ಇತ್ತೀಚಿಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಷ್ಟೇ ಬಿಗಿಯಾದ ಸಂಚಾರ ನಿಯಮವನ್ನ ಜಾರಿಗೆ ತಂದರೂ ಕೂಡ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಈ ಕಾರಣಗಳಿಂದ ಕರ್ನಾಟಕ ರಾಜ್ಯ ಸರ್ಕಾರ ಈಗ ದೀಪಾವಳಿ ಹಬ್ಬಕ್ಕೂ ಮುನ್ನವೇ ವಾಹನ ಸವಾರರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ.
ಇನ್ನು ಮುಂದೆ ವಾಹನ ಸವಾರರು ರಸ್ತೆಯಲ್ಲಿ ಈ ತಪ್ಪನ್ನ ಮಾಡಿದರೆ 5000 ರೂಪಾಯಿ ದಂಡವನ್ನ ಪಾವತಿ ಮಾಡಬೇಕು. ಹಾಗಾದ್ರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಸಂಚಾರ ನಿಯಮ ಯಾವುದು.? ನೋಡೋಣ.
ಕೆಲವು ವಾಹನ ಸವಾರರು ಬಹಳ ಬೇಗ ತಮ್ಮ ಮನೆಗೆ ಅಥವಾ ಕೆಲಸ ಮಾಡುವ ಸ್ಥಳಕ್ಕೆ ತಲುಪಬೇಕು ಅನ್ನುವ ಕಾರಣಕ್ಕೆ ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸುತ್ತಾರೆ. ಆದರೆ ಇನ್ನು ಮುಂದೆ ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸಿದರೆ ಅವರು 5000 ರೂಪಾಯಿ ದಂಡವನ್ನ ಪಾವತಿ ಮಾಡಬೇಕು. ಈ ಹಿಂದೆ ರಾಂಗ್ ರೂಟ್ ನಲ್ಲಿ ವಾಹನವನ್ನು ಚಲಾಯಿಸುವವರಿಗೆ 500 ರೂಪಾಯ ದಂಡವನ್ನ ಹಾಕಲಾಗುತ್ತಿತ್ತು.
ಆದರೆ ವಾಹನ ಸವಾರರು ಇದಕ್ಕೆ ತಲೆಕೆಡಿಸಿಕೊಳ್ಳದ ಕಾರಣ ಈಗ ದಂಡವನ್ನ ದುಪ್ಪಟ್ಟು ಮಾಡಲಾಗಿದೆ. ಇನ್ನು ಮುಂದೆ ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸಿದರೆ ಬಿಎನ್ಎಸ್ ಸೆಕ್ಷನ್ 285ರ ಪ್ರಕಾರ 5000 ರೂಪಾಯಿ ದಂಡವನ್ನ ಪಾವತಿ ಮಾಡಬೇಕು. ಅದೇ ರೀತಿಯಲ್ಲಿ ಪದೇ ಪದೇ ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸಿದರೆ ಅವರ ಡ್ರೈವಿಂಗ್ ಲೈಸೆನ್ಸ್ ನ್ನ ರದ್ದು ಮಾಡಲು ಆದೇಶವನ್ನ ಹೊರಡಿಸಲಾಗಿದೆ.
ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸಿದರೆ ಅಪಘಾತವಾಗುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಅಪಘಾತವಾಗುವ ಸಾಧ್ಯತೆ ಹೆಚ್ಚಾಗಿದ್ದರೂ ಕೂಡ ಜನರು ರಾಂಗ್ ರೂಟ್ ನಲ್ಲಿ ವಾಹನವನ್ನ ಚಲಾಯಿಸುತ್ತಾರೆ. ಈ ಕಾರಣಗಳಿಂದ ರಾಜ್ಯ ಸರ್ಕಾರ ಈಗ 500 ರೂಪಾಯ ದಂಡವನ್ನ 5000 ರೂಪಾಯಿಗೆ ಏರಿಕೆ ಮಾಡಿದೆ.

ನವೆಂಬರ್ 1 ರಿಂದ ದೇಶಾದ್ಯಂತ ಸ್ವಂತ ವಾಹನಕ್ಕೆ 5000 ರೂ. ದಂಡ | ಹೊಸ ರೂಲ್ಸ್
WhatsApp Group
Join Now