Goat Farming Subsidy : ಕುರಿ ಸಾಕಣಿಕೆ ಮಾಡಲು ಸಿಗಲಿದೆ ₹50,000/- ಸಹಾಯಧನ.! ರೈತರು ಈ ಕೂಡಲೇ ಅರ್ಜಿ ಸಲ್ಲಿಸಿ

Goat Farming Subsidy : ನಮಸ್ಕಾರ ಸ್ನೇಹಿತರೇ, ಕುರಿ ಅಥವಾ ಮೇಕೆಗಳನ್ನು ಖರೀದಿಸಲು ನಿಮಗೆ ಸರ್ಕಾರದ ಸಹಾಯಧನವೂ ಬೇಕೇ.? ಕುರಿ ಮತ್ತು ಮೇಕೆಗಳನ್ನು ಸಾಕಲು ಜನರು ಸರ್ಕಾರದಿಂದ ಸಹಾಯಧನ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸವಲತ್ತುಗಳ ಸಲುವಾಗಿ ಕರ್ನಾಟಕ ಸರ್ಕಾರವು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳಲು ಬಯಸುವ ಅರ್ಹ ಮತ್ತು ಆಸಕ್ತ ವ್ಯಕ್ತಿಗಳಿಂದ ಹಾಗೂ ರೈತರಿಂದ ಸಹಾಯಧಾನಕ್ಕೆ ಅರ್ಜಿಗಳನ್ನು ಆಹ್ವಾನಿದೆ.

ಇದನ್ನೂ ಕೂಡ ಓದಿ : Anugraha Scheme : ಅನುಗ್ರಹ ಯೋಜನೆಯಡಿ ಪ್ರತಿ ಮೇಕೆಗೆ ₹5,000/- ರೂಪಾಯಿ ಪರಿಹಾರ.! ಬೇಕಾಗುವ ದಾಖಲೆಗಳೇನು.?

ಅಮೃತ ಸ್ವಾಬಿಮಾನಿ ಕುರಿಗಾಹಿ ಯೋಜನೆ :-

ಅಮೃತ ಸ್ವಾಬಿಮಾನಿ ಕುರಿಗಾಹಿ ಯೋಜನೆಯಡಿ, ಅರ್ಹ ಅಭ್ಯರ್ಥಿಗಳು ಕುರಿ ಮತ್ತು ಮೇಕೆ ಸಾಕಣೆಗಾಗಿ ₹1.75 ಲಕ್ಷ ರೂಪಾಯಿ ಹಣದ ಆರ್ಥಿಕ ಸಹಾಯವನ್ನು ಪಡೆಯಬಹುದು. ಈ ಯೋಜನೆಯು ಉಣ್ಣೆ ಉತ್ಪಾದಕರ ಸಹಕಾರಿ ಸದಸ್ಯರಾಗಿ ನೋಂದಾಯಿಸಲ್ಪಟ್ಟ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು (706) ಘಟಕಗಳನ್ನು ನೀಡಲು ಸರ್ಕಾರ ಯೋಜಿಸಿದ್ದು, ಪ್ರತಿ ಘಟಕದ ವೆಚ್ಚವೂ ₹1,75,000 ರೂ. ಹಣವನ್ನು ನಿರ್ಧರಿಸಲಾಗಿದೆ.

ರಾಜ್ಯ ಸರಕಾರ ₹43,750 ರೂ. ಗಳ ಸಹಾಯಧನ ನೀಡುತ್ತದೆ. ಫಲಾನುಭವಿಗಳು ₹43,750 ರೂ. ಗಳನ್ನು ಠೇವಣಿ ಇಡಬೇಕು. ಕರ್ನಾಟಕದ ಹಣಕಾಸು ಸಂಸ್ಥೆಗಯು ಶೇ. 9.26ರ ಬಡ್ಡಿ ದರದಲ್ಲಿ ₹87,500 ರೂ.ಗಳ ಸಾಲ ಸೌಲಭ್ಯವೂ ರೈತರಿಗೆ ಸಿಗುತ್ತದೆ. ಈ ಯೋಜನೆಗೆ ಅರ್ಜಿಯನ್ನೂ ಸಲ್ಲಿಸುವ ಮೂಲಕ ಆಯ್ಕೆಯಾದ ರೈತ ಫಲಾನುಭವಿಗಳು 20 ಅಥವಾ ಅದಕ್ಕಿಂತ ಹೆಚ್ಚಿನ ಕುರಿ ಮತ್ತು ಮೇಕೆಗಳನ್ನು ಖರೀದಿಸಬಹುದು ಮತ್ತು ಅವುಗಳನ್ನು ಸ್ವತಃ ಸಾಕಬಹುದು.

ಇದನ್ನೂ ಕೂಡ ಓದಿ : Scholarship : ₹50,000/- ಸ್ಕಾಲರ್ಶಿಪ್.! ಅರ್ಹ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ – ಡೈರೆಕ್ಟ್ ಲಿಂಕ್ ಇಲ್ಲಿದೆ

ಹೇಗೆ ಅರ್ಜಿ ಸಲ್ಲಿಸುವುದು.?

ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರರು ಕಛೇರಿಗೂ ಸಹ ಭೇಟಿ ನೀಡಬಹುದು. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ದೂರವಾಣಿ ಸಂಖ್ಯೆ :- 08194-222718, ಮೊಬೈಲ್ ಸಂಖ್ಯೆ :- 9448656231 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply