ರಾಜ್ಯದಲ್ಲಿ ಹಲವು ತಿಂಗಳಿಂದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಲೇ ಇದೆ. ಅಲ್ಲದೆ ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ಈ ಎಲ್ಲಾ ಬೆಳವಣಿಗೆ ನಡುವೆ ಕೋಡಿಮಠ ಶ್ರೀಗಳು ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಹೌದು, ಸಿಎಂ ಬದಲಾವಣೆ ಚರ್ಚೆ ಜೋರಾಗಿರುವ ಈ ಹೊತ್ತಿನಲ್ಲೇ ಅಚ್ಚರಿ ಭವಿಷ್ಯ ನುಡಿದಿದ್ದಾರೆ. ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಸಂಭವಿಸುವುದಿಲ್ಲ ಎಂದು ನುಡಿದಿದ್ದಾರೆ. ಅಕಸ್ಮಾತ್ ಆದರೂ ಬಜೆಟ್ ಮಂಡನೆ ನಂತರ ಎಂದಿರುವ ಅವರು ಈ ಮೂಲಕ ಡಿಕೆ ಬಣಕ್ಕೆ ಕೊಂಚ ನೆಮ್ಮದಿ ನೀಡುವ ವಿಚಾರ ತಿಳಿಸಿದ್ದಾರೆ.
ಅಲ್ಲದೆ ಈ ರೀತಿ ಯಾಕೆ ಆಗುತ್ತಿದೆ ಅನ್ನೋದಕ್ಕೆ ಕಾರಣವನ್ನೂ ಸಹ ತಿಳಿಸಿದ್ದಾರೆ. ಏನಾದರೂ ಹಾಲುಮತದವರ ಕೈಗೆ ಅಧಿಕಾರ ಸಿಕ್ಕರೆ ಅದರಿಂದ ಬಿಡಿಸಿಕೊಳ್ಳುವುದು ಬಹಳ ಕಷ್ಟ. ಹಾಲುಮತ ಸಮಾಜ ಪ್ರಾಚೀನವಾದದ್ದು, ಅದು ದೈವಗೊಳ್ಳುವ ಸಮಾಜವಾಗಿದೆ. ಅದರಂತೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಪರಿಣಾಮ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದು ಕಷ್ಟಸಾಧ್ಯ ಎಂದು ಹೇಳಿದ್ದಾರೆ.
ಅಲ್ಲದೆ ಸಿದ್ದರಾಮಯ್ಯ ಏನಾದರೂ ತಾವಾಗೇ ಅಧಿಕಾರ ಬಿಟ್ಟುಕೊಟ್ಟರೆ ಬೇರೆಯವರು ಸಿಎಂ ಆಗುವ ಸಂಭವ ಇದೆ. ಅವರು ಸ್ವತಃ ಸಿಎಂ ಕುರ್ಚಿ ಬಿಡದೆ ಇದ್ದರೆ ಅದು ಕಷ್ಟ ಸಾಧ್ಯ ಎಂದಿರುವ ಅವರು. ಯುಗಾದಿ ನಂತರ ಸಿಎಂ ಬದಲಾವಣೆ ಬಗ್ಗೆ ಭವಿಷ್ಯ ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ಆತ್ಮಗಳು ತೊಂದರೆ ಕೊಡುತ್ತಿವೆ..
ಇದೇ ಸಮಯದಲ್ಲಿ ಇನ್ನೊಂದು ಭಯಾನಕ ವಿಷಯವನ್ನೂ ಸಹ ಶ್ರೀಗಳು ತಿಳಿಸಿದ್ದಾರೆ. ಅದುವೇ ಆತ್ಮಗಳಿಂದ ಜಗತ್ತಿಗೆ ಆಗುತ್ತಿರುವ ಸಮಸ್ಯೆ. ಜಗತ್ತಿನಾದ್ಯಂತ ನೀರು, ಬೆಂಕಿಯಿಂದ ಸಾಕಷ್ಟು ಸಾವುಗಳಾಗಿವೆ. ಅವರ ಆತ್ಮಗಳಿಗೆ ಸರಿಯಾದ ರೀತಿಯಲ್ಲಿ ಸಂಸ್ಕಾರ ಮಾಡಿಲ್ಲ. ಅವು ಎಲ್ಲಾ ಕಡೆ ಈಗ ಸಂಚರಿಸುತ್ತಿವೆ. ಇದರಿಂದಾಗಿ ಮನುಕುಲಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ ಎಂದಿದದ್ದಾರೆ.
ಈ ವರ್ಷವೂ ಅಪಾಯ ಇದೆ :
ಈ ವರ್ಷ ಇಬ್ಬರು ದೊಡ್ಡ ವ್ಯಕ್ತಿಗಳು ಸಾಯಬಹುದು. ಜಾಗತಿಕವಾಗಿ ಕೆಲವು ದೇಶಗಳು ನಾಶವಾಗುತ್ತವೆ. ಹವಾಮಾನ್ಯ ವೈಪರೀತ್ಯದಿಂದಲೂ ಸಹ ಸಾವಾಗಲಿವೆ. ಈ ಬಾರಿಯ ಸಂಕ್ರಾಂತಿ ಶುಭ ಕಾಣುತ್ತಿಲ್ಲ. ಮಳೆ ಬೆಳೆ ಚೆನ್ನಾಗಿರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಒಮ್ಮೆ ಆ ಸಮಾಜದ ಕೈಗೆ ಅಧಿಕಾರ ಹೋದರೆ ಮರಳಿ ಪಡೆಯುವುದು ಬಹಳ ಕಷ್ಟ, ಆದರೆ… ಕೋಡಿಮಠ ಶ್ರೀ
WhatsApp Group
Join Now