Kisan Credit Card Scheme : ನಮಸ್ಕಾರ ಸ್ನೇಹಿತರೇ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದೇಶದಲ್ಲಿ ರೈತರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ರೈತರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಾಗೆಯೇ ಸರ್ಕಾರವು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಜಾನುವಾರುಗಳನ್ನು ಸಾಕಾಣಿಕೆ ಮಾಡುವವರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ. ಸ್ನೇಹಿತರೇ, ಏನಿದು ಪಶು ಕಿಸಾನ್ ಕಾರ್ಡ್ ಯೋಜನೆ.? ಇದರಿಂದ ರೈತರಿಗೆ ಏನೆಲ್ಲಾ ಉಪಯೋಗಗಳಿವೆ.? ರೈತರು ಈ ಯೋಜನೆಯ ಸೌಲಭ್ಯವನ್ನು ಪಡೆಯುವುದು ಹೇಗೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ, ನೀವು ಹಸು ಮತ್ತು ಎಮ್ಮೆಗಳ ಸಾಕಾಣಿಕೆಯನ್ನು ಮಾಡಲು ಈ ಕ್ರೆಡಿಟ್ ಕಾರ್ಡ್ ಮೂಲಕ ಸರ್ಕಾರದಿಂದ ಸಾಲವನ್ನು ಪಡೆಯಬಹುದು. ನೀವು ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದು ನೀವು ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ನೀವು ಪಶು ಕ್ರೆಡಿಟ್ ಕಾರ್ಡ್ ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಎರಡರಿಂದ ಮೂರು ಲಕ್ಷದವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಪಡೆದ ಸಾಲಕ್ಕೆ ಯಾವುದೇ ರೀತಿಯ ಗ್ಯಾರಂಟಿ ಇರುವುದಿಲ್ಲ.
ಇದನ್ನೂ ಕೂಡ ಓದಿ : Sewing Machine Scheme : ಬಟ್ಟೆ ಹೊಲಿಗೆ ಯಂತ್ರ ವಿತರಣೆ – ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಆಹ್ವಾನ – ಇಲ್ಲಿದೆ ಡೈರೆಕ್ಟ್ ಲಿಂಕ್
ಪಶು ಕಿಸಾನ್ ಕಾರ್ಡ್ ನಿಂದ ಎಷ್ಟು ಸಾಲ ಸಿಗುತ್ತದೆ.?
ಈ ಪಶು ಕಿಸಾನ್ ಕಾರ್ಡ್ ನಿಂದ ಒಂದು ಎಮ್ಮೆ ಸಾಕಾಣಿಕೆ ಮಾಡಲು ₹60,249/- ರೂಪಾಯಿ ಸಾಲ ಸಿಗಲಿದೆ, ಹಾಗೆಯೇ ಒಂದು ಆಕಳನ್ನು ನಿರ್ವಹಣೆ ಮಾಡಲು ₹40,783/- ರೂಪಾಯಿ ಸಾಲಗಳನ್ನು ನೀಡಲಾಗುತ್ತದೆ. ನಿಮ್ಮ ಬಳಿ ಎಷ್ಟು ಎಮ್ಮೆ ಮತ್ತು ಎಷ್ಟು ಹಸು ಇದೆಯೋ ಅಷ್ಟಕ್ಕೆ ಮಾತ್ರ ನೀವು ಈ ಪಶು ಕಿಸಾನ್ ಕಾರ್ಡ್ ನಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನೀವು ಪಶು ಸಾಕಾಣಿಕೆ ಮಾಡಲು ಯಾವುದೇ ಕ್ರೆಡಿಟ್ ಕಾರ್ಡ್ ಇಲ್ಲದೆ ಸಾಲ ಪಡೆದರೆ 7% ಬಡ್ಡಿ ಕಟ್ಟಬೇಕಾಗುತ್ತದೆ, ಆದರೆ ಪಶು ಕಿಸಾನ್ ಕಾರ್ಡ್ ಮೂಲಕ ಪಡೆದಂತಹ ಸಾಲಕ್ಕೆ ನೀವು ಕೇವಲ 4% ಬಡ್ಡಿದರ ಕಟ್ಟಬೇಕಾಗುತ್ತದೆ.
ಯಾವ ಬ್ಯಾಂಕ್ ಗಳಲ್ಲಿ ನೀವು ಸಾಲ ಪಡೆದುಕೊಳ್ಳಬಹುದು.?
ದೇಶದ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಸಿಗುತ್ತದೆ. ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ(Kisan Credit Card) ಮೂಲಕ ಪಶುಗಳ ನಿರ್ವಹಣೆಗೆ ಬೇಕಾದ ಸಾಲವನ್ನು ರೈತರಿಗೆ ನೀಡಲಾಗುತ್ತದೆ .
ಪಶು ಕಿಸಾನ್ ಕ್ರೆಡಿಟ್ ಕಾರ್ಡ ಪಡೆಯಲು ನೀವು ರಾಷ್ಟ್ರೀಕೃತ ಬ್ಯಾಂಕ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಫಾರ್ಮ್ ಪಡೆದು, ಎಲ್ಲಾ ದಾಖಲೆಗಳನ್ನು ಭರ್ತಿ ಮಾಡಿ, ಕೆವೈಸಿಗೆ ಬೇಕಾಗಿರುವ ದಾಖಲೆಗಳನ್ನು ನೀಡಿ ನೀವು ಅರ್ಜಿಯನ್ನ ಸಲ್ಲಿಸಬೇಕಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ನೀವು ನೀಡಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಂಡು, ನೀವು ನೀಡಿದಂತಹ ದಾಖಲೆಗಳು ಸರಿಯಾಗಿದ್ದರೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನ್ನು ನಿಮಗೆ ನೀಡುತ್ತಾರೆ.
ಇದನ್ನೂ ಕೂಡ ಓದಿ : Scholarship : ಶಾಲಾ ವಿಧ್ಯಾರ್ಥಿಗಳಿಗೆ ದೊರೆಯಲಿದೆ 10 ಸಾವಿರ ಪ್ರೋತ್ಸಾಹ ಧನ! ಇಲ್ಲಿದೆ ಅರ್ಜಿ ಹಾಕುವ ವಿವರ
ಬೇಕಾಗುವ ದಾಖಲೆಗಳೇನು.?
- ಭೂಮಿಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಜಾನುವಾರಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
- ಬ್ಯಾಂಕ್ ಖಾತೆಯ ವಿವರ
- ಪಾಸ್ಪೋರ್ಟ್ ಸೈಜ್ ಫೋಟೋ
ಮೇಲೆ ತಿಳಿಸಿದಂತಹ ಎಲ್ಲಾ ಪ್ರಮುಖ ದಾಖಲೆಗಳನ್ನು ಸರಿಪಡಿಸಿಕೊಂಡು, ಹತ್ತಿರವಿರುವ ಬ್ಯಾಂಕ್ ಗೆ ಭೇಟಿ ನೀಡಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಪಡೆದು ಅರ್ಜಿಯನ್ನು ಸಲ್ಲಿಸಿ, ಹೈನುಗಾರಿಕೆಗೆ ಬೇಕಾದ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Gold Rate Today : ಭಾರೀ ಏರಿಕೆ ಕಂಡ ಬಂಗಾರದ ಬೆಲೆ.! – ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಮತ್ತೆ ಬಿಗ್ಬಾಸ್ ನಿರೂಪಕನಾದ ಕಿಚ್ಚನನ್ನು ಕಂಡು ಇದು ಧೋನಿ ಕಥೆಯಾಯ್ತು ಎಂದು ನಕ್ಕ ನೆಟ್ಟಿಗರು!
- ಮಧ್ಯರಾತ್ರಿ ನವಜಾತ ಶಿಶುಗಳ ಅಸ್ಥಿಪಂಜರ ಹಿಡಿದು ಠಾಣೆಗೆ ಬಂದ ಯುವಕ.! ಮಗು ಹುಟ್ಟಿಸಿ ಸ್ಮಶಾನದಲ್ಲಿ ಹೂತು ಹಾಕಿದ್ದೇಕೆ ಪ್ರೇಮಿಗಳು.?
- ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ : 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ.!
- Gold Rate Today : ಮತ್ತೆ ಅಲ್ಪ ಇಳಿಕೆ ಕಂಡಿದ ಬಂಗಾರದ ಬೆಲೆ – ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- ಮದುವೆ ಆಗದೇ ಗರ್ಭಿಣಿಯಾದ ಮಗಳನ್ನು ಕಾಡಿನಲ್ಲಿ ಕುತ್ತಿಗೆ ಹಿಸಕಿದ ತಂದೆ – ಪ್ರಜ್ಞೆ ತಪ್ಪಿದ ಮಗಳು ಬದುಕಿದ್ದೇ ದೊಡ್ಡ ಪವಾಡ!
- Gold Rate Today : ಇಳಿಕೆಯತ್ತ ಸಾಗಿದ ಚಿನ್ನದ ಬೆಲೆ.? ಎಷ್ಟಿತ್ತು ಇವತ್ತಿನ ಬಂಗಾರದ ಬೆಲೆ.? ಹೆಣ್ಣುಮಕ್ಕಳಿಗೆ ಸಿಹಿಸುದ್ಧಿ ಇದೆಯಾ.?
- ಎರಡ್ಮೂರು ಪಟ್ಟು ಹಣ ಕೇಳೋ ಆಟೋ ಚಾಲಕರ ನಟ್ಟು-ಬೋಲ್ಟು ಟೈಟ್ಗೆ ಮುಂದಾದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
- ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿಸಿದ್ದು ವಿಜಯೇಂದ್ರ : ಯತ್ನಾಳ್ ಹೊಸ ಬಾಂಬ್!
- Gold Rate : ಕುಸಿತದತ್ತ ಮುಖ ಮಾಡಿದ ಚಿನ್ನದ ರೇಟ್.? ಎಷ್ಟಿತ್ತು ಇವತ್ತಿನ ಬಂಗಾರದ ಬೆಲೆ.?
- ವಕ್ಫ್ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ : ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧದ ಕೇಸ್ ರದ್ದು
- Gold Rate Today : ಪಾತಾಳಕ್ಕೆ ಕುಸಿತ ಕಂಡಿದೆಯಾ ಚಿನ್ನ.? ಎಷ್ಟಿತ್ತು ಇವತ್ತಿನ ಗೋಲ್ಡ್ ರೇಟ್.?
- ರಾಜ್ಯ ಸರ್ಕಾರದಿಂದ ರೈತರಿಗೆ `ಬೋರ್ ವೆಲ್’ ಕೊರೆಸಲು 4 ಲಕ್ಷ ರೂ. ಸಬ್ಸಿಡಿ : ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜೂ.30 ಲಾಸ್ಟ್ ಡೇಟ್.!
- Gold Rate Today : ಇಂದಿನ ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆಯಾ.? ಎಷ್ಟಿತ್ತು ಇವತ್ತಿನ ಗೋಲ್ಡ್ ರೇಟ್.?
- ಕುತ್ತಿಗೆ ಮೇಲೆ ಗಾಯಗಳ ಗುರುತು, ಶರ್ಟ್ ಹರಿತ, ತಳ್ಳಾಟ, ನೂಕಾಟ, ವಾಗ್ವಾದ, ‘ಭದ್ರಾ ಜ್ವಾಲೆ’ ಹೇಗಿತ್ತು?
- ದಿನ ಭವಿಷ್ಯ 26-6-2025 : ಈ ದಿನ ಇವರಿಗೆಲ್ಲ ದೈವ ಬಲ, ಭವಿಷ್ಯ ತಂದಿದೆ ಚಮತ್ಕಾರ
- EMERGENCY 50 : ಸಂವಿಧಾನ ಹತ್ಯಾ ದಿವಸ್ ಆಚರಿಸುವುದು ಸರಿಯಲ್ಲ, ಅದೆಲ್ಲಾ ಹಿಂದಿನ ಕಥೆ – ಪ್ರಧಾನಿ ವಿರುದ್ಧ ಖರ್ಗೆ ಕಿಡಿ!
- ಅತೃಪ್ತ ಶಾಸಕರ ಮನವೊಲಿಕೆ ಸಿಎಂ ಮಾಸ್ಟರ್ ಪ್ಲ್ಯಾನ್! ಸಿದ್ದರಾಮಯ್ಯ ಯೋಜನೆ ಏನು ಗೊತ್ತಾ.?
- ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತ ದಿಂದ ಸಾವು.!
- ಇಂಗ್ಲೆಂಡ್ ವಿರುದ್ಧ ಸೋತ ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್