ಮೈಸೂರು : ಪತ್ನಿಯ ಅಕ್ರಮ ಸಂಬಂಧ – ಗಂಡನ ಕೈಯಿಂದ ಹತ್ಯೆ, ಪ್ರಿಯಕರನಿಗೆ ಭೀಕರ ಹಲ್ಲೆ

Spread the love

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಅಕ್ರಮ ಸಂಬಂಧ ದಾಂಪತ್ಯ ದುರಂತಕ್ಕೆ ಕಾರಣವಾಗಿದೆ.

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಗಂಡ ವಿಜಯ್ ತನ್ನ ಪತ್ನಿ ಗೀತಾ (29) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ಗೀತಾಳ ಪ್ರಿಯಕರ ದಿಲೀಪ್ ಕೂಡಾ ಹಲ್ಲೆಗೆ ಗುರಿಯಾಗಿ ಗಂಭೀರ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲೆಯಾಗಿದ್ದಾನೆ.

ಘಟನೆಯ ಹಿನ್ನಲೆ

ಗೀತಾ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಸಹೋದ್ಯೋಗಿ ದಿಲೀಪ್ ಜೊತೆ ಆಕೆಗೆ ಆಪ್ತ ಸಂಬಂಧ ಬೆಳೆದುಬಂದಿತ್ತು. ಇದರಿಂದ ದಾಂಪತ್ಯದಲ್ಲಿ ಗಲಾಟೆಗಳು ಹೆಚ್ಚಾಗಿದ್ದವು. ಹಲವು ಬಾರಿ ಪಂಚಾಯಿತಿಗಳ ಮೂಲಕ ಬುದ್ದಿವಾದ ಹೇಳಿದರೂ, ಗೀತಾ ಸಂಬಂಧವನ್ನು ಮುಂದುವರಿಸಿದ್ದಳು.

ಕೆಲವು ತಿಂಗಳುಗಳ ಹಿಂದೆ ಗೀತಾ ಗಂಡನ ಮನೆಯನ್ನು ಬಿಟ್ಟು ತವರಿನಲ್ಲಿ ವಾಸವಾಗಿದ್ದಳು. ಆದರೆ ದಿಲೀಪ್ ಜೊತೆ ನಿರಂತರ ಸಂಪರ್ಕ ಮುಂದುವರಿಸಿದ್ದರಿಂದ ವಿಜಯ್ ಆಕ್ರೋಶಗೊಂಡಿದ್ದನು.

ಹತ್ಯೆಯ ರಾತ್ರಿ

ಸೆಪ್ಟೆಂಬರ್ 29ರ ರಾತ್ರಿ ದಿಲೀಪ್ ಗೀತಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದ ವಿಚಾರ ವಿಜಯ್‌ಗೆ ತಿಳಿದು, ಮನೆಗೆ ಬಂದಾಗ ಇಬ್ಬರ ನಡುವೆ ಜಗಳ ಜರುಗಿತು. ಆ ಸಮಯದಲ್ಲಿ ಗೀತಾ ಮಚ್ಚು ಹಿಡಿದು ಗಂಡನ ಮೇಲೆ ದಾಳಿ ಮಾಡಲು ಯತ್ನಿಸಿದ್ದಳು. ಆದರೆ ವಿಜಯ್ ಮಚ್ಚನ್ನು ಕಿತ್ತುಕೊಂಡು, ತನ್ನ ಸಹೋದರ ಸುರೇಶ್ ಸಹಾಯದಿಂದ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಂದಿದ್ದಾನೆ.

ಅದೇ ವೇಳೆ ಹತ್ತಿರದಲ್ಲಿದ್ದ ದಿಲೀಪ್‌ನ ಕಾಲಿಗೆ ದೊಣ್ಣೆಯಿಂದ ಹೊಡೆದು ಗಂಭೀರ ಗಾಯಗೊಳಿಸಿದ್ದಾನೆ.

ತನಿಖೆ

ಘಟನಾ ಸ್ಥಳಕ್ಕೆ ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಮಲ್ಲಿಕ್, ಡಿವೈಎಸ್‌ಪಿ ಗೋಪಾಲಕೃಷ್ಣ ಹಾಗೂ ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೀತಾಳ ಶವವನ್ನು ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.

ಗೀತಾಳ ತಂದೆಯ ದೂರಿನ ಮೇರೆಗೆ ವೆಂಕಟರಮಣನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯ್ ಹಾಗೂ ಅವನ ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಹೇಳಿಕೆ

ವಿಚಾರಣೆ ವೇಳೆ ವಿಜಯ್, “ಪತ್ನಿ ಗೀತಾ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ತಾನು ಮಲಗಿದ ಬಳಿಕ ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸುತ್ತಿದ್ದಳು” ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

WhatsApp Group Join Now

Spread the love

Leave a Reply