Pension Status Check : ನಮಸ್ಕಾರ ಸ್ನೇಹಿತರೇ, ಬಡವರಿಗೆ ಪ್ರತಿ ತಿಂಗಳು ಸರ್ಕಾರದ ವತಿಯಿಂದ ನೀಡಲಾಗುವ ಪಿಂಚಣಿಗಳಾದ ಇಂದಿರಾಗಾಂಧಿ ನ್ಯಾಶನಲ್ ಓಲ್ಡ್ ಏಜ್ ಪೆನ್ಶನ್, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಯೋಜನೆ, ವಿಧವೆಯರ ಪೆನ್ಶನ್, ಮನಸ್ವಿನಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೂಲಕ ನೀಡಲಾಗುವ ಪಿಂಚಣಿಗಳು(Pension) ಎಷ್ಟು ಕಂತುಗಳು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಗೆ ಜಮೆಯಾಗಿದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ.? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಯಾವುದು.? ಹಾಗು ಪಿಂಚಣಿ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Anganawadi Jobs : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?
ಬಡವರಿಗೆ ಪ್ರತಿ ತಿಂಗಳು ಕೇಂದ್ರ ಹಾಗು ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಪಿಂಚಣಿಯ ಮಾಹಿತಿಯನ್ನು ಅಂದರೆ ಅವರು ಪಿಂಚಣಿಗೆ ನೋಂದಣಿಯನ್ನು ಮಾಡಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಕಂತುಗಳು ಯಾವ ಯಾವ ತಿಂಗಳಲ್ಲಿ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಜಮೆಯಾಗಿದೆ. ಹಾಗು ಇದುವರೆಗೆ ಎಷ್ಟು ಹಣ ಖಾತೆಗೆ ಜಮೆಯಾಗಿದೆ ಎನ್ನುವುದನ್ನು ಮೊಬೈಲ್ ನಲ್ಲಿಯೇ ಹೇಗೆ ನೋಡಬಹುದು ಎನ್ನುವುದನ್ನ ಕೆಳಗೆ ತಿಳಿಸಲಾಗಿದೆ.
ವೃದ್ಧರು, ಅಂಗವಿಕಲರು, ವಿಧವೆಯರು ಮೊಬೈಲ್ ನಲ್ಲೇ ಪಿಂಚಣಿ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ :- ಮಾಹಿತಿ ಕಣಜ (ಸಾರ್ವಜನಿಕ ಮಾಹಿತಿ ವ್ಯವಸ್ಥೆ)
ಮೇಲೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಇಲಾಖೆಯ ಅಧೀಕೃತ ಎಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ತಿಳಿಸಲಾದಂತೆ ಗ್ರಾಮೀಣ ಪ್ರದೇಶದವರಾಗಿದ್ದರೆ, ಗ್ರಾಮೀಣ ಹಾಗೂ ನಗರ ಪ್ರದೇಶದವರಾಗಿದ್ದರೆ, ನಗರ ಎಂದು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಿ. ಬಳಿಕ ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಿ. ನಂತರ ಸಲ್ಲಿಸಿ ಒಪ್ಶನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುವ ಎಲ್ಲಾ ಫಲಾನುಭವಿಗಳ ಹೆಸರು ಕಾಣುತ್ತದೆ.
ಇದನ್ನೂ ಕೂಡ ಓದಿ : Gruhalakshmi Scheme : ಮಹಿಳೆಯರಿಗೆ ಸಿಹಿಸುದ್ಧಿ.!ಗೃಹಲಕ್ಷ್ಮಿ ಹಣ ಜಮಾ ಆಗುವುದು ಯಾವಾಗ.? ಸಚಿವರಿಂದ ಬಿಗ್ ಅಪ್ಡೇಟ್.!
ನಿಮ್ಮೂರಿನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಮುಂದೆ ನಿಮ್ಮ ತಂದೆ ಅಥವಾ ಪತಿಯ ಹೆಸರು ಇರುತ್ತದೆ. ವಿಳಾಸ, ಹುಟ್ಟಿದ ದಿನಾಂಕ, ಯಾವ ಪಿಂಚಣಿ ಪಡೆಯುತ್ತಿದ್ದೀರಿ, ಪಿಂಚಣಿ ಅನುಮತಿ ಸಂಖ್ಯೆ, ಪಿಂಚಣಿ ಅನುಮತಿ ದಿನಾಂಕ ಹಾಗೂ ಪಿಂಚಣಿ ಮೊತ್ತ, ಇಲ್ಲಿಯವರೆಗೆ ಪಡೆದ ಪಿಂಚಣಿಯ ವಿವರ, ಪಿಂಚಣಿ ಐಡಿ ಹಾಗೂ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಗಳು, ಪಿಂಚಣಿ ಮೊತ್ತ ಹಾಗೂ ಪಾವತಿ ಮಾಡಿದ ದಿನಾಂಕಗಳ ಪಟ್ಟಿ ಕಾಣುತ್ತದೆ. ಯಾವ ತಿಂಗಳಿಂದ ನಿಮಗೆ ಪಿಂಚಣಿ ಬರುತ್ತಿದೆ? ಸೇರಿದಂತೆ ಎಲ್ಲಾ ಮಾಹಿತಿಗಳು ನಿಮಗೆ ಸಿಗುತ್ತದೆ. ವಿತರಣಾ ವಿಧಾನ ಪಿಂಚಣಿಯನ್ನು ಖಾತಾ ಪುಸ್ತಕದ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಪಿಂಚಣಿ ಪಡೆಯಲು ಬೇಕಾಗುವ ದಾಖಲೆಗಳೇನು.?
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಚುನಾವಣಾ ಗುರುತಿನ ಚೀಟಿ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ನೀಡಬೇಕಾಗುತ್ತದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಬೆಂಗಳೂರಲ್ಲಿ ಘೋರ ದುರಂತ : ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ಬಿದ್ದು ‘ಮಹಿಳಾ ಟೆಕ್ಕಿ’ ದಾರುಣ ಸಾವು.!
- ತಮಿಳುನಾಡಿನಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಜೊತೆಗೆ ಮೈತ್ರಿಗೆ ಬಿಜೆಪಿ ಪರಿಶೀಲನೆ : ಅಮಿತ್ ಶಾ ಹೇಳಿದ್ದೇನು?
- ಇರಾನ್, ಅಮೆರಿಕಾದಿಂದ ಭದ್ರತೆ ಕರೆಸಿಕೊಳ್ಳುವುದಾದರೆ, ನೀವೇನು ದನ ಕಾಯೋದಿಕ್ಕೆ ಇದ್ದೀರಾ : ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ
- ತಾಸುಗಟ್ಟಲೆ ಮೊಬೈಲ್ ನಲ್ಲಿ ವೈದ್ಯನ ಲಲ್ಲೆ – ನರಳಿ ನರಳಿ ಪ್ರಾಣಬಿಟ್ಟ ರೋಗಿ.!
- ಜನಾರ್ಧನ್ ರೆಡ್ಡಿ Z+ ಆದ್ರೂ ಕೇಳಲಿ, ಇರಾನ್ ನಿಂದ ಭದ್ರತೆನಾದ್ರೂ ಕರೆಸಿಕೊಳ್ಳಲಿ : ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ
- ಅಡಿಕೆ ರೇಟ್ | 05 ಜನವರಿ 2026| ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ?
- ಓಂ ಶಕ್ತಿ ಮಾಲಾಧಾರಿಗಳ ಮೇಲೆ ಬಾಲಕರಿಂದ ಕಲ್ಲೆಸೆತ, ಮೂವರು ಅರೆಸ್ಟ್ : ಗೃಹ ಸಚಿವ ಜಿ. ಪರಮೇಶ್ವರ್
- Dina Bhavishya : 05 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಹಳೆ ವಾಹನ ಇಟ್ಟುಕೊಂಡಿದ್ದೀರಾ ಈ ಸುದ್ದಿ ಓದಿ ಇಲ್ಲದಿದ್ದರೆ ನಿಮ್ಮ ಗಾಡಿ ಗುಜರಿ ಸೇರೋದು ಗ್ಯಾರಂಟಿ
- ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿ
- ನಮಗೆ ಪ್ರಾಣಭೀತಿ ಇದೆ ದಯವಿಟ್ಟು Z+ ಭದ್ರತೆ ಒದಗಿಸಿ : ಸಿಎಂ ಸಿದ್ದರಾಮಯ್ಯಗೆ ಶಾಸಕ ಜನಾರ್ದನ ರೆಡ್ಡಿ ಪತ್ರ.!
- Health Tips : ಲೈಂಗಿಕ ಕ್ರಿಯೆ ನಡೆಸಿದ ನಂತರ ಮೂತ್ರ ವಿಸರ್ಜನೆ ತಡೆಹಿಡಿಯಬಾರದು ಏಕೆ ಗೊತ್ತಾ.?
- ಲೈಂಗಿಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಮಿತಿಮೀರಿದ ಸೇವನೆ ಸಾವಿಗೆ ಕಾರಣವಾಗಬಹುದು
- ಸಾರ್ವಜನಿಕರ ‘ವಾಹನ ತಪಾಸಣೆ’ ವೇಳೆ ಸೌಜನ್ಯದಿಂದ ವರ್ತಿಸಿ : ರಾಜ್ಯದ ಎಲ್ಲಾ ಪೊಲೀಸರಿಗೆ ಖಡಕ್ ಆದೇಶ.!
- ನಿಧಿ ಆಸೆಗೆ ಪೋಷಕರಿಂದಲೇ ಮಗು ಬಲಿಗೆ ಯತ್ನ.? 8 ತಿಂಗಳ ಕಂದಮ್ಮನ ರಕ್ಷಣೆ – ಜೀವ ಉಳಿಸಿದ ಚೈಲ್ಡ್ಲೈನ್ ಕರೆ!
- ಬಿಯರ್ ಕುಡಿದ್ರೆ ಕಿಡ್ನಿ ಸ್ಟೋನ್ ಕರಗುತ್ತಾ?, ಇದೆಷ್ಟು ನಿಜ? ನೀವು ತಿಳಿದುಕೊಳ್ಳಲೇಬೇಕಾದ ವಿಷಯವಿದು
- ವಿಶೇಷಚೇತನ ಮಗನಿಗೇ ಕೀಟನಾಶಕ ಕುಡಿಸಿದ ತಂದೆ ; ಕಾರಣ ಕೇಳಿದರೆ ಶಾಕ್ ಆಗ್ತೀರಾ!
- ಯಲ್ಲಾಪುರ ರಂಜಿತಾ ಹತ್ಯೆ ಮಾಡಿ ಪರಾರಿಯಾಗಿದ್ದ ರಫಿಕ್ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
- Heart Attack : ಕೆಲವರಿಗೆ ಟಾಯ್ಲೆಟ್ ನಲ್ಲಿದ್ದಾಗಲೇ ಇದ್ದಕ್ಕಿದಂತೆ ಹೃದಯಘಾತವಾಗಲು ಕಾರಣಗಳೇನು?
- Horoscope Today : 04 ಜನವರಿ 2026ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ



















