ಮೇಷ :-
ಈ ದಿನ ಶುಭದಾಯಕವಾಗಿದೆ ಎಂದು ಗಣೇಶ ಹೇಳುತ್ತಾರೆ. ಮನೆಗೆ ಸಂಬಂಧಿಸಿದ ವಿಚಾರಗಳಲ್ಲಿ ಶಾಂತಿ ಇರುತ್ತದೆ. ನಿಮ್ಮ ಅಭಿರುಚಿಗೆ ತಕ್ಕ ಹಾಗೆ ಮನೆಯ ಒಳ ಸೌಂದರ್ಯದ ಬಗ್ಗೆ ಮಾತುಕತೆ ನಡೆಸುವಿರಿ. ತಾಯಿಯ ಕಡೆಯಿಂದಲೂ ಒಳ್ಳೆಯ ಸುದ್ದಿ ಬರಲಿದೆ. ಅದು ನೀವು ಕೆಲಸದಲ್ಲಿರುವಾಗ ನೆಮ್ಮದಿಯನ್ನು ಕೊಡಬಹುದು.
ಕೆಲಸ ಹೆಚ್ಚಾದರೂ ನಿಮ್ಮ ಮೇಲಾಧಿಕಾರಿಗ ಮತ್ತು ವರಿಷ್ಠರ ಪ್ರಶಂಸೆಗಳಿಂದ ಉತ್ತೇಜನಗೊಳ್ಳುವಿರಿ. ಸರಕಾರಿ ಕೆಲಸದ ನಿಮಿತ್ತ ಪ್ರಯಾಣ ತೆರಳುವಿರಿ. ಅದು ಶುಭದಾಯಕವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ವೃಷಭ :-
ನಿಮಗೆ ದೂರದ ಊರಿನ ಪ್ರಯಾಣ, ಯಾತ್ರಾಸ್ಥಳದ ಭೇಟಿಯ ಸಂಭವವಿದೆ ಎಂದು ಗಣೇಶ ಹೇಳುತ್ತಾರೆ. ನೀವು ಪ್ರಯಾಣಕ್ಕೆ ಸಿದ್ಧತೆ ಮಾಡುತ್ತಿರಬಹುದು ನಿಮ್ಮ ರಜಾದಿನಗಳಲ್ಲಿ ಹೊಸ ಸ್ಥಳಗಳಿಗೆ ಹೋಗುವ ಬಗ್ಗೆ ಯೋಜನೆ ರೂಪಿಸಬಹುದು.ನಿಮ್ಮ ಗ್ರಹಗತಿ ಎಲ್ಲದಕ್ಕೂ ಸಹಾಯ ಮಾಡುತ್ತದೆ. ಹಾಗೂ ಹೊಸ ಕಾರ್ಯಗಳಿಗೆ ಸಿದ್ಧತೆ ನಡೆಸುವಿರಿ. ಪುಣ್ಯಕ್ಷೇತ್ರಗಳಿಗೆ ಹೋಗಲು ಉತ್ತೇಜನ ದೊರಕಬಹುದು ಅಥವಾ ನಿಮ್ಮ ವಿದೇಶಿ ಪ್ರಿಯಮಿತ್ರರಿಂದ ಒಳ್ಳೆಯ ಸುದ್ದಿ ಬರಬಹುದು. ಸ್ವಲ್ಪ ತಲೆ ನೋವು ನಿಮ್ಮನ್ನು ಕಾಡೀತು.
ಮಿಥುನ :-
ಯಾವತ್ತೂ ಹೂವಿನ ಹಾಸಿಗೆ ಹಾಗೆ ಜೀವನ ಮೃದುವಾಗಿರುವುದಿಲ್ಲ. ಇದನ್ನು ನೆನಪಿನಲ್ಲಿಟ್ಟುಕೊಂಡು ಜಾಗ್ರತೆಯಿಂದ ದಿನ ಸಾಗಿಸಿ ಎಂದು ಗಣೇಶ ಹೇಳುತ್ತಾರೆ. ನಿಮ್ಮ ರಕ್ಷಣೆಯನ್ನು ಕ್ಷಣಕಾಲಕ್ಕೂ ಬಿಡದಿರಿ. ಆದಷ್ಟು ಅಪರಿಚಿತರೊಂದಿಗೆ ಪ್ರಯಾಣ ಮಾಡಬೇಡಿ. ನಿಮ್ಮ ಅಭಿರುಚಿಗಳನ್ನು ಹತೋಟಿಯಲ್ಲಿ ಇಟ್ಟುಕೊಂಡಿರಿ. ಇಲ್ಲದಿದ್ದರೆ ಸಿಕ್ಕಹಾಕಿಕೊಳ್ಳುವಿರಿ. ಯಾವುದೇ ಹೊಸ ಕಾರ್ಯ ಪ್ರಾರಂಭಿಸಬೇಡಿ. ನಿಮ್ಮ ವೈದ್ಯಕೀಯ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಿ. ಯಾವುದಾದರೂ ವಿವಾದಗಳಿದ್ದರೆ ಅದರಲ್ಲಿ ತೊಡಗಿಕೊಳ್ಳಬೇಡಿ. ಖರ್ಚಿನಲ್ಲಿ, ಸಿಟ್ಟಿನಲ್ಲಿ ಹಿಡಿತವಿರಲಿ.
ಕರ್ಕಾಟಕ :-
ಇಂದು ನಿಮ್ಮ ರೋಮಾಂಚನ ಒಡನಾಟ, ಸಂತೋಷಭರಿತ ವಿನಿಮಯ, ವಸ್ತುಗಳ ಖರೀದಿ ನಿಮ್ಮನ್ನು ಆನಂದಲೋಕದಲ್ಲಿಡುತ್ತದೆ ಎಂದು ಗಣೇಶ ಹೇಳುತ್ತಾರೆ. ಆದರೆ ಒಂದು ಶುಭದಿನ ನಿಮ್ಮದಾಗಲಿದೆ. ನೀವು ಇಂದು ಕೇವಲ ಸಂಸ್ಕೃತಿ, ಅಭಿರುಚಿ ಇರುವ ದೂರದ ಊರಿನಿಂದ ಬರುವ ಒಬ್ಬರನ್ನು ಸಂಪರ್ಕಿಸುವಿರಿ. ಇದು ನಿಮ್ಮ ಮನಸ್ಸಿಗೆ ಮುದನೀಡಿ ನಿಮಗೆ ಲಾಭತರುತ್ತದೆ. ನಿಮ್ಮ ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ನಿಮಗೆ ಪ್ರಶಂಸೆ, ಗೌರವ ದೊರಕಲಿದೆ. ಈ ದಿನವನ್ನು ಎಲ್ಲರೊಂದಿಗೆ ಖುಷಿಯಿಂದ ಕಳೆಯಿರಿ. ಗ್ರಹಗತಿ ನಿಮ್ಮ ಆರೋಗ್ಯವನ್ನು ಅನುಕೂಲಕರವಾಗಿಸುತ್ತದೆ ಮತ್ತು ಇಂದು ನೀವು ನಾಲ್ಕು ಚಕ್ರದ ವಾಹನ ಖರೀದಿಸಲಿದ್ದೀರಿ.
ಸಿಂಹ :-
ನಿಮ್ಮ ಗ್ರಹಗತಿ ನಿಮಗೆ ಮಧ್ಯಮ ಫಲವನ್ನು ಕೊಡಲಿದೆ. ನಿಮಗೆ ಶಾಂತ ವಾತಾವರಣ ಹಾಗೂ ಕೆಲಸದಲ್ಲಿ ಸಹೋದ್ಯೋಗಿಗಳಿಂದ ಸಹಕಾರ ದೊರೆಯಲಿದೆ ಎಂದು ಗಣೇಶ ಮುನ್ಸೂಚನೆ ನೀಡುತ್ತಾರೆ. ಆದರೂ ದೈನಂದಿನ ಮನೆಯ ಕಾರ್ಯಗಳಲ್ಲಿ ಸ್ವಲ್ಪ ಅಡಚಣೆ ಉಂಟಾಗಬಹುದು. ನಿಮ್ಮ ತಾಯಿಯ ಕಡೆಯಿಂದ ಅಶುಭ ಸುದ್ದಿ ಬರಬಹುದು. ಅಥವಾ ನಿಮ್ಮ ವೈರಿಗಳು ನಿಮ್ಮ ಕೆಲಸದಲ್ಲಿ ಅಡಚಣೆ ಮಾಡಬಹುದು. ಇದು ನಿಮ್ಮನ್ನು ಆತಂಕಕ್ಕೆ ಒಳಪಡಿಸಬಹುದು. ಮತ್ತು ನೀವು ಬೇಸರಪಟ್ಟುಕೊಳ್ಳಬಹುದು.ನಿಮ್ಮ ಮೇಲಾಧಿಕಾರಿಗಳೊಂದಿಗೆ ಅಥವಾ ವರಿಷ್ಠರೊಂದಿಗಿನ ವಾದವನ್ನು ತಪ್ಪಿಸಿ. ಎಲ್ಲವನ್ನೂ ಬಂದರೀತಿಯಲ್ಲೇ ಎದುರಿಸಿ. ದುಡಿಯಿರಿ.
ಕನ್ಯಾ :-
ಹಿತಕರವಾದ ದಿನವು ನಿಮಗಾಗಿ ಕಾದಿದೆ ಎಂದು ಗಣೇಶ ಹೇಳುತ್ತಾರೆ. ಎಲ್ಲವನ್ನೂ ಎದುರಿಸಬೇಕು ಎಂಬ ನೀತಿಯನ್ನು ಅನುಸರಿಸಬೇಕು. ನಿಮ್ಮ ಮಕ್ಕಳ ಮತ್ತು ಪ್ರೀತಿಪಾತ್ರರ ಕುರಿತಂತೆ ನೀವು ಚಿಂತೆಗೊಳಗಾಗಬಹುದು ಮತ್ತು ಇದು ನಿಮಗೆ ಮಾನಸಿಕ ಶಾಂತಿಯನ್ನು ಹಾಳುಮಾಡಬಹುದು. ನಿಮ್ಮ ಆರೋಗ್ಯವು ವಿಶೇಷವಾಗಿ ಉದರ ಸಂಬಂಧಿ ವ್ಯಾಧಿಗಳು ನಿಮ್ಮನ್ನು ಕಾಡಬಹುದು.ನಿಮ್ಮ ವೆಚ್ಚದಲ್ಲಿನ ಅನಿರೀಕ್ಷಿತ ಹೆಚ್ಚಳ ಮತ್ತು ಅತೀಂದ್ರಿಯ ಆಲೋಚನೆಗಳು ಇತ್ಯಾದಿ ನಿಮ್ಮ ಮನಸ್ಸಲ್ಲಿ ತುಂಬಿರುವುದರಿಂದ ನೀವು ಹೊಂದಾಣಿಕೆಯಾಗಲಿ ಹೆಣಗಾಡುವಿರಿ ಇದರಿಂದಾಗಿ ವ್ಯಾಯಾಮ, ಆರೋಗ್ಯ ಮತ್ತು ಕ್ರಿಯಾತ್ಮಕತೆಯನ್ನು ಮುಂತಾದ ವಿಚಾರಗಳನ್ನು ಹಿಂದಕ್ಕೆ ಹಾಕುವಿರಿ. ನಿಮ್ಮ ಈ ಕಷ್ಟದಿಂದ ಮುಕ್ತಿಪಡೆಯಲು ಸ್ನೇಹಿತರ ಒಡನಾಟವು ಒಳ್ಳೆಯ ಔಷಧಿಯಾಗಬಹುದು. ಉಲ್ಲಾಸದಿಂದಿರಿ ಮತ್ತು ಗಂಭೀರ ವಿಷಯಗಳ ಚರ್ಚೆ ಬೇಡ. ಶೇರು ಮಾರುಕಟ್ಟೆಯಲ್ಲಿನ ಹೂಡಿಕೆಯಲ್ಲಿ ಎಚ್ಚರವಿರಲಿ.
ತುಲಾ :-
ಇಂದು ನೀವು ವಿಚಲಿತರಾಗುತ್ತೀರಿ. ಇಂದು ನೀವು ಎಂದಿಗಿಂತ ಹೆಚ್ಚು ಭಾವುಕರಾಗಿರುತ್ತೀರಿ ಮತ್ತು ಕೆಲವು ವಿಚಾರಗಳ ಕುರಿತಂತೆ ಮಾನಸಿಕವಾಗಿ ನೊಂದಿರುತ್ತೀರಿ. ಇದು ವಿವಾಹಕ್ಕೆ ಸಂಬಂಧಿಸಿದ್ದಾಗಿರಬಹುದು , ನಿಮ್ಮ ತಾಯಿಯೊಂದಿಗಿನ ಸಂಬಂಧದ ಕುರಿತಾಗದಿರಬಹುದು ಅಥವಾ ನಿಮ್ಮ ಜೀವನದಲ್ಲಿನ ಅತೀ ಮುಖ್ಯ ಮಹಿಳೆಯ ಕುರಿತಾಗಿರಬಹುದು.ನಿಮ್ಮ ವಿಚಲಿತ ಮನೋಭಾವದಿಂದ ಸಮಾಧಾನ ಪಡೆಯಲು ಪ್ರಾಣಾಯಾಮ ಮತ್ತು ಪ್ರಾರ್ಥನೆ ಮಾಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕಳೆದ ರಾತ್ರಿ ನೀವು ಸರಿಯಾಗಿ ನಿದ್ರಿಸದೇ ಇರಬಹುದು. ಆದ್ದರಿಂದ ಸ್ವಲ್ಪ ನಿದ್ರಿಸಿ. ಪ್ರಯಾಣವನ್ನು ತಪ್ಪಿಸಿ ಇದು ಫಲಪ್ರದವಲ್ಲ. ಕಾನೂನು ಪತ್ರಗಳು, ಆಸ್ತಿ ಅಥವಾ ಕುಟುಂಬ ಪಿತ್ರಾರ್ಜಿತ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರದಿಂದಿರುವಂತೆ ಗ್ರಹಗತಿಗಳು ಸೂಚಿಸುತ್ತವೆ.
ವೃಶ್ಚಿಕ :-
ನಿಮ್ಮ ಕೆಲಸದಲ್ಲಿನ ಅದ್ಭುತ ದಿನದಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಹೊಸ ಯೋಜನೆಗಳು , ಸ್ನೇಹಿತರು ಮತ್ತು ಸಂಬಂಧಿಕರೊಂದಿಗಿನ ಉಲ್ಲಾಸಕರ ಒಡನಾಟ ಮತ್ತು ಖುಷಿ ಹಾಗೂ ಸಂಭ್ರಮದ ಇವೆಲ್ಲವೂ ನಿಮಗಾಗಿ ಕಾದಿರುತ್ತದೆ. ಒಟ್ಟಾರೆ, ಸಂತೋಷ ಹಾಗೂ ಉಲ್ಲಾಸವನ್ನು ಹೊಂದಿರುವ ಅಪರೂಪದ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಏನೇ ಮಾಡಿದರೂ ಫಲಪ್ರದವಾಗಿರುತ್ತದೆ ಮತ್ತು ಇದು ದಿನಪೂರ್ತಿ ನೀವು ನಗುವಂತೆ ಮಾಡುತ್ತದೆ. ಪರಸ್ಪರ ಸಂಬಂಧ ಹಾಗೂ ಅನ್ಯೋನ್ಯತೆಯನ್ನು ಹೊಂದಿರುವ ಸಂಬಂಧಗಳಿಗೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ಅದ್ಭುತ ಪ್ರವಾಸ ತೆರಳಲಿದ್ದೀರಿ. ಹಣಕಾಸು, ಬಂಡವಾಳ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಅದೃಷ್ಟದ ದಿನ. ನಿಮ್ಮ ಪ್ರೀತಿಪಾತ್ರರು ಹಾಗೂ ಸಹೋದ್ಯೋಗಿಗಳೊಂದಿಗೆ ಸಂತೋಷವನ್ನು ಹಂಚಿಕೊಳ್ಳಿ.
ಧನು :-
ನಿಮ್ಮ ಸಂಗಾತಿ ಅಥವಾ ಸಂಬಂಧಿಗಳನ್ನು ನಿಮ್ಮನ್ನು ಆಹ್ವಾನಿಸುವ ಪ್ರಯಾಣವು ನಿಮ್ಮ ದಿನವನ್ನು ಹಾಳುಮಾಡಲಿದೆ ಮತ್ತು ಇದು ನಿಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ ಹಾಗೂ ಕಳೆಗುಂದಿಸುತ್ತದೆ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಗ್ರಹಗತಿಗಳು ನೀರಸ ದಿನವನ್ನು ಹೊಂದಿವೆ ಆದ್ದರಿಂದ ಯಾವ ನಿರೀಕ್ಷೆಯೂ ಬೇಡ. ಎಲ್ಲವೂ ಅವುಗಳ ರೀತಿಯಲ್ಲೇ ಸಾಗುತ್ತಿರಲಿ. ನಿಮ್ಮ ಶ್ರಮ ಹಾಗೂ ಪ್ರಯತ್ನಗಳು ಎಲ್ಲಾ ಕಡೆಗಳಲ್ಲೂ ಅಗತ್ಯವಿದೆ ಮತ್ತು ಇದು ನಿಮ್ಮನ್ನು ಆಯಾಸಗೊಳಿಸುತ್ತದೆಯ ಅವನ/ಅವಳು ಸಿದ್ಧಪಡಿಸಿದ್ದ ರೀತಿಯನ್ನು ಸಾಗಲು ನಿರಾಕರಿಸುವ ಮತ್ತು ಸಹಕಾರ ತೋರದ ಕುಟುಂಬ ಸದಸ್ಯರೊಂದಿಗೆ ಸಿಟ್ಟು ಮಾಡಿಕೊಳ್ಳುವುದನ್ನು ತಪ್ಪಿಸಿ.ಅವರಿಗೆ ಬೇಕಾದ ರೀತಿಯಲ್ಲಿ ಮಾಡಲಿ ಪುಸಲಾಯಿಸುವುದನ್ನು ಮತ್ತು ವ್ಯಥೆ ಪಡುವುದನ್ನು ಬಿಟ್ಟುಬಿಡಿ. ನಿಮ್ಮ ಚಂಚಲ ಮನಸ್ಥಿತಿಯು ನಿಮ್ಮನ್ನು ದೃಢ ನಿರ್ಧಾರ ಕೈಗೊಳ್ಳಲು ಅನುವುಮಾಡಿಕೊಡುವುದಿಲ್ಲ. ಚಿಂತೆ ಬೇಡ. ಇದು ಉತ್ತಮವಾಗಿರುತ್ತದೆ. ವಿಳಂಬವಾಗಿರುವ ನಿರ್ಧಾರವನ್ನು ಇನ್ನೂ ಮುಂದಕ್ಕೆ ಹಾಕಲು ಗ್ರಹಗತಿಗಳೂ ಒತ್ತಾಯಿಸುತ್ತದೆ. ಸರಾಗವಾಗಿ ಸಾಗಿ ಮತ್ತು ವಿಶ್ರಾಂತರಾಗಿ. ವಿದೇಶದಲ್ಲಿನ ಸ್ನೇಹಿತರ ಜೊತೆಗಿನ ವ್ಯವಹಾರವು ಅದೃಷ್ಟ ಮತ್ತು ಚೈತನ್ಯದಿಂದ ತುಂಬಿರುತ್ತದೆ.
ಮಕರ :-
ನಿಮ್ಮ ಪ್ರತೀ ಹೆಜ್ಜೆಯನ್ನು ಗಮನಿಸಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ನೀವು ಸಣ್ಣ ಅಪಘಾತಕ್ಕೆ ಒಳಗಾಗುವ ಸಂಭಾವ್ಯತೆಯಿದೆ.ಈ ದಿನದಲ್ಲಿ ನಿಮಗಾಗಿ ಸಂತಸದ ಕ್ಷಣಗಳು ಕಾದಿರುವುದರಿಂದ ಆಳವಾದ ಉಸಿರುತೆಗೆದುಕೊಳ್ಳಿ ಮತ್ತು ನಗುವನ್ನು ಬೀರಿ. ನಿಮ್ಮ ಕಾರ್ಯವು ಗುರುತಿಸಲ್ಪಡುತ್ತದೆ ಮತ್ತು ಇದು ಅನಿರೀಕ್ಷಿತ ಬಡ್ತಿಗೆ ಹಾದಿಮಾಡಿಕೊಡುವ ಸಾಧ್ಯತೆಯಿದೆ. ಕೊನೆಯಲ್ಲಿ, ನಿಮ್ಮ ಗೌರವ ವೃದ್ಧಿ ಹಾಗೂ ವೃತ್ತಿ ನಿಲುವಿನ ಗೋಚರತೆಯನ್ನು ನೀವು ಕಾಣಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ಸ್ನೇಹಿತರ ಭೇಟಿಯು ನಿಮ್ಮನ್ನು ಇನ್ನಷ್ಟು ಸಂತೋಷಗೊಳಿಸುತ್ತದೆ. ವೈವಾಹಿಕ ಮತ್ತು ಮಾನಸಿಕ ಸಂತೋಷವನ್ನು ನೀವು ಪಡೆದುಕೊಳ್ಳಲಿದ್ದು, ನಿಮ್ಮ ಪ್ರಜ್ವಲತೆಯ ಬಗ್ಗೆ ಜನರು ಪ್ರಶ್ನೆಗ ಕೇಳಿದಾಗ ಉತ್ತರಿಸಲು ಸಿದ್ಧರಾಗಿರಿ.
ಕುಂಭ :-
ನಿಮ್ಮ ಆರೋಗ್ಯದ ಯೋಜನೆಗಳನ್ನು ಅನಗತ್ಯವಾಗಿ ಕಡೆಗಣಿಸಿದ್ದ ವಿಚಾರಗಳನ್ನು ಎದುರಿಸಿ ಮತ್ತು ಮರುಪ್ರಾರಂಭಿಸಿ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಕಾನೂನು ವಿಚಾರಗಳಿಂದ ದೂರವಿರಿ ಮತ್ತು ಅವುಗಳನ್ನು ಮುಂದೂಡಿ. ರುಜುವಾತು ಪತ್ರವನ್ನು ಪೂರ್ಣಗೊಳಿಸದೆ ಹೂಡಿಕೆ ಮಾಡಬೇಡಿ. ಹೆಚ್ಚಿದ ವೆಚ್ಚ, ಕುಟುಂಬ ಸದಸ್ಯರೊಂದಿಗಿನ ಸಣ್ಣ ಜಗಳ ಉಂಟಾಗಲಿವೆ. ಇತರರು ಅವಿವೇಕದಿಂದ ವರ್ತಿಸಿದರೆ, ಅಥವಾ ನಿಮ್ಮ ವಿರುದ್ಧ ವಾಗ್ದಾಳಿ ನಡೆಸಿದರೆ ಶಾಂತಿ ಹಾಗೂ ಸಮಾಧಾನದಿಂದಿರಿ.
ಮೀನ :-
ಅನಿರೀಕ್ಷಿತ ಫಲಪ್ರಾಪ್ತಿಯಾಗಲಿದೆ. ನೀವು ಅದೃಷ್ಟ ಮೀನರಾಶಿಯವರು ಲಾಟರಿಯಲ್ಲಿ ಗೆಲುವು ಸಾಧಿಸಬಹುದು. ಒಟ್ಟಾರೆ ಅದೃಷ್ಟಕರ ಉತ್ತಮ ದಿನವನ್ನು ಗಣೇಶ ಕಾಣುತ್ತಾರೆ. ಮಕ್ಕಳಿಂದ ಶುಭಸುದ್ದಿ ಬರಲಿದೆ. ಮತ್ತು ಅವರನ್ನು ಅಥವಾ ನಿಮ್ಮ ಹಳೆಯ ಸ್ನೇಹಿತರ ಭೇಟಿಯಿಂದ ಸಂತಸಗೊಳ್ಳುವಿರಿ. ಹೊಸ ಮೈತ್ರಿಯು ಕೂಡ ನಿಮಹೆ ಲಾಭದಾಯಕವಾಗಲಿಗೆ. ಮತ್ತು ದೀರ್ಘಾವಧಿಯವರೆಗೂ. ಸಾಮಾಜಿಕ ಕಾರ್ಯಗಳಿಗಾಗಿ ನೀವು ಪ್ರಯಾಣ ಬೆಳೆಸಬೇಕಾಗಬಹುದು. ಇದು ಹರ್ಷದಾಯಕವಾಗಿರುತ್ತದೆ ಮತ್ತು ವ್ಯವಹಾರದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿರುತ್ತದೆ. ಇದಲ್ಲದೆ, ನಿಮ್ಮ ಪ್ರೀತಿಪಾತ್ರರೊಂದಿಗೆ ಸುಂದರ ಪ್ರವಾಸಿತಾಣಗಳಿಗೆ ಹೋಗಬಹುದು. ಆನಂದಿಸಿ,
Horoscope Today : ಡಿಸೆಂಬರ್ 23 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now