Multiple Bank a/c Updates : ನಮಸ್ಕಾರ ಸ್ನೇಹಿತರೇ, ಆರ್ ಬಿಐ (Reserve Bank of India) ಹೊಸ ನಿಯಮ ರೂಪಿಸಿದೆ. ಅದರ ಪ್ರಕಾರ, ‘ಒಂದಕ್ಕಿಂತ ಹೆಚ್ಚು ಬ್ಯಾಂಕ್ಗಳಲ್ಲಿ ನೀವು ಅಕೌಂಟ್ ತೆರೆಯುವಂತಿಲ್ಲ. ಹಾಗೊಂದು ವೇಳೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ, ಇನ್ನು ಮುಂದೆ 10,000 ರೂ. ದಂಡವನ್ನು ತೆರಬೇಕಾಗುತ್ತದೆ.!
ಇಂಥದ್ದೊಂದು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಓದಿದ ಬಹಳಷ್ಟು ಜನರು ಗೊಂದಲಕ್ಕೆ ಸಿಲುಕಿದ್ದಾರೆ. ಆದರೆ, ಈ ಬಗ್ಗೆ ಸೋಷಿಯಲ್ ಮೀಡಿಯಾ ‘X’ನಲ್ಲಿ ಪಿಐಬಿ ಸ್ಪಷ್ಟಿಕರಣವನ್ನು ನೀಡಿದ್ದು, ‘ಇಂಥ ಯಾವ ನಿಯಮವನ್ನೂ ಆರ್ಬಿಐ ರೂಪಿಸಿಲ್ಲ. ನಕಲಿ ಸುದ್ದಿಗಳ ಬಗೆಗೆ ಜನರು ಎಚ್ಚರದಿಂದ ಇರಬೇಕು. ಯಾರೂ ವೈರಲ್ ಸುದ್ದಿಗಳನ್ನು ನಂಬಬೇಡಿ’ ಎಂದು ಹೇಳಿದೆ.
Aadhaar Card Updates : ನವೀಕರಣ ಮಾಡದ 10 ವರ್ಷ ಮೇಲ್ಪಟ್ಟ `ಆಧಾರ್ ಕಾರ್ಡ್’ ನಿಷ್ಕ್ರಿಯ ನವೀಕರಿಸುವುದು ಹೇಗೆ.?
ಉಳಿತಾಯ ಖಾತೆಯ ನಿಯಮವೇನು?
ಭಾರತದಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಉಳಿತಾಯ ಖಾತೆಗಳನ್ನು ಹೊಂದಿರಬೇಕು ಎನ್ನುವ ಕುರಿತು ಯಾವುದೇ ನಿಯಮವಿಲ್ಲ. ಆದರೆ ಒಂದು ಬ್ಯಾಂಕ್ನಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯುವಂತಿಲ್ಲ, ತೆರೆಯಲು ಆಗುವುದೂ ಇಲ್ಲ ಕೂಡ. ಆದರೆ, ನೀವು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇಕಾದರೆ ಖಾತೆಗಳನ್ನು ತೆರೆಯಬಹುದು.
ಬ್ಯಾಂಕ್ ಖಾತೆಗಳಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್ ದಂಡವನ್ನು ವಿಧಿಸುತ್ತದೆ. ಆದ್ದರಿಂದ ಬ್ಯಾಂಕ್ ನಿಯಮಗಳ ಪ್ರಕಾರ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಅಗತ್ಯವಿದ್ದರಷ್ಟೇ ಹೆಚ್ಚುವರಿ ಖಾತೆಗಳನ್ನು ತೆರೆಯಿರಿ ಎನ್ನುವುದು ತಜ್ಞರ ಸಲಹೆ.
Post Office Franchise : ಪೋಸ್ಟ್ ಆಫೀಸ್’ ಮೂಲಕ ಈ ‘ಬ್ಯುಸಿನೆಸ್’ ಮಾಡಿ, ತಿಂಗಳಿಗೆ 80,000 ರೂ. ಗಳಿಸಿ.!
ಹೆಚ್ಚಿನ ಅಕೌಂಟ್ ಇದ್ದರೆ ಆಗುವ ಕಷ್ಟ- ನಷ್ಟಗಳು
ಮೇಲುನೋಟಕ್ಕೆ ಹಲವು ಬ್ಯಾಂಕ್ ಖಾತೆಗಳನ್ನು ಹೊಂದುವುದು ಅನುಕೂಲ ಅನ್ನಿಸಿದರೂ, ಒಟ್ಟಾರೆಯಾಗಿ ಅವುಗಳ ನಿರ್ವಹಣೆ ಅಷ್ಟು ಸುಲಭಲ್ಲ. ಈ ಅಕೌಂಟ್ಗಳಿಗೆ ವಿವಿಧ ಪೆನಾಲ್ಟಿ, ಶುಲ್ಕ ಇತ್ಯಾದಿ ವಿಧಿಸುವುದರಿಂದ ಕೆಲವು ಸವಾಲು, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇಂದು ಹೆಚ್ಚಿನ ಬ್ಯಾಂಕುಗಳು ಸ್ಯಾಲರಿ ಅಕೌಂಟ್ ಅಲ್ಲದ ಸೇವಿಂಗ್ ಬ್ಯಾಂಕ್ ಖಾತೆಗಳಿಗೆ 10,000 ರೂ. ವರೆಗೂ ಮಿನಿಮಮ್ ಬ್ಯಾಲನ್ಸ್ ಮೊತ್ತ ಇರಿಸಬೇಕು ಎಂಬ ನಿಯಮವಿದೆ. ಅಂದರೆ, ತಿಂಗಳಲ್ಲಿ ಒಮ್ಮೆಯಾದರೂ ಖಾತೆಯಲ್ಲಿ ಬ್ಯಾಲನ್ಸ್ ಅಮೌಂಟ್ 10,000 ಇರಬೇಕು.
ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ಮಿನಿಮಮ್ ಬ್ಯಾಲನ್ಸ್ ನಿಗದಿಯಾಗಿರುತ್ತದೆ. ಅಷ್ಟು ಹಣ ಬ್ಯಾಂಕ್ ಖಾತೆಯಲ್ಲಿ ಇರದೇ ಹೋದರೆ ಆಗ ಬ್ಯಾಂಕ್ ಪೆನಾಲ್ಟಿ ಹಾಕುತ್ತದೆ.
Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ಹೆಚ್ಚುವರಿ ಶುಲ್ಕದ ತಾಪತ್ರಯ
ಒಂದು ಬ್ಯಾಂಕ್ ಖಾತೆಯಿಂದ ನೀವು ಸತತ ಮೂರು ತಿಂಗಳು ಯಾವುದೇ ವಹಿವಾಟು ನಡೆಸದೇ ಇದ್ದರೆ ಅದು ನಿಷ್ಕ್ರಿಯಗೊಳ್ಳುತ್ತದೆ. ಅದನ್ನು ಮತ್ತೆ ಸಕ್ರಿಯಗೊಳಿಸಬಹುದು. ಆದರೆ, ಹೆಚ್ಚುವರಿ ಶುಲ್ಕ ಇತ್ಯಾದಿ ರಗಳೆಗಳು ಎದುರಾಗುತ್ತವೆ. ಹೀಗಾಗಿ ಹೆಚ್ಚಿನ ಬ್ಯಾಂಕ್ ಅಕೌಂಟ್ಗಳನ್ನು ನಿಭಾಯಿಸುವುದು ಕಷ್ಟವೆ.
ಕೆಲವು ಬ್ಯಾಂಕಿಂಗ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು. ಮತ್ತೆ ಕೆಲವಕ್ಕೆ ಶುಲ್ಕ ಇರುತ್ತದೆ. ಒಂದೊಂದು ಬ್ಯಾಂಕಿನಲ್ಲೂ ಈ ಶುಲ್ಕ ನೀತಿ ಬೇರೆ ಬೇರೆ ರೀತಿ ಇರುತ್ತದೆ. ನೀವು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ ಈ ಶುಲ್ಕವನ್ನು ತೆರಬೇಕಾಗುತ್ತದೆ.
- ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಬಹುದು, ಆದರೆ ಕೇಸರಿ ಶಾಲು ಹಾಕುವಂತಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
- ಕರ್ನಾಟಕದಲ್ಲಿ ಮದ್ಯ ದರ ಏರಿಕೆ: ಬಡವರ ಬ್ರ್ಯಾಂಡ್ ತುಟ್ಟಿ, ಶ್ರೀಮಂತರ ಮದ್ಯ ಸಸ್ತಾ.. ಸಂಪೂರ್ಣ ವಿವರ ಇಲ್ಲಿದೆ
- ಹಿಜಾಬ್ಗೆ ಗ್ರೀನ್ ಸಿಗ್ನಲ್; ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ವಿರೋಧ – ಉಗ್ರ ಪ್ರತಿಭಟನೆ ಎಚ್ಚರಿಕೆ
- Horoscope Today : 14 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು? ಇಂಧನ ಉಳಿಸಿ ಎಂದು ಹೇಳಿದ ಬೆನ್ನಲ್ಲೇ ರೋಡ್ ಶೋ ಮಾಡಿದ ಮೋದಿಯೋ? ಜನರೋ?
- ‘ನಿಮ್ಮನ್ನು ಕೇರಳ ಕ್ಷಮಿಸಲ್ಲ, ಮತ್ತೆ ಚುನಾವಣೆಯಲ್ಲಿ ಗೆಲ್ಲಲ್ಲ’; ಸಿಎಂ ಆಯ್ಕೆ ವಿಳಂಬ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ವಿರುದ್ಧ ಪೋಸ್ಟರ್ ಪ್ರೊಟೆಸ್ಟ್
- ಹಿಜಾಬ್, ಜನಿವಾರ, ಶಿವದಾರ ಧರಿಸಲು ಅನುಮತಿ ನೀಡಿದ ಸರ್ಕಾರ! ಪರೀಕ್ಷೆಯಲ್ಲಿ ಇನ್ನು ಧಾರ್ಮಿಕ ಪದ್ಧತಿಗೆ ಮುಕ್ತ ಅವಕಾಶ
- “ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈ ಹುಚ್ಚುತನ ಬಿಡಿ” : ಡಿ.ಕೆ ಶಿವಕುಮಾರ್ಗೆ ಸಂಸದ ತೇಜಸ್ವಿ ಸೂರ್ಯ ಚಾಟಿ
- ಅರಸನ ಅರಮನೆಗೆ ಗ್ರಹಣ ಪಟ್ಟದ ಆನೆಗೆ ಸಂಕಷ್ಟ: ರಾಜಕೀಯ ಸಂಚಲನ ಮೂಡಿಸಿದ ಕೋಡಿಶ್ರೀಗಳ ಸ್ಫೋಟಕ ಭವಿಷ್ಯವಾಣಿ
- NEET UG: ನೀಟ್ ಪೇಪರ್ 10 ಲಕ್ಷಕ್ಕೆ ಖರೀದಿ, 15 ಲಕ್ಷಕ್ಕೆ ಸೇಲ್! : ಆರೋಪಿ ಶುಭಂ ಅಸಲಿಗೆ ಯಾರು?
- ಸಾರ್. ನನ್ನ ಹೆಂಡತಿ ಮದುವೆಯನ್ನು ತಪ್ಪಿಸಿ..! ಬೆಳಗಾವಿಯಲ್ಲಿ ಪತಿಯ ಗೋಳಾಟ!
- ಮುಂದಿನ 3 ದಿನ ರಾಜ್ಯದ ಈ 8 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಆಲಿಕಲ್ಲು ಮಳೆ : ಕರಾವಳಿ ಜನರೇ ಎಚ್ಚರ
- ಒಬ್ಬ ಮುಸಲ್ಮಾನನ ಮೇಲೆ ಕೈ ಇಟ್ಟರೂ ನಾವು ನಿಮ್ಮನ್ನು ಕೊಲ್ಲುತ್ತೇವೆ: ಕೊಲೆ ಬೆದರಿಕೆ ಹಾಕಿದ ಶಾಸಕ ಹುಮಾಯೂನ್ ಕಬೀರ್
- ವೈದ್ಯರ ನಿರ್ಲಕ್ಷ್ಯದಿಂದ ಕಣ್ಣುಗಳಿಲ್ಲದೆ ಜನಿಸಿದ ಮಗು ! ಆಸ್ಪತ್ರೆಗೆ 1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್.!
- ಟ್ರೆಕ್ಕಿಂಗ್ ಪ್ರಿಯರಿಗೆ ಸರ್ಕಾರ ಶಾಕ್..! ರಾಜ್ಯಾದ್ಯಂತ ಚಾರಣ ಬ್ಯಾನ್ ಮಾಡಿದ ಸರ್ಕಾರ.. ಕಾರಣವೇನು ಗೊತ್ತೆ.?
- ಸನಾತನ ಧರ್ಮ ನಾಶ : ಸದನದಲ್ಲಿ ಉದಯನಿಧಿ ಗುಡುಗು, ಮೌನವಹಿಸಿ ಸಮ್ಮತಿಸಿದ್ರಾ ಸಿಎಂ ವಿಜಯ್
- ಬಂಗಾಳದ ಮಾಜಿ ಚುನಾವಣಾಧಿಕಾರಿ ಈಗ ರಾಜ್ಯದ ‘ಮುಖ್ಯ ಕಾರ್ಯದರ್ಶಿ’: ಇದು ‘ನಾಚಿಕೆಗೇಡು’ ಎಂದ ತೃಣಮೂಲ ಕಾಂಗ್ರೆಸ್!
- ‘ಮಳೆಗಾಲದಲ್ಲಿ ಪ್ರವಾಹ ಉಂಟಾದ್ರೆ ಸೂಟ್ ಧರಿಸಿ ಜನರ ಸೇವೆ ಹೇಗೆ ಮಾಡ್ತೀರಿ’; ಸಿಎಂ ವಿಜಯ್ ಗೆ ಅಣ್ಣಾಮಲೈ ಟಾಂಗ್
- ಗುಡುಗು-ಸಿಡಿಲಿನ ಆರ್ಭಟಕ್ಕೆ ಭೂಮಿ ತಲ್ಲಣ: ಕೋಡಿಶ್ರೀಗಳ ಸ್ಪೋಟಕ ಭವಿಷ್ಯವಾಣಿ
- PWD ಇಂಜಿನಿಯರ್ ದುರಂತ ಅಂತ್ಯ, ತಾಯಿ ಇಲ್ಲದ ನೋವಲ್ಲಿ ದೇವರಾಯನದುರ್ಗ ಬೆಟ್ಟದಿಂದ ಜಿಗಿದು ಪ್ರಾಣಬಿಟ್ಟ!!
- Horoscope Today : 12 ಮೇ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹುಟ್ಟುಹಬ್ಬದ ದಿನವೇ ದುರಂತ ಅಂತ್ಯ : ಹಾಸ್ಟೆಲ್ನಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿನಿ..





















