ಕಾಂತಾರ ಚಿತ್ರದ ಕಲಾವಿದರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ. ಕಾಂತಾರ ಚಿತ್ರ ಕಲಾವಿದ ವಿಜು ವಿಕೆ ಮೃತ ವ್ಯಕ್ತಿ ಎನ್ನಲಾಗಿದ್ದು, ಈತ ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದರಾಗಿದ ಎಂದು ತಿಳಿದುಬಂದಿದೆ. ಕಾಂತಾರ ಚಿತ್ರಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿ ಆಗುಂಬೆ ಬಳಿ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು.
ಆದರೆ ನಿನ್ನೆ ರಾತ್ರಿ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸಲಾಯಿತಾದರೂ ಆತ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ವಿಜು ಅವರ ಮೃತದೇಹವನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅವರ ಕುಟುಂಬಸ್ಥರು ಕೇರಳದಿಂದ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಂದಲ್ಲ.. ಎರಡಲ್ಲ.. ಕಾಂತಾರಕ್ಕೆ ಕಂಟಕದ ಮೇಲೆ ಕಂಟಕ!
ಕಳೆದ ತಿಂಗಳು ಕಾಂತಾರ ಚಿತ್ರದ ಟೆಕ್ನಿಷಿಯನ್ ಕಪಿಲ್ ಎಂಬುವವರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಕೇರಳ ಮೂಲದ ಕಲಾವಿದ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ತೆರಳಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಳಿಕ ಕಾಂತಾರಾ ಸಿನಿಮಾದಲ್ಲಿ ನಟನೆ ಮಾಡಿದ್ದ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅವರು ಕೂಡಾ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮದುವೆ ಕಾರ್ಯಕ್ರಮವೊಂದರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
ಇದಕ್ಕೂ ಮುನ್ನ ಕಾಂತಾರ ಸಹ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನ ಪಲ್ಟಿಯಾಗಿ ಕೆಲವರಿಗೆ ಗಾಯಗಳಾಗಿತ್ತು. ಇನ್ನು ಕಾಂತಾರ ಮೊದಲ ಪಾರ್ಟ್ನಲ್ಲಿ ಗುರುವ ಪಾತ್ರದಲ್ಲಿ ನಟಿಸಿದ್ದ ಸ್ವರಾಜ್ ಶೆಟ್ಟಿ ಅವರ ʼನೆತ್ತರೆಕೆರೆʼ ಸಿನಿಮಾ ಸೆಟ್ಟಿಗೆ ಬೆಂಕಿ ಹೊತ್ತಿಕೊಂಡಿತ್ತು. ಕಾಂತಾರ ಸಿನಿಮಾಗೆ ಈ ರೀತಿಯ ಸಾಲು ಸಾಲು ಅವಘಡಗಳು ಆತಂಕವನ್ನು ಮೂಡಿಸಿದೆ.

‘ಕಾಂತಾರ ಚಾಪ್ಟರ್ 1’ ಸಿನಿಮಾದ ಕಲಾವಿದ ಹೃದಯಾಘಾತದಿಂದ ಸಾವು.! ಎರಡು ತಿಂಗಳಲ್ಲಿ ಮೂವರ ಸಾವು!
WhatsApp Group
Join Now