ಸಿನೆಮಾ ಟಾಕೀಸ್‌ ವಾಶ್‌ರೂಂನಲ್ಲಿ ಕ್ಯಾಮಾರಾ ಪತ್ತೆ, ಅಪ್ರಾಪ್ತನ ಬಳಕೆ ಆರೋಪ, ದೂರು ಕೊಟ್ಟ ಮಹಿಳಾ ಟೆಕ್ಕಿ

ಬೆಂಗಳೂರು : ನಗರದ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಕ್ಯಾಮಾರ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಟೆಕ್ಕಿ ದೂರು ದಾಖಲಿಸಿದ್ದಾರೆ. ಲೇಡಿಸ್ ವಾಶ್ ರೂಮ್‌ನಲ್ಲಿ ಗುಪ್ತವಾಗಿ ಕ್ಯಾಮೆರಾ ಇಟ್ಟು ಮಹಿಳೆಯರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. WhatsApp Group Join Now ಈ ಸಂಬಂಧ ಮಹಿಳಾ ಟೆಕ್ಕಿಯೊಬ್ಬರು ನೀಡಿದ ದೂರಿನ ಮೇರೆಗೆ ಸಂಧ್ಯಾ ಥಿಯೇಟರ್ ಹಾಗೂ ಅದರ ಸಿಬ್ಬಂದಿ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಿನಿಮಾಗೆ ಹೋಗಿದ್ದ ವೇಳೆ … Read more

25 ಲಕ್ಷ ಪರಿಹಾರ ಹಣ ಎಲ್ಲಿಂದ ಬಂತು – ಬಳ್ಳಾರಿ ಶೂಟೌಟ್ ಬಗ್ಗೆ ಸ್ಪೋಟಕ ಅಂಶ ಹೊರಹಾಕಿದ ಎಚ್. ಡಿ ಕುಮಾರಸ್ವಾಮಿ

ಬಳ್ಳಾರಿಯಲ್ಲಿ ನಡೆದಿದ್ದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಸ್ಪೋಟಕ ವಿಚಾರಗಳನ್ನು ಹೊರಹಾಕಿದ್ದಾರೆ. ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆಯಾಗಿತ್ತು. WhatsApp Group Join Now ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್ ಮ್ಯಾನ್ ಗಳು ಈ ವೇಳೆ ಗುಂಡು ಹಾರಿಸಿದ್ದರಿಂದ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದ. ಇದೀಗ ಪೊಲೀಸ್ ತನಿಖೆಯಲ್ಲೂ ಸತೀಶ್ ರೆಡ್ಡಿ … Read more

ಸರ್ಕಾರಿ ಉದ್ಯೋಗಗಳಲ್ಲಿ ‘ಸಾಮಾನ್ಯ’ ವರ್ಗದ ಸ್ಥಾನಗಳಿಗೆ ‘SC/ST/OBC’ ಗಳಿಗೂ ಹಕ್ಕಿದೆ : ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು.!

ಸರ್ಕಾರಿ ಉದ್ಯೋಗಗಳಲ್ಲಿ ‘ಸಾಮಾನ್ಯ’ ವರ್ಗದ ಸ್ಥಾನಗಳಿಗೆ ಎಸ್ಸಿ/ಎಸ್ಟಿ/ಒಬಿಸಿಗಳಿಗೂ ಹಕ್ಕಿದೆ ಎಂದು ‘ಡಬಲ್ ಬೆನಿಫಿಟ್’ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. WhatsApp Group Join Now ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮತ್ತು ಅರ್ಹತೆಯ ಕುರಿತು ದೀರ್ಘಕಾಲದ ಚರ್ಚೆಯನ್ನು ಸುಪ್ರೀಂ ಕೋರ್ಟ್ ಕೊನೆಗೊಳಿಸಿದೆ. ಐತಿಹಾಸಿಕ ಮತ್ತು ದೂರಗಾಮಿ ತೀರ್ಪಿನಲ್ಲಿ, ಮೀಸಲು ವರ್ಗಗಳ (ಎಸ್ಸಿ, ಎಸ್ಟಿ, ಒಬಿಸಿ ಮತ್ತು ಇಡಬ್ಲ್ಯೂಎಸ್) ಅಭ್ಯರ್ಥಿಗಳು ಸಾಮಾನ್ಯ ವರ್ಗದ ಸ್ಥಾನಗಳಲ್ಲಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ, ಅವರು ಸಾಮಾನ್ಯ ವರ್ಗದ ಕಟ್‌ಆಫ್ ಅಂಕಗಳನ್ನು … Read more

Arecanut Price : ಕ್ವಿಂಟಾಲ್‌ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಜನವರಿ 6ರ ದರಪಟ್ಟಿ

ಕಳೆದ ಕೆಲ ದಿನಗಳಿಂದ ಅಡಿಕೆ ಧಾರಣೇ ಏರಿಕೆಯಾಗುತ್ತಲಿದೆ. ಇದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಾಗಿದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ಅಡಿಕೆನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾದ್ರೆ, ಇಂದು (ಜನವರಿ 6) ದರ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ. WhatsApp Group Join Now ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಕೊಯ್ಲು ಸಂಪೂರ್ಣವಾಗು ಮುಕ್ತಾಯ ಆಗಿದೆ. ಇದೇ ವೇಳೆ ಅಡಿಕೆ ದರ ಏರಿಕೆಯಾಗಿರುವುದು ಬೆಳೆಗಾರರ ಬಾಯಿಗೆ ಸಕ್ಕರೆ ಹಾಕಿದಂತಾಗಿದೆ. ಈ ವರ್ಷ … Read more

ಇನ್ಫೋಸಿಸ್ ನಿಂದ ಪುರವಂಕರಕ್ಕೆ ಭೂಮಿ ಮಾರಾಟ : ಬೆಂಗಳೂರು ಡಿಸಿಯಿಂದ ತನಿಖೆ, ಐವರು ಸಬ್-ರಿಜಿಸ್ಟ್ರಾರ್ ಗಳ ಅಮಾನತು

ಆನೇಕಲ್ ತಾಲ್ಲೂಕಿನಲ್ಲಿ ಇನ್ಫೋಸಿಸ್ ನಿಂದ ರಿಯಲ್ ಎಸ್ಟೇಟ್ ಡೆವಲಪರ್ ಪುರವಂಕರ ಅವರಿಗೆ ಸುಮಾರು 250 ಕೋಟಿ ರೂಪಾಯಿ ಮೌಲ್ಯದ ವಹಿವಾಟಿನಲ್ಲಿ 53.5 ಎಕರೆ ಭೂಮಿಯನ್ನು ಮಾರಾಟ ಮಾಡಿರುವ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿ (DC) ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. WhatsApp Group Join Now ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇನ್ಫೋಸಿಸ್ ಗೆ ಸೇರಿದ ಭೂಮಿಯನ್ನು ಮಾರಾಟ ಮಾಡಿರುವ ಬಗ್ಗೆ ದೂರಿನ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಜಿಲ್ಲಾಧಿಕಾರಿಗೆ … Read more

ಕೈ ಮುರಿದು, ಕಣ್ಣಿಗೆ ಚಾಕು ಇರಿದ ಮೊದಲ ಪತ್ನಿ : ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿಶೀಟರ್

ಖಾಕಿ ಭಯವಿಲ್ಲದೆ ರೌಡಿಶೀಟರ್ಗಳು ಮೇಲಿಂದ ಮೇಲೆ ಅಟ್ಟಹಾಸ ಮೆರೆಯೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದರೂ ಕೆಲವರು ಮಾತ್ರ ಬುದ್ಧಿ ಕಲಿಯಲ್ಲ. ಕಾರಾಗೃಹದಿಂದ ಹೊರಬಂದ ಬಳಿಕವೂ ಮತ್ತದೇ ತಮ್ಮ ಹಳೇ ಚಾಳಿ ಮುಂದುವರಿಸುತ್ತಾರೆ. WhatsApp Group Join Now ಕೆಲವೊಮ್ಮೆ ಪೊಲೀಸರ ಕಣ್ಣಿಗೂ ಯಾಮಾರಿಸಿ ಓಡಾಡಿಕೊಂಡು ಇರ್ತಾರೆ. ಇಂತಹುದ್ದೇ ಸಾಲಿಗೆ ಸೇರುವ ರೌಡಿಶೀಟರ್ ಸೈಯದ್ ಅಸ್ಗರ್ ಈಗ ತಾನಾಗಿಯೇ ಪೊಲೀಸರ ಬಳಿ ಓಡೋಡಿ ಬಂದಿದ್ದಾನೆ. ಇದಕ್ಕೆಲ್ಲ ಕಾರಣ ಆತನ ಹೆಂಡತಿ ಅಂದ್ರೆ ನೀವು … Read more

ಮಂಡ್ಯದಲ್ಲಿ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ : ಇಂದು ಅಸ್ಥಿಪಂಜರದ ರೀತಿಯಲ್ಲಿ ಪತ್ತೆ!

ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರ ಅಸ್ಥಿಪಂಜರ ಆರು ತಿಂಗಳ ನಂತರ ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆಯಲ್ಲಿ ಸೋಮವಾರ ಪತ್ತೆಯಾಗಿದೆ. ಮಹದೇವಸ್ವಾಮಿ ಅಲಿಯಾಸ್‌ ಬೋಟಿ ಮಹದೇವ (45) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಇವರಿಗೆ ಪತ್ನಿ ಪವಿತ್ರಾ, ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. WhatsApp Group Join Now ಮಹದೇವಸ್ವಾಮಿ ಅವರು ಭಾರತೀನಗರದ ಬೀದಿಬದಿ ಶೆಡ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದು, ದೊಡ್ಡಅರಸಿನಕೆರೆಯ ಬಾಡಿಗೆ ಮನೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಒಂದೂವರೆ ವರ್ಷದ ಹಿಂದೆ ವಿಪರೀತ ಸಾಲ ಮಾಡಿಕೊಂಡಿದ್ದರಿಂದ ಮನೆಬಿಟ್ಟು ನಾಪತ್ತೆಯಾಗಿದ್ದರು. ಗಂಡನ ಪತ್ತೆಗಾಗಿ … Read more

ಇಂದಿನ ಅಡಿಕೆ ಧಾರಣೆ – 06 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?

ಇಂದಿನ ಅಡಿಕೆ ದರ – ಕರ್ನಾಟಕ ಮಾರುಕಟ್ಟೆ ವಿಧ ಗರಿಷ್ಟ ಬೆಲೆ ಮಾಡೆಲ್ ಬೆಲೆ ಹೊನ್ನಳ್ಳಿ ರಾಶಿ ₹57,499 ₹57,246 ಯಲ್ಲಾಪುರ ಕೋಕಾ ₹26,899 ₹24,299 ಯಲ್ಲಾಪುರ ರಾಶಿ ₹62,965 ₹56,899 ಯಲ್ಲಾಪುರ ಹಣ್ಣು ₹42,099 ₹39,309 ಶಿರಸಿ ಕೆಂಪುಗೋಟು ₹36,299 ₹29,940 ಚಾಮರಾಜನಗರ ಬೇರೆ ₹13,000 ₹13,000 ಮಂಗಳೂರು ಕೋಕಾ ₹35,500 ₹30,300 ಬೆಳ್ತಂಗಡಿ ಕೋಕಾ ₹27,000 ₹22,000 ಸಾಗರ ಕೋಕಾ ₹34,499 ₹30,100 ಕುಮಟಾ ಚಿಪ್ಪು ₹35,099 ₹33,689 ಕುಮಟಾ ಚಾಲಿ ₹49,999 ₹47,649 … Read more

ರಾತ್ರಿ ಸಮಯದಲ್ಲಿ ಈ ರೀತಿಯಾದರೆ ನಿರ್ಲಕ್ಷಿಸಬೇಡಿ, ಇದು ಬ್ರೈನ್ ಟ್ಯೂಮರ್ ಲಕ್ಷಣವಾಗಿರಬಹುದು

ಬ್ರೈನ್ ಟ್ಯೂಮರ್ (Brain Tumor) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರಬಹುದು. ಇದೊಂದು ಗಂಭೀರ ಕಾಯಿಲೆ. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ, ರೋಗಿ ಸಾಯಲೂಬಹುದು. ಆದರೆ ಕೆಲವು ಲಕ್ಷಣಗಳ ಮೂಲಕ ಈ ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು ಎಂದರೆ ನಂಬುತ್ತೀರಾ? WhatsApp Group Join Now ಹೌದು. ಬ್ರೈನ್ ಟ್ಯೂಮರ್ ಬರುವ ಸಂದರ್ಭದಲ್ಲಿ, ರಾತ್ರಿ ಮಲಗಿರುವಾಗ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಮತ್ತು ಇವುಗಳನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಇವುಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ ಇದರಿಂದಾಗುವ ಪರಿಣಾಮವನ್ನು … Read more

Horoscope Today : 06 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- WhatsApp Group Join Now ಇಂದು ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಇಂದು ನೀವು ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಏನೇ ಆದರೂ, ಇವುಗಳು ತ್ವರಿತವಾಗಿ ಬಿಸಿ ಚರ್ಚೆಯಾಗಿ ಮಾರ್ಪಡಾಗುತ್ತದೆ. ಆದ್ದರಿಂದ ಅವುಗಳಿಂದ ದೂರವಿರಿ. ಜೊತೆಗೆ, ಚಿಂತೆಯು ನಿಮ್ಮನ್ನು ಕಾಡಲಾರಂಬಿಸುತ್ತದೆ ಮತ್ತು ನಿದ್ದೆಗೆಡಿಸುತ್ತದೆ. ಇದು ನಿಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯ ದುರ್ಬಲತೆಗೆ ಕಾರಣವಾಗುತ್ತದೆ. ಪ್ರಯಾಣ ಯೋಜನೆಗಳೇನಾದರೂ ಇದ್ದಲ್ಲಿ, ಅದನ್ನು ಬೇರೊಂದು ದಿನಕ್ಕೆ ಮುಂದೂಡಿ. ನೆಮ್ಮದಿಯನ್ನು … Read more