ಮೇಷ :-
ಗ್ರಹಗತಿಗಳ ಚಿತ್ರಣವು ಅಸ್ಫುಟವಾಗಿ ಕಾಣುತ್ತದೆ. ಇದು ನಿಮಗೆ ಕಲಿಸುವ ಪಾಠವೇನೆಂದರೆ, ನಿಮ್ಮ ಗಮನ ಬೇರೆಡೆ ಹರಿಸಲು ಬಿಡದೆ ನಿಮ್ಮನ್ನು ನಿಯಂತ್ರಣದಲ್ಲಿಡಿ. ನೀವು ವೆಚ್ಚಮಾಡಲೇಬೇಕಿದ್ದರೆ ವಿವೇಚನೆಯಿಂದ ಖರ್ಚು ಮಾಡಿ. ದುಂದುವೆಚ್ಚ ಬೇಡ. ನಿಮ್ಮ ಪ್ರೀತಿಪಾತ್ರರ ಮನಸ್ಸಲ್ಲಿ ಶಾಪಿಂಗ್ ತೆರಳುವ ಆಲೋಚನೆಯಿದ್ದಲ್ಲಿ ಅದನ್ನು ಮುಂದೂಡುವಂತೆ ತಿಳಿಸಿ.
ಹಣ ಕೊಡುಕೊಳ್ಳುವಿಕೆಯ ವ್ಯವಹಾರಗಳಿಗೆ ಇದು ಉತ್ತಮ ದಿನವಲ್ಲ. ಒಂದು ವೇಳೆ ದೊಡ್ಡ ಮೊತ್ತದ ಹಣವನ್ನು ನಿಮ್ಮ ಆತ್ಮೀಯ ಸ್ನೇಹಿತರಿಗೆ ಕೊಡಲೇಬೇಕಾಗಿ ಬಂದಲ್ಲಿ ಕಾನೂನು ಪತ್ರಗಳ ಕರಡುಪ್ರತಿ ತಯಾರಿಸಿ. ನೀವು ಆಡುವ ಪ್ರತಿ ಪದಗಳ ಮೇಲು ಎಚ್ಚರಿಕೆಯಿಂದಿರಿ. ಅಪಾರ್ಥಕ್ಕೆ ಒಳಗಾಗಬಹುದು ಅಥವಾ ವಿವಾದಗಳಿಗೆ ಗುರಿಯಾಗಬಹುದು. ಇದು ನಿಮಗೆ ಮೋಸ ಮತ್ತು ನೋವು ಮಾಡಿದ ಭಾವನೆಯನ್ನು ಉಂಟುಮಾಡಬಹುದು. ಇವುಗಳ ಬದಲಾಗಿ, ಮನೆಯಲ್ಲೇ ಉಳಿದುಕೊಳ್ಳಿ, ನಿಮ್ಮ ಬಗ್ಗೆ ಗಮನಹರಿಸಿ, ನಿಮ್ಮ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಗಮನಹರಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ..
ವೃಷಭ :-
ಈ ದಿನವು ನಿಮಗೆ ವಿಶೇಷ ದಿನವಾಗಲಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ಸೃಜನಶೀಲತೆ ಮತ್ತು ಕಲಾತ್ಮಕತೆಯ ಒಲವು ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸವು ಇಂದು ಉಚ್ಛಾಯ ಸ್ಥಿತಿಯಲ್ಲಿರುತ್ತದೆ. ಜೊತೆಗೆ ನಿಮ್ಮ ಮನಸ್ಸು ಅನಗತ್ಯ ವಿಚಾರಗಳಲ್ಲಿ ಒಳಗೊಳ್ಳುವುದಿಲ್ಲ. ಇದು ವೃತ್ತಿಕ್ಷೇತ್ರದಲ್ಲಿ ನಿಮ್ಮನ್ನು ಎಲ್ಲವನ್ನೂ ಎದುರಿಸಲು ಸಿದ್ಧರನ್ನಾಗಿಸುತ್ತದೆ. ಆರ್ಥಿಕ ಕ್ಷೇತ್ರದಲ್ಲಿ ಹೊಣೆ ತೆಗೆದುಕೊಳ್ಳುತ್ತೀರಿ ಮತ್ತು ನಿಮಗೆ ಬೇಕಿರುವ ಬಂಡವಾಳ ಸಂಗ್ರಹಿಸುತ್ತೀರಿ. ಉಡುಗೆತೊಡುಗೆ, ಆಭರಣ, ವಿನೋದ, ನಲಿವು ಮುಂತಾದವುಗಳಿಗಾಗಿ ಖರ್ಚುಮಾಡಲಿದ್ದೀರಿ. ಒಟ್ಟಾರೆ, ಈ ದಿನವನ್ನು ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಕಳೆಯುವಿರಿ.
ಮಿಥುನ :-
ಈ ದಿನವು ನೀವು ಬಯಸಿದಂತೆ ಇರದು. ಆತಂಕ ಮತ್ತು ಅವಿಶ್ರಾಂತವು ನಿಮ್ಮನ್ನು ದಿನವಿಡೀ ಕಾಡಬಹುದು ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗಬಹುದು. ಮನೆಯಲ್ಲಿ, ಅನಗತ್ಯ ವಿಷಯಗಳಿಗೆ ಕಲಹ ಉಂಟಾಗುವ ಸಾಧ್ಯತೆಯಿದೆ. ಬೇರೆಯವರ ಮನಸ್ಸನ್ನು ನೋಯಿಸುವುದನ್ನು ತಪ್ಪಿಸಬೇಕಾದರೆ, ನಿಮ್ಮ ವರ್ತನೆ ಮತ್ತು ನಾಲಗೆಯ ಮೇಲೆ ಹಿಡಿತವಿರಿಸಬೇಕು. ಇಂದು ನಿಮಗೆ ಅಪಘಾತದ ಸಂಭಾವ್ಯತೆಯಿದೆ. ಜಾಗರೂಕರಾಗಿರಿ. ಅನಗತ್ಯ ಖರ್ಚುವೆಚ್ಚ ಮತ್ತು ಒತ್ತಡಗಳು ನಿಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತದೆ. ಆದ್ದರಿಂದ ಅನಗತ್ಯ ಎಂದು ಅನಿಸುವ ಯಾವುದೇ ಚಟುವಟಿಕೆಗಳಲ್ಲಿ ತೊಡಗುವುದನ್ನು ತಪ್ಪಿಸಿ. ಧ್ಯಾನ ಮತ್ತು ನಿಮ್ಮ ದೈವದ ಪ್ರಾರ್ಥನೆಯು ಕತ್ತಲೆಯ ಕೂಪದಿಂದ ನಿಮ್ಮನ್ನು ಮೇಲಕ್ಕೆತ್ತಲು ಸಹಾಯವಾಗಲಿದೆ.
ಕರ್ಕಾಟಕ :-
ಹಣಕಾಸು ಲಾಭಗಳಿಗೆ ಸಂಬಂಧಿಸಿದಂತೆ ಇಂದು ನಿಮಗೆ ವಿಶೇಷ ದಿನ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಅಂದರೆ, ನಿಮ್ಮ ಆದಾಯ ವೃದ್ಧಿಯಾಗುತ್ತದೆ, ಆರ್ಥಿಕ ಲಾಭ ಉಂಟಾಗುತ್ತದೆ, ನಿಮ್ಮ ವ್ಯವಹಾರದಲ್ಲಿ ಅಭಿವೃದ್ದಿ ಮತ್ತು ಏಳಿಗೆ ಉಂಟಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಪ್ರಯೋಜನಗಳು ಉಂಟಾಗುತ್ತವೆ. ಮಹಿಳಾ ಸ್ನೇಹಿತರಿಂದ ನಿಮಗೆ ಉತ್ತಮ ಸಹಾಯ ದೊರೆಯಲಿದೆ. ಮಕ್ಕಳು ಮತ್ತು ಪತ್ನಿಯಿಂದ ನಿಮಗೆ ನೆಮ್ಮದಿ ಮತ್ತು ಸಂತೋಷವನ್ನು ನಿರೀಕ್ಷಿಸಿ.ಮದುವೆಯಾಗುವ ಸಿದ್ಧತೆಯಲ್ಲಿರುವವರಿಗೆ ಈ ದಿನ ಉತ್ತಮ. ನೀವು ದಿನವಿಡೀ ನೂರು ಪ್ರತಿಶತ ಆರೋದ್ಯದಿಂದಿರುತ್ತೀರಿ ಮತ್ತು ನಿಮ್ಮ ಎಲ್ಲಾ ಚಿಂತೆ ಮತ್ತು ಒತ್ತಡಗಳನ್ನು ತೊರೆಯುತ್ತೀರಿ. ಸ್ನೇಹಿತರೊಂದಿಗೆ ವಿಹಾರ ತೆರಳುವಿರಿ. ಕೊನೆಯದಾಗಿ ಒಳ್ಳೆ ಸ್ವಾದಿಷ್ಟ ಆಹಾರ ತಿನ್ನುವ ಯೋಗವಿದೆ.
ಸಿಂಹ :-
ಉದ್ಯಮ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸಿಂಹ ರಾಶಿಯವರಿಗೆ ಇಂದು ವಿಶೇಷ ದಿನ. ಇಂದು ಕೈಗೆತ್ತಿಕೊಂಡ ಯೋಜನೆಗಳನ್ನು ನೀವು ಯಶಸ್ವಿಯಾಗಿ ಪೂರೈಸುವಿರಿ. ಮತ್ತು ನೀವು ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬೆನ್ನುತಟ್ಟುತ್ತಿರುತ್ತಾರೆ. ವೃತ್ತಿಕ್ಷೇತ್ರದಲ್ಲಿ ನೀವು ಎಲ್ಲರನ್ನೂ ಪ್ರಭಾವಿತಗೊಳಿಸುವಿರಿ. ಗೃಹಕ್ಷೇತ್ರದಲ್ಲಿ, ಉಲ್ಲಾಸಕರದಿನವನ್ನು ನಿರೀಕ್ಷಿಸಬಹುದು.ಇಂದು ನಿಮ್ಮ ತಂದೆಯಿಂದ ಸಹಾಯ ದೊರೆಯಲಿದೆ. ಎಲ್ಲಾ ಆಸ್ತಿ ಸಂಬಂಧಿತ ಕಾರ್ಯಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುವು ಪಡೆದುಕೊಳ್ಳಲಿವೆ. ನಿಮ್ಮ ಆರೋಗ್ಯವು ಕೇಕ್ ಮೇಲಿನ ಐಸ್ನಂತಿರುತ್ತದೆ. ಇದು ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.
ಕನ್ಯಾ :-
ಅದೃಷ್ಟಕಾರಿ ತುಲಾ ರಾಶಿಯವರಿಗೆ ಉತ್ತಮ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಹೆಚ್ಚಿನವು ಪ್ರಯಾಣಕ್ಕೆ ಸಂಬಂಧಿಸಿರುತ್ತದೆ. ನೀವು ಈಗ ಪ್ರಯಾಣಿಸುತ್ತಿದ್ದಲ್ಲಿ ಅದು ಫಲಪ್ರದವಾಗಿರುತ್ತೆದ ಮತ್ತು ತೀವ್ರ ಸಂತಸದಿಂದ ಕೂಡಿರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಹರ್ಷದಾಯಕ ಪ್ರಯಾಣ ಅಥವಾ ನಿಮ್ಮದೇ ವಯಸ್ಸಿನವರೊಂದಿಗೆ ಯಾತ್ರಾಸ್ಥಳಕ್ಕೆ ತೆರಳಬಹುದು. ವಿದೇಶದಿಂದ ಶುಭಸುದ್ದಿ ಬರಲಿದೆ. ನಿಮ್ಮ ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧವು ವೃದ್ಧಿಸಲಿದೆ. ಜೊತೆಯಾಗಿ ಹೊಸ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ನೀವು ಆಲೋಚಿಸಬಹುದು. ಹಣಕಾಸಿಗೆ ಸಂಬಂಧಿಸಿದಂತೆ ಇಂದು ಉಜ್ವಲ ದಿನ. ಆದ್ದರಿಂದ ಫಲಪ್ರದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯಬೇಡಿ.
ತುಲಾ :-
ಎಲ್ಲಾ ಹೊಸ ವಿಚಾರಗಳಿಗೆ ಉತ್ತಮ ದಿನ. ಅದಕ್ಕಾಗಿಯೇ ಏನಾದರೂ ಹೊಸದನ್ನು ಪ್ರಾರಂಭಿಸುವಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ನಿಮ್ಮಲ್ಲೇ ಅಥವಾ ನಿಮ್ಮ ಪ್ರೀತಿಪಾತ್ರರ ಸಂಬಂಧಗಳಲ್ಲಿ ಹೊಸತನ್ನು ಕಂಡುಕೊಳ್ಳುವಷ್ಟು ಸಾಮಾನ್ಯವಾಗಿರಬಹುದು.ಏನೇ ಆಗಿರಲಿ. ಅದರ ಬಗ್ಗೆ ಆಲೋಚಿಸಿ. ಇವು ನಿಮ್ಮನ್ನು ದಿನವಿಡೀ ಕಾಡಲಿರುವ ಋಣಾತ್ಮಕ ಯೋಚನೆಗಳಿಂದ ದೂರವಿರಿಸುತ್ತದೆ. ಕ್ರಾಂತಿಕಾರಿ ಯೋಚನೆಗಳು ಮತ್ತು ಕ್ರಿಯೆಗಳಿಂದ ದೂರವಿರಿ ಮತ್ತು ವಿರೋಧಿಗಳ ವರ್ತನೆಯ ಬಗ್ಗೆ ಎಚ್ಚರಿಕೆಯಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಅತೀಂದ್ರಿಯ, ಅಲೌಕಿಕ, ನಿಸರ್ಗಾತೀತ ಮತ್ತು ಇತರ ಆಧ್ಯಾತ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ ಹೊಂದುವಿರಿ. ಜ್ಯೋತಿಷ್ಯ ಅಥವಾ ಭವಿಷ್ಯ ವಿದ್ಯೆಯನ್ನು ಕಲಿಯುವುದಿದ್ದರೆ ಇದು ಉತ್ತಮ ಸಮಯ. ಮೌನ ಧ್ಯಾನದಲ್ಲಿ ನೆಮ್ಮದಿಯನ್ನು ಕಾಣುವಿರಿ. ನೀರು ಮತ್ತು ಮಹಿಳೆಯರಿಂದ ದೂರವಿರಿ.
ವೃಶ್ಚಿಕ :-
ವಿಭಿನ್ನ ದಿನವು ನಿಮಗಾಗಿ ಕಾದಿದೆ. ಸಿನಿಮಾದಲ್ಲಿ ತಾರೆಯರು ಸಾಮಾನ್ಯ ವಿಷಯಗಳನ್ನು ‘ವಿಭಿನ್ನ’ವಾಗಿ ಹೇಳುವಂತೆ ಯಾವಾಗಲೂ ಕೇಳುವಂತಹ ರೀತಿಯಲ್ಲಿರಬಹುದು. ಆದರೆ, ಇಲ್ಲಿನ ಸಂದರ್ಭದಲ್ಲಿ ಹೀಗಿರುವುದಿಲ್ಲ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮಗಾಗಿ ನೀವು ಸಮಯ ಮೀಸಲಿಡುವಿರಿ ಮತ್ತು ಇದು ನಿಜವಾಗಿಯೂ ನಿಮಗೆ ವಿಭಿನ್ನವಾಗಿರಲಿದೆ. ನಿಮ್ಮನ್ನು ಸ್ನೇಹಿತರಲ್ಲ, ಕುಟುಂಬ ಸದಸ್ಯರಲ್ಲ ಮತ್ತು ನಿಮ್ಮ ಕಾರ್ಯದ ನಿಯಮಗಳೂ ಅಲ್ಲ. ನೀವು ಏನು ಮಾಡಲು ಬಯಸುತ್ತೀರೋ ಅದರಲ್ಲಿ ತೊಡಗಿಕೊಳ್ಳುವಿರಿ. ಇದು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳುವ ಕುರಿತಾಗಿಯೂ ಇರಬಹುದು ಅಥವಾ ಪ್ರತಿಷ್ಠಿತ ಯೋಜನೆಗಳಿಗಾಗಿ ಶ್ರಮಪಡುವ ಕುರಿತಾಗಿಯೂ ಇರಬಹುದು. ನಿಮ್ಮ ಸ್ಥಾನವು ಸ್ನೇಹಿತ,ಪ್ರೀತಿಪಾತ್ರ ಮತ್ತು ಸಹೋದ್ಯೋಗಿಯಾಗಿರಬಹುದು. ನೀವು ಕಾರು ಖರೀದಿಸಬಹುದು. ಬಹು ಸಂಸ್ಕೃತಿಯ ಸಂವಾದವು ನಡೆಯಬಹುದು. ಇದರಿಂದ ವೈವಾಹಿಕ ಜೀವನದಲ್ಲಿ ಸಂತಸ ತುಂಬಿರುತ್ತದೆ. ಖುಷಿಯಿಂದಿರಿ.
ಧನು :-
ಇಂದು ನಿಮ್ಮ ಗ್ರಹಗತಿಗಳು ಉತ್ತಮ ಸ್ಥಾನದಲ್ಲಿವೆ. ಇದು ಸಾಕಷ್ಟು ಅವಕಾಶಗಳು, ಮತ್ತು ಅದೃಷ್ಟವನ್ನು ತರಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯು ಪರಿಪೂರ್ಣವಾಗಿರುತ್ತದೆ ಮತ್ತು ಇದು ಸಂಪೂರ್ಣವಾಗಿ ದಿನವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಮನೆ ಹಾಗೂ ಕಾರ್ಯಕ್ಷೇತ್ರದಲ್ಲಿನ ವಾತಾವರಣವು ಶಾಂತಿಯಿಂದ ಕೂಡಿರುತ್ತದೆ. ಜೊತೆಗೆ ನೀವು ಬೆಂಬಲ ನೀಡುವಿರಿ. ನಿಮ್ಮ ತವರು ಮನೆಯಿಂದ ಬರುವ ಶುಭಸುದ್ದಿಯು ನಿಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸುತ್ತದೆ. ನಿಮ್ಮ ಸ್ಪರ್ಧಿಗಳಿಗಿಂತ ನೀವೇ ಪ್ರಬಲರಾಗಿದ್ದೀರಿ ಎಂಬುದನ್ನು ನೀವು ಸಾಬೀತುಮಾಡಲಿದ್ದೀರಿ ಮತ್ತು ಅವರ ಎದುರಲ್ಲಿ ಸ್ಪಷ್ಟ ಗೆಲುವನ್ನು ಕಾಣುತ್ತೀರಿ. ಎಂತಹ ಸಂಯೋಜನೆ!
ಮಕರ :-
ಇಂದು ನೀವು ತಲೆಸುತ್ತುವ ಹಾಗೂ ನಿರುತ್ಸಾಹದ ಭಾವವನ್ನು ಹೊಂದಿರುವ ಸಾಧ್ಯತೆಯಿರುವುದರಿಂದ ನಿಮ್ಮ ಆರೋಗ್ಯವು ವಿನೋದಗೇಡಿಯಾಗಿ ಕಂಡುಬರಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ವಿವಿಧ ಕಾರಣಗಳಿಗೆ ನೀವು ಚಿಂತೆಗೀಡಾಗುವ ಸಾಧ್ಯತೆಯಿದೆ. ಮನಸ್ಸಿನಲ್ಲಿನ ಗೊಂದಲ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯದ ಕೊರತೆಯಾಗಿರಬಹುದು ಅಥವಾ ಕೆಲಸದ ಒತ್ತಡದಲ್ಲಿ ಸಿಲುಕಿಹೋಗಿರಬಹುದು.ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ ಗ್ರಹಗತಿಗಳು ಸಾಕಷ್ಟು ಬೆಂಬಲ ನೀಡದ ಕಾರಣ, ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಅತೃಪ್ತಿಯನ್ನು ಹೊಂದುತ್ತಾರೆ.ನಿಮ್ಮ ಮಕ್ಕಳು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆಳವಾದ ಉಸಿರುತೆಗೆದುಕೊಳ್ಳಿ ಮತ್ತು ವಿಶ್ರಾಂತಿ ಮತ್ತು ಬಿಡುವಿನತ್ತ ಗಮನಹರಿಸಿ.
ಕುಂಭ :-
ಸಾಮಾನ್ಯ ದಿನವು ನಿಮಗಾಗಿ ಕಾದಿದೆ. ಇಂದು ನೀವು ಮೊಂಡುತನ ಹಾಗೂ ಋಣಾತ್ಮಕ ಆಲೋಚನೆಗಳಿಂದ ತುಂಬಿರುತ್ತೀರಿ ಇದು ನಿಮ್ಮ ಆರೋಗ್ಯಕ್ಕೆ ಹಾಗೂ ಕುಟುಂಬಕ್ಕೆ ಹಾನಿಕಾರಕವಾಗಿದೆ. ನಿಮ್ಮ ಸಾಮಾಜಿಕ ಘನತೆಯ ಮೇಲೆ ತೀವ್ರ ಪರಿಮಾಣವನ್ನು ಬೀರುವಂತಹ ಯಾವುದೇ ಸಂದರ್ಭಗಳಲ್ಲಿ ತೊಡಗುವುದನ್ನು ತಪ್ಪಿಸಿ. ಗೃಹ ಅಥವಾ ಆಸ್ತಿಗೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಓದಿನ ಕುರಿತಂತೆ ಹಿತಕರ ದಿನವಾಗಿದೆ. ಹಣಕಾಸು ಮೂಲಗಳನ್ನು ಸಮಯೋಚಿತವಾಗಿ ನಿಭಾಯಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ತಾಯಿಯಿಂದ ವಿಫುಲ ಲಾಭ ಸಿಗಲಿದೆ.
ಮೀನ :-
ಮುಂದಕ್ಕೆ ಸಾಗಿ ಮತ್ತು ಬಾಕಿ ಉಳಿದಿರುವ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಿ. ಇಂದು ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲಿರುತ್ತದೆ. ನಿಮಗೆ ಗೊತ್ತಿಲ್ಲದೇ ಇರಬಹುದು ಇದು ಇಂದು ಫಲಪ್ರದವಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ.ನಿಮ್ಮ ಸೃಜನಶೀಲ ಅರ್ಹತೆ, ದೃಢ ನಿರ್ಧಾರ ಮತ್ತು ಕೇಂದ್ರೀಕೃತವು ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ. ಇದು ನಿಮ್ಮ ಸಾಮಾಜಿಕ ಘನತೆಯನ್ನು ವೃದ್ಧಿಸಲಿದೆ. ನೀವು ಅದೃಷ್ಟವಂತರು, ಇದೇ ಸಮಯದಲ್ಲಿ ನಿಮ್ಮನ್ನು ಗೌರವಿಸುವ ಮತ್ತು ಬೆಂಬಲಿಸುವ ಒಳ್ಳೆಯ ಸಂಗಾತಿಯನ್ನು ನೀವು ಹೊಂದಿದ್ದೀರಿ. ನಿಮ್ಮ ಆಪ್ತರು ನಿಮ್ಮೊಂದಿಗೆ ಕೆಲವು ರಹಸ್ಯಗಳನ್ನು ಹಂಚಿಕೊಳ್ಳಬಹುದು ಮತ್ತು ನೀವು ಅವರಿಗೆ ಇನ್ನೂ ಹತ್ತಿರವಾಗುತ್ತೀರಿ.
Dina Bhavishya : 1 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now