Horoscope : ಡಿಸೆಂಬರ್‌ 31, 2025ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ನೀವು ಇಂದು ಹೊಸ ಯೋಜನೆಗಳನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿರುವುದರಿಂದ ಉತ್ಸಾಹ ಮತ್ತು ಉತ್ತೇಜನವನ್ನು ಗರಿಷ್ಠ ಮಿತಿಯಲ್ಲಿರುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಇದು ನಿಮ್ಮನ್ನು ಇನ್ನಷ್ಟು ಚೈತನ್ಯದಲ್ಲಿರಿಸುತ್ತದೆ. ಸ್ನೇಹಿತಕ ಹುಟ್ಟುಹಬ್ಬ ಸಮಾರಂಭ ಅಥವಾ ನಿಶ್ಚಿತಾರ್ಥಕ್ಕಾಗಿ ನಿಮಗೆ ಆಮಂತ್ರಣ ಬರಬಹುದು. ಸ್ನೇಹಿತರೊಂದಿಗಿನ ಈ ಸಮಯವನ್ನು ಆನಂದಿಸಿ. ಏನೇ ಆದರೂ, ಬಾಯಲ್ಲಿ ನೀರೂರಿಸುವಂತಹ ಖಾದ್ಯ ಸೇವನೆಯ ಬಗ್ಗೆ ನಿಯಂತ್ರಣವಿರಲಿ ಯಾಕೆಂದರೆ, ಅಂತಹ ಅನಾರೋಗ್ಯಕರ … Read more

ರಾಜ್ಯದಲ್ಲಿ ಕಿಡ್ನಿ ಬೇಡಿಕೆ ಹೆಚ್ಚಳ ; 4,922 ರೋಗಿಗಳ ಜೀವ ಕಾಯುವ ಪಟ್ಟಿಯಲ್ಲಿ.!

ರಾಜ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವವರ ಪೈಕಿ ಮೂತ್ರಪಿಂಡಕ್ಕೆ (Kidney) ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ಡಿಸೆಂಬರ್ 2025ರ ತಾಜಾ ದತ್ತಾಂಶದ ಪ್ರಕಾರ, ಕರ್ನಾಟಕದಲ್ಲಿ ಬರೋಬ್ಬರಿ 4,922 ರೋಗಿಗಳು ಮೂತ್ರಪಿಂಡ ಕಸಿಗಾಗಿ ಕಾಯುವ ಪಟ್ಟಿಯಲ್ಲಿದ್ದಾರೆ. WhatsApp Group Join Now ಈ ವರ್ಷ ಸುಮಾರು 300 ರೋಗಿಗಳು ಮೂತ್ರಪಿಂಡ ಕಸಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 150 ದಾನಿಗಳಿಂದ ಲಭ್ಯವಾದ ಮೂತ್ರಪಿಂಡಗಳು 300 ಜನರಿಗೆ ಮರುಜೀವ ನೀಡಿವೆ. ಆದರೂ, ಹೊಸದಾಗಿ ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಲಭ್ಯತೆ ಮತ್ತು ಬೇಡಿಕೆಯ ನಡುವೆ ದೊಡ್ಡ … Read more

ಆಟ.. ಪಾಠ ಬಿಟ್ಟಾಕಿ.. ಮೇಷ್ಟ್ರ ಗಾಡಿ ಕ್ಲೀನ್ ಮಾಡಿ! : ಸರ್ಕಾರಿ ಶಾಲೆಯ ಅವಸ್ಥೆ ನೋಡಿ!

ಕಾಲ ಬದಲಾಗಿದೆ. ಶಿಕ್ಷಣದ ಮೌಲ್ಯ ಕಡಿಮೆ ಆಗ್ತಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಶಿಕ್ಷಣದ ತತ್ವಗಳನ್ನು ಹೇಳಿಕೊಡಬೇಕಾಗಿದ್ದ ಶಿಕ್ಷಕರೊಬ್ಬರು ಶಾಲಾ ಅವಧಿಯಲ್ಲೇ ವಿದ್ಯಾರ್ಥಿಗಳಿಂದ ತನ್ನ ಕಾರನ್ನು ತೊಳೆಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ. WhatsApp Group Join Now ಶಿಕ್ಷಕ ಉದಯ್ ಅವರು ಕಾರಿನಲ್ಲಿ ಶಾಲೆಗೆ ಆಗಮಿಸಿದ್ದು, ಈ ವೇಳೆ ಕಾರಿನಲ್ಲಿ ಇದ್ದ ಧೂಳು, ಕೆಸರನ್ನು ತೊಳೆಯಳು ವಿದ್ಯಾರ್ಥಿಗಳ ಬಳಿ ಹೇಳಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತೆರಳಿ ಕಾರು … Read more

ನಾಯಿ ಕಚ್ಚಿ ಎಮ್ಮೆಗೆ `ರೇಬಿಸ್’ ಸೋಂಕು : ಮೊಸರು ತಿಂದ 200 ಗ್ರಾಮಸ್ಥರಿಗೆ ಲಸಿಕೆ.!

ಉತ್ತರ ಪ್ರದೇಶದ ಬುದೌನ್ ಜಿಲ್ಲೆಯ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳು ರೇಬೀಸ್ ಲಸಿಕೆ ಪಡೆದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಸೇವಿಸುವ ಮೊಸರು ಆಧಾರಿತ ಖಾದ್ಯವಾದ ರೈತಾವನ್ನು ನಾಯಿ ಕಚ್ಚಿದ ಎಮ್ಮೆಯ ಹಾಲಿನಿಂದ ತಯಾರಿಸಲಾಗಿದೆ ಎಂದು ಕಂಡುಹಿಡಿಯಲ್ಪಟ್ಟ ನಂತರ ಈ ಮುನ್ನೆಚ್ಚರಿಕೆ ಕ್ರಮವಾಯಿತು. WhatsApp Group Join Now ಡಿಸೆಂಬರ್ 26 ರಂದು ಎಮ್ಮೆ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಸೋಂಕಿನ ಭೀತಿ ಹುಟ್ಟುಹಾಕಿದೆ. ರೇಬಿಸ್ ರೋಗಲಕ್ಷಣಗಳಿಂದ ಎಮ್ಮೆ ಸಾವನ್ನಪ್ಪಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ರಾಮೇಶ್ವರ್ ಮಿಶ್ರಾ ದೃಢಪಡಿಸಿದ್ದಾರೆ. ಸೋಂಕಿತ ರೈಟಾವನ್ನು ಸೇವಿಸಿದ … Read more

ಹುಲಿಕಲ್ ಘಾಟ್‌ನಲ್ಲಿ ಗುಡ್ಡಕ್ಕೆ ಖಾಸಗಿ ಬಸ್‌ ಡಿಕ್ಕಿ; ಮಗು ಸಾವು, ಹಲವರಿಗೆ ಗಾಯ

ಹೊಸನಗರ ತಾಲೂಕಿನ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಪಕ್ಕದ ಗುಡ್ಡಕ್ಕೆ ಖಾಸಗಿ ಬಸ್‌ ಡಿಕ್ಕಿಯಾಗಿ ಮಗು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದುರ್ಘಟನೆ ನಡೆದಿದೆ. WhatsApp Group Join Now ಗಂಭೀರ ಗಾಯಗೊಂಡವರಲ್ಲಿ ಶರೀಫಾಬಿ (57), ಇಮಾಮ್ ಸಾಬ್ (73), ಸಫಾನ (28) ಎಂಬುವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾವಣಗೆರೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ದುರ್ಗಾಂಬ ಬಸ್ ಅಪಘಾತಕ್ಕೀಡಾಗಿದ್ದು, ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆ … Read more

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಉರುಳಿ ಬಿದ್ದ ಲಾರಿ ; ಓರ್ವ ಮೃತ್ಯು, ಇಬ್ಬರು ಗಂಭೀರ

ಕುಡಚಿ-ಜಮಖಂಡಿ ರಸ್ತೆಯ ಮಧ್ಯಭಾಗದಲ್ಲಿ ಸಿಮೆಂಟ್ ತುಂಬಿದ್ದ ಲಾರಿಯೊಂದು ಪಲ್ಟಿಯಾದ ಪರಿಣಾಮ ಅದರಡಿಗೆ ಸಿಲುಕಿ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದ ಬಳಿ ನಡೆದಿದೆ. WhatsApp Group Join Now ಕುಡಚಿ ಕಡೆಯಿಂದ ಹಾರೂಗೇರಿ ಕಡೆಗೆ ತೆರಳುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ಬಿ.ಬಿ.ಬಾವಿ ಸರಕಾರಿ ಪ್ರೌಢ ಶಾಲೆ ಹಾಲಶಿರಗೂರಕ್ಕೆ ತೆರಳುತ್ತಿದ್ದ … Read more

ಮದುವೆಯಾಗಲು ಆಸಕ್ತರಿಗೆ ಗುಡ್ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹಕ್ಕೆ ಅರ್ಜಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಏಪ್ರಿಲ್ 29ರಂದು ಸಂಜೆ 6:40ಕ್ಕೆ ಗೋಧೂಳಿ ಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. WhatsApp Group Join Now ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಎರಡನೇ ಮದುವೆಗೆ ಅವಕಾಶವಿಲ್ಲ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ಹೂವಿನ ಹಾರ, ವರನಿಗೆ ಧೋತಿ, ಶಾಲು ನೀಡಲಾಗುವುದು. ಮದುವೆಯ ಸಂಪೂರ್ಣ ವೆಚ್ಚವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆ ಅಧ್ಯಕ್ಷತೆಯ ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ಭರಿಸಲಿದೆ. ಮದುವೆಯಾಗಲು ಇಚ್ಛಿಸುವವರು 2026ರ ಏಪ್ರಿಲ್ 25ರೊಳಗೆ … Read more

ಎಚ್ಚರ.! ಅಪರೂಪಕ್ಕೊಮ್ಮೆ ಕುಡಿಯುವುದರಿಂದಲೂ ಹೆಚ್ಚುತ್ತಂತೆ ಬಾಯಿಯ ಕ್ಯಾನ್ಸರ್!

ನಮ್ಮಲ್ಲಿ ಕೆಲವರು ಆಗಾಗ ಪಾರ್ಟಿಗಳಲ್ಲಿ ಅಥವಾ ಯಾವುದೇ ಸಮಾರಂಭಕ್ಕೆ ಅಂತ ಹೋದಾಗ ಅಲ್ಲಿ ಸ್ನೇಹಿತರೆಲ್ಲರೂ ಒಂದೆಡೆ ಸೇರಿಕೊಂಡರೆ ಸ್ನೇಹಿತರ ಒತ್ತಾಯಕ್ಕೊ ಅಥವಾ ಅವರಿಗೆ ಸ್ವಲ್ಪ ರುಚಿ ನೋಡಬೇಕೋ ಅಂತ ಅಲ್ಪ ಸ್ವಲ್ಪ ಮದ್ಯವನ್ನು ಸೇವಿಸುವುದುಂಟು. WhatsApp Group Join Now ಅನೇಕ ಬಾರಿ ಅಲ್ಪ ಸ್ವಲ್ಪ ಮದ್ಯವನ್ನು ಆಗಾಗ್ಗೆ ಸೇವಿಸುವುದು ಅಷ್ಟೊಂದು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಅಂತ ನಮ್ಮಲ್ಲಿ ಅನೇಕರು ಅಂದುಕೊಂಡಿರುತ್ತಾರೆ. ಆದರೆ ಆಗಾಗ ಮದ್ಯ ಸೇವಿಸುವುದು ಸಹ ಕ್ಯಾನ್ಸರ್ ರೋಗಕ್ಕೆ ದಾರಿ ಮಾಡಿಕೊಡುತ್ತದೆ ಅಂತ ಹೊಸ … Read more

ಹೆರಿಗೆ ವೇಳೆ ನವಜಾತ ಶಿಶುವಿನ ಕರುಳು ಹೊರ ಬಂದ ಕೇಸ್ : ಜೀರೋ ಟ್ರಾಫಿಕ್ ನಲ್ಲಿ ಕರೆದೋಯ್ದರು ಬದುಕುಳಿಯದ ಕಂದಮ್ಮ!

ಕೊಪ್ಪಳದಲ್ಲಿ ಜನಿಸಿದ ನವಜಾತ ಶಿಶುವೊಂದಕ್ಕೆ ಕರುಳುಗಳು ಹೊರಗೆ ಬಂದಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಮಗುವಿನ ಜೀವ ಉಳಿಸಲು, ಝೀರೋ ಟ್ರಾಫಿಕ್ ಮೂಲಕ ಕೊಪ್ಪಳದಿಂದ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆಂಬುಲೆನ್ಸ್ ಸಿಬ್ಬಂದಿಯ ಸಹಕಾರದಿಂದ ಮಗುವನ್ನು ಸಕಾಲದಲ್ಲಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. WhatsApp Group Join Now ಆದ್ರೆ ಇದೀಗ ವೈದ್ಯರು ಸಿಬ್ಬಂದಿಗಳ ಶ್ರಮವೆಲ್ಲ ವ್ಯರ್ಥವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಗಂಡು ಮಗು ಸಾವನ್ನಪ್ಪಿದೆ. ಕೇವಲ 10 ಗಂಟೆ ಹಿಂದೆ ಜನಿಸಿದ … Read more

ಚಳಿಗಾಲದಲ್ಲಿಯೇ ಹಾರ್ಟ್ ಅಟ್ಯಾಕ್ ಆಗೋದು ಯಾಕೆ ಹೆಚ್ಚು? ಮುನ್ನೆಚ್ಚರಿಕೆ ಕ್ರಮ ಏನು?

ಚಳಿಗಾಲ ಬಂತೆಂದರೆ ವಾತಾವರಣದಲ್ಲಿ ಚಳಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಸಾಮಾನ್ಯವಾಗಿ ಶೀತ, ಕೆಮ್ಮಿನಂತಹ ಸಮಸ್ಯೆಗಳ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು ಎಂದು ಹಲವು ಅಧ್ಯಯನಗಳು ತಿಳಿಸಿವೆ. WhatsApp Group Join Now ಚಳಿಗಾಲದಲ್ಲಿ ಉಷ್ಣಾಂಶ ಕಡಿಮೆಯಾದಾಗ ದೇಹದಲ್ಲಿನ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಅಂದರೆ ರಕ್ತನಾಳಗಳು ಕಿರಿದಾಗುತ್ತವೆ. ಇದರಿಂದಾಗಿ ರಕ್ತ ಸರಿಯಾಗಿ ಹರಿಯಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡವು … Read more