ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 4 ರಂದು ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಸಿಎಂ, ಹಾಗೂ ಡಿಸಿಎಂ ನೇರ ಹೊಣೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿದೆ. ಅಲ್ಲದೇ ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಕೂಡ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ, ಡಿಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದರು.
ಈ ಬಗ್ಗೆ ಕಲಬುರ್ಗಿಯಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಚಿವ ಎಚ್ ಸಿ ಮಹದೇವಪ್ಪ, ಇವೆಲ್ಲವೂ ತುಂಬಾ ಬಾಲಿಷ ಹೇಳಿಕೆ ಎಂದಿದ್ದಾರೆ. ಕಾಲ್ತುಳಿತ ದುರಂತ ಆಗಬಾರದಿತ್ತು. ಘಟನೆಯಿಂದ ಎಲ್ರಿಗೂ ತುಂಬಾ ನೋವಾಗಿದೆ. ಅದಕ್ಕೆ ವಿಷಾದ ಇದೆ ಹೀಗಾಗಿ ಲೋಪ ಕಂಡು ಹಿಡಿಯಲು ಕಮೀಷನ್ ನೇಮಕ ಮಾಡಲಾಗಿದೆ ಈ ಬಗ್ಗೆ ಸಂಪೂರ್ಣ ತನಿಖೆ ಮುಗಿಯಲಿ. ಈ ವಿಚಾರದಲ್ಲಿ ರಾಜಕೀಯ ಬೆರೆಸುವುದು ಮೂರ್ಖತನ ಅಂತ ಹೇಳಿದ್ರು.
ಗುಜರಾತನಲ್ಲಿ ವಿಮಾನ ದುರಂತ ಆಯ್ತು .ನಾವು ಪ್ರಧಾನಿ ರಾಜೀನಾಮೆ ಕೇಳಿದ್ದೀವಾ? ಅಂತ ಇದೇ ವೇಳೆ ಸಚಿವ HC ಮಹದೇವಪ್ಪ ಪ್ರಶ್ನೆ ಮಾಡಿದ್ದಾರೆ.
WhatsApp Group
Join Now