Fact Check : ಚಿನ್ನಸ್ವಾಮಿ ಕಾಲ್ತುಳಿತದ ಒತ್ತಡಕ್ಕೆ ಹೆದರಿ ಖಾತೆ ಬದಲಿಸಿ ಇಲ್ಲ ರಾಜೀನಾಮೆ ಕೊಡ್ತೀನಿ ಎಂದ ಪರಮೇಶ್ವ‌ರ್!

Spread the love

ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವ‌ರ್ ಅವರು ತಮ್ಮ ಖಾತೆ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳಿಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

”ನಾನು ಯಾವತ್ತೂ ನಿರ್ಧಿಷ್ಟವಾಗಿ ಯಾವ ಖಾತೆ ಬೇಕು ಎಂದು ಮುಖ್ಯಮಂತ್ರಿಗಳನ್ನು ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ವದಂತಿ ಮತ್ತು ವಿಪಕ್ಷದವರು ಹಬ್ಬಿಸುತ್ತಿರುವ ಸುದ್ದಿ” ಎಂದು ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಗಳ ಪ್ರಕಾರ ಗೃಹ ಸಚಿವರಾಗಿರುವ ಡಾ. ಪರಮೇಶ್ವರ್ ಅವರು ತಮ್ಮ ಖಾತೆಯನ್ನು ಬದಲಾಯಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಆರೋಪವನ್ನು ತಿರಸ್ಕರಿಸಿದ ಗೃಹ ಸಚಿವರು, “ಈ ವದಂತಿಗಳಿಗೆ ಯಾರೂ ಗಣನೆ ನೀಡಬಾರದು” ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಸ್ಥಾನ ಮತ್ತು ಕರ್ತವ್ಯದ ಬಗ್ಗೆ ತೀವ್ರ ಬದ್ಧತೆಯನ್ನು ಪ್ರತಿಪಾದಿಸಿದ್ದಾರೆ.

ಜೂನ್‌ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದ ಒತ್ತಡಕ್ಕೆ ಸಿಲುಕಿ ಗೃಹಸಚಿವರ ಖಾತೆ ಬದಲಿಸಿ, ಇಲ್ಲವಾದರೆ ರಾಜೀನಾಮೆ ಸ್ವೀಕರಿಸಿ ಎಂದು ಪರಮೇಶ್ವರ್‌ ಸಿದ್ದರಾಮಯ್ಯ ಬಳಿ ಪಟ್ಟು ಹಿಡಿದಿದ್ದರು ಹಾಗೂ ಇದಕ್ಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದರು ಎಂದು ವರದಿಯಾಗಿತ್ತು.

WhatsApp Group Join Now

Spread the love

Leave a Reply