Meerpet Madhavi Case : ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೀರ್ಪೇಟೆಯ ಜಿಲ್ಲಾಲಗುಡದಲ್ಲಿ ನಡೆದ ಭೀಕರ ಕೊಲೆಯ ಪೊಲೀಸ್ ತನಿಖೆ ಮುಂದುವರೆದಿದೆ. ತನಿಖೆಯ ಸಮಯದಲ್ಲಿ ಈ ಪ್ರಕರಣದ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ. ಆರೋಪಿ ಗುರುಮೂರ್ತಿಯ ವಿವಾಹೇತರ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸರು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಪ್ಲಾನ್ ಮಾಡಿ ಕೊಲೆ ಮಾಡಿದ್ದ ಗುರುಮೂರ್ತಿ, ವೆಬ್ ಸರಣಿಯ ಶೈಲಿಯಲ್ಲಿ ಶವವನ್ನು ವಿಲೇವಾರಿ ಮಾಡಿ, ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧವಿ ಕೊಲೆ ಪ್ರಕರಣದಲ್ಲಿ ಆಕೆಯ ಪತಿ ಮತ್ತು ಆರೋಪಿ ಗುರುಮೂರ್ತಿಯನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪೊಲೀಸರು ಈಗಾಗಲೇ ಎರಡು ಬಾರಿ ಸ್ಥಳ ಮಹಜರು ಮಾಡಿದ್ದು, ನಿರ್ಣಾಯಕ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ತನಿಖಾ ತಂಡವು ಗುರುಮೂರ್ತಿಯ ಮನೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಿತು. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಫೋನ್ ಸಿಗ್ನಲ್ಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಮಾಧವಿ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಮಕ್ಕಳ ಹೇಳಿಕೆಗಳನ್ನು ಸಹ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಹೇಳಿಕೆಗಳ ಸಮಯದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ತಾಯಿ ಕಾಣೆಯಾದ ನಂತರ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತು ಎಂದು ಮಕ್ಕಳು ಹೇಳಿದ್ದಾರೆ. ಪೊಲೀಸರು ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಆರೋಪಿಯ ಮಾಹಿತಿಯನ್ನು ಅವಲಂಬಿಸದೆ, ಪೊಲೀಸರು ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಆರೋಪಿಯ ಫೋನ್ ಪರಿಶೀಲಿಸಿದಾಗ, ಅಲ್ಲಿ ಮತ್ತೊಬ್ಬ ಮಹಿಳೆಯ ಕೆಲವು ಫೋಟೋಗಳು ಇರುವುದು ಕಂಡುಬಂದಿದೆ. ಈ ತಿಂಗಳ 18ರಂದು ದಾಖಲಾಗಿದ್ದ ವೆಂಕಟ ಮಾಧವಿ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದ ಸೆಕ್ಷನ್ಗಳ ಅಡಿಯಲ್ಲಿ ವರ್ಗಾಯಿಸಲಾಗುತ್ತಿದೆ. ಇಂದು ಈ ಪ್ರಕರಣದಲ್ಲಿ ಸ್ವಲ್ಪ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ನಡೆದಿದ್ದೇನು?
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ರಾಚರ್ಲಾ ಮಂಡಲದ ಜೆ.ಪಿ. ಚೆರುವು ಗ್ರಾಮದ ನಿವಾಸಿ ಗುರುಮೂರ್ತಿ ಮತ್ತು ಅದೇ ಗ್ರಾಮದ ವೆಂಕಟ ಮಾಧವಿ 13 ವರ್ಷಗಳ ಹಿಂದೆ ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗುರುಮೂರ್ತಿ ಸೇನೆಯಲ್ಲಿ ಜವಾನನಾಗಿ ಸೇರಿ ನಾಯಕ್ ಸುಬೇದಾರ್ ಆಗಿ ನಿವೃತ್ತನಾದನು. ಪ್ರಸ್ತುತ ಕಾಂಚನ್ಬಾಗ್ ಡಿಆರ್ಡಿಎಯಲ್ಲಿ ಗುತ್ತಿಗೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಗುರುಮೂರ್ತಿ ಕೆಲ ಸಮಯದಿಂದ ತಮ್ಮ ಹತ್ತಿರದ ಸಂಬಂಧಿಯಾಗಿರುವ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತದೆ. ಈ ವಿಷಯ ಪತ್ನಿ ಮಾಧವಿಗೆ ತಿಳಿದು ಇಬ್ಬರ ನಡುವೆ ಅನೇಕ ಬಾರಿ ಜಗಳಗಳು ನಡೆದಿದ್ದವು. ತಮ್ಮ ಅನೈತಿಕ ಸಂಬಂಧಕ್ಕೆ ಇರುವ ಅಡಚಣೆಯನ್ನು ತೊಡೆದು ಹಾಕಲು ಪತ್ನಿಯನ್ನೇ ಕೊಲ್ಲಲು ಗುರುಮೂರ್ತಿ ಪ್ಲಾನ್ ಮಾಡಿದನು.
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗುರುಮೂರ್ತಿ ತನ್ನಿಬ್ಬರು ಮಕ್ಕಳನ್ನು ನಗರದಲ್ಲಿನ ತನ್ನ ಸಹೋದರಿಯ ಮನೆಯಲ್ಲಿ ಬಿಟ್ಟು ಹೋಗಿದ್ದ. ಜ. 13 ಮತ್ತು 14 ರಂದು ಗುರುಮೂರ್ತಿ ಮತ್ತು ಮಾಧವಿ ಬೆಳಗ್ಗೆ ತಮ್ಮ ಸಹೋದರಿಯ ಮನೆಗೆ ಹೋಗಿ ಸಂಜೆ ಹಿಂತಿರುಗಿದರು. ಜ. 15 ರಂದು ಬೆಳಗ್ಗೆ ಗುರುಮೂರ್ತಿ ಮತ್ತು ಮಾಧವಿ ಜಗಳವಾಡಲು ಶುರು ಮಾಡಿದರು. ಕಾರಣ ಏನೆಂದರೆ, ಗಂಡ ಇನ್ನೊಬ್ಬ ಮಹಿಳೆಯೊಂದಿಗೆ ಇರುವ ಕೆಲ ಫೋಟೋಗಳನ್ನು ಮಾಧವಿ ನೋಡಿದಳು. ಜಗಳ ನಡೆಯುತ್ತಿದ್ದಂತೆ ಮೊದಲೇ ಕೊಲೆಗೆ ಪ್ಲಾನ್ ಮಾಡಿದ್ದ ಗುರುಮೂರ್ತಿ, ಪತ್ನಿಯ ತಲೆಗೆ ಬಲವಾದ ಆಯುಧದಿಂದ ಹೊಡೆದನು. ಏಟು ತಾಳಲಾರದೇ ಮಾಧವಿ ಕೆಳಗೆ ಬಿದ್ದರು ಮತ್ತು ಸ್ಥಳದಲ್ಲೇ ಆಕೆ ಮೃತಪಟ್ಟಳು. ಬಳಿಕ ಆರು ತಿಂಗಳ ಹಿಂದೆ ಒಟಿಟಿಯಲ್ಲಿ ನೋಡಿದ ವೆಬ್ ಸರಣಿಯ ಪಾತ್ರಗಳಂತೆ ದೇಹವನ್ನು ವಿಲೇವಾರಿ ಮಾಡಲು ಗುರುಮೂರ್ತಿ ಮುಂದಾದನು. ಇದರ ಭಾಗವಾಗಿ, ದೇಹವನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗಿ ತುಂಡುಗಳಾಗಿ ಕತ್ತರಿಸಿದನು.
ನಂತರ ಹೀಟರ್ ಬಳಸಿ ಬಕೆಟ್ ನೀರನ್ನು ಬಿಸಿ ಮಾಡಿ ಮಾಂಸದ ತುಂಡುಗಳನ್ನು ಅದರೊಳಗೆ ಹಾಕಿದ್ದಾನೆ. ತುಂಡುಗಳನ್ನು ಮಾಡಿದ ನಂತರ, ಮಾಂಸವನ್ನು ಮೂಳೆಗಳಿಂದ ಬೇರ್ಪಡಿಸಿದ್ದಾರೆ. ಮಾಂಸ ಮತ್ತು ಮೂಳೆಗಳನ್ನು ಒಂದು ದೊಡ್ಡ ಕುಕ್ಕರ್ನಲ್ಲಿ ಬೇಯಿಸಿದ್ದಾನೆ. ಚೆನ್ನಾಗಿ ಬೇಯಿಸಿದ ಬಳಿಕ ಒಣಗಿಸಿ, ಮಾಂಸವನ್ನು ಸುಟ್ಟು ಹಾಕಿದ್ದಾನೆ. ಅಲ್ಲದೆ, ಮೂಳೆಗಳನ್ನು ಚೆನ್ನಾಗಿ ಪುಡಿ ಮಾಡಿದ್ದಾನೆ. ಇದಾದ ಬಳಿಕ ಬೂದಿಯನ್ನು ಒಳಚರಂಡಿ ಮ್ಯಾನ್ಹೋಲ್ನಲ್ಲಿ ಬೆರೆಸಿ ಉಳಿದ ಮೂಳೆಯ ಪುಡಿಯನ್ನು ಹತ್ತಿರದ ಜಿಲ್ಲಲಾಗುಡದ ಕೊಳಕ್ಕೆ ಎಸೆದಿದ್ದಾನೆ.
ಕೊಲೆಯಾದ ನಂತರ ಸುಮಾರು ಎರಡು ದಿನಗಳ ಕಾಲ ನಿದ್ದೆ ಮಾಡದೆ ಇದನ್ನೆಲ್ಲ ಮಾಡಿದೆ ಎಂದು ಆರೋಪಿ ಗುರುಮೂರ್ತಿ ಪೊಲೀಸರಿಗೆ ಹೇಳಿದ್ದಾನೆ. ದೇಹವನ್ನು ಕತ್ತರಿಸಿದ ಬಳಿಕ ಕೋಣೆಯನ್ನು ನೀರಿನಿಂದ ಸ್ವಚ್ಛಗೊಳಿಸಿದ್ದಾನೆ. 17ನೇ ತಾರೀಖಿನಂದು ಸಂಜೆ, ಮಾಧವಿಯ ಪಾಲಕರಿಗೆ ಕರೆ ಮಾಡಿ, ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ಹೇಳಿದ್ದಾನೆ. ಸಣ್ಣ ಜಗಳದಿಂದಾಗಿ ಆಕೆ ಮನೆ ಬಿಟ್ಟು ಹೋದಳು ಎಂದು ಕತೆ ಕಟ್ಟಿದ್ದಾನೆ. ಮಾಧವಿ ಪಾಲಕರ ಜತೆಗೆ ತೆರಳಿ ದೂರು ಸಹ ದಾಖಲಿಸಿದ್ದ.
ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಪೊಲೀಸರಿಗೆ ಗುರುಮೂರ್ತಿಯ ಮೇಲೆ ಅನುಮಾನ ಮೂಡಿತು. ಮಾಧವಿ ಮನೆಗೆ ಪ್ರವೇಶಿಸುವುದನ್ನು ಹೊರತುಪಡಿಸಿ, ಆಕೆ ಹೊರಗೆ ಬರುವ ಯಾವುದೇ ದೃಶ್ಯಗಳು ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ. ಇದರಿಂದ ಅನುಮಾನ ಮತ್ತಷ್ಟು ಬಲವಾಯಿತು. ಬಳಿಕ ಗುರುಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ನಿಜವಾದ ಕತೆ ಬೆಳಕಿಗೆ ಬಂದಿತು. ಬುಧವಾರ ಮತ್ತು ಗುರುವಾರ ಆರೋಪಿಯ ನಿವಾಸವನ್ನು ಪರಿಶೀಲಿಸಿದ್ದ ತನಿಖಾ ತಂಡ ಮತ್ತು ವಿಧಿವಿಜ್ಞಾನ ತಂಡಗಳು, ಮನೆಯಿಂದ ನೀರಿನ ಬಕೆಟ್, ವಾಟರ್ ಹೀಟರ್ ಮತ್ತು ಕೆಲವು ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿವೆ. ಅವುಗಳನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ದೇಹವನ್ನು ತುಂಡು ಮಾಡಿ ಕುಕ್ಕರ್ನಲ್ಲಿ ಹಾಕಿ ಬೇಯಿಸಲಾಗಿದೆ ಎಂಬುದಕ್ಕೆ ಕೆಲವು ಪುರಾವೆಗಳು ಕಂಡುಬಂದಿವೆ.
ಪೊಲೀಸರ ತನಿಖೆಗೆ ಟ್ವಿಸ್ಟ್
ಆರೋಪಿ ಹೇಳಿರುವ ವಿಷಯಗಳನ್ನು ಆಧರಿಸಿ ತನಿಖಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರೂ ಹೊಸ ಟ್ವಿಸ್ಟ್ ತಲೆನೋವಾಗಿ ಪರಿಣಮಿಸಿದೆ. ಮೂಳೆಗಳನ್ನು ಕೆರೆಗೆ ಎಸೆದಿರುವುದಾಗಿ ಹೇಳಿದ್ದರೂ ಅಲ್ಲಿ ಇನ್ನೂ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಶವದ ಕುರುಹುಗಳೇನಾದರೂ ಕಂಡುಬಂದರೆ, ಅದನ್ನು ಮಾಧವಿಯ ಮಕ್ಕಳ ಡಿಎನ್ಎ ಜೊತೆ ಹೋಲಿಸುವ ಸಾಧ್ಯತೆಯಿದೆ. ಆದರೆ, ಇಲ್ಲಿಯವರೆಗೆ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ. ಇಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನಿರ್ಣಾಯಕವಾಗಿರುತ್ತದೆ. ಮಾಧವಿ ನಾಪತ್ತೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಅವರು ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಮಾತ್ರ ಪತ್ತೆಯಾಗಿವೆ ಎಂದು ಎಲ್ಬಿ ನಗರ ಡಿಸಿಪಿ ಪ್ರವೀಣ್ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
- BSNL Plan : ಬರೋಬ್ಬರಿ 150 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಅತ್ಯುತ್ತಮ ರಿಚಾರ್ಜ್ ಪ್ಲಾನ್!
- ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಸ್ಥಿತಿ ಗಂಭೀರ.! ಪೋಷಕರ ತೀರ್ಮಾನವೇನು ಗೊತ್ತಾ.?
- 5 ದಿನಗಳಲ್ಲಿ ಈ ಕೆಲಸ ಮಾಡದವರ ಪಿಂಚಣಿ ಬಂದ್.! ಸರ್ಕಾರದ ಹೊಸ ಆದೇಶ.! Pension New Updates
- ಒಂದು EMI ಮಿಸ್ ಆದವರಿಗೆ ಇನ್ಮೇಲೆ ಹೊಸ ರೂಲ್ಸ್ | Missed EMI & CIBIL Score
- ಬ್ಯಾಂಕ್ ಖಾತೆ ಇದ್ದು ಈ ತಪ್ಪು ಮಾಡಿದವರಿಗೆ 2 ವರ್ಷ ಜೈಲು ಹಾಗು ದಂಡ – ಸಂಪೂರ್ಣ ಮಾಹಿತಿ
- ಎಲ್ಲಾ ಗೃಹಲಕ್ಷ್ಮಿ ಯರಿಗೆ ಬಿಗ್ ಶಾಕ್.! ರಾತ್ರೋರಾತ್ರಿ ಹೊಸ ಲಿಸ್ಟ್ ಬಿಡುಗಡೆ | ಹೆಸರು ಇದ್ದವರಿಗೆ ಮಾತ್ರ ಹಣ.!
- ಮಳೆ.! ಮಳೆ.! ಅಕ್ಟೋಬರ್ 29 ರ ವರೆಗೆ | 18 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | weather forecast
- ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರದಿಂದ ಸಿಹಿಸುದ್ಧಿ.! ಭೂ ಪರಿವರ್ತಿತ ಜಮೀನುಗಳಲ್ಲಿ ಬಡಾವಣೆ ರೂಪಿಸಲು ಅವಕಾಶ
- ತುಟ್ಟಿಭತ್ಯೆ ಶೇ. 55 ರಿಂದ 58ಕ್ಕೆ ಹೆಚ್ಚಳ, ಸರ್ಕಾರದ ಅಧಿಕೃತ ಆದೇಶ ಪ್ರಕಟ – ಯಾರೆಲ್ಲಾ ಇದರ ಪ್ರಯೋಜನ ಪಡೆಯುತ್ತಾರೆ?
- ಕ್ಷುಲಕ ಕಾರಣಕ್ಕೆ ದಂಪತಿ ನಡುವೆ ಜಗಳ, ತವರು ಮನೆ ಸೇರಿದ ಪತ್ನಿ, ಅವಳಿ ಹೆಣ್ಣು ಮಕ್ಕಳ ‘ಕತ್ತು ಸೀಳಿ’ ಕೊಂದ ಕಟುಕ ತಂದೆ!
- ಇನ್ಮೇಲೆ ಈ ಕೆಲಸ ಅಪರಾಧವಲ್ಲ ಕೋರ್ಟ್ ಹೊಸ ಆದೇಶ ಜಾರಿಗೆ | ಹೈಕೋರ್ಟ್ ಕೊಟ್ಟಿರುವ ಈ ತೀರ್ಪು ಯಾವುದು.?
- ರೈತರ ಸಾಲಮನ್ನಾ : ಗುಡ್ ನ್ಯೂಸ್ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ
- ನವೆಂಬರ್ 1 ರಿಂದ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಪ್ಪದೇ ನೋಡಿ
- ನೀವು ಈ 10 ರೀತಿಯ ಕ್ಯಾಷ್ ಟ್ರಾನ್ಸಾಕ್ಷನ್ ಮಾಡ್ತಿದ್ದೀರಾ? ಐಟಿ ನೋಟಿಸ್ ಬರಬಹುದು ಎಚ್ಚರ! Income Tax
- ಪೊಲೀಸರು 5 ತಿಂಗಳಲ್ಲಿ 4 ಬಾರಿ ಅತ್ಯಾಚಾರ ಮಾಡಿದ್ರು : ಕೈಯಲ್ಲಿ ಡೆತ್ ನೋಟ್ ಬರೆದುಕೊಂಡು ವೈದ್ಯೆ ಆತ್ಮಹತ್ಯೆ
- ಪರಿಶಿಷ್ಟ ಪಂಗಡದ ಮಹಿಳೆ ಆಸ್ತಿಗೆ ಹಕ್ಕುದಾರಳಲ್ಲ : ಸಂವಿಧಾನವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್ ಹೇಳಿದ್ದೇನು?
- BPL ಕಾರ್ಡ್ ಇದ್ದ 75 ವರ್ಷದವರಿಗೆ ದೊಡ್ಡ ಸಿಹಿಸುದ್ದಿ – ಹಿರಿಯ ನಾಗರಿಕರಿಗೆ ಈ ಸೇವೆ ಉಚಿತ | BPL Ration Card
- ಪೋಷಕರು ಮಾರಿದ ಆಸ್ತಿಯನ್ನು ಪ್ರಾಪ್ತ ವಯಸ್ಕ ಮಕ್ಕಳು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!
- ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಗೃಹಲಕ್ಷ್ಮಿ ಹಣ ಹೊಸ ರೂಲ್ಸ್ – ಯಾವ ಪಟ್ಟಿಯಲ್ಲಿ ಹೆಸರಿರಬೇಕು.?
- ನವೆಂಬರ್ 1 ರಿಂದ ಗ್ಯಾಸ್ ಸಿಲಿಂಡರ್ ಗೆ ಹೊಸ ರೂಲ್ಸ್ | ಏನಿದು ಹೊಸ ನಿಯಮ.? Gas Cylinder
- ಗ್ರಾಮೀಣ ಜನತೆಗೆ ಸಿಹಿಸುದ್ದಿ : ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬಿ-ಖಾತಾ ವಿತರಣೆ, ಇ-ಸ್ವತ್ತು ಸರಳೀಕರಣ
- ಬ್ಯಾಂಕ್ ಸಾಲ ಬಾಕಿ ಇದ್ದವರಿಗೆ RBI ನಿಂದ ಗುಡ್ ನ್ಯೂಸ್ | ಆರ್ ಬಿಐ ನೀಡಿರುವ ಗುಡ್ ನ್ಯೂಸ್ ಏನು.?
- Gold Rate : ಭಾರೀ ಇಳಿಕೆ ಕಂಡ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ದರ.? ಭರ್ಜರಿ ಇಳಿಕೆಯತ್ತ!
- ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules
- ಬಿಪಿಎಲ್ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್.! BPL Ration Card Updates
- ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು ಎತ್ತಿಹಿಡಿದ ಸುಪ್ರೀಂ ಕೋರ್ಟ್- Inherited property rights
- Online gambling : ಆನ್ಲೈನ್ ಜೂಜು ನಿಷೇಧ : ಕೇಂದ್ರದ ನೆರವು ಕೇಳಿದ ಸುಪ್ರೀಂ ಕೋರ್ಟ್


























