ಪೋಷಕರೇ ಎಚ್ಚರ : ‘ಚಿಪ್ಸ್’ ಪ್ಯಾಕೆಟ್ ಸ್ಪೋಟಗೊಂಡು ‘ಕಣ್ಣು’ ಕಳೆದುಕೊಂಡ 8 ವರ್ಷದ ಬಾಲಕ.!

ಒಡಿಶಾದ ಬಾಲಂಗೀರ್ ಜಿಲ್ಲೆಯ ಟಿಟ್ಲಗಢ ಪೊಲೀಸ್ ಠಾಣೆ ವ್ಯಾಪ್ತಿಯ ಶಗಡ್‌ಘಾಟ್ ಗ್ರಾಮದಲ್ಲಿ ಸೋಮವಾರ ಒಂದು ದುರಂತ ಮತ್ತು ಆಘಾತಕಾರಿ ಘಟನೆ ಸಂಭವಿಸಿದೆ. ಚಿಪ್ಸ್ ಪ್ಯಾಕೆಟ್ ಸ್ಫೋಟಗೊಂಡು 8 ವರ್ಷದ ಬಾಲಕ ಕಣ್ಣು ಕಳೆದುಕೊಂಡಿದ್ದಾನೆ. WhatsApp Group Join Now ಹೌದು, ಶಗಡ್‌ಘಾಟ್ ಗ್ರಾಮದ ನಿವಾಸಿ ಲ್ಯಾಬ್ ಹರ್ಪಾಲ್ ಗ್ರಾಮದ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಖರೀದಿಸಿದರು. ಮಗು ಸಂಜೆ ಟ್ಯೂಷನ್‌ ನಿಂದ ಮನೆಗೆ ಹಿಂತಿರುಗಿ ಚಿಪ್ಸ್ ತಿನ್ನಲು ತಯಾರಿ ನಡೆಸುತ್ತಿತ್ತು. ಆ ಸಮಯದಲ್ಲಿ, ಅವನ ತಾಯಿ ಭಾನುಮತಿ ಹರ್ಪಾಲ್ … Read more

ಗ್ಯಾಸ್ಟ್ರಿಕ್ ಮತ್ತು ಹೊಟ್ಟೆ ಉಬ್ಬರಕ್ಕೆ ಹೇಳಿ ಗುಡ್ ಬೈ : ಜೀರ್ಣಕ್ರಿಯೆ ಸುಧಾರಿಸಲು ಈ 5 ಪಾನೀಯಗಳನ್ನು ಕುಡಿಯಿರಿ

ಜೀರ್ಣಕ್ರಿಯೆಗೆ ಪಾನೀಯದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದರಿಂದ ನಿಮ್ಮ ಕರುಳನ್ನು ಎಚ್ಚರಗೊಳಿಸಬಹುದು. ಅಲ್ಲದೆ, ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸಬಹುದು ಮತ್ತು ರಾತ್ರಿಯಿಡೀ ಸಂಗ್ರಹವಾದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. WhatsApp Group Join Now ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡಲು ಐದು ನೈಸರ್ಗಿಕ ಬೆಳಗಿನ ಪಾನೀಯಗಳು ಇಲ್ಲಿವೆ. 1. ಬೆಚ್ಚಗಿನ ನಿಂಬೆ ನೀರು (ಜೇನುತುಪ್ಪದೊಂದಿಗೆ) ಬೆಳಗಿನ ಜಾವದಲ್ಲಿ ನಿಂಬೆಹಣ್ಣಿನಲ್ಲಿರುವ ಆಮ್ಲೀಯತೆಯು ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಪಿತ್ತರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ದಿನವಿಡೀ ಆಹಾರವನ್ನು ಜೀರ್ಣವಾಗಲು … Read more

ವೈದ್ಯೆಯಾಗೋ ಕನಸು ಕಂಡಾಕೆಯ ಪ್ರಾಣ ತೆಗೆದ ಎಲೆಕೋಸಿನ ಹುಳು : ಪಿಜ್ಜಾ, ಬರ್ಗರ್ ಪ್ರಿಯರಿಗೆ ವೈದ್ಯರ ಎಚ್ಚರಿಕೆ

ಕೋಸು, ಕ್ಯಾಬೀಜ್ ಮುಂತಾದ ಹೆಸರುಗಳಿಂದ ಕರೆಸಿಕೊಳ್ಳುವ ಎಲೆಕೋಸಿನಲ್ಲಿ ಅಡಗಿದ್ದ ಹುಳುವೊಂದು ವಿದ್ಯಾರ್ಥಿನಿಯೊಬ್ಬಳ ಬಲಿ ಪಡೆದಿದೆ ಎಂದರೆ ಬಹುಶಃ ಯಾರಿಂದಲೂ ನಂಬಲು ಸಾಧ್ಯವಾಗದ ವಿಷಯವಾಗಿದೆ. ಎಲೆಕೋಸು ಆರೋಗ್ಯಕ್ಕೆ ಒಳ್ಳೆಯದಾಗಿದ್ದರೂ, ಅದನ್ನು ಬಳಸುವಾಗ ಎಚ್ಚರಿಕೆ ವಹಿಸದೇ ಹೋದರೆ ಎಂಥ ಅನಾಹುತ ಆಗುತ್ತದೆ ಎನ್ನುವ ಶಾಕಿಂಗ್ ಘಟನೆ ಇದಾಗಿದೆ. WhatsApp Group Join Now ಸಾಮಾನ್ಯವಾಗಿ ಎಲೆಕೋಸನ್ನು ಮನೆಗೆ ತಂದಾಗ ಅದನ್ನು ಚೆನ್ನಾಗಿ ಉಪ್ಪು, ಅರಿಶಿಣ ಹಾಕಿ ನೆನೆಸಿಟ್ಟು ತೊಳೆದು ಆಮೇಲೆ ಬಳಕೆ ಮಾಡಬೇಕಾಗಿದೆ. ಕೆಲವೊಮ್ಮೆ ಮನೆಯಲ್ಲಿ ಎಷ್ಟೇ ಶುಚಿತ್ವ ಕಾಪಾಡಿಕೊಂಡರೂ, … Read more

ಸಿಎಂ ಎದುರು ಜನ ನನ್ನ ಪರ ಕೂಗಿದ್ದು ಕಾಂಗ್ರೆಸ್-ಬಿಜೆಪಿಗೆ ಎಚ್ಚರಿಕೆ ಗಂಟೆ : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿವಿಧ ರಾಜಕೀಯ ವಿಚಾರಗಳ ಕುರಿತು ಸ್ಪಷ್ಟ ಹಾಗೂ ಕಟುವಾದ ಹೇಳಿಕೆಗಳನ್ನು ನೀಡಿದ್ದಾರೆ. WhatsApp Group Join Now ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದಲ್ಲಿ ತಾವು ಗೌರವ ಸಲ್ಲಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, “ಸಿದ್ದರಾಮಯ್ಯ ಕಾಂಗ್ರೆಸ್‌ನ ಸಿಎಂ ಅಲ್ಲ, ಅವರು ರಾಜ್ಯದ ಮುಖ್ಯಮಂತ್ರಿ. ಮುಖ್ಯಮಂತ್ರಿ ನಮ್ಮ ಕ್ಷೇತ್ರಕ್ಕೆ ಬಂದಾಗ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಅದಕ್ಕೇ ನಾನು ಗೌರವ ಸಲ್ಲಿಸಿದ್ದೇನೆ. ಇದಕ್ಕೆ ಕೆಲವರಿಗೆ ನೋವಾದರೆ ನಾನು ಏನೂ ಮಾಡಲಾಗದು” ಎಂದು … Read more

ಅಗತ್ಯ ಇದ್ರೆ ಮಾತ್ರ ಸಿದ್ದು, ಡಿಕೆಶಿಗೆ ಆಹ್ವಾನ : ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮಾತಿನಿಂದ ಕನಕಪುರ ಬಂಡೆಗೆ ಬೇಸರ

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಕಾಳಗ ಎಂದೂ ಮುಗಿಯದ ಧಾರಾವಾಹಿಯಾಗಿ‌ ಬದಲಾದಂತೆ ಕಾಣುತ್ತಿದೆ. ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ಚುನಾವಣೆ ಉಸ್ತುವಾರಿ‌ ನೀಡಲಾಗಿದೆ. ಆ ಚುನಾವಣೆ ಮುಗಿಯೋವರೆಗೆ ಡಿಕೆಶಿ ಸೈಲೆಂಟಾಗಿರ್ತಾರೆ ಎಂದು ಹೈಕಮಾಂಡ್ ಭಾವಿಸಿದೆ. WhatsApp Group Join Now ಇದರ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿಯ ಹೇಳಿಕೆ‌ ನೀಡಿದ್ದಾರೆ. ಅಗತ್ಯ ಬಿದ್ದರೆ ಮಾತ್ರವೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸುತ್ತೇವೆ. ಸದ್ಯಕ್ಕೆ ಇಬ್ಬರನ್ನೂ ಕರೆಸೋದಿಲ್ಲ ಎಂದು … Read more

ಪ್ರಯಾಣ ಮಾಡುವಾಗ ವಾಂತಿಯಾಗುವುದು ಯಾವ ಕಾಯಿಲೆ ಗೊತ್ತಾ..?

ಪ್ರಯಾಣ ಕೆಲವರಿಗೆ ಖುಷಿ ನೀಡುತ್ತದೆ, ಆದರೆ ಇದು ಹಲವರಿಗೆ ಅಸ್ವಸ್ಥತೆಯ ಮೂಲವೂ ಆಗಿರಬಹುದು. ಹೆಚ್ಚಿನವರು ವಿಶೇಷವಾಗಿ ಕಾರು, ಬಸ್, ರೈಲು ಅಥವಾ ವಿಮಾನದಲ್ಲಿ ಪ್ರಯಾಣ ಮಾಡುವಾಗ ವಾಕರಿಕೆ (Vomit), ತಲೆತಿರುಗುವಿಕೆ ಅಥವಾ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ. WhatsApp Group Join Now ಇದನ್ನು ವೈದ್ಯಕೀಯವಾಗಿ ಚಲನೆಯ ಕಾಯಿಲೆ ಎಂದು ಕರೆಯಲಾಗುತ್ತದೆ. ಚಲನೆಯ ಕಾಯಿಲೆ ಕೇವಲ ಮಕ್ಕಳು ಅಥವಾ ವೃದ್ಧರಿಗೆ ಮಾತ್ರ ಬರುವ ಸಮಸ್ಯೆಯಲ್ಲ. ಇದು ಯಾವುದೇ ವಯಸ್ಸಿನ ಯಾರ ಮೇಲೂ ಪರಿಣಾಮ ಬೀರಬಹುದು ಮತ್ತು ಅವರು ಪ್ರಯಾಣ ಆರಂಭಿಸಿದ … Read more

15 ವರ್ಷಗಳಿಂದ ಹಲ್ಲುಜ್ಜಿಲ್ಲ, 35 ವರ್ಷಗಳಿಂದ ಸೋಪು ಮುಟ್ಟಿಲ್ಲ : ಇದು ಆರೋಗ್ಯ ತಜ್ಞರ ಜೀವನಶೈಲಿ

ಖ್ಯಾತ ಆರೋಗ್ಯ ತಜ್ಞ ರಾಜು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ಆರೋಗ್ಯ ಸಲಹೆಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನವೊಂದು ಈಗ ವೈರಲ್ ಆಗುತ್ತಿದೆ. ಅವರು ತಮ್ಮ ಜೀವನಶೈಲಿಯ ಬಗ್ಗೆ ಹೇಳಿದ್ದನ್ನು ಕೇಳಿ ಅನೇಕರು ಆಶ್ಚರ್ಯಚಕಿತರಾಗಿದ್ದಾರೆ. WhatsApp Group Join Now ದಶಕಗಳಿಂದ ನಾವು ಪ್ರತಿದಿನ ಮಾಡುವ ಕೆಲಸಗಳಿಂದ ಅವರು ದೂರವಿದ್ದರೂ, ಅವರು ಹೇಗೆ ಆರೋಗ್ಯವಾಗಿದ್ದಾರೆ ಎಂಬುದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ, ನಾವು ಬೆಳಿಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ಕಾಫಿ ಕೂಡ ಕುಡಿಯುವುದಿಲ್ಲ. ಆದರೆ … Read more

Arecanut Rate : ಇಂದಿನ ಅಡಿಕೆ ಧಾರಣೆ – 13 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

Arecanut Rate :- ಕರ್ನಾಟಕದ ಅಡಿಕೆ ಬೆಳೆಗಾರರಿಗೆ 2026ರ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಸ್ಥಿರತೆಯೊಂದಿಗೆ ಲಘು ಏರಿಳಿತಗಳು ಕಂಡುಬರುತ್ತಿವೆ. ರಾಜ್ಯದ ಪ್ರಮುಖ ಅಡಿಕೆ ಉತ್ಪಾದಕ ಪ್ರದೇಶಗಳಾದ ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಲೆಗಳು ಗುಣಮಟ್ಟ, ತೇವಾಂಶ ಮತ್ತು ಬೇಡಿಕೆಯ ಆಧಾರದಲ್ಲಿ ವ್ಯತ್ಯಾಸವನ್ನು ತೋರಿಸಿವೆ. ಸಾಮಾನ್ಯವಾಗಿ ಅಡಿಕೆಯ ಬೆಲೆಯನ್ನು 100 ಕೆಜಿ (ಕ್ವಿಂಟಲ್)ಗೆ ಲೆಕ್ಕ ಹಾಕಲಾಗುತ್ತದೆ, ಮತ್ತು ರಾಶಿ, ಬೇಟೆ, ಹಸಿ ಮತ್ತು ಕೊಟ್ಟಿಗೆ ವೆರೈಟಿಗಳ ನಡುವೆ ಗಣನೀಯ ವ್ಯತ್ಯಾಸವಿರುತ್ತದೆ. ವಿವಿಧ ಮಾಹಿತಿ ಮೂಲಗಳ ಪ್ರಕಾರ, … Read more

ಮದುವೆಯ ದಿನವೇ ರಸ್ತೆ ಅಪಘಾತದಲ್ಲಿ ವರ ಸಾವು – ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ!

ರಾಜ್ಯ ಸಾರಿಗೆ ಎಲೆಕ್ಟ್ರಿಕ್‌ ಬಸೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂದು ಹಸೆಮಣೆ ಏರಬೇಕಿದ್ದ ವರ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಶ್ರೀಕಾರ್ಯಂನಲ್ಲಿ ನಡೆದಿದೆ.ಮೃತನನ್ನು ಚೆಂಪಝಂತಿ ಚೆಲ್ಲಮಂಗಲಂ ಮೂಲದ ರಾಗೇಶ್‌(28) ಎಂದು ಗುರುತಿಸಲಾಗಿದೆ. WhatsApp Group Join Now ಬೆಳಿಗ್ಗೆ ದೇವಸ್ಥಾನದಲ್ಲಿ ಮದುವೆ ನಡೆಯಬೇಕಿತ್ತು.ಪಂಗಪ್ಪರ ಮಂಗುಝಿನಿಂದ ಮುಂಜಾನೆ 1 ಗಂಟೆ ಸುಮಾರಿಗೆ ಕಣಿಯಾಪುರಂ ಡಿಪೋದಲ್ಲಿ ಚಾರ್ಜ್‌ ಮಾಡಿದ ನಂತರ ವಿಕಾಸ್‌‍ ಭವನ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಎಲೆಕ್ಟ್ರಿಕ್‌ ಬಸ್‌‍ಗೆ ಬೈಕ್‌ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು … Read more

Horoscope Today : 13 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ನಿಮ್ಮ ವಾರ್ಡ್‌ರೋಬ್ ಮತ್ತು ಆಭರಣ ಪೆಟ್ಟಿಗೆಯು ಇಂದು ಬದಲಾವಣೆಗೊಳ್ಳುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಶಾಪಿಂಗ್ ತೆರಳುವಿರಿ. ಇದು ತಿನ್ನುವ ಶಾಪಿಂಗ್ ತೆರಳುವ ಮತ್ತು ಸಂಭ್ರಮಿಸುವ ಸಮಯ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ಮಧ್ಯಾಹ್ನದ ವರೆಗೆ ಶಾಪಿಂಗ್ ಮಾಡಿದ ನಂತರ, ನಿಮ್ಮ ವೆಚ್ಚವು ಮಿತಿಮೀರಿದೆ ಎಂದು ನಿಮಗೆ ಅನಿಸಬಹುದು. ಸಾಮಾಜಿಕ ಘನತೆ ಮತ್ತು ಸ್ಥಾನಮಾನದಲ್ಲಿ ವೃದ್ಧಿಯಾಗಲಿಗದೆ. ಕಷ್ಟಕರ ಮುಂಜಾನೆಯು ಉತ್ತಮವಾಗಿರುವಂತೆ ಅನಿಸುತ್ತದೆ, ಆದರೂ ಸಂಜೆಯ ವೇಳೆ ನಿರುತ್ಸಾಹ ಹೊಂದಬಹುದು. ನೀವು ಭೇಟಿ … Read more