ದಿಲ್ಲಿಗೆ ಹೋದ ಸಿಎಂ ಸಿದ್ದರಾಮಯ್ಯರಿಗೆ ಭಾರೀ ಹಿನ್ನಡೆ.? ದೆಹಲಿಯಲ್ಲಿ ಸಿಎಂ ಚರ್ಚೆ ಮಾಡಿರುವುದೇನು.?

Spread the love

ಕರ್ನಾಟಕದಲ್ಲಿ ವಿವಾದ ಸೃಷ್ಟಿಸಿರುವ ಜಾತಿಗಣತಿ ವರದಿ ಜಾರಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಜಾತಿಗಣತಿ ವೇಳೆ ಪಡೆದ ದತ್ತಾಂಶಗಳ ಮರುಗಣತಿಗೆ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿದ್ದು, ಜೂನ್ 12 ರಂದು ನಡೆಯಲಿರುವ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.

ಜಾತಿಗಣತಿ ನಡೆಸಿದ 9ರಿಂದ 10 ವರ್ಷಗಳು ಕಳೆದಿವೆ. ಹಾಗಾಗಿ ಹೊಸದಾಗಿ ಸರ್ವೆ ಮಾಡುವಂತೆ ಹೈಕಮಾಂಡ್ ತಿಳಿಸಿದೆ. ಹಾಗಾಗಿ 90 ದಿನಗಳಲ್ಲಿ ಸರ್ವೆ ಮುಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

‘ಸೋತ’ರಾಮಯ್ಯ! ಯಾಕಿಂಗೆ?
ಸಿಎಂ ಸಿದ್ದರಾಮಯ್ಯ ಪ್ರಬಲ ಜಾತಿ ನಾಯಕರಿಗೆ ತಲೆ ಬಾಗಿದಂತಾಗಿದೆ. ಪ್ರಬಲ ಸಮುದಾಯದ ನಾಯಕರು ಹೈಕಮಾಂಡ್ ಮೂಲಕ ಸಿದ್ದುಗೆ ಬ್ರೇಕ್ ಹಾಕಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಯಾಕೆಂದರೆ ಪ್ರಬಲ ಜಾತಿಗಳ ವಿರೋಧ ಕಟ್ಟಿಕೊಂಡು ಕರ್ನಾಟಕವನ್ನು ಆಳುವುದು ಬಲುಕಷ್ಟ. ಇದೇ ಕಾರಣಕ್ಕೆ ಮತ್ತೊಮ್ಮೆ ಜಾತಿಗಣತಿ ನಡೆಸಲು ಸಿದ್ದರಾಮಯ್ಯಗೆ ಸೂಚನೆ ನೀಡಲಾಗಿದೆ. ಹೊಸ ಸರ್ವೇ ನಡೆಸುವುದು ಸಿದ್ದರಾಮಯ್ಯಗೆ ಭಾರೀ ಹಿನ್ನಡೆ ಆದಂತೆ. ಯಾಕೆಂದರೆ, ಸಿಎಂ ಹಳೆಯ ಜಾತಿಗಣತಿಯನ್ನು ಯಥಾವತ್ತು ಜಾರಿಗೆ ಮುಂದಾಗಿದ್ದರು. ಹಳೆಯ ಸರ್ವೇಯಲ್ಲಿ ಪ್ರಬಲ ಸಮುದಾಯಗಳ ಜನಸಂಖ್ಯೆ ಕಡಿಮೆ ಎನ್ನುವ ಕಾರಣಕ್ಕೆ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಭಾರೀ ಆಕ್ರೋಶ ಹೊರಹಾಕಿದ್ದವು. ಆದ್ದರಿಂದ ಲಿಂಗಾಯತ, ಒಕ್ಕಲಿಗರ ಅಸಮಾಧಾನ ತಣಿಸಲು ಹೊಸ ಸರ್ವೇ ನಡೆಸಿದರೆ, ಎಲ್ಲಾ ಸಮುದಾಯಗಳೂ ಜಾಗೃತವಾಗಲಿವೆ. ಒಂದು ವೇಳೆ ಮನೆ ಮನೆಗೆ ಹೋಗಿ ಸರ್ವೇ ನಡೆಸದಿದ್ರೆ ಜನರೇ ರೊಚ್ಚಿಗೇಳೋದಂತೂ ಪಕ್ಕಾ.

ಈ ಹಿಂದೆ ಜಾತಿಗಣತಿ ವಿರೋಧಿಸಿ ಬರೆದ ಪತ್ರಕ್ಕೆ ಡಿ.ಕೆ ಶಿವಕುಮಾರ್ ಕೂಡ ಸಹಿ ಹಾಕಿದ್ರು. ವೀರಶೈವ ಲಿಂಗಾಯತ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘಗಳಂತೂ ನೇರಾನೇರವಾಗಿ ಆಕ್ರೋಶ ಹೊರಹಾಕಿದ್ದವು. ಈಗ ಈ ಪ್ರಬಲ ಸಮುದಾಯಗಳ ಒತ್ತಾಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಣಿದಿರುವುದು ಸ್ಪಷ್ಟ.

WhatsApp Group Join Now

Spread the love

Leave a Reply