ರಾಜ್ಯದಲ್ಲಿ ಸಿಎಂ ‘ಕುರ್ಚಿಗಾಗಿ’ ಹೊಡೆದಾಟ : ಸಿದ್ದರಾಮಯ್ಯ ‘CM’ ಸ್ಥಾನದ ಕುರಿತು ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!

ರಾಜ್ಯದಲ್ಲಿ ಇದೆ ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಯಾಗಲಿದ್ದು, ಜನ್ಮ ಜನ್ಮದಲ್ಲೂ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ. ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಅವಧಿ ಇದೇ ಕೊನೆ, ಇದಾದ್ಮೇಲೆ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಅಂತ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ … Read more

ತುಂಡುಡುಗೆ ಧರಿಸಿದ್ದಕ್ಕೆ ಅಕ್ಕನನ್ನೇ ಬ್ಯಾಟ್ ನಿಂದ ಹೊಡೆದು ಕ್ರೂರವಾಗಿ ಹತ್ಯೆಗೈದ ತಮ್ಮ.!

ತುಂಡುಡುಗೆ ಧರಿಸಿದ್ದಕ್ಕೆ ತಮ್ಮನೋರ್ವ ಅಕ್ಕನನ್ನೇ ಬ್ಯಾಟ್ ನಿಂದ ಹೊಡೆದು ಕೊಂದ ಘಟನೆ ಹರಿಯಾಣದಲ್ಲಿ ನಡೆದಿದೆ. ಹರಿಯಾಣದ ಫತೇಹಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ 18 ವರ್ಷದ ಯುವಕನೊಬ್ಬ ತನ್ನ 33 ವರ್ಷದ ಸಹೋದರಿ ಚಿಕ್ಕ ಬಟ್ಟೆ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮತ್ತು ಆಕೆಯ ವ್ಯಕ್ತಿತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮರದ ಬ್ಯಾಟ್ನಿಂದ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ . ಸೋಮವಾರ ಮಾಡೆಲ್ ಟೌನ್ನಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡ ಮಹಿಳೆಯನ್ನು ಆರಂಭದಲ್ಲಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು, … Read more

ಮನೆಯಲ್ಲಿ ಬಾಯ್ಲರ್ ಸ್ಫೋಟ – 11ರ ಬಾಲಕಿ ಸಾವು, ಮೂವರಿಗೆ ಗಂಭೀರ – Girl dies in boiler explosion

ದಾವಣಗೆರೆ : ಮನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು (Boiler Blast) 11 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಹೊನ್ನಾಳಿ (Honnali) ಪಟ್ಟಣದ ದುರ್ಗಿಗುಡಿ ಉತ್ತರ ಭಾಗದಲ್ಲಿ ನಡೆದಿದೆ. ಸ್ವೀಕೃತಿ (11) ಮೃತ ಬಾಲಕಿ, ತೀರ್ಥಿಬಾಯಿ, ಹೂವಾ ನಾಯ್ಕ್, ಸುನೀತಾ ಬಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮನೆಯಲ್ಲಿ ಬೆಳಗ್ಗೆ ಬಾಯ್ಲರ್ ಆನ್ ಮಾಡಿದಾಗ ಸ್ಟೋಟಗೊಂಡಿದೆ. ಬಾಯ್ಲರ್ ಪಕ್ಕದಲ್ಲೇ ಇದ್ದ ಬಾಲಕಿ ಸ್ವೀಕೃತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಗಂಭೀರವಾಗಿ ಸುಟ್ಟಗಾಯಗಳಾಗಿರುವ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಇದೀಗ … Read more

LPG : ಗ್ರಾಹಕರಿಗೆ ಭರ್ಜರಿ ಸುದ್ದಿ, ದೀಪಾವಳಿ ಹಬ್ಬಕ್ಕೆ ಅಡುಗೆ ಅನಿಲ ದರ ಇಳಿಕೆ ಸಾಧ್ಯತೆ

ಎಲ್‌ಪಿಜಿ (LPG) ಗ್ರಾಹಕರಿಗೊಂದು ಗುಡ್‌ನ್ಯೂಸ್‌ ಸಿಕ್ಕಿದ್ದು, ಅಮೆರಿಕ ಹಾಗೂ ಭಾರತದ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಕಾರಣದಿಂದ ಅಡುಗೆ ಅನಿಲ ಬೆಲೆಯಲ್ಲಿ ಇಳಿಕೆ ಆಗಲಿದೆ ಎನ್ನಲಾಗುತ್ತಿದೆ. ಅಮೆರಿಕದಿಂದ ಎಲ್‌ಪಿಜಿ ಆಮದು ಅಮೆರಿಕದ ತೆರಿಗೆ ನೀತಿಯಿಂದ ಅನೇಕ ದೇಶಗಳು ಸಮಸ್ಯೆಯನ್ನ ಅನುಭವಿಸುತ್ತಿದೆ. ಇದರಿಂದ ಭಾರತಕ್ಕೆ ಸಹ ತೊಂದರೆ ಆಗುತ್ತಿದೆ. ಆದರೆ ಎಲ್‌ಪಿ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ ಎಂದು ಊಹಿಸಲಾಗಿದೆ. ಭಾರತ ಅಮೆರಿಕದಿಂದ ಎಲ್‌ಪಿಜಿ ಆಮದು ಮಾಡಿಕೊಳ್ಳಲು ಸಜ್ಜಾಗಿದೆ ಎನ್ನಲಾಗಿದೆ. ಕೆಲ ಮಾಹಿತಿಗಳ ಪ್ರಕಾರ,ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ … Read more

ಸಮೀಕ್ಷೆಗೆ ವಿರೋಧ ಮಾಡಿದ್ರೆ ಅದು ಸಂವಿಧಾನಕ್ಕೆ ವಿರೋಧ : ಸಚಿವ ಕೃಷ್ಣಬೈರೇಗೌಡ – ಆರ್ ಅಶೋಕ್ ಗೆ ತಿರುಗೇಟು

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೆಲವೆಡೆ ವಿರೋಧ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಸಚಿವ ಕೃಷ್ಣಬೈರೇಗೌಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಶಿವಮೊಗ್ಗದಲ್ಲಿ ಸಮೀಕ್ಷೆ ಬಹಿಷ್ಕಾರ ವಿಚಾರ ಸಂಬಂಧ ಇಂದು ಖರ್ಗೆ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಕೆಲವು ಭಾಗಗಳಲ್ಲಿ ಸಮೀಕ್ಷೆ 70% ಮುಗಿದಿದ್ದು, ಕೆಲವು ಕಡೆ 100% ಪೂರ್ಣಗೊಂಡಿದೆ ಎಂದರು. ಸಮೀಕ್ಷೆಗೆ ವಿರೋಧಿಸುವುದು ಸಂವಿಧಾನ ವಿರೋಧಿ: ಸಮೀಕ್ಷೆಯಲ್ಲಿ ಭಾಗವಹಿಸದಿರುವುದು ಕೆಲವರ ಸ್ವ ಇಚ್ಛೆ. ಆದರೆ, ಇದು ಸೆನ್ಸಸ್ ಅಲ್ಲ, ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು … Read more

ಕೇಸರಿ ಪಾಳಯಕ್ಕೆ ಯತ್ನಾಳ್ ಶಾಕ್! “ಭಗವಾ ಝಂಡಾ” ಪಕ್ಷದ ಮೂಲಕ ಬುಲ್ಡೋಜರ್ ಸರ್ಕಾರ ರಚನೆ ಖಚಿತ; ಸಿದ್ದು, ಸವದಿ ಟಿವಿಯಲ್ಲಿ ನೋಡ್ತಾರೆ! – ಯತ್ನಾಳ್

ರಾಜ್ಯ ರಾಜಕೀಯದಲ್ಲಿ ತಮ್ಮ ಖಡಕ್ ಹೇಳಿಕೆಗಳಿಂದಲೇ ಸದಾ ಸಂಚಲನ ಸೃಷ್ಟಿಸುವ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ರಾಜಕೀಯ ಬಾಂಬ್ ಸಿಡಿಸಿದ್ದಾರೆ. ತಮ್ಮನ್ನು ಬಿಜೆಪಿಗೆ ವಾಪಸ್ ಸೇರಿಸಿಕೊಳ್ಳದಿದ್ದರೆ, ‘ಭಗವಾ ಝಂಡಾ’ ಎಂಬ ಹೊಸ ಪಕ್ಷ ಕಟ್ಟಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದಾಗಿ ಅವರು ಗುಡುಗಿದ್ದಾರೆ. ಕೇವಲ ಪಕ್ಷ ಸ್ಥಾಪನೆಯಷ್ಟೇ ಅಲ್ಲ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯ ‘ಬುಲ್ಡೋಜರ್ ಸರ್ಕಾರ’ ರಚಿಸಿ ಆಡಳಿತ ನಡೆಸುವುದಾಗಿ ಅವರು ಘೋಷಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ … Read more

ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಪೊಲೀಸರು ಸೂಚನೆ ; ದಿಢೀರ್ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ (Siddaramaiah) ಆಗಮನ ಹಿನ್ನೆಲೆ ಕೇಸರಿ ಧ್ವಜ ತೆರವಿಗೆ ಸೂಚಿಸಿದ ಪೊಲೀಸರ ನಡೆ ಖಂಡಿಸಿ ಕೊಪ್ಪಳ ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ಇಂದು ರಾತ್ರಿ ಬಿಜೆಪಿ ನಾಯಕರು (BJP Leaders) ಹಾಗೂ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದರು. ನಾಡಿದ್ದು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಪ್ಪಳಕ್ಕೆ ಆಗಮಿಸಲಿದ್ದಾರೆ. ಭಾಗ್ಯನಗರದ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಅಂಗವಾಗಿ ರಸ್ತೆ ತಗ್ಗು ಮತ್ತು ಗುಂಡಿಗಳನ್ನು ಅವಸರ ಅವಸರವಾಗಿ ಮುಚ್ಚಲಾಗುತ್ತಿದೆ. ನವರಾತ್ರಿ ಅಂಗವಾಗಿ ಅಂಬಾಭವಾನಿ ದೇವಾಲಯ ಮುಂಭಾಗದಲ್ಲಿ … Read more

ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಮಗಳನ್ನ ಕೊಚ್ಚಿ ಕೊಂದು ಶವದ ಮೇಲೆ ನಿಂತು ತಾಯಿ ಆತ್ಮಹತ್ಯೆ.!

ಮಲೆನಾಡು ನಗರ ಶಿವಮೊಗ್ಗದಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ತಾಯಿಯೊಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳನ್ನೇ ಮಚ್ಚಿನಿಂದ ಕೊಲೆಗೈದು ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾದ ದುರ್ಘಟನೆ ಬೆಳಕಿಗೆ ಬಂದಿದೆ. ಜಿಲ್ಲಾ ಆಸ್ಪತ್ರೆಯ ನರ್ಸ್ ಕ್ವಾರ್ಟರ್ಸ್‌ನಲ್ಲಿ ನಡೆದ ಈ ಘಟನೆ ಇಡೀ ಬಡಾವಣೆಯನ್ನೇ ಶೋಕದಲ್ಲಿ ಮುಳುಗಿಸಿದೆ. ಮೆಗ್ಗಾನ್ ಆಸ್ಪತ್ರೆ ಸಿಬ್ಬಂದಿ ಮನೆಯಲ್ಲಿ ಘೋರ ಕೃತ್ಯ : ಶಿವಮೊಗ್ಗದ ಸರ್ಕಾರಿ ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಾದ ಮೆಗ್ಗಾನ್ ಆಸ್ಪತ್ರೆಯಲ್ಲಿ ಲ್ಯಾಬ್ … Read more

ಪೋಷಕರೇ ಎಚ್ಚರ.! ಈ ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು.!

ಚಿಕ್ಕ ಮಕ್ಕಳಿಗೆ ಜ್ವರ, ಶೀತ ಅಥವಾ ಕೆಮ್ಮು ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ ಸಿರಪ್ಗಳನ್ನು ಕೊಳ್ಳುತ್ತಾರೆ. ಹೆಚ್ಚಿನ ಪೋಷಕರು ಆಸ್ಪತ್ರೆಗೆ ಹೋದರೆ ವೈದ್ಯರು ತಮ್ಮ ಮೇಲೆ ಒತ್ತಡ ಹೇರುತ್ತಾರೆ ಎಂಬ ಭಯದಿಂದ ಇದನ್ನು ಮಾಡುತ್ತಾರೆ. ಆದರೆ, ಕೆಲವು ಮೆಡಿಕಲ್ ಶಾಪ್ ಸಿಬ್ಬಂದಿಗೆ ಸರಿಯಾದ ಜ್ಞಾನವಿರಲ್ಲ ಮತ್ತು ಅವರು ಸಿಕ್ಕಿದ ಸಿರಪ್ ಅವರಿಗೆ ನೀಡುತ್ತಾರೆ. ಕೆಲವೊಮ್ಮೆ, ಅವು ಮಕ್ಕಳಿಗೆ ಅಪಾಯಕಾರಿಯಾಗಬಹುದು. ಇತ್ತೀಚೆಗೆ, ಕೆಮ್ಮಿನ ಸಿರಪ್ನಿಂದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ರಾಜಸ್ಥಾನದಲ್ಲಿ ಈ ಘಟನೆ … Read more

ಮೈಸೂರು : ಪತ್ನಿಯ ಅಕ್ರಮ ಸಂಬಂಧ – ಗಂಡನ ಕೈಯಿಂದ ಹತ್ಯೆ, ಪ್ರಿಯಕರನಿಗೆ ಭೀಕರ ಹಲ್ಲೆ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧ ದಾಂಪತ್ಯ ದುರಂತಕ್ಕೆ ಕಾರಣವಾಗಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ವಿಜಯ್ ತನ್ನ ಪತ್ನಿ ಗೀತಾ (29) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ಗೀತಾಳ ಪ್ರಿಯಕರ ದಿಲೀಪ್ ಕೂಡಾ ಹಲ್ಲೆಗೆ ಗುರಿಯಾಗಿ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲೆಯಾಗಿದ್ದಾನೆ. ಘಟನೆಯ ಹಿನ್ನಲೆ ಗೀತಾ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಹೋದ್ಯೋಗಿ ದಿಲೀಪ್ ಜೊತೆ ಆಕೆಗೆ ಆಪ್ತ ಸಂಬಂಧ ಬೆಳೆದುಬಂದಿತ್ತು. ಇದರಿಂದ ದಾಂಪತ್ಯದಲ್ಲಿ ಗಲಾಟೆಗಳು ಹೆಚ್ಚಾಗಿದ್ದವು. ಹಲವು ಬಾರಿ ಪಂಚಾಯಿತಿಗಳ ಮೂಲಕ ಬುದ್ದಿವಾದ … Read more