ಬಂಟ್ವಾಳ ಘಟನೆ ಮಾಸುವ ಮುನ್ನ ಮತ್ತೊಬ್ಬ 16ರ ಹುಡಗಿ ಬಲಿ ; ಪ್ರೇಯಸಿ ಕೊಂದು ತೋಟದಲ್ಲಿ ಹೂತುಹಾಕಿದ ಪ್ರೇಮಿ.!
ಮಂಗಳೂರಿನ ಬಂಟ್ವಾಳದ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಪ್ರೀತಿಯನ್ನೊಪ್ಪಿಕೊಳ್ಳದ 22ರ ಯುವತಿಯನ್ನು ಕೊಚ್ಚಿ ಕೊಲೆ ಮಾಡಿರುವ ಗಂಭೀರ ಘಟನೆ ಮಾಸುವ ಮುನ್ನವೇ, ಕನಕಪುರದಲ್ಲಿ 16ರ ಹುಡುಗಿಯನ್ನು ಗುಂಡಿಕ್ಕಿ ಕೊಂದು ತೋಟದಲ್ಲಿ ಹೂತು ಹಾಕಿರುವ ಘಟನೆ ಹೊರಬಿದ್ದಿದೆ. ಈ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಕೆಂಪಲನಾಥ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿದ ಅಪ್ರಾಪ್ತ ಯುವತಿಯ ಮೇಲೆ ಸಂಶಯಗೊಂಡ ಯುವಕನೊಬ್ಬ, ಆಕೆಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ, ಶವವನ್ನು ತೋಟದಲ್ಲಿ ಹೂತುಹಾಕಿರುವ ಬರ್ಬರ ಕೃತ್ಯ ಬಯಲಾಗಿದೆ. ಸಾತನೂರು ಹೋಬಳಿಯ … Read more