬ ಜೀವನವನ್ನು ಸಂತಸದಲ್ಲಿರಿಸುತ್ತದೆ. ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ ಮತ್ತು ಇದು ನಿಮ್ಮ ತಾಯಿಯ ಮನೆಗೆ ತೆರಳಲು ಅಥವಾ ಸಂಬಂಧಿಕರ ಭೇಟಿಗೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ. ಶುಭಸುದ್ದಿ ಬರಲಿದೆ.ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಂಡ ಕಾರಣ ಹಣಕಾಸು ಯಶಸ್ಸು ಸಿಗಲಿದೆ. ನೀವು ಸಹೋದ್ಯೋಗಿಗಳಿಂದ ಸಹಕಾರವನ್ನು ನಿರೀಕ್ಷಿಸುತ್ತೀರಿ. ನೀವು ಇತ್ತೀಚೆಗೆ ಅನಾರೋಗ್ಯದಿಂದ ಕೂಡಿದ್ದರೆ ಚೇತರಿಕೆಯನ್ನು ಕಾಣುತ್ತೀರಿ.

ಮಿಥುನ :-

ನಿಮ್ಮದೇ ಜಗತ್ತಿನಿಂದ ಹೊರಬರುವಂತೆ ಮತ್ತು ನಿಮ್ಮ ಮಕ್ಕಳ, ಸಂಗಾತಿಯ ಮತ್ತು ಪ್ರೀತಿಪಾತ್ರರ ಬೇಡಿಕೆ ಮತ್ತು ಅಗತ್ಯತೆಗಳ ಬಗ್ಗೆ ಗಮನಹರಿಸುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಅವರ ಆರೋಗ್ಯದ ಬಗ್ಗೆ ತೀವ್ರ ರೀತಿಯ ಕಾಳಜಿಯ ಅಗತ್ಯವಿರಬಹುದು. ಉದರ ಸಂಬಧಿ ವ್ಯಾಧಿಯ ಸಂಭಾವ್ಯತೆಯಿರುವುದರಿಂದ ನಿಮ್ಮದೇ ಆರೋಗ್ಯದ ಮೇಲೆ ತೊಂದರೆ ಉಂಟಾಗಬಹುದು ಎಂಬುದಾಗಿ ಗ್ರಹಗತಿಗಳು ಸೂಚನೆ ನೀಡುತ್ತವೆ. ಇಂದು ಬಿಡುವು ಪಡೆಯಲು ಪ್ರಯತ್ನಿಸಿ. ಪ್ರಯಾಣವನ್ನು ಮುಂದೂಡಿ ಮತ್ತು ಹೆಚ್ಚುವರಿ ವೆಚ್ಚಗಳನ್ನು ತಪ್ಪಿಸಿ ಮತ್ತು ಯಾವುದೇ ಹೊಸ ಕಾರ್ಯ ಪ್ರಾರಂಭವನ್ನು ತಪ್ಪಿಸಿ. ಹೊಸ ಯೋಜನೆಗಳ ಪ್ರಾರಂಭಕ್ಕೆ ಗ್ರಹಗತಿಗಳು ಶುಭಶಕುನವನ್ನು ನೀಡುವುದಿಲ್ಲ. ಪ್ರಮುಖ ಬೌದ್ಧಿಕ ಚರ್ಚೆ ಮತ್ತು ವಾಗ್ವಾದಗಳಲ್ಲಿ ತೊಡಕಿಗೆ ಸಿಕ್ಕಿಕೊಳ್ಳುವುದರಿಂದ ದೂರವಿರಿ. ಸಂವೇದಿಯಲ್ಲದ ಜನರೊಂದಿಗಿ ನೀವು ಬೆರೆತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಇಲ್ಲವಾದಲ್ಲಿ ನೀವು ಅಪನಿಂದೆಗೆ ಗುರಿಯಾಗಬಹುದು.

ಕರ್ಕಾಟಕ :-

ಯಾವುದೇ ಒಂದು ನಿಮ್ಮನ್ನು ಕಾಡುತ್ತಿದೆ. ಬಹುಶಃ ಪ್ರಸಕ್ತ ಉದ್ಯೋಗದಲ್ಲಿನ ಅತೃಪ್ತಿ ಅಥವಾ ಪಶ್ಚಾತ್ತಾಪವಾಗಿರಬಹುದು. ನಿಮಗೆ ಗೊತ್ತು ನೀವು ಹೆಚ್ಚು ಅರ್ಹವಾಗಿದ್ದೀರಿ ಅದಕ್ಕಾಗಿ ನೀವು ಸಣ್ಣ ಬದಲಾವಣೆಯನ್ನು ಬಯಸಿದ್ದೀರಿ. ಇದು ನಿಮ್ಮನ್ನು ದುರ್ಬಲ ಹಾಗೂ ಅಸ್ಥಿರಗೊಳಿಸುತ್ತಿದೆ.ನೀವು ನಿರುತ್ಸಾಹ ಹಾಗೂ ಕಡಿಮೆ ಚೈತನ್ಯ ಹೊಂದಿದ್ದಲ್ಲಿ, ನಿಮ್ಮ ಪ್ರಸಕ್ತ ಸನ್ನಿವೇಶವನ್ನು ಮರುವಿಮರ್ಷಿಸಲು ಪ್ರಯತ್ನಿಸಿ. ಶಾಂತರಾಗಿರಿ ಮತ್ತು ಜೀವನದಲ್ಲಿ ಒಳ್ಳೆಯ ವಿಚಾರಗಳ ಬಗ್ಗೆ ಗಮನಹರಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಲ್ಲವಾದಲ್ಲಿ ನೀವು ಮನೆಯಲ್ಲಿ ಪ್ರೀತಿಪಾತ್ರರೊಂದಿಗೆ ಜಗಳಕ್ಕೆ ಒಳಗಾಗಬಹುದು ಮತ್ತು ಭರ್ಜರಿ ಭೋಜನಕ್ಕೆ ಅಪಾಯ ಉಂಟಾಗಬಹುದು. ನೀವೇ ಅಡುಗೆ ತಯಾರಿಸಿದಲ್ಲಿ, ಅದಕ್ಕಾಗಿ ಅದಕ್ಕಾಗಿ ನೀವು ಏಳಬೇಕಾಗಿಲ್ಲ.ವ್ಯಾಧಿಯು ನಿಮ್ಮನ್ನು ಕಾಡುವ ಸಂಭಾವ್ಯತೆಯಿರುವುದರಿಂದ ಇಂದು ಆರೋಗ್ಯದ ಬಗ್ಗೆ ಎಚ್ಚರವಹಿಸಿ.

ಸಿಂಹ :-

ಸಂಬಂಧಗಳು, ಮೈತ್ರಿ, ಸಹವಾಸಗಳು ಈಗ ನಿಮ್ಮ ಜೀವನವನ್ನು ಆಳುತ್ತಿವೆ. ಎಲ್ಲವನ್ನೂ ವೃದ್ಧಿಗೊಳಿಸಲು ನೀವು ಬಯಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಮತ್ತು ಇಂದು ಗ್ರಹಗತಿಗಳು ನಿಮಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡಲಿವೆ. ಈ ಮಾನವ ಸಂವಾದಗಳು ಜೀವನ ಎಷ್ಟೊಂದು ಸುಂದರ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗಿಸುತ್ತದೆ ಒಂದು ವೇಳೆ ಯಾವುದೇ ಸಮಯದಲ್ಲಿ ಅವರು ಹೊರೆಯಾದರೆ. ಆದರೆ, ನಂತರ ನಾವು ಸಂಘಜೀವಿಗಳು ಅವರಿಲ್ಲದೆ ಉಳಿದುಕೊಳ್ಳಲೂ ಸಾಧ್ಯವಿಲ್ಲ. ಅವರು ನಿಮ್ಮ ಜೀವನದಲ್ಲಿ ರಂಗು ಮತ್ತು ಬಣ್ಣದ ಛಾಯೆಯನ್ನು ತರುತ್ತಾರೆ. ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ವೃದ್ಧಿಯಾಗುತ್ತದೆ. ಮತ್ತು ಎಲ್ಲಾ ಕ್ಷೇತ್ರಗಳಲ್ಲೂ ನೀವು ಸಹಕಾರವನ್ನು ಪಡೆಯುವಿರಿ. ನೀವು ನಿಮ್ಮ ಜೀವನದಲ್ಲಿ ಈ ನಿರ್ದಿಷ್ಟ ಸಂಬಂಧಗಳ ಅಗತ್ಯವನ್ನು ಮನಗಾಣುತ್ತೀರಿ ಮತ್ತು ನಿಮ್ಮ ಭಾವಾತಿರೇಕವು ಇನ್ನೂ ಹೆಚ್ಚಾಗುತ್ತದೆ. ಇಂದು ಪ್ರಾರಂಭಿಸುವ ಪ್ರಯಾಣವು ಒತ್ತಡದಿಂದ ದೂರವಿಡುತ್ತದೆ. ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಸಮಯವು ಉತ್ತಮವಾಗಿದೆ.

ಕನ್ಯಾ :-

ಈ ದಿನದ ಮುಖ್ಯ ವಿಷಯವು ಸಿಹಿ ಮತ್ತು ಇನ್ನಷ್ಟು ಸಿಹಿಯಾಗಿದೆ. ಆದ್ದರಿಂದ ಜನರೊಂದಿಗೆ ನೀವು ಎಂದಿಗಿಂತ ಹೆಚ್ಚು ಸಿಹಿಯಾಗಿರುತ್ತೀರಿ ಎಂಬುದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಮತ್ತು ನಿಮ್ಮ ದಿನದ ಕಾರ್ಯಸೂಚಿಯಲ್ಲಿ ಎಲ್ಲವೂ ಸಿಹಿಯಾಗಿಯೇ ಪ್ರಭಾವ ಬೀರುತ್ತದೆ. ಹಿತಕರ ಸಂಬಂಧಗಳ ಪ್ರಯೋಜನಗಳು ನಿಮಗೆ ಅರಿವಾಗಬಹುದು ಮತ್ತು ನಿಯೋಜಿತ ಎಲ್ಲಾ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರೈಸಲು ಸಾಧ್ಯವಾಗಬಹುದು. ಇದು ಶಾಂತಿಯ ಮನಸ್ಸು ಮತ್ತು ಉತ್ತಮ ಆರೋಗ್ಯದ ಭರವಸೆಯನ್ನು ನೀಡುತ್ತದೆ. ಬೌದ್ಧಿಕ ಚರ್ಚೆಗಳಿಂದ ದೂರವಿರಿ ಮತ್ತು ಸಂತೋಷಕರ ಸಮಯವನ್ನು ಆನಂದಿಸುವತ್ತ ಗಮನ ಹರಿಸಿ.ಕ್ಯಾಲೋರಿ ಲೆಕ್ಕ ಹಾಕುವ ಬದಲು ಸಿಹಿಯಾದ ತಿನಿಸು, ಐಸ್‌ಕ್ರೀಂ ಮುಂತಾದವುಗಳನ್ನು ನೀವು ಆರಿಸುವಿರಿ ಎಂಬುದರಲ್ಲಿ ಆಶ್ಚರ್ಯವಿಲ್ಲ. ಪ್ರವಾಸ ತೆರಳುವ ಸಾಧ್ಯತೆಯಿದೆ ಆದರೆ, ಅನಿರೀಕ್ಷಿತ ವೆಚ್ಚಗಳ ಬಗ್ಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಮತ್ತು ಶೈಕ್ಷಣಿಕ ಆಸಕ್ತರಿಗೆ ಇದು ಸೂಕ್ತದಿನವಲ್ಲ.

ತುಲಾ :-

ಹಣ ಮತ್ತು ಆರ್ಥಿಕ ವಿಚಾರಕ್ಕೆ ಸಂಬಂಧಿಸಿ ಈಗ ನೀವು ಅತಿ ಸೂಕ್ಷ್ಮ ಹಾಗೂ ದೋಷರಹಿತವಾಗಿರುತ್ತೀರಿ. ವ್ಯವಹಾರ ಯೋಜನೆಗಳಿಗಾಗಿ ಅಗತ್ಯವಿರುವ ಬಂಡವಾಳ ಮೊತ್ತವನ್ನು ಸಿದ್ಧಪಡಿಸಲು ಯೋಜಿಸಿದ್ದರೆ ಇದಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ. ಈ ಉನ್ನತ ಪ್ರಭಾವಗಳೊಂದಿಗೆ, ಇಂದು ನೀವು ಅತ್ಯುನ್ನತವಾಗಿ ಕ್ರಿಯಾತ್ಮಕವಾಗಿರುತ್ತೀರಿ ಮತ್ತು ಕ್ರಿಯಾತ್ಮಕ ಉಡುಗೊರೆಗಳ ಮೂಲಕ ಜನರನ್ನು ಸುಲಭವಾಗಿ ಆಕರ್ಷಿತಗೊಳಿಸುತ್ತೀರಿ. ಈ ನಿಮ್ಮ ಹೆಚ್ಚಿದ ಅಂತರ್ದೃಷ್ಟಿಗೆ ನಿಮ್ಮ ಸದೃಢ ಆರೋಗ್ಯ ಮತ್ತು ಒತ್ತಡರಹಿತ ಮಾನಸಿಕ ಸ್ಥಿತಿಯೂ ಕಾರಣವಾಗಿರಬಹುದು. ನೀವು ವಿವಿಧ ವಿಚಾರಗಳಲ್ಲಿ ದೃಢ ನಿರ್ಧಾರಗಳನ್ನು ತಾಳುತ್ತೀರಿ ಮತ್ತು ಜಟಿಲ ನಿರ್ಧಾರಗಳಲ್ಲಿ ಖಚಿತ ಹಾಗೂ ಕ್ಷಿಪ್ರವಾಗಿ ನಿಭಾಯಿಸುತ್ತೀರಿ. ಪರಿಣಾಮವಾಗಿ ನಿಮ್ಮ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಸಂಜೆಯ ವೇಳೆ ಉತ್ಸಾಹಪೂರ್ಣ ಸ್ನೇಹಕೂಟವನ್ನು ಆಯೋಜಿಸುವ ಮೂಲಕ ಸಂಭ್ರಮಿಸಿ.

ವೃಶ್ಚಿಕ :-

ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ನಿಯಂತ್ರಣವಿರುವಂತೆ ಮತ್ತು ಇವೆರಡನ್ನೂ ಹತೋಟಿಯಲ್ಲಿಡಲು ಪ್ರಯತ್ನಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಸಾಮಾನ್ಯ ಅಸ್ವಸ್ಥತೆ, ನಿರುತ್ಸಾಹ, ಒತ್ತಡ ನಿಮ್ಮನ್ನು ಈದಿನ ಶಾಂತಿಯಿಂದಿರಲು ಬಿಡುವುದಿಲ್ಲ. ವಾಹನ ಚಾಲನೆಯ ವೇಳೆ ಅತೀ ಜಾಗರೂಕರಾಗಿರಿ ಮತ್ತು ವೈದ್ಯಕೀಯ ಪ್ರಕ್ರಿಯೆಗಳಿಗೆ ಯೋಜನೆ ರೂಪಿಸಿದ್ದಲ್ಲಿ ಅದನ್ನು ಮುಂದೂಡಿ. ಕಾನೂನು ವಿಚಾರಗಳ ಬಗ್ಗೆ ಇಂದು ಎಚ್ಚರಿಕೆ ಅಗತ್ಯ ಅಥವಾ ಅವುಗಳನ್ನು ಮುಂದೂಡುವುದು ಉತ್ತಮ. ನಿಮ್ಮ ಪ್ರೀತಿಪಾತ್ರರೊಂದಿಗೆ ಕ್ಷುಲ್ಲಕ ಕಾರಣದ ಚರ್ಚೆಯಲ್ಲಿ ತೊಡಕಿಗೆ ಸಿಲುಕಬಹುದು.ಇಂದು ನೀವು ಭೋಗವಾದದಲ್ಲಿ ತೊಡಗಿಕೊಳ್ಳುವುದರಿಂದ ಖರ್ಚುವೆಚ್ಚಗಳು ಹೆಚ್ಚಾಗಬಹುದು.

ಧನು :-

ಹಣಕಾಸು, ಸಮಾಜ, ಕುಟುಂಬ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗಣೇಶ ನಿಮಗೆ ಸಂತೋಷ ಮತ್ತು ಹಣ ಮತ್ತು ಅದೃಷ್ಟವನ್ನು ದಯಪಾಲಿಸಿರುವುದರಿಂದ ಸಂತಸ ಮತ್ತು ಹಣ ಎರಡೂ ಸಮಾನ ಪ್ರಮಾಣದಲ್ಲಿ ನಿಮಗೆ ದೊರೆಯಲಿದೆ. ಒಟ್ಟಾರೆಯಾಗಿ ಈ ದಿನವು ಶುಭಪ್ರದ ದಿನವಾಗಲಿದೆ ಮತ್ತು ಉತ್ತಮ ಪ್ರತಿಫಲ, ವ್ಯವಹಾರದಲ್ಲಿ ಲಾಭ ಮತ್ತು ನಿಮ್ಮ ಪ್ರೀತಪಾತ್ರರೊಂದಿಗೆ ಪ್ರವಾಸಿ ಕೇಂದ್ರಗಳಿಗೆ ಪ್ರಯಾಣ ಮುಂತಾದವುಗಳನ್ನು ನಿರೀಕ್ಷಿಸಬಹುದು. ಪ್ರೀತಿಯಲ್ಲಿರುವವರಿಗೆ ಮತ್ತು ವಿವಾಹಕ್ಕಾಗಿ ಎದುರು ನೋಡುತ್ತಿರುವ ಏಕಾಂಗಿಯರಿಗೆ ಇಂದು ಉತ್ತಮ ಸಮಯ ಮತ್ತು ಇಂದು ಅವರ ಸಂಭಾವ್ಯ ಸಂಗಾತಿಯನ್ನು ಭೇಟಿಯಾಗುವ ಸುವರ್ಣಾವಕಾಶ ಒದಗಿ ಬರಲಿದೆ.

ಮಕರ :-

ಮಕ್ಕಳು ಮತ್ತು ಕೌಟುಂಬಿಕ ವಿಚಾರಗಳಲ್ಲಿ ಸಂತೋಷ ಮತ್ತು ಸಂಭ್ರಮವನ್ನು ಗಣೇಶ ನಿಮಗೆ ದಯಪಾಲಿಸುವುದರಿಂದ ನೀವು ಉದಾತ್ತ ಭಾವನೆಯನ್ನು ಹೊಂದುತ್ತೀರಿ. ಸ್ನೇಹಿತರು ಮತ್ತು ಪ್ರೀತಿಪಾತ್ರರೊಂದಿಗಿನ ದಿಢೀರ್ ಭೇಟಿಯು ನಿಮ್ಮನ್ನು ಇನ್ನಷ್ಟು ಖುಷಿಯಲ್ಲಿರಿಸಲಿದೆ. ವ್ಯವಹಾರದಲ್ಲಿನ ಆರ್ಥಿಕ ವಿಚಾರಗಳಿಂದಾಗಿ ನೀವು ಪ್ರಯಾಣ ತೆರಳುವ ಸಂಭವ ಬರಬಹುದು. ಆದರೆ, ಚಿಂತಿಸಬೇಡಿ ಇದು ಲಾಭದಾಯಕ ಮತ್ತು ಅದೃಷ್ಟದಾಯಕವಾಗಿರುತ್ತದೆ. ಇದು ವ್ಯವಹಾರ ಮತ್ತು ವೃತ್ತಿಕ್ಷೇತ್ರದಲ್ಲಿ ನಿಮ್ಮ ನಿಲುವು ಮತ್ತು ಘನತೆಯನ್ನು ಹೆಚ್ಚಳಕ್ಕೆ ಕಾರಣವಾಗುತ್ತದೆ. ಮೇಲಾಧಿಕಾರಿಗಳು ಇಂದು ನಿಮ್ಮನ್ನು ಹೊಗಳುತ್ತಾರೆ ಅಥವಾ ಪ್ರೋತ್ಸಾಹಿಸುತ್ತಾರೆ ಆದರೆ, ಅನಿರೀಕ್ಷಿತ ಅಪಾಯದ ಬಗ್ಗೆ ಎಚ್ಚರಿಕೆಯಿಂದಿರಿ.

ಕುಂಭ :-

ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಆಹ್ವಾನವಿಲ್ಲದ ಚರ್ಚೆ ಮತ್ತು ವಾಗ್ವಾದಗಳಲ್ಲಿ ತೊಡಗಿಕೊಳ್ಳಬೇಡಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಸಣ್ಣದಾದರೂ, ನಿಮ್ಮ ಆರೋಗ್ಯವನ್ನು ಕಾಡುತ್ತಿರುವ ತೊಂದರೆಯಿಂದಾಗಿ ಮತ್ತು ಮಕ್ಕಳಿಗೆ ಸಂಬಂಧಿಸಿದ ಚಿಂತೆಗಳಿಂದಾಗಿ ನೀವು ನಿರುತ್ಸಾಹ ಹಾಗೂ ನಿರಾಸಕ್ತಿಯನ್ನು ಹೊಂದಬಹುದು. ಅದೃಷ್ಟವಾಗಿ ನೀವು ಮಾನಸಿಕವಾಗಿ ವಿಶ್ರಾಂತ ಹಾಗೂ ಉಲ್ಲಾಸದಿಂದಿರುತ್ತೀರಿ ಮತ್ತು ಸಡಗರ ಹಾಗೂ ಜೀವನದ ಸಣ್ಣ ಖುಷಿಗಳಲ್ಲಿ ಕಾಲಕಳೆಯಬಹುದು. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳೊಂದಿಗೆ ನಿಮ್ಮ ನಡತೆಯ ಬಗ್ಗೆ ಎಚ್ಚರವಹಿಸಿ. ಇಂದು ವಿದೇಶದಿಂದ ನೀವು ಸುದ್ದಿಯನ್ನು ನಿರೀಕ್ಷಿಸಬಹುದು.

ಮೀನ :-

ಇಂದಿನ ಎಲ್ಲಾ ಕಾರ್ಯಗಳಲ್ಲಿ ಮತ್ತು ವ್ಯವಹಾರಗಳಲ್ಲಿ ಜಾಗರೂಕರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ರಹಸ್ಯ ವಿಚಾರಗಳಲ್ಲಿ ಅಥವಾ ನೈತಿಕವಾಗಿ ಅಸಮರ್ಪಕವಾಗಿರುವ ಅಥವಾ ಸಾಮಾನ್ಯ ರೂಢಿಗೆ ವಿರುದ್ಧವಾಗಿರುವ ಸರಕಾರಿ ಕಾರ್ಯಗಳಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ಸಂಯಮ ಕಾಯ್ದುಕೊಳ್ಳಿ. ಆರೋಗ್ಯ ವಿಚಾರಗಳಿಗಾಗಿ ಹೆಚ್ಚಿದ ಖರ್ಚು ಮತ್ತು ನಿಮ್ಮ ಮಾನಸಿಕ ಸ್ಥಿತಿಯನ್ನು ಒಟ್ಟಾರೆಯಾಗಿ ಕ್ಷೋಭೆಗೊಳಿಸುವ ಮುಂತಾದ ಪರೀಕ್ಷೆಗೊಳಪಡುವ ಜನರು ಹಾಗೂ ಪರಿಸ್ಥಿತಿಗಳಲ್ಲಿ ಸಮಾಧಾನದಿಂದಿರಿ ಹಾಗೂ ತಾಳ್ಮೆಯ ನಿಲುವನ್ನು ತಾಳಿ. ಆರೋಗ್ಯಕರವಾಗಿರಲು ಮತ್ತು ಮನೆಯಲ್ಲಿ ಋಣಾತ್ಮಕ ವಾತಾವರಣವನ್ನು ತಪ್ಪಿಸಲು ನಿಮ್ಮ ಕೋಪ ಮತ್ತು ಮಾತಿನ ಮೇಲೆ ನಿಯಂತ್ರಣವಿರಲಿ ಮತ್ತು ಧ್ಯಾನ ಹಾದೂ ಪ್ರಾರ್ಥನೆಯಲ್ಲಿ ತೊಡಗಿಕೊಳ್ಳಿ.

WhatsApp Group Join Now

Spread the love

Leave a Reply