IPL 2025 : ಇಂದು ಬೆಂಗಳೂರಿನಲ್ಲಿ ಆರ್ ಸಿಬಿಯ ವಿಜಯ ಯಾತ್ರೆ : ಎಲ್ಲಿಂದ ಎಲ್ಲಿಗೆ.?

Spread the love

IPL 2025 : 18 ವರ್ಷಗಳ ಪ್ರಶಸ್ತಿ ಬರವನ್ನು ಕೊನೆಗೊಳಿಸಿದ ಭಾವನಾತ್ಮಕ ವಿಜಯದ ನಂತರ ಆರ್ ಸಿಬಿ ಅಭಿಮಾನಿಗಳು ಬುಧವಾರ(ಜೂನ್ 4) ಮಧ್ಯಾಹ್ನ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯ ರಾಜಧಾನಿ ಕ್ರಿಕೆಟ್ ವೀರರನ್ನು ಭರ್ಜರಿಯಾಗಿ ಸ್ವಾಗತಿಸಲು ಸಜ್ಜಾಗಿದೆ.

ವರದಿಗಳ ಪ್ರಕಾರ, ಆರ್‌ಸಿಬಿ ವಿಜಯ ಯಾತ್ರೆ ಮಧ್ಯಾಹ್ನ 3.30 ಕ್ಕೆ ವಿಧಾನಸೌಧದಿಂದ ಪ್ರಾರಂಭವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ. ತಂಡವು ಅಹಮದಾಬಾದ್‌ನಿಂದ ಬೆಳಗ್ಗೆ 4:30 ರ ಸುಮಾರಿಗೆ ಬೆಂಗಳೂರಿಗೆ ಬಂದಿಳಿದಿದ್ದು, ಬೃಹತ್ ಆಚರಣೆಗಳೊಂದಿಗೆ ಸ್ವಾಗತಿಸಲಾಗುವುದು ಎಂದು ಹೇಳಲಾಗಿದೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಭವ್ಯ ವಿಜಯೋತ್ಸವ ಬಸ್ ಮೆರವಣಿಗೆ ನಡೆಯಲಿದ್ದು, ಅಭಿಮಾನಿಗಳು ತಮ್ಮ ಪ್ರಶಸ್ತಿ ವಿಜೇತ ಕ್ರಿಕೆಟಿಗರನ್ನು ಹತ್ತಿರದಿಂದ ನೋಡಲು ಅವಕಾಶ ಪಡೆಯಲಿದ್ದಾರೆ.

ಆರ್‌ಸಿಬಿಯ ಬಹುನಿರೀಕ್ಷಿತ ವಿಜಯೋತ್ಸವದ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಮಾಜಿ ಆರ್‌ಸಿಬಿ ದಂತಕಥೆಗಳಾದ ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಕೂಡ ವಿಜಯೋತ್ಸವ ಮೆರವಣಿಗೆ ದೃಢಪಡಿಸಿದ್ದಾರೆ.

ಪೊಲೀಸರು ಕೂಡ ವ್ಯಾಪಕ ಭದ್ರತೆ ಮತ್ತು ಟ್ರಾಫಿಕ್ ನಿಯಂತ್ರಣಕ್ಕೆ ಈಗಾಗಲೇ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುತ್ತಿದೆ ಎಂದು ವರದಿಯಾಗಿದೆ.

WhatsApp Group Join Now

Spread the love

Leave a Reply