ಬಳ್ಳಾರಿಯಲಿ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದು, ಖಾಸಗಿ ಗನ್ ಮ್ಯಾನ್ ಗಳು ನಡೆಸಿದ ಫೈರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನಪ್ಪಿದ್ದಾನೆ. ಇದೀಗ ಈ ಒಂದು ಘಟನೆ ನಡೆದ ಬಳಿಕ, ಶಾಸಕ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರಿಗೆ ನನಗೆ Z+ ಭದ್ರತೆ ಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ಅವರು ಭದ್ರತೆಗೆ ಮನವಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭದ್ರತೆಯಾದರೂ ಕೇಳಲಿ, ಇರಾನ್ ಇಂದ ಯಾವುದಾದರು ಭದ್ರತೆ ತೆಗೆದು ಕೊಂಡು ಬರಲಿ, ಅಥವಾ ಅಮೆರಿಕಾದಿಂದಲೂ ತರಿಸಿಕೊಳ್ಳಲಿ ತಾವೇ ಭದ್ರತೆ ಮಾಡಿಕೊಳ್ಳಲಿ. ಜನಾರ್ದನ ರೆಡ್ಡಿಗೆ ಭದ್ರತೆ ನೀಡುವುದು ಬೇಡ ಅಂದವರು ಯಾರು? ಭದ್ರತೆ ಕೋರಿ ಜನಾರ್ಧನ ರೆಡ್ಡಿ ಪತ್ರ ಬರೆದಿರುವುದು ಬಹಳ ಸಂತೋಷ ಬಿಜೆಪಿಯ 100 ಕಾರ್ಯಕರ್ತರನ್ನೇ ಭದ್ರತೆಗೆ ನೇಮಿಸಿ ಕೊಡಲಿ ಎಂದು ಲೇವಡಿ ಮಾಡಿದರು.
WhatsApp Group
Join Now