ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲು, ಅವರನ್ನೇ ಪಕ್ಷದವರು ಪಾಲಿಸ್ತಿದ್ದಾರೆ : ಮಾಜಿ ಸಂಸದ ಪ್ರತಾಪ್ ಸಿಂಹ

Spread the love

ಶಿಡ್ಲಘಟ್ಟದ ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡನಿಂದ ಧಮ್ಕಿ ಹಾಕಿದ ಘಟನೆ ನಡೆದಿತ್ತು.. ಈ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಅಧಿಕಾರಿಗೆ ಧಮ್ಕಿ ಹಾಕಿದ ಪುಡಾರಿಯನ್ನು ಒದ್ದು ಒಳಗೆ ಹಾಕಿ. ಸಿಎಂ ಸಿದ್ದರಾಮಯ್ಯನವರ ಬಾಯಿಯೇ ಬಚ್ಚಲಾಗಿದೆ. ಅವರೇ ಯಾರಿಗೂ ಮರ್ಯಾದೆ ಕೊಡೋದಿಲ್ಲ. ಇದನ್ನೇ ಅವರ ಪಕ್ಷದವರು ಅನುಸರಿಸುತ್ತಿದ್ದಾರೆ ಎಂದು ಹೇಳಿದರು.

ಶಿಡ್ಲಘಟ್ಟ ನಗರದಲ್ಲಿಕಲ್ಟ್‌ ಸಿನಿಮಾ ಪ್ರಚಾರದ ಬ್ಯಾನರ್‌ಅನ್ನು ತೆರವುಗೊಳಿಸಿದ್ದಕ್ಕೆ ಕುಪಿತಗೊಂಡ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡ, ನಗರಸಭೆ ಪೌರಾಯುಕ್ತೆಗೆ ಮೊಬೈಲ್‌ ಕರೆ ಮಾಡಿ ಧಮ್ಕಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ತಾಕತ್ತು ಏನೆಂದು ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಸದ್ಯ ಈ ಬಗ್ಗೆ ಕರ್ನಾಟಕ ರಾಜಕೀಯದಲ್ಲಿ ಭಾರಿ ಚರ್ಚೆಯನ್ನುಟ್ಟು ಹಾಕಿತ್ತು. (ನಾನು ಚಾಮರಾಜ ಕ್ಷೇತ್ರದ ಆಕಾಂಕ್ಷಿ ಎಂದ ಪ್ರತಾಪ್‌ ಸಿಂಹ)


ಫ್ಲೆಕ್ಸ್ ಮುಕ್ತವಾಗಲಿ

ಸಿಎಂ ಬಳಸುವ ಭಾಷೆ ಸರಿ ಇದ್ದರೆ ಅವರ ಕಾರ್ಯಕರ್ತರದು ಸರಿ ಇರುತ್ತಿತ್ತು. ಹಿಂದೆ ಐಎಎಸ್ ಅಧಿಕಾರಿಗೆ ಸಿದ್ದರಾಮಯ್ಯ ಭಂಟ ನಿಂದಿಸಿದ್ದ. ಇಂತಹ ಹಲವು ಘಟನೆಗಳು ನಡೆದಿವೆ. ಅದು ಈಗ ಮುಂದುವರಿದಿದೆ. ರಾಜ್ಯವನ್ನು ಮೊದಲು ಫ್ಲೆಕ್ಸ್ ಮುಕ್ತ ಮಾಡಿ. ನನ್ನ ಫೋಟೋ ಇದ್ದರೂ ಕೂಡ ಫ್ಲೆಕ್ಸ್ ತೆಗೆಸಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದರು.


ನಾನು ಚಾಮರಾಜ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ

WhatsApp Group Join Now

ಚಾಮರಾಜ ಕ್ಷೇತ್ರದ ಜನಕ್ಕೆ ಉಪಕಾರ ಮಾಡದಿದ್ದರೂ ಉಪದ್ರ ನೀಡುವ ಜನಪ್ರತಿನಿಧಿಗಳು ಬೇಕಿಲ್ಲ. ವಿದ್ಯಾವಂತರೇ ಹೆಚ್ಚಾಗಿರುವ ಚಾಮರಾಜ ಕ್ಷೇತ್ರದ ಜನರಿಗೆ ವಿದ್ಯಾವಂತರೆ ಪ್ರತಿನಿಧಿ ಆಗಲು ಬಯಸುತ್ತಾರೆ. ಬಿಜೆಪಿಯ ಶಂಕರಲಿಂಗೇಗೌಡ ಜನಸ್ನೇಹಿ ಶಾಸಕ.
ಕಾಂಗ್ರೆಸ್ ನ ವಾಸು ಅಭಿವೃದ್ಧಿ ಸ್ನೇಹಿ ಶಾಸಕ. ಇವರಿಬ್ಬರು ನನಗೆ ಸದಾ ಸ್ಮರಣೀಯರು. ನಾನು ಚಾಮರಾಜ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ಆಕಾಂಕ್ಷಿಗೂ, ಅಭ್ಯರ್ಥಿಗೂ ವ್ಯತ್ಯಾಸ ಗೊತ್ತಿಲ್ಲದೇ ಕೆಲವರು ಏನೇನೋ ಮಾತಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿದರು.

ಸತ್ತ ಆಡಳಿತ

ರಾಜ್ಯದಲ್ಲಿ ಆಡಳಿತ ಸತ್ತಿದೆ. ಸತ್ತ ಆಡಳಿತದ ಹೆಣವನ್ನು ಸಿದ್ದರಾಮಯ್ಯ ಮುಂದೆ ಹೊತ್ತಿದ್ದಾರೆ, ಡಿಕೆಶಿ ಹಿಂದೆ ಹೊತ್ತಿದ್ದಾರೆ. ಆಡಳಿತದ ಹೆಣವನ್ನು ಮುಂದೆ ಹೊರಲು ಡಿ ಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ.ಹೆಣ ಮುಂದೆ ಯಾರಾದರೂ ಹೊರಲಿ, ಹಿಂದೆ ಯಾರಾದರೂ ಹೊರಲಿ, ಅದರಲ್ಲೇನೂ ವ್ಯತ್ಯಾಸ ಇಲ್ಲ. ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಬಹಳ ಬೇಗ ಜನರ ಮನಸ್ಸಿನಿಂದ ದೂರ ಆಗುತ್ತಾರೆ. ಜನ ಸಿದ್ದರಾಮಯ್ಯರನ್ನು ಮರೆಯುವ ದಿನಗಳು ಬಹಳ ದೂರವಿಲ್ಲ. ಡಿಕೆಶಿ ಜೊತೆ ಪೈಪೋಟಿ ಮಾಡುತ್ತಾ ಇನ್ನಷ್ಟು ದಿನ ಸಿದ್ದರಾಮಯ್ಯ ತಮ್ಮ ಸ್ಥಾನ ಉಳಿಸಿ ಕೊಳ್ಳಬಹುದು. ಆದರೆ ಏನೂ ಪ್ರಯೋಜನ ಇಲ್ಲ ಎಂದು ಹೇಳಿದರು.

ಜನ ಕಳೆದ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತ ಸಹಿಸಿಕೊಳ್ಳಲೇ ಬೇಕು.ಈ ಸರ್ಕಾರವೇನು ಬೀಳುವುದಿಲ್ಲ. ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೇ ಎಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

WhatsApp Group Join Now

Spread the love

Leave a Reply