ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ ಸೌಲಭ್ಯ.! ಅರ್ಹ ರೈತರು ಈ ಯೋಜನೆಯ ಲಾಭವನ್ನು ಹೇಗೆ ಪಡೆದುಕೊಳ್ಳುವುದು.? ನೋಡೋಣ

ನಮಸ್ಕಾರ ಸ್ನೇಹಿತರೇ, ಕೃಷಿ ಕೆಲಸಕ್ಕಾಗಿ ಹಲವಾರು ಬ್ಯಾಂಕಿನಲ್ಲಿ ಸಾಲವನ್ನು ನೀಡುತ್ತಿದ್ದು, ಆದರೆ ಈ ಬ್ಯಾಂಕಿನಲ್ಲಿ ರೈತರಿಗೆ ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತವಾಗಿ ಸಾಲವನ್ನು ನೀಡುತ್ತಿದ್ದು, ಯಾವ ಬ್ಯಾಂಕ್ ನಲ್ಲಿ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ.? ಹಾಗು ಈ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ರೈತರಿಗೆ ಸಹಾಯವಾಗಲೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಯೋಜನೆ ಅಡಿಯಲ್ಲಿ ಸುಮಾರು 5 ಲಕ್ಷ ರೂಪಾಯಿವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು, ಡಿಸಿಸಿ ಬ್ಯಾಂಕ್ ನಲ್ಲಿ ಈ ಸಾಲವನ್ನು ನೀಡಲಾಗುತ್ತಿದ್ದು, ಈ ಯೋಜನೆಯ ಸದುಪಯೋಗವನ್ನು ಅರ್ಹ ಫಲಾನುಭವಿ ರೈತರು ಪಡೆದುಕೊಳ್ಳಿ.

ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?

ಅರ್ಹ ಫಲಾನುಭವಿ ರೈತರಿಗೆ ಡಿಸಿಸಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಸಾಲವನ್ನು ನೀಡುತ್ತಿದ್ದು, ಯಾವ ಯಾವ ಚಟುವಟಿಕೆಗಳಿಗಾಗಿ ಸಾಲವನ್ನು ನೀಡಲಾಗುತ್ತಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ.

  • ಕುರಿ ಸಾಕಾಣಿಕೆ
  • ಹೈನುಗಾರಿಕೆ
  • ಬಡ್ಡಿ ರಹಿತ ಕೃಷಿ ಸಾಲ
  • ವಿವಿಧ ಬೆಳೆಗಳ ಮೇಲೆ ಸಾಲಗಳು

ಹೀಗೆ ಅನೇಕ ಯೋಜನೆಗಳ ಅಡಿಯಲ್ಲಿ ಅರ್ಹ ಫಲಾನುಭವಿ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ಸಾಲವನ್ನು ನೀಡಲಾಗುತ್ತಿದ್ದು, ಈ ಯೋಜನೆಗಳ ಮೇಲೆ ಸಾಲವನ್ನು ಪಡೆದುಕೊಳ್ಳಿ. ಹಾಗೆಯೇ ಕೆಲವೊಂದು ಯೋಜನೆಗಳ ಮೇಲೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ಹಾಗೆ ಈ ಕೃಷಿ ಚಟುವಟಿಕೆಗಳಿಗಾಗಿ ಕೇವಲ 1 – 3% ನಷ್ಟು ಮಾತ್ರ ಬಡ್ಡಿ ಇರಲಿದ್ದು, ಇದರ ಲಾಭವನ್ನು ಅರ್ಹ ರೈತರು ಪಡೆದುಕೊಳ್ಳಿ. ಹಾಗೆಯೇ ನಿಮ್ಮ ಹೊಲದಲ್ಲಿ ಕೃಷಿ ಕೆಲಸಕ್ಕಾಗಿ ಈ ಸಾಲವನ್ನು ಪಡೆದುಕೊಂಡು ಕೃಷಿ ಕೆಲಸವನ್ನು ಆರಂಭಿಸಿ.

ಇದನ್ನೂ ಕೂಡ ಓದಿ : Anganwadi Recruitment 2024 : ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ! ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಹೇಗೆ ಈ ಸಾಲವನ್ನು ಪಡೆದುಕೊಳ್ಳುವುದು.?

ಆಸಕ್ತ ಹಾಗು ಅರ್ಹ ಫಲಾನುಭವಿ ರೈತರು ಕೃಷಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ(Fruits ID) ನೊಂದಾಯಿಸಿಗೊಂಡಿರಬೇಕು. ಹಾಗೆಯೇ ಫ್ರೂಟ್ಸ್ ಐಡಿ ಮತ್ತು ಹೊಲದ ಪಹಣಿ ನಂಬರ್ (ಸರ್ವೆ ನಂಬರ್) ಲಿಂಕ್ ಆಗಿರಲೇಬೇಕು.

ಕೃಷಿ ಸಾಲವನ್ನು ಪಡೆದುಕೊಳ್ಳ ಬಯಸುವವರು ಡಿಸಿಸಿ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಹೊಂದಿರಬೇಕು. ನಿಮ್ಮ ಹೊಲದ ಸರ್ವೆ ನಂಬರ್ ಅಥವಾ ಪಹಣಿಯನ್ನು ನೀಡಿ ನೀವು ಕೃಷಿ ಚಟುವಟಿಕೆಗಳಿಗಾಗಿ ಬಡ್ಡಿರಹಿತ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಅರ್ಹ ರೈತರು ಸಾಲವನ್ನು ಪಡೆದುಕೊಂಡ ನಂತರ ಒಂದು ವರ್ಷದ ಒಳಗಾಗಿ ಮರುಪಾವತಿಸಿ ಮತ್ತೆ ಸಾಲ ಪಡೆದುಕೊಳ್ಳಬಹುದಾಗಿದೆ.

ಸಾಲ ಪಡೆದುಕೊಂಡ ರೈತರು ಒಂದು ವೇಳೆ ಸರಿಯಾದ ಸಮಯದಲ್ಲಿ ರಿನಿವಲ್ ಮಾಡಿಸದೇ ಹೋದರೆ, ಮತ್ತೆ ನೀವು ಪಡೆದುಕೊಂಡಿರುವ ಸಾಲದ ಮೇಲೆ ಬಡ್ಡಿ ದರವನ್ನು ಹಾಕಲಾಗುತ್ತದೆ. ಆದ್ದರಿಂದ ರೈತರು ಸಾಲ ತೆಗೆದುಕೊಂಡ ಒಂದು ವರ್ಷದ ಒಳಗಾಗಿ ಮರುಪಾವತಿಸಿ ಮತ್ತೆ ಸಾಲ ಪಡೆಯುವುದು ಉತ್ತಮ.

ಇದನ್ನೂ ಕೂಡ ಓದಿ : Drought Relief : ರೈತರ ಖಾತೆಗೆ ಮೂರನೇ ಹಂತದ ಬೆಳೆ ವಿಮೆ ಜಮಾ.! ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ.? ಬೇಗ ಚೆಕ್ ಮಾಡಿಕೊಳ್ಳಿ..!

ಕುರಿ ಸಾಕಾಣಿಕೆ ಹಾಗೂ ಹೈನುಗಾರಿಕೆ ಮಾಡುವ ರೈತರಿಗೆ ಸಬ್ಸಿಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದ್ದು, ಸ್ವಲ್ಪ ಮೊತ್ತದ ಹಣ ಕಡಿಮೆ ಮಾಡಿ ಮತ್ತೆ ನೀವು ಪುನಃ ಆ ದುಡ್ಡನ್ನು ಮರುಪಾವತಿ ಮಾಡಬೇಕಾಗುತ್ತದೆ. ಅರ್ಹ ಹಾಗು ಆಸಕ್ತ ರೈತರು ಈ ಸಾಲದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿದುಕೊಳ್ಳ ಬಯಸಿದರೆ, ನಿಮ್ಮ ಸಮೀಪದ ಡಿಸಿಸಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರೈತರ ಕೃಷಿ ಚಟುವಟಿಕೆಗಾಗಿ ನೀಡುವಂತಹ ಸಾಲ ಸೌಲಭ್ಯಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply