ಮಹಿಳೆಯರೇ, ಎಚ್ಚರ.! ನಿಮ್ಮ ದೇಹದಲ್ಲಿ ಈ ಲಕ್ಷಣಗಳು ಕಂಡುಬಂದ್ರೆ ಗರ್ಭಕಂಠದ ಕ್ಯಾನ್ಸರ್‌ ಬಂದಿದೆ ಎಂದರ್ಥ!

ಗರ್ಭಕಂಠದ ಕ್ಯಾನ್ಸರ್ ಬೇಗ ಪತ್ತೆಯಾದಷ್ಟೂ ಅದು ನಿಮ್ಮ ಆರೋಗ್ಯಕ್ಕೆ ಕಡಿಮೆ ಹಾನಿ ಉಂಟುಮಾಡುತ್ತದೆ. ಗರ್ಭಕಂಠದ ಕ್ಯಾನ್ಸರ್ ವಿಷಯದಲ್ಲಿ ವಿಳಂಬ ಮಾಡಿದ್ರೆ ನಂತರ ನೀವು ವಿಷಾದಿಸಬೇಕಾಗುತ್ತದೆ. ಇಂದು ಗರ್ಭಕಂಠದ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನ ಸೂಚಿಸುವ ಕೆಲವು ಲಕ್ಷಣಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಒಂದು ವೇಳೆ ನೀವು ಈ ಲಕ್ಷಣಗಳನ್ನ ಏಕಕಾಲದಲ್ಲಿ ಅನುಭವಿಸಿದರೆ, ತಕ್ಷಣವೇ ವೈದ್ಯರನ್ನ ಸಂಪರ್ಕಿಸಬೇಕು. ಜಾಗರೂಕರಾಗಿರಿ: ನಿಮ್ಮ ಋತುಚಕ್ರವು ದೀರ್ಘಕಾಲದವರೆಗೆ ಇದ್ದರೆ, ಈ ಲಕ್ಷಣವನ್ನ ನೀವು ಸಣ್ಣದು ಎಂದು ಅಪ್ಪಿತಪ್ಪಿಯೂ ಭಾವಿಸಬಾರದು. ಇದಲ್ಲದೆ ಯೋನಿಯಿಂದ ನೀರಿನಂಶದ, … Read more

ಮದ್ಯದ ನಶೆಯಲ್ಲಿ ಅಪ್ರಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್ ಸೇರಿ ಇಬ್ಬರು ಅರೆಸ್ಟ್, ಮತ್ತಿಬ್ಬರಿಗೆ ಧರ್ಮದೇಟು

ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ನಸುಕಿನಲ್ಲಿ ಮನೆಗೆ ಹೋಗುತ್ತಿದ್ದ 17 ವರ್ಷದ ಬಾಲಕಿಯನ್ನು ಕಾರಿನಲ್ಲಿ ಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಮಾಗಡಿ ಠಾಣೆ ಪೊಲೀಸರು ಯುಟ್ಯೂಬ್ ನ್ಯೂಸ್‌ ಚಾನೆಲ್‌ ನಡೆಸುತ್ತಿರುವ ವ್ಯಕ್ತಿ ಸೇರಿದಂತೆ ಮೂವರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ತುಮಕೂರು ಜಿಲ್ಲೆಯ ಶಿರಾ ಪಟ್ಟಣದ ಆರ್‌ಜೆ ಡಿಜಿಟಲ್ ನ್ಯೂಸ್‌ ಯೂಟ್ಯೂಬ್ ಚಾನೆಲ್‌ನ ರವಿ ಜಮುನಾ ಬಂಧಿತ. ಇನ್ನಿಬ್ಬರು ಆರೋಪಿಗಳಾದ ರವಿ ಸ್ನೇಹಿತ ಹಾಗೂ ಮಾಗಡಿಯ ವೆಂಕಟೇಶ್‌ ಕೃತ್ಯದಲ್ಲಿ ವಹಿಸಿರುವ ಪಾತ್ರದ … Read more

ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ : ವೈನ್ ಶಾಪ್ ಎದುರೇ ರಾಡ್ನಿಂದ ಹೊಡೆದು ಕೊಲೆ

ಶಿವಮೊಗ್ಗದ ವಿನೋಬ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಇರುವ ಶ್ರೀನಿಧಿ ವೈನ್ ಶಾಪ್ ಮುಂದೆ ಒಂದು ಭೀಕರ ಕೊಲೆ ನಡೆದಿದೆ. ಅರುಣ ಎನ್ನುವ ವ್ಯಕ್ತಿಯು ವೈನ್ ಶಾಪ್ ಮುಂದೆ ನಿಂತಿದ್ದಾಗ ಹಠಾತ್ ಆಗಿ ಅಲ್ಲಿಗೆ ಎಂಟ್ರಿ ಕೊಟ್ಟ ಇಬ್ಬರು ವ್ಯಕ್ತಿಗಳು ಕೆಲವೇ ಕ್ಷಣದಲ್ಲಿ ಅರುಣ ಮೇಲೆ ರಾಡ್ನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಅರುಣ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅರುಣನನ್ನು ಕೊಲೆ ಮಾಡಿದ್ದು ಮತ್ಯಾರೂ ಅಲ್ಲ, ಆತನಿಗೆ ಹೆಣ್ಣು ಕೊಟ್ಟ ಮಾವ ತಿಪ್ಪೇಶ್ ಮತ್ತು ಹೆಂಡತಿಯ ಸೋದರ … Read more

ತಾಯಿ ಹೇಳಿದ ‘ಬುದ್ಧಿ ಮಾತು’ ಮಗನ ಸಾವಿಗೆ ಕಾರಣವಾಯ್ತು.? ಹೊಸ ವರ್ಷದ ದಿನ ವಿಷ ಸೇವಿಸಿದ್ದ ಯುವಕ ಸಾವು.!

‘ಹೊಸ ವರ್ಷ ಬಂದಿದೆ, ಇನ್ಮುಂದೆಯಾದರೂ ಸರಿಯಾಗಿ ಕೆಲಸ ಮಾಡು’ ಎಂದು ತಾಯಿ ಹೇಳಿದ ಬುದ್ಧಿಮಾತನ್ನೇ ಅವಮಾನವಾಗಿ ಭಾವಿಸಿದ ಯುವಕನೊಬ್ಬ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದಲ್ಲಿ ನಡೆದಿದೆ. ಹೊಸ ವರ್ಷದ ಆರಂಭದ ದಿನವೇ ಬೆಳಗಾವಿ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ನಿನ್ನೆಯೂ ಕೂಡ ಬೆಂಗಳೂರಿನಲ್ಲಿ 17 ವರ್ಷದ ಬಾಲಕಿಯೊಬ್ಬಳು ಅಪ್ಪ-ಅಮ್ಮ ನನಗೆ ಪ್ರೀತಿ ತೋರಿಸುತ್ತಿಲ್ಲ. ಅವರಿಬ್ಬರೂ ಬೇರೆ ಬೇರೆ ಆಗಿದ್ದಾರೆ. ನಾನು ಎಸ್‌ಎಸ್‌ಎಲ್‌ಸಿ ಫೇಲ್ ಆದರೂ ನನ್ನ ಮೇಲೆ ಒಂಚೂರು ಪ್ರೀತಿ … Read more

ವೈದ್ಯಲೋಕಕ್ಕೆ ಶಾಕ್ ; ಪ್ರಖ್ಯಾತ ನ್ಯೂರೋಸರ್ಜನ್ ಹೃದಯಾಘಾತಕ್ಕೆ ಬಲಿ : 3 ದಿನದ ಹಿಂದಷ್ಟೇ ECG ನಾರ್ಮಲ್ ಬಂದಿತ್ತು!

ನಾಗಪುರದ ಪ್ರಮುಖ ನ್ಯೂರೋಸರ್ಜನ್ ಡಾ. ಚಂದ್ರಶೇಖರ್ ಪಾಖಮೋಡೆ (53) ಅವರು ಡಿಸೆಂಬರ್ 31ರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಫಿಟ್ನೆಸ್ ಪ್ರಿಯರಾಗಿದ್ದ ಅವರು ಕೇವಲ ಮೂರು ದಿನಗಳ ಹಿಂದೆ ಇಸಿಜಿ ಪರೀಕ್ಷೆ ಮಾಡಿಸಿಕೊಂಡಿದ್ದು, ಅದು ಸಂಪೂರ್ಣ ಸಾಮಾನ್ಯವೆಂದು ತೋರಿಸಿತ್ತು. ಈ ಆಕಸ್ಮಿಕ ಮರಣ ವೈದ್ಯಕೀಯ ವಲಯದಲ್ಲಿ ಆಘಾತ ಮೂಡಿಸಿದ್ದು, ಹೃದಯ ಸಂಬಂಧಿತ ಅಪಾಯಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದೆ. ಡಿಸೆಂಬರ್ 30ರ ರಾತ್ರಿ ಸ್ನೇಹಿತರೊಂದಿಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಮರುದಿನ ಬೆಳಗ್ಗೆ ಮನೆಯಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದರು. ಅವರ ಪತ್ನಿ … Read more

ಐದು ತಿಂಗಳ ಮಗುವಿನ ಜೀವತೆಗೆದ ಹನಿ ನೀರು : ವಿವಾಹವಾಗಿ 10 ವರ್ಷದ ನಂತರ ಜನಿಸಿದ್ದ ಕಂದಮ್ಮ!

ಮಗುವಿಗೆ ಕುಡಿಸುವ ಹಾಲಿಗೆ ಬೆರೆಸಿದ್ದ ನಲ್ಲಿ ನೀರು ಮಗುವಿನ ಜೀವವನ್ನೇ ತೆಗೆದಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ. ಕಲುಷಿತ ನೀರು ಸೇವಿಸಿ ಐದೂವರೆ ತಿಂಗಳ ಅಯಾನ್ ಎಂಬ ಮಗು ಸಹ ಸಾವನ್ನಪ್ಪಿದೆ. ಅವ್ಯಾನ್ ಅವರ ತಂದೆ ಸುನಿಲ್ ಸಾಹು ಖಾಸಗಿ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ವರ್ಷಗಳ ಪ್ರಾರ್ಥನೆ ಮತ್ತು ಕಾಯುವಿಕೆಯ ನಂತರ ಅವರಿಗೆ ಜುಲೈನಲ್ಲಿ ಮಗು ಜನಿಸಿತ್ತು. 10 ವರ್ಷಗಳ ನಂತರ ದೇವರು ನಮಗೆ ಖುಷಿ ನೀಡಿದ್ದನು. ಬಳಿಕ, ದೇವರೇ ಅದನ್ನು ಕಸಿದಿದ್ದಾನೆ ಎಂದು ಇಂದೋರ್‌ನ ಮನೆಯ … Read more

ವಿಜಯ್ ಯಾಕಪ್ಪಾ ಸರ್ಕಸ್ ಮಾಡ್ತಿಯಾ? ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು : ಪಿ. ಚಿದಂಬರಂ

ಕರೂರು ಕಾಲ್ತುಳಿತದ ಬೆನ್ನಲ್ಲೇ ಪೊಲಿಟಿಕಲ್‌ ಪಿಕ್ಚರ್‌ ಬದಲಾಗಿದೆ. ಸ್ಟಾರ್‌ ನಟನಿಗೆ ಬಿಜೆಪಿ ದಾಳ ಹಾಕಿದೆ. ವಿಜಯ್‌ರನ್ನು ತಮ್ಮನ್ನ ಸೆಳೆಯುವ ಕಾರ್ಯತಂತ್ರ ಜೋರಾಗಿದೆ. ಈ ಪೊಲಿಟಿಕಲ್‌ ಗೇಮ್‌ನಲ್ಲಿ ಕಾಂಗ್ರೆಸ್‌ ಕೂಡ ಒಂದು ಹೆಜ್ಜೆ ಮುಂದಿಟ್ಟಿದೆ. ನಟ ವಿಜಯ್ ಏನೇ ಸರ್ಕಸ್ ಮಾಡಿದರೂ ತಮಿಳುನಾಡಲ್ಲಿ ಇಂಡಿ ಕೂಟವೇ ಗೆಲ್ಲೋದು ಎಂದು ಪಿ. ಚಿದಂಬರಂ ಹೇಳುತ್ತಿದ್ದಾರೆ. 2026ರಲ್ಲಿ ತಮಿಳುನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು, ನಟ ವಿಜಯ್‌ ಭರಪೂರ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ದಿನದ ಹಿಂದೆ ಶ್ರೀಲಂಕಾ ಸಂಸದ ನಮಲ್‌ ರಾಜಪಕ್ಸೆ … Read more

ಫೆಬ್ರವರಿ 1 ರಿಂದ ಹೊಸ ತೆರಿಗೆ, ಸೆಸ್‌ ಜಾರಿ: ಪಾನ್‌ ಮಸಾಲಾ ಬಲು ದುಬಾರಿ; ಬಾಯಿ ಸುಡಲಿದೆ ಸಿಗರೇಟ್‌-ಬೀಡಿ!

ಫೆ.1ರಿಂದ ಜಾರಿಗೆ ಬರುವಂತೆ ಬೀಡಿ, ಸಿಗರೆಟ್‌, ಗುಟ್ಕಾ, ಪಾನ್‌ ಮಸಾಲಾ, ಸುವಾಸಿತ ತಂಬಾಕು ಮೇಲೆ ಭಾರೀ ಪ್ರಮಾಣದ ಅಬಕಾರಿ ಸುಂಕ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಹಾಲಿ, ಈ ಉತ್ಪನ್ನಗಳ ಮೇಲೆ ಇರುವ ಶೇ.40 ಮತ್ತು ಶೇ.18ರಷ್ಟು ಜಿಎಸ್‌ಟಿಗೆ ಹೊರತಾದ ಏರಿಕೆಯಾಗಿರಲಿದೆ. ಕಳೆದ ವರ್ಷ ಜಿಎಸ್ಟಿ ಸುಧಾರಣೆ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ತೆರಿಗೆ ಅನ್ವಯ ಈ ಘೋಷಣೆ ಮಾಡಲಾಗಿದ್ದು, ಇದು 10 ಕೋಟಿ ತಂಬಾಕು ಬಳಕೆದಾರರ ಜೇಬು ಸುಡುವುದು ಖಚಿತವಾಗಿದೆ. ಸರ್ಕಾರದ ಈ … Read more

ಪ್ರೀತಿಸಿ ಮದುವೆಯಾಗಿದ್ದೇ ತಪ್ಪಾ?: ಅಳಿಯನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಸೋ ಇಚ್ಛೆ ಥಳಿಸಿದ ಮಾವ!

ಲವ್ ಮ್ಯಾರೇಜ್ ಮಾಡಿಕೊಂಡ ಯುವಕನ ಮೇಲೆ ಮಾವನ ಮನೆಯವರಿಂದ ದಾರುಣ ಹಲ್ಲೆ ನಡೆದಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಯುವಕನ ಹೆಸರು ಸಾಯಿ ಚಂದ್, ಇದೇ ಜಿಲ್ಲೆಯ ಮಂಡವಳ್ಳಿ ಮಂಡಲದ ಕಾರು ಕೊಲ್ಲಿ ಗ್ರಾಮದವನು. ಅವನ ಪತ್ನಿ ಸಾಯಿ ದುರ್ಗಾ, ರಮಣಕ್ಕಪೇಟ ಗ್ರಾಮದಲ್ಲಿ ಪೋಸ್ಟ್‌ವುಮನ್ ಆಗಿ ಕೆಲಸ ಮಾಡುತ್ತಿದ್ದಾಳೆ. ಇಬ್ಬರೂ 8 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. ಸಾಯಿ ದುರ್ಗಾ ಅವರ … Read more

ದೇವನಹಳ್ಳಿಯಲ್ಲಿ ಟೋಲ್ ಬೂತ್ಗೆ ಗುದ್ದಿದ ಬಸ್ – ರಕ್ಷಣೆಗೆ ಧಾವಿಸಿದವರು ಮೊಬೈಲ್ ಹೊತ್ತೊಯ್ದರು

ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44 ರಲ್ಲಿನ ದೇವನಹಳ್ಳಿ ಹೊರವಲಯದ ಟೋಲ್ ಪ್ಲಾಜಾ ಬಳಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅಪಘಾತ ತಪ್ಪಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರಾನ್ಸ್ ಇಂಡಿಯಾ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಪ್ಲಾಜಾ ಬೂತ್‌ಗೆ ಡಿಕ್ಕಿ ಹೊಡೆದಿದೆ. ಇದೇ ಸಮಯದಲ್ಲಿ ರಕ್ಷಣೆಯ ನೆಪದಲ್ಲಿ ಬಂದ ಕಳ್ಳರು ಪ್ರಯಾಣಿಕರ ಫೋನ್ಗಳನ್ನಯ ಹೊತ್ತೊಯ್ದಿರುವುದು ಅಮಾನವೀಯತೆಯ ಪರಮಾವಧಿಯಾಗಿದೆ. ಮೂವರ ಐ ಫೋನ್ ಕದ್ದೊಯ್ದ ಕದೀಮರು ಡಿಕ್ಕಿಯ ರಭಸಕ್ಕೆ ಬಸ್‌ನ … Read more