Crime News : ತಮಿಳುನಾಡಿನ ಜೋಲಾರ್ಪೇಟೆ ಬಳಿ ಚಲಿಸುವ ರೈಲಿನಿಂದ ನಾಲ್ಕು ತಿಂಗಳ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿ, ತಳ್ಳಿ ಗಂಭೀರ ಗಾಯಗೊಳಿಸಲಾಗಿದೆ. ಕೊಯಮತ್ತೂರಿನಲ್ಲಿ ಟೇಲರಿಂಗ್ ಮಾಡುತ್ತಿದ್ದ ಸಂತ್ರಸ್ತೆ ಕೊಯಿಮತ್ತೂರ್-ತಿರುಪತಿ ಇಂಟರ್ಸಿಟಿ ಎಕ್ಸ್ಪ್ರೆಸ್ನಲ್ಲಿ ಚಿತ್ತೂರಿಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಯರ ವಿಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಸದ್ಯ 36 ವರ್ಷದ ಗರ್ಭಿಣಿ ಮಹಿಳೆ ಶನಿವಾರ ಗರ್ಭಪಾತಕ್ಕೊಳಗಾಗಿದ್ದಾರೆ. TOI ವರದಿಯ ಪ್ರಕಾರ, 4 ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಎರಡು ದಿನಗಳ ಹಿಂದೆ ನಡೆದ ಹಲ್ಲೆಯ ನಂತರ ವೆಲ್ಲೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಗರ್ಭಿಣಿ ಎಂದು ಬೇಡಿಕೊಂಡರು ಬಿಡದ ಪಾಪಿ:
ವರದಿಯ ಪ್ರಕಾರ, ಚಲಿಸುತ್ತಿದ್ದ ರೈಲಿನಲ್ಲಿ ಇತರ ಮಹಿಳಾ ಪ್ರಯಾಣಿಕರು ಹೋದ ನಂತರ ಆರೋಪಿಯು ಮಹಿಳಾ ಬೋಗಿಯನ್ನು ಹತ್ತಿದ್ದ ಎಂದು ಮಹಿಳೆ ತನ್ನ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇದು ಮಹಿಳಾ ಬೋಗಿಯಾಗಿರುವುದರಿಂದ ನಾನು ಅವನನ್ನು ಕೆಳಗಿಳಿಯಲು ಕೇಳಿದಾಗ, ರೈಲು ಈಗಾಗಲೇ ಚಲಿಸಲು ಪ್ರಾರಂಭಿಸಿದೆ ಮತ್ತು ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ಅವನು ಹೇಳಿದನು. ನಾನು ಸರಿ ಎಂದು ಹೇಳಿದೆ. ಆದರೆ ಆ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ ಎಂದು ಹೇಳಿದರು. ಅರ್ಧ ಗಂಟೆ ಆ ವ್ಯಕ್ತಿ ಮೌನವಾಗಿದ್ದ. ನಂತರ, ಅವನು ಬಾತ್ರೂಮ್ ನಿಂದ ಬೆತ್ತಲೆಯಾಗಿ ಬಂದು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದನು. ನಾನು ಗರ್ಭಿಣಿ ಮತ್ತು ನಾನು ನಿಮ್ಮ ಸಹೋದರಿಯಂತೆ ಎಂದು ಹೇಳುತ್ತಾ ಬೇಡಿಕೊಂಡರೂ ಪಾಪಿ ಗರ್ಭಿಣಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ದೌರ್ಜನ್ಯವೆಸಗಿದ್ದಾಗಿ ಮಹಿಳೆ ಹೇಳಿಕೊಂಡಿದ್ದಾಳೆ.
ಮಹಿಳೆಯ ತಲೆಗೆ 20 ಹೊಲಿಗೆ
ಇನ್ನು, ಶನಿವಾರ ಮಧ್ಯಾಹ್ನ ವೈದ್ಯರು ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಆದರೆ ದುರಾದೃಷ್ಟವಶಾತ್ ಗರ್ಭಪಾತವಾಗಿರುವುದನ್ನು ದೃಢಪಡಿಸಿದ್ದಾರೆ ಎಂದು ಅವರ ಪತಿ ವರದಿಗಾರರಿಗೆ ಮಾಹಿತಿ ನೀಡಿದರು. ಗುರುವಾರ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ಭ್ರೂಣವು ಸಾಮಾನ್ಯವಾಗಿತ್ತು. ಆದರೆ ಮಹಿಳೆ ಸ್ಥಿತಿ ಹದಗೆಟ್ಟಿತು. ಶನಿವಾರ ಭ್ರೂಣದ ಹೃದಯ ಬಡಿತ ಕಡಿಮೆಯಾದ ಕಾರಣ ಗರ್ಭಪಾತವಾಗಿದೆ ಎಂದು ಹೇಳಿದ್ದಾರೆ. ಇನ್ನು, ಮಹಿಳೆಯ ಕೈಕಾಲುಗಳು ಮತ್ತು ತಲೆಯಲ್ಲಿ ಮುರಿತಗಳು ಸೇರಿದಂತೆ ತೀವ್ರವಾದ ಗಾಯಗಳಾಗಿದ್ದು, ಆಕೆಯ ತಲೆಯ ಮೇಲೆ 20 ಹೊಲಿಗೆಗಳನ್ನು ಹಾಕಲಾಗಿದೆ ಎಂದು ವರದಿಯಾಗಿದೆ.
ಆರೋಪಿ ಹೇಮರಾಜ್ ಬಂಧನ
ವೆಲ್ಲೂರಿನ ಕೆವಿ ಕುಪ್ಪಂನ 30 ವರ್ಷದ ಹೇಮರಾಜ್ ಎಂದು ಗುರುತಿಸಲಾದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು 12 ಗಂಟೆಗಳ ಒಳಗೆ ಪತ್ತೆಹಚ್ಚಲಾಯಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕೊಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ದಕ್ಷಿಣ ರೈಲ್ವೆ ಮಹಿಳೆಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಮಹಿಳಾ ಪ್ರಯಾಣಿಕನ ಮೇಲೆ ದುಷ್ಕರ್ಮಿ ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಆದರೆ ಆಕೆ ಧೈರ್ಯದಿಂದ ವಿರೋಧಿಸಿದ್ದಾಳೆ ಎಂದು ದಕ್ಷಿಣ ರೈಲ್ವೆ ಮುಖ್ಯಸ್ಥ ಪಿಆರ್ಒ ಎಂ. ಸೆಂಥಮಿಲ್ ಸೆಲ್ವನ್ ಹೇಳಿದ್ದಾರೆ. ನಾನು ಸುಮಾರು 30 ನಿಮಿಷಗಳ ಕಾಲ ಹೋರಾಡಿದೆ. ನಾನು ಎದುರಿಸಿದ ಘಟನೆಯನ್ನು ಬೇರೆ ಯಾವುದೇ ಮಹಿಳೆ ಎದುರಿಸಬಾರದು. ದಯವಿಟ್ಟು ಅವನನ್ನು ಶಿಕ್ಷಿಸಿ. ಈ ಸೈಕೋನನ್ನು ಹೊರಗೆ ಬಿಡಬೇಡಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ.
- ಪಿತ್ರಾರ್ಜಿತ ಆಸ್ತಿ ಎಂದು ಪರಿಗಣಿಸುವುದು ಹೇಗೆ.? ಮಕ್ಕಳಿಗೆ ಹಕ್ಕು ಬರುವುದು ಹೇಗೆ.? ಮಹತ್ವದ ಕೋರ್ಟ್ ತೀರ್ಪಿನ ಮಾಹಿತಿ ಇಲ್ಲಿದೆ
- 1 ಎಕರೆಗೆ ಎಷ್ಟು ಗುಂಟೆ.? ಜಮೀನು ಅಳೆಯುವ ಮುನ್ನ ಇಲ್ಲಿದೆ ಪಕ್ಕಾ ಲೆಕ್ಕಾಚಾರ.!
- ತಾತನಿಂದ ತಂದೆಗೆ ಬಂದ ಆಸ್ತಿಯೆಲ್ಲವೂ ಪಿತ್ರಾರ್ಜಿತವಲ್ಲ; ಮಕ್ಕಳಿಗೆ ಜನ್ಮಸಿದ್ಧ ಹಕ್ಕಿಲ್ಲ ಎಂದ ಹೈಕೋರ್ಟ್
- ದಿನ ಭವಿಷ್ಯ (01-08-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಇಂದಿನ ರಾಶಿಭವಿಷ್ಯ : ಉದ್ಯೋಗ, ವ್ಯವಹಾರ, ಕುಟುಂಬ ಜೀವನ ಹೇಗಿರಲಿದೆ.?
- ಧಾರ್ಮಿಕ ವಿಧಿವಿಧಾನವಿಲ್ಲದ ವಿವಾಹ ಅಸಿಂಧು : ಹೈಕೋರ್ಟ್ ಮಹತ್ವದ ತೀರ್ಪು.!
- ಆಧಾರ್, PAN, Voter ID ಇದ್ದರೂ ಭಾರತೀಯ ಪ್ರಜೆ ಎಂದು ಸಾಬೀತಾಗಲ್ಲ! ಹೈಕೋರ್ಟ್ ಶಾಕಿಂಗ್ ತೀರ್ಪು
- ಇಂದಿನ ಅಡಿಕೆ ಬೆಲೆ (31 ಜುಲೈ 2026): ಶಿವಮೊಗ್ಗ, ಕುಂದಾಪುರ, ಪುತ್ತೂರು ಸೇರಿ ಕರ್ನಾಟಕದ ಎಲ್ಲಾ ಪ್ರಮುಖ ಮಾರುಕಟ್ಟೆಗಳ ಸಂಪೂರ್ಣ ದರ
- ಕಿಡ್ನಿ ಫೇಲ್ಯೂರ್ಗೆ ಮುನ್ನ ದೇಹ ನೀಡುವ ಕೊನೆಯ ಎಚ್ಚರಿಕೆ ಇದು! ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ!
- ಗೃಹಜ್ಯೋತಿ ಫಲಾನುಭವಿಗಳೇ ಎಚ್ಚರ: ಜುಲೈ ವಿದ್ಯುತ್ ಬಿಲ್ ಬಗ್ಗೆ ಬೆಸ್ಕಾಂನಿಂದ ಹೊಸ ಪ್ರಕಟಣೆ!
- Gold Loan New Rules : ಚಿನ್ನದ ಸಾಲಗಾರರಿಗೆ ಬಿಗ್ ಅಲರ್ಟ್! ಬುಲೆಟ್ ಪಾವತಿ ಬಂದ್? EMI ಕಡ್ಡಾಯಕ್ಕೆ ಹೊಸ ನಿಯಮ ಸಾಧ್ಯತೆ
- ಹೊಸ ರೇಷನ್ ಕಾರ್ಡ್ ಪಡೆಯುವವರಿಗೆ ಗುಡ್ ನ್ಯೂಸ್! ಪ್ರತ್ಯೇಕ ಕಾರ್ಡ್ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ
- ದೇಶಾದ್ಯಂತ ಇನ್ಮೇಲೆ ಇಂತವರಿಗೆ ಬ್ಯಾಂಕ್ ಸಾಲ ಸಿಗದಂತೆ ಹೊಸ ರೂಲ್ಸ್ | Bank Loan New Rules 2026
- ‘ಬ್ಯಾಂಕ್’ ಗ್ರಾಹಕರೇ ಗಮನಿಸಿ : ಖಾತೆಯಿಂದ ಈ 10 ವಹಿವಾಟು ಮಾಡಿದ್ರೆ ನಿಮಗೆ ‘IT ನೋಟಿಸ್’ ಗ್ಯಾರೆಂಟಿ.! Bank Rules
- ಅನ್ಯ ಧರ್ಮಿಯ ಜೊತೆ ಮದುವೆ : ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
- ಗುರುವಾರದ ರಾಶಿ ಭವಿಷ್ಯ : ಯಾರಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ.?
- ಸೊಸೆಗೆ ಅತ್ತೆ, ಮಾವ ಊಟ ಕೇಳಿದರೆ ಅದು ಕಿರುಕುಳವಲ್ಲ : ಕರ್ನಾಟಕ ಹೈಕೋರ್ಟ್.!
- ಶಿಕ್ಷಣ ಸಾಲಕ್ಕೆ ಪೋಷಕರ ‘ಸಿಬಿಲ್ ಸ್ಕೋರ್’ ಮಾನದಂಡವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
- ಜಮೀನು ಖರೀದಿಸುವ ಮುನ್ನ ಎಚ್ಚರ : ‘ಪೋಡಿ’ ಮತ್ತು ‘ದುರಸ್ತಿ’ ಎಂದರೇನು? ಇಲ್ಲಿದೆ ಉಪಯುಕ್ತ ಮಾಹಿತಿ
- ರೈತರಿಗೆ ಸರ್ಕಾರದ ಬಂಪರ್ ಗಿಫ್ಟ್ : ಸೋಲಾರ್ ಪಂಪ್ಗೆ 90% ಸಬ್ಸಿಡಿ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ!
- ಗಂಡನ ಆಸ್ತಿಗೆ ಕೇಳುವ ಹೆಂಡತಿಯರಿಗೆ ಹೇಗಿದೆ ನಿಯಮ | ಗಂಡನ ಆಸ್ತಿಯಲ್ಲಿ ಪತ್ನಿಗೆ ಪಾಲು ಇದೆಯಾ.? property Rules
- Daily Horoscope : ದಿನ ಭವಿಷ್ಯ (29-07-2026) ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?
- ಪತ್ನಿಗೆ ನೇಣು ಹಾಕಿ ಒದ್ದಾಡುವುದನ್ನು ಅತ್ತೆ – ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಪತಿ!
- ಮಗನಿಗೆ ತಂದೆಯ ಆಸ್ತಿಯಲ್ಲಿ ಹಕ್ಕು ಇಲ್ಲ.? ಕೋರ್ಟ್ ಆದೇಶ – ಏನಿದು ಹೊಸ ನಿಯಮ.?
- Bank Rules : ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇರಬೇಕು? ತಪ್ಪಿದರೆ ಯಾವ್ಯಾವ ಬ್ಯಾಂಕಿನಿಂದ ಎಷ್ಟೆಷ್ಟು ದಂಡ ಬೀಳುತ್ತೆ?
- PM Awas Yojana 2026 : ₹1.50 ಲಕ್ಷ ಸಹಾಯಧನದ ಸುವರ್ಣ ಅವಕಾಶ – ಸ್ವಂತ ಮನೆ ಕಟ್ಟಲು ಈಗಲೇ ಅರ್ಜಿ ಸಲ್ಲಿಸಿ
- Pension Scheme : ವಿಧವಾ ಪಿಂಚಣಿ’ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.! ಹೇಗೆ ಅರ್ಜಿ ಸಲ್ಲಿಸುವುದು.?

























