Bele Parihara : ಎನ್ ಡಿಆರ್ ಎಫ್(NDRF) ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಆಧಾರದಲ್ಲಿ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ ₹2,000 ರೂಪಾಯಿ ಹಾಗು ಬರ ಪರಿಹಾರದ ಎರಡನೇ ಕಂತಿನ ಹಣವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಬ್ಯಾಂಕ್ ಖಾತೆಗೆ ಈ ದಿನದವರೆಗೆ ಸಂಪೂರ್ಣ ಬೆಳೆ ಪರಿಹಾರ ಮೊತ್ತವನ್ನ ಜಮೆ ಮಾಡಲಾಗಿದೆ. ಇನ್ನೂ ಕೂಡ ಸುಮಾರು 2 ಲಕ್ಷ ರೈತರಿಗೆ ಪರಿಹಾರ ಮೊತ್ತ ಜಮೆ ಮಾಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.
ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೇ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಹಣ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ಮೊತ್ತವನ್ನ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಕೂಡ ಓದಿ : Crop Insurance : ನಿಮಗೆ ಬೆಳೆ ಪರಿಹಾರ ಸಿಕಿದ್ಯಾ.? ಆಧಾರ್ ಕಾರ್ಡ್, ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ
ಇದಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ಸಹ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನೀರಿನ ಸಮಸ್ಯೆಯಿಂದ 270 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗು 594 ಗ್ರಾಮಗಳಿಗೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಹಾಗು 153 ನಗರ ಪ್ರದೇಶದ ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ಮತ್ತು 35 ವಾರ್ಡ್ಗಳಿಗೆ ಖಾಸಗಿ ಬೋರ್ವೆಲ್ ಬಾಡಿಗೆ ಪಡೆದು ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಕೂಡ ಓದಿ : Ration Card Update : ಹೊಸ ರೇಷನ್ ಕಾರ್ಡ್ ಗೆ ಕಾಯ್ತಿದ್ದೀರಾ.? ಯಾವಾಗ ಮತ್ತು ಹೇಗೆ ಅರ್ಜಿ ಸಲ್ಲಿಸುವುದು.?
ಬರಗಾಲದ ಪರಿಸ್ಥಿತಿಯಿಂದಾಗಿ ರಾಜ್ಯದ ಅವಶ್ಯಕತೆಯಿರುವ ವಿವಿಧ ಭಾಗಗಳಲ್ಲಿ 47 ಮೇವಿನ ಬ್ಯಾಂಕ್ಗಳನ್ನು ಮತ್ತು 28 ಕಡೆಗಳಲ್ಲಿ ಗೋಶಾಲೆಗಳನ್ನು ತೆರೆದು ಮೇವಿನ ಕೊರತೆ ನೀಗಿಸಲಾಗುತ್ತಿದೆ. ಈ ವೆಚ್ಚವನ್ನು ಬರಿಸಲು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಗಳ ಖಾತೆಗಳಲ್ಲಿ ರೂ. 836 ಕೋಟಿ ಅನುದಾನ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಸುಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ: ಎದುರು ಮನೆಯವರಿಂದಲೇ ನಡೀತಾ ಭೀಕರ ಕೊಲೆ.?
- ಟೆನ್ಷನ್ ಎಂದು ನೀವೇನಾದ್ರೂ ಮದ್ಯಪಾನ ಮಾಡೋ ಅಭ್ಯಾಸ ಶುರು ಮಾಡಿದ್ರೆ ಕ್ರಮೇಣ ಮೆದುಳು ದುರ್ಬಲವಾಗುತ್ತಂತೆ
- ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಕೀಲುಗಳು ಬಿಗಿಯಾದಂತೆ ಅನಿಸುತ್ತದೆಯೇ..! ಹಾಗಾದ್ರೆ ಎಚ್ಚರ
- Horoscope Today : 29 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!
- ನಾಯಿ ಕಚ್ಚೋದ್ರಿಂದ ಮಾತ್ರವಲ್ಲ, ನೆಕ್ಕೋದ್ರಿಂದಲೂ ಸೋಂಕು ಹರಡುತ್ತಂತೆ.! ನಾಯಿ ನೆಕ್ಕಿದಾಗ ಏನಾಗುತ್ತದೆ.?
- ನೀವು SBI ನಲ್ಲಿ ಖಾತೆ ಹೊಂದಿದ್ದೀರಾ.? ‘SBI’ ಖಾತೆದಾರರಿಗೆ ಸರ್ಕಾರ ಗಂಭೀರ ಎಚ್ಚರಿಕೆ ; ಯಾಕೆ.?
- ತಂದೆಗೆ ವಿಷದ ಮಿಲ್ಕ್ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ
- Arecanut Price : ಇಂದಿನ ಅಡಿಕೆ ಧಾರಣೆ – 28 ಮಾರ್ಚ್ 2026 – ಇವತ್ತು ಯಾವ್ಯಾವ ಅಡಿಕೆಧಾರಣೆ ಎಷ್ಟಿದೆ ಗೊತ್ತಾ.?
- Horoscope Today : 28 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಮದುವೆಗೆ ಹೋಗಿದ್ದ ನಾಲ್ವರು ಮಸಣ ಸೇರಿದರು; ಈಜಾಡುವ ಮೋಜು ಮೃತ್ಯುವಾಗಿದ್ದೇಗೆ? ಇಲ್ಲಿದೆ ವಿವರ
- ಹೂವಿನಂತಹ ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಪ್ರಾಣಬಿಟ್ಟ ತಾಯಿ; ವಿಜಯಪುರದಲ್ಲಿ ಘೋರ ದುರಂತ
- ಆಂಧ್ರಪ್ರದೇಶ ಬಸ್ ದುರಂತ : ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ.!
- ಸ್ಟ್ರೋಕ್ ಆಗೋ ಮುಂಚೆ ಈ ಎಲ್ಲಾ ಲಕ್ಷಣಗಳು ಕಾಣಿಸುತ್ತಂತೆ! ನೀವೂ ಜಾಗ್ರತೆಯಾಗಿರಿ
- ರಾತ್ರಿ ಈ ಪದಾರ್ಥವನ್ನು ಬಾಯಲ್ಲಿಟ್ಟುಕೊಂಡು ಮಲಗಿದ್ರೆ ಹಾರ್ಟ್ಅಟ್ಯಾಕ್ ಆಗಲ್ಲ.! ನಿದ್ರಾಹೀನತೆಗೂ ಇದೇ ಪರಮೌಷಧ..
- Horoscope Today : 27 ಮಾರ್ಚ್ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಅಕ್ರಮ ಸಂಬಂಧದಿಂದಾಗಿ ತಾಯಿಯನ್ನು ನಿಂದಿಸಿದ ಕಾರಣ ಬಾಲಕನಿಂದ ಡಬಲ್ ಮರ್ಡರ್!
- ಮದುವೆಯಾದ ತಂಗಿಯ ಮೇಲೆ ಕಣ್ಣುಹಾಕಿದ ಬಾಮೈದನ ಕಥೆ ಮುಗಿಸಿದ ಭಾವ!
- ಲವರ್ ಜೊತೆ ಸೇರಿ ಅಮ್ಮನನ್ನೇ ಕೊಂದು ಮನೆಯಲ್ಲೇ ಹೂತು ಹಾಕಿದ ಮಗಳು: ತಾಯಿಯ ಸ್ಕೂಟಿ ನೀಡಿತು ರೋಚಕ ಸುಳಿವು
- ‘ಸನೋಜ್ ಮಿಶ್ರಾ ನನ್ನ ಖಾಸಗಿ ಅಂಗ ಮುಟ್ಟಿದ್ದಾನೆ’ ; ಮೊನಾಲಿಸಾ ಗಂಭೀರ ಆರೋಪ



















