ಮೇಷ :-
ಲಾಭದಾಯಕ ಮತ್ತು ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನೀವು ಸಾಮಾಜಿಕ ಸಂಪರ್ಕಗಳಲ್ಲಿ ಕ್ರಿಯಾಶೀಲರಾಗಿರುತ್ತೀರಿ. ನಿಮ್ಮ ಹೊಸ ಸಂಪರ್ಕದಿಂದ ಮುಂಬರುವ ದಿನಗಳಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ.ಅನಿರೀಕ್ಷಿತ ವೆಚ್ಚಗಳು ಉಂಟಾಗಲಿವೆ.
ವ್ಯವಹಾರದಲ್ಲಿ ಲಾಭವನ್ನು ನಿರೀಕ್ಷಿಸಬಹುದು. ನಿಮ್ಮ ಹಿರಿಯರು ಮತ್ತು ಮೇಲಾಧಿಕಾರಿಗಳು ಸಹಕರಿಸುವ ರೀತಿಯಿಂದ ನೀವು ಹರ್ಷಗೊಳ್ಳಬಹುದು. ವಿದೇಶದಲ್ಲಿ ನೆಲೆಸಿರುವ ಮಕ್ಕಳಿಂದ ಉತ್ತೇಜನಕಾರಿ ಸುದ್ದಿ ಬರುವ ಸಂಭಾವ್ಯತೆಯಿದೆ. ಅಲ್ಲದೆ ನೀವು ಅವರನ್ನು ಭೇಟಿಯಾಗಲೂಬಹುದು. ಆಕಸ್ಮಿಕ ಫಲಪ್ರಾಪ್ತಿ ಉಂಟಾಗಲಿದೆ. ಸಂತೋಷಕರ ಪ್ರಯಾಣ ತೆರಳುವ ಸಾಧ್ಯತೆಯಿದೆ.
ವೃಷಭ :-
ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವ್ಯವಹಾರದಲ್ಲಿ ತೊಡಗಿರುವವರಿಗೆ ಗೃಹಗತಿಗಳು ಅನುಕೂಲಕರವಾಗಿದೆ ಮತ್ತು ನಿಮ್ಮ ವ್ಯವಹಾರವು ವೃದ್ಧಿಗೊಳ್ಳಬಹುದು ಹಾಗೂ ಉನ್ನತ ಮಟ್ಟದ ಯಶಸ್ಸನ್ನು ನೀಡಬಹುದು. ನೀವು ಸೇವೆಯಲ್ಲಿದ್ದಲ್ಲಿ, ನಿಮ್ಮ ಮೇಲಾಧಿಕಾರಿಗಳಿಂದ ಸಹಕಾರವನ್ನು ಪಡೆಯಬಹುದು. ಮನೆಯ ವಾತಾವರಣವು ಹಿತಕರ ಹಾಗೂ ಶಾಂತಿಯಿಂದ ಕೂಡಿರುವ ಭರವಸೆಯಿದೆ. ಆಪ್ತ ಸ್ನೇಹಿತರ ಭೇಟಿಯು ನಿಮ್ಮ ಆನಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಮಿಥುನ :-
ಇಂದಿನ ದಿನವು ತುಂಬಾ ಶುಭಕರವಾಗಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮಟ್ಟವು ಎಂದಿಗಿಂತ ಕಡಿಮೆಯಿರುವ ಸಾಧ್ಯತೆಯಿದೆ. ನಿಮ್ಮಲ್ಲಿ ಉತ್ಸಾಹದ ಕೊರತೆ ಕಂಡುಬರಬಹುದು ಮತ್ತು ನಿಮ್ಮ ಕೆಲಸಗಳಿಗೆ ಹಾಜರಾಗಲೇಬೇಕಾಗಿರಬಹುದು. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳು ಸ್ನೇಹಪರ ಮನೋಭಾವವನ್ನು ಹೊಂದಿರುವುದಿಲ್ಲ ಮತ್ತು ಸಹಕಾರವನ್ನೂ ತೋರುವುದಿಲ್ಲ. ದುಂದುವೆಚ್ಚದ ಸಾಧ್ಯತೆಯನ್ನು ನಿರಾಕರಿಸಲಾಗದು. ಮಕ್ಕಳ ವರ್ತನೆಯು ಉತ್ತಮವಾಗಿರುವುದಿಲ್ಲ ಮತ್ತು ಇದು ಹೆಚ್ಚಿನ ನೋವಿಗೆ ಕಾರಣವಾಗಬಲ್ಲದು. ನಿಮ್ಮ ಸ್ಪರ್ಧಾಳುಗಳು ವಿಶೇಷವಾಗಿ ಪ್ರತಿಕೂಲತೆಯಿಂದ ಕೂಡಿರುತ್ತಾರೆ.
ಕರ್ಕಾಟಕ :-
ಇಂದಿನ ದಿನವು ನಕಾರಾತ್ಮಕವಾಗಿರುವುದನ್ನು ಗಣೇಶ ಕಾಣುತ್ತಾರೆ. ಶಕ್ತಿ ಹಾಗೂ ಉತ್ಸಾಹದ ಕೊರತೆಯು ನಿಮ್ಮಲ್ಲಿ ಕಾಡಬಹುದು. ಖಿನ್ನತೆ ಮತ್ತು ನಿರಾಶಾವಾದದಿಂದ ದೂರವಿರಲು ನೀವು ಕಠಿಣವಾಗಿ ಪ್ರಯತ್ನಿಸುವ ಅಗತ್ಯವಿದೆ. ನಿಮ್ಮ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಲು ಪ್ರಯತ್ನಿಸಿ. ಅನಿರೀಕ್ಷಿತ ವೆಚ್ಚಗಳಿಗೆ ಸಿದ್ಧರಾಗಿರಿ. ಕುಟುಂಬ ಸದಸ್ಯರೊಂದಿಗಿನ ಸಂಘರ್ಷವನ್ನು ತಪ್ಪಿಸಿ. ಹೊಸ ಕಾರ್ಯ ಪ್ರಾರಂಭಕ್ಕೆ ಈ ದಿನ ಸೂಕ್ತವಲ್ಲ. ಹೊಸ ಸಂಪರ್ಕ ಮತ್ತು ಪರಿಚಯಗಳು ಉತ್ತಮ ರೀತಿಯದ್ದಾಗಿರುವುದಿಲ್ಲ. ಕಚೇರಿ ವ್ಯವಹಾರಗಳಲ್ಲಿ ಪಿತೂರಿಯ ಕೆಲಸಗಳ ಆಲೋಚನೆಯನ್ನು ತೊಡೆದುಹಾಕಿ.
ಸಿಂಹ :-
ನಿಮ್ಮ ಸಂಗಾತಿಯೊಂದಿಗೆ ಜಗಳ ಕಾಯುವ ಸಾಧ್ಯತೆಯನ್ನು ಗಣೇಶ ಕಾಣುತ್ತಾರೆ. ವೈವಾಹಿಕ ಸುಖವು ಕ್ಷೀಣಸ್ಥಿತಿಯಲ್ಲಿರುತ್ತದೆ. ನಿಮ್ಮ ಭಿನ್ನಾಭಿಪ್ರಾಯಗಳು ನಿಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಚಾರಗಳು ಇನ್ನಷ್ಟು ಜಟಿಲವಾಗಲಿವೆ ಮತ್ತು ನಿಭಾಯಿಸಲು ಕಷ್ಟವಾಗಲಿವೆ. ಸಾಮಾನ್ಯ ವಿಚಾರಗಳು ನಿಮ್ಮ ನಕಾರಾತ್ಮಕತೆಯನ್ನು ಇನ್ನಷ್ಟು ಹೆಚ್ಚಿಸಲಿವೆ. ಸಾರ್ವಜನಿಕ ವಿಚಾರಗಳಲ್ಲಿ ನಿಮ್ಮ ಹೆಸರಿಗೆ ಕಳಂಕ ತರುವಂತಹ ವಿಷಯಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಉದ್ಯಮ ಪಾಲುದಾರರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವ್ಯಾಜ್ಯಗಳಿಂದ ದೂರವಿರಿ.
ಕನ್ಯಾ :-
ವೃತ್ತಿನಿರತರಿಗೆ ಮತ್ತು ಉದ್ಯಮಿಗಳಿಗೆ ಇಂದು ವಿಶೇಷ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ಪರ್ಧಾಳುಗಳು, ಜೊತೆಗಾರರು ಮತ್ತು ಸಹೋದ್ಯೋಗಿಗಳಿಗಿಂತ ಹೆಚ್ಚಿನ ಅನುಕೂಲ ಸ್ಥಿತಿಯಲ್ಲಿ ಇರುತ್ತೀರಿ. ಸಹೋದ್ಯೋಗಿಗಳು ಸಹಕಾರ ಹಾಗೂ ಸ್ನೇಹಪರ ಮನೋಭಾವವನ್ನು ಹೊಂದಿರುವ ಸಾಧ್ಯತೆಯಿದೆ. ಮನೆಯಲ್ಲಿ ಸಾಕಷ್ಟು ಹರ್ಷ ಮತ್ತು ತೃಪ್ತಿಯು ನಿಮಗಾಗಿ ಕಾದಿದೆ. ಸಣ್ಣ ಮಟ್ಟಿನ ಆನಾರೋಗ್ಯ ಕಾಡುವ ಸಂಭಾವ್ಯತೆಯಿದೆ. ಲಾಭ ಉಂಟಾಗುವ ಸಾಧ್ಯತೆ ದಟ್ಟವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವವರು ತಮ್ಮ ಆರೋಗ್ಯದಲ್ಲಿ ಚೇತರಿಕೆಯನ್ನು ಕಾಣಬಹುದು.
ತುಲಾ :-
ಮಾನಸಿಕವಾಗಿ ಇಂದು ನೀವು ಉನ್ನತಿಗೇರಿರುವಂತೆ ಗಣೇಶ ಕಾಣುತ್ತಾರೆ. ನಿಮ್ಮ ಸೌಜನ್ಯಶೀಲ ವೈಖರಿಯಿಂದ ನೀವು ಸ್ನೇಹಿತರ ಹಾಗೂ ಅಪರಿಚಿತರನ್ನು ಗೆಲ್ಲಬಹುದು. ಚರ್ಚೆ ಮತ್ತು ಮಾತುಕತೆಗಳಲ್ಲಿ ನಿಮ್ಮ ಆಲೋಚನೆಗಳು ಇತರರ ಮೇಲೆ ಪರಿಣಾಮ ಬೀರಬಹುದು ಹಾಗೂ ಇತರರನ್ನು ಪ್ರಭಾವಿತಗೊಳಿಸಬಹುದು. ಏನೇ ಆದರೂ, ವೃತ್ತಿಗೆ ಸಂಬಂಧಿಸಿ ನಿಮ್ಮ ಫಲಿತಾಂಶವು ಪ್ರಯತ್ನದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕಾರ್ಯಕ್ಷೇತ್ರದಲ್ಲಿ ಇತರರ ಗಮನ ಸೆಳೆಯದಿರಲು ಪ್ರಯತ್ನಿಸಿ. ಮಿತಿಮೀರಿದ ಉತ್ಸಾಹವನ್ನು ಹೊಂದಬೇಡಿ. ಇಂದು ನಿಮ್ಮ ಮೆಟಬಾಲಿಸಂ ತುಂಬಾ ಮಂದವಾಗಿರಬಹುದು. ನೀವು ಏನು ತಿನ್ನುತ್ತೀರಿ ಅದರ ಬಗ್ಗೆ ಎಚ್ಚರವಹಿಸಿ. ಸಾಹಿತ್ಯದ ತುಣುಕುಗಳನ್ನು ಬರೆಯುವ ಸಾಧ್ಯತೆಯಿದೆ.
ವೃಶ್ಚಿಕ :-
ಆತ್ಮೀಯ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಇಂದು ನೀವು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ನಿಮ್ಮ ತಾಯಿಯು ಕೂಡ ಅಸ್ವಸ್ಥರಾಗಬಹುದು. ನಿಮ್ಮ ಹಣಕಾಸು ಸ್ಥಿತಿ ಮತ್ತು ಗೌರವವು ತಗ್ಗುತ್ತದೆ. ಹಗೆತನದಿಂದಾಗಿ ಮತ್ತು ಆಸ್ತಿ ಸಂಬಂಧ ಸಂಘರ್ಷದಿಂದಾಗಿ ನಿಮ್ಮ ಮನೆಯ ಶಾಂತಿ ಕದಡುವ ಸಾಧ್ಯತೆಯಿದೆ. ನೀವು ತುಂಬಾ ವ್ಯಾಕುಲ ಹಾಗೂ ಖಿನ್ನತೆಗೆ ಒಳಗಾಗುವಿರಿ. ಆರಾಮದಾಯಕ ನಿದ್ರೆಯು ಬರಲಾರದು.
ಧನು :-
ಇಂದು ನೀವು ನಿಮ್ಮ ಶತ್ರುಗಳ ಮತ್ತು ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ಸಾಧಿಸುತ್ತೀರಿ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ದಿನಪೂರ್ತಿ ನೀವು ತಾಜಾ ಹಾಗೂ ಆರೋಗ್ಯಕರ ಭಾವನೆಯನ್ನು ಹೊಂದಿರುತ್ತೀರಿ. ಹೊಸ ವಿಷಯಗಳ ಕುರಿತಂತೆ ಯೋಜನೆ ರೂಪಿಸುತ್ತಿದ್ದಲ್ಲಿ, ಇಂದು ಅದಕ್ಕೆ ಸೂಕ್ತ ದಿನ. ನೀವು ನಿಮ್ಮ ಸ್ನೇಹಿತರನ್ನು ಪದೇಪದೇ ಭೇಟಿಮಾಡಬಹುದು ಅನ್ಯೋನ್ಯ ಹಾಗೂ ಸ್ನೇಹಪರ ವಿಚಾರಗಳನ್ನು ಹಂಚಿಕೊಳ್ಳಬಹುದು. ಮನಸ್ಸಿಗೆ ಮುದ ನೀಡುವಂತಹ ಆಧ್ಯಾತ್ಮ ಅನುಭವವಾಗಲಿದೆ.
ಮಕರ :-
ಇಂದು ನಿಮಗೆ ಅತ್ಯುತ್ತಮ ದಿನವಾಗಿರಲಾರದು ಎಂಬುದಾಗಿ ಗಣೇಶ ಹೇಳುತ್ತಾರೆ. ಪ್ರಾರ್ಥನೆ ಮತ್ತು ಧ್ಯಾನದಿಂದ ನಿಮಗೆ ಸಹಾಯ ಉಂಟಾಗಲಿದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳು ಮತ್ತು ಹಗೆತನವು ನಿಮ್ಮನ್ನು ಆತಂಕ ಹಾಗೂ ದುಃಖದಲ್ಲಿರಿಸುತ್ತದೆ. ದುಂದುವೆಚ್ಚವು ನಿಮ್ಮ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.ವಿದ್ಯಾರ್ಥಿಗಳಿಗೆ ತಮ್ಮ ಓದಿನಲ್ಲಿ ಆಸಕ್ತಿ ಮೂಡುವುದಿಲ್ಲ. ನಿಮ್ಮ ಸಂಗಾತಿಯ ಮನೋಭಾವವು ನಿಮಗೆ ಸಂತೋಷವನ್ನು ತರುವುದಿಲ್ಲ. ಬಂಡವಾಳ ಹೂಡುವ ಸಾಧ್ಯತೆಯಿದೆ.
ಕುಂಭ :-
ಆರ್ಥಿಕವಾಗಿ ವಿಶೇಷ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆಹ್ಲಾದಕರ ಹಾಗೂ ಉಲ್ಲಾಸವು ನಿಮ್ಮ ಕುಟುಂಬದಲ್ಲಿ ನೆಲೆಯಾಗಿರುತ್ತದೆ. ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಸಂತೋಷ ಕ್ಷಣಗಳನ್ನು ಅನುಭವಿಸುವಿರಿ. ಖುಷಿಭರಿತ ತಿರುಗಾಟ ಅಥವಾ ಸಣ್ಣ ಪ್ರವಾಸದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ದೃಷ್ಟಿಕೋನದಲ್ಲಿ ಋಣಾತ್ಮಕ ಚಿಹ್ನೆಯಿರಬಹುದು. ಧ್ಯಾನ ಮತ್ತು ಪ್ರಾರ್ಥನೆಯ ಮೂಲಕ ಅದನ್ನು ತೊಡೆದುಹಾಕಿ.
ಮೀನ :-
ಆಸ್ತಿ ಸಂಬಂಧಿತ ಕಾನೂನು ಕ್ರಮಗಳಿಗೆ ಈ ದಿನ ಸಕಾಲವಲ್ಲ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಆದರೆ ಉಳಿದ ಎಲ್ಲಾ ವಿಚಾರಗಳಲ್ಲಿ ನೀವು ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಸೂಕ್ಷ್ಮತೆಯನ್ನು ಹೊಂದಿರಬೇಕು. ನಿಮ್ಮ ಆತ್ಮೀಯರು ಅಲ್ಪಾವಧಿಗೆ ನಿಮ್ಮಿಂದ ದೂರವಾಗಲಿದ್ದಾರೆ. ವಾಗ್ವಾದಗಳು ಮತ್ತು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ. ‘ಪೊದೆಯೊಳಗಿನ ಎರಡು ಹಕ್ಕಿಗಳಿಗಿಂತ ಕೈಯಲ್ಲಿರುವ ಒಂದೇ ಹಕ್ಕಿ ಲೇಸು’ ಎಂಬ ಗಾದೆ ಮಾತನ್ನು ಅಗತ್ಯವಾಗಿ ಅನುಸರಿಸಬೇಕು. ಯಾವುದೇ ಒಪ್ಪಂದ ಮಾಡುವ ಮುನ್ನ ಅಥವಾ ಒಡಂಬಡಿಕೆಗಳಿಗೆ ಸಹಿ ಹಾಕುವ ಮುನ್ನ ಎರಡೆರಡು ಬಾರಿ ಆಲೋಚಿಸಿ. ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿರಿ.
Dina Bhavishya : ಡಿಸೆಂಬರ್ 25 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now