Horoscope Today : 18 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಈ  ದಿನವು ಅತ್ಯಂತ ಉಲ್ಲಾಸಕರ ದಿನವಾಗಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಸಾಮಾಜಿಕ ಸಮಾರಂಭಗಳಲ್ಲಿ/ಆಚರಣೆಗಳಲ್ಲಿ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಭಾಗಿಯಾಗುವಿರಿ. ಸ್ನೇಹಿತರಿಂದ ಸಹಾಯ ಮತ್ತು ಲಾಭವನ್ನು ನಿರೀಕ್ಷಿಸಿ. ಅವರನ್ನು ಮನರಂಜಿಸಲು ನೀವು ಖರ್ಚುಮಾಡಬೇಕಾಗಿ ಬರಬಹುದು.

ಹಿರಿಯರು ವಿಶೇಷ ಪ್ರೀತಿ ಮತ್ತು ಅಕ್ಕರೆಯನ್ನು ತೋರುತ್ತಾರೆ. ನಿಮ್ಮ ಆತ್ಮೀಯತೆಯು ಉನ್ನತ ಮಟ್ಟಕ್ಕೆ ಸಾಗುವ ನಿರೀಕ್ಷೆಯಿದೆ. ಸುಂದರ ಪ್ರದೇಶಗಳಿಗೆ ಭೇಟಿ ನೀಡಲಿರುವಿರಿ. ಅನಿರೀಕ್ಷಿತ ಧನಲಾಭ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮಕ್ಕಳಿಂದ ಪ್ರಯೋಜನ ಉಂಟಾಗಬಹುದು.

ವೃಷಭ :-

ಕಚೇರಿ ಕೆಲಸಗಳಿಗೆ ತೆರಳುವವರತ್ತ ಅದೃಷ್ಟವು ನಗುಬೀರುತ್ತಿರುವುದನ್ನು ಗಣೇಶ ಕಾಣುತ್ತಾರೆ. ಹೊಸ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಮೇಲಾಧಿಕಾರಿಗಳು ಅನುಕೂಲಕರವಾಗಿರಲಿದ್ದಾರೆ ಮತ್ತು ಬಡ್ತಿಯ ಮೂಲಕ ನಿಮ್ಮನ್ನು ಪ್ರಶಂಸಿಸಬಹುದು. ಮನೆಯ ವಾತಾವರಣವು ಸಂತಸದಿಂದ ಕೂಡಿರುವ ಭರವಸೆಯಿದೆ. ಅಪೂರ್ಣಗೊಂಡಿರುವ ಕಾರ್ಯಗಳು ತೃಪ್ತಿಕರವಾಗಿ ಪೂರ್ಣಗೊಳ್ಳಲಿವೆ. ಕಚೇರಿ ಅನುಕೂಲಗಳು ಉಂಟಾಗಲಿವೆ..

ಮಿಥುನ :-

ಕೆಲವು ಕಾರಣಗಳಿಂದ ಇಂದು ನೀವು ಗೊಂದಲದಲ್ಲಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಕೆಲಸದಲ್ಲಿ ನಿತ್ರಾಣ, ಜಡತ್ವ ಮತ್ತು ನಿರಾಸಕ್ತಿಯನ್ನು ಹೊಂದಿರುವಿರಿ. ಉದರ ಸಮಸ್ಯೆ ಉಂಟಾಗಬಹುದು. ದುಂದುವೆಚ್ಚದ ಸಾಧ್ಯತೆಯಿದೆ. ವ್ಯವಹಾರವು ನಿರೀಕ್ಷೆಯಂತೆ ಸಾಗುವುದಿಲ್ಲ. ಸಹೋದ್ಯೋಗಿಗಳ ವರ್ತನೆಯು ಕಷ್ಟಕರ ರೀತಿಯಲ್ಲಿರುತ್ತದೆ ಮತ್ತು ಅಸಹಕಾರ ತೋರಬಹುದು. ಮಕ್ಕಳಿಗೆ ಸಂಬಂಧಿಸಿ ಆತಂಕಗಳು ನಿಮ್ಮನ್ನು ಇನ್ನಷ್ಟು ಕುಗ್ಗಿಸಬಹುದು. ಶ್ರಮ ಮತ್ತು ಪ್ರಯತ್ನಗಳು ನಿರರ್ಥಕವಾಗಲಿವೆ. ಕಚೇರಿ ಅಸಾಮಾಧಾನಗಳು ನಿಮ್ಮ ಚಿಂತೆಯನ್ನು ಇನ್ನಷ್ಟು ಹೆಚ್ಚಿಸಲಿವೆ.

ಕರ್ಕಾಟಕ :-

ಇಂದು ನೀವು ಏನೇ ಮಾಡುತ್ತಿದ್ದರೂ ಅದರಲ್ಲಿ ಹೆಚ್ಚು ಶಾಂತ ಹಾಗೂ ಜಾಗರೂಕತೆಯಿಂದ ಇರಬೇಕು. ಮನೆಯೊಳಗಿನ ಕಲಹವನ್ನು ತಪ್ಪಿಸಿ. ಇದು ನಿಮ್ಮನ್ನು ತೊಂದರೆಗಳಿಂದ ದೂರಮಾಡುತ್ತದೆ. ಅನಿಯೋಜಿತ ವೆಚ್ಚಗಳಿಗೆ ಸಿದ್ಧರಾಗಿರಿ. ಅನೈತಿಕ ಮತ್ತು ಕಾನೂನುಬಾಹಿರ ಕಾರ್ಯಗಳಿಂದ ದೂರವಿರುವಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ಪ್ರಾರ್ಥನೆ ಮತ್ತು ಧ್ಯಾನವು ನಿಮಗೆ ಸಹಕಾರಿಯಾಗಲಿದೆ..

ಸಿಂಹ :-

ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಅಸಮಾಧಾನವು ನಿಮ್ಮಿಬ್ಬರ ಸಿಡುಕಿಗೆ ಕಾರಣವಾಗಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಂಗಾತಿಯು ವ್ಯಾಧಿಯಿಂದ ನರಳಬಹುದು. ನಿಮ್ಮ ಉದ್ಯಮ ಪಾಲುದಾರರು ಹಾಗೂ ಜೊತೆಗಾರರೊಂದಿಗೆ ವ್ಯವಹರಿಸುವಾಗ ಶಾಂತಿ ಹಾಗೂ ಸಮಾಧಾನದಿಂದಿರಿ. ನಿರುಪಯುಕ್ತ ಮತ್ತು ಕೃತಘ್ನ ಮಾತುಕತೆಗಳಲ್ಲಿ ಭಾಗಿಯಾಗದಿರಲು ಪ್ರಯತ್ನಿಸಿ. ಕಾನೂನು ವಿಚಾರಗಳು ನಿರೀಕ್ಷಿತ ರೀತಿಯಲ್ಲಿ ಸಾಗುವುದಿಲ್ಲ. ಸಾರ್ವಜನಿಕ ಮತ್ತು ಸಾಮಾಜಿಕ ಪ್ರಶಂಸೆಗಳು ನಿಮ್ಮತ್ತ ಬರುವ ಸಾದ್ಯತೆಯಿಲ್ಲ.

ಕನ್ಯಾ :-

ಈ ದಿನವು ಆನಂದಕರ ದಿನವಾಗಲಿದೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ನೀವು ಎದುರುನೋಡಬಹುದು. ದಿನಪೂರ್ತಿ ನೀವು ಹೆಚ್ಚು ಉತ್ಸಾಹದಿಂದಿರುತ್ತೀರಿ. ಎಲ್ಲವೂ ನಿಮಗೆ ಸಂತೋಷ ಮತ್ತು ಸಂತೃಪ್ತಿಯನ್ನು ನೀಡುವ ನಿರೀಕ್ಷೆಯಿದೆ. ನೀವು ಆಹ್ಲಾದಕರ ಹಾಗೂ ಉಲ್ಲಾಸದಿಂದಿರುತ್ತೀರಿ. ನೀವು ತೊಂದರೆಗೊಳಪಟ್ಟಿದ್ದರೆ, ಚೇತರಿಕೆ ಕಾಣುವಿರಿ. ಲಾಭ ಮತ್ತು ಜನಪ್ರಿಯತೆಯು ಹೆಚ್ಚಳಗೊಳ್ಳುವ ನಿರೀಕ್ಷೆಯಿದೆ. ಸಹೋದ್ಯೋಗಿಗಳೊಂದಿಗೆ ಆರೋಗ್ಯಕರ ಮತ್ತು ಹಿತಕರ ಸಾಮರಸ್ಯವನ್ನು ಗ್ರಹಗತಿಗಳು ಯೋಜಿಸಿವೆ. ಮನೆಯಿಂದ ಸುಖಕರ ತರಂಗಗಳು ಬರುವಂತಿವೆ.

ತುಲಾ :-

ಈ ದಿನವು ಎಂದಿನಂತೆಯೇ ಸಾಗುತ್ತದೆ. ಯಾವುದೇ ವಿಶೇಷವು ಸಂಭವಿಸುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ಮಕ್ಕಳಿಗೆ ಸಂಬಂಧಿಸಿದ ವಿಚಾರಗಳು ನಿಮ್ಮನ್ನು ಆತಂಕದಲ್ಲಿರಿಸಬಹುದು. ನೀವು ವಿದ್ಯಾರ್ಥಿಯಾಗಿದ್ದಲ್ಲಿ ನಿಮ್ಮ ಓದಿನಲ್ಲಿ ಏಕಾಗ್ರತೆಯನ್ನು ಪಡೆಯಲು ನಿಮಗೆ ಕಷ್ಟವಾಗಬಹುದು. ನಿರರ್ಥಕ ಮತ್ತು ವಿವಾದಿತ ಚರ್ಚೆಗಳಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ಗೌರವಕ್ಕೆ ಚ್ಯುತಿ ಬರಬಹುದು. ಹೊಸ ಕಾರ್ಯಗಳನ್ನು ಮುಂದೂಡಿ. ಪ್ರಯಾಣವನ್ನು ತಪ್ಪಿಸಿ. ಆಪ್ತ ಸ್ನೇಹಿತರೊಂದಿಗೆ ಮುಖಾಮುಖಿಯಾಗುವ ಸಾಧ್ಯತೆಯಿದೆ.

ವೃಶ್ಚಿಕ :-

ಇಂದು ನೀವು ಮಾನಸಿಕವಾಗಿ ಆತಂಕ ಹಾಗೂ ಕಿರಿಕಿರಿಯಿಂದ ಕೂಡಿರುತ್ತೀರಿ, ದೈಹಿಕವಾಗಿ ಅನಾರೋಗ್ಯ ಹೊಂದಿರುತ್ತೀರಿ. ಶಾಂತಿ ಹಾಗೂ ಸಮಾಧಾನದಿಂದಿದ್ದು, ವಿವೇಚನೆಯಿಂದ ಕಾರ್ಯನಿರ್ವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳು ನಿಮ್ಮ ಬಗ್ಗೆ ಅತೀ ಪ್ರೀತಿಯನ್ನು ಹೊಂದಿರುವುದಿಲ್ಲ ಮತ್ತು ನಿಮ್ಮನ್ನು ಅರ್ಥೈಸಿಕೊಳ್ಳಲಾರರು. ಹಣಕಾಸು ನಷ್ಟ ಉಂಟಾಗಲಿದೆ. ಪ್ರಮುಖ ದಾಖಲೆಗಳಿಗೆ ಸಹಿ ಹಾಕುವುದನ್ನು ತಪ್ಪಿಸಿ..

ಧನು :-

ಆಧ್ಯಾತ್ಮಜ್ಞಾನ ಮತ್ತು ಅತೀಂದ್ರಿಯಗಳ ಆಸಕ್ತಿಯಲ್ಲಿ ಇಂದು ದಿನವನ್ನು ಕಳೆಯುವ ಸಾಧ್ಯತೆಯಿದೆ ಮತ್ತು ಇದರಿಂದ ಅಗಾಧ ಸಂತೋಷವನ್ನು ಪಡೆದುಕೊಳ್ಳುವಿರಿ.ಸಹೋದರರು ಮತ್ತು ಸಹೋದರಿಯರು ಇಂದು ಸ್ನೇಹಪರ ಮತ್ತು ಆತ್ಮೀಯತೆಯಿಂದ ಇರುತ್ತಾರೆ.ಹೊಸ ಕಾರ್ಯಗಳನ್ನು ಮತ್ತು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಂದು ಸೂಕ್ತ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಸ್ನೇಹಿತರು ಮತ್ತು ಜೊತೆಗಾರರೊಂದಿಗೆ ಖುಷಿಭರಿತ ಸ್ನೇಹಕೂಟದ ಸಂಭವವಿದೆ. ಗ್ರಹಗತಿಗಳು ಈ ದಿನ ನಿಮಗೆ ಗೆಲುವಿನ ಸೂಚನೆ ನೀಡುತ್ತವೆ. ನಿಮ್ಮ ಸ್ಪರ್ಧಿಗಳನ್ನು ಸೋಲಿಸುತ್ತೀರಿ. ಸಂತಸಭರಿತ ಪ್ರವಾಸ ಅಥವಾ ತಿರುಗಾಟದ ಸಾಧ್ಯತೆಯಿದೆ. ನಿಮ್ಮ ಘನತೆ ಮತ್ತು ಕೀರ್ತಿ ವರ್ಧಿಸಲಿದೆ.

ಮಕರ :-

ಶೇರು ಮಾರುಕಟ್ಟೆಯಲ್ಲಿನ ಬಂಡವಾಳವು ನಿಮಗೆ ಅನಿರೀಕ್ಷಿತ ಫಲವನ್ನು ನೀಡುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ಅನಾರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಬಹುದು. ಮನೆಯ ವಾತಾವರಣವು ಅತ್ಯುತ್ತಮ ರೀತಿಯಲ್ಲಿರುವುದಿಲ್ಲ. ಗೃಹಿಣಿಯರು ಅತೃಪ್ತಿ ಮತ್ತು ಆತಂಕಕ್ಕೆ ಒಳಗಾಗುವಿರಿ. ಮಕ್ಕಳು ತಮ್ಮ ಓದಿನಲ್ಲಿ ಎಂದಿಗಿಂತ ಹೆಚ್ಚಿನ ಶ್ರಮ ಪಡಬೇಕಾಗಬಹುದು. ಅನಾರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಕಣ್ಣಿನ ವ್ಯಾಧಿ ಉಂಟಾಗುವ ಸಂಭವವಿದೆ. ನಿಮ್ಮ ಆರೋಗ್ಯಕರ ದೃಷ್ಟಿಯು ನಿಮ್ಮ ಮನದಲ್ಲಿ ಲಗ್ಗೆಯಿಟ್ಟ ಋಣಾತ್ಮಕತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ದುರಾಕ್ರಮಣದ ಚಲನೆ, ಅಪಾಯ ಕೈಗೆತ್ತಿಕೊಳ್ಳುವಿಕೆ ಮುಂತಾದವುಗಳಿಗೆ ಈ ದಿನ ಉತ್ತಮವಾಗಿದೆ.

ಕುಂಭ :-

ಈ ದಿನಪೂರ್ತಿ ನೀವು ತಾಜಾ ಹಾಗೂ ಉಲ್ಲಾಸದಿಂದಿರುವುದನ್ನು ಗಣೇಶ ಕಾಣುತ್ತಾರೆ. ಗ್ರಹಗತಿಗಳು ಲಾಭ ಮತ್ತು ಪ್ರಯೋಜನಗಳನ್ನು ನೀಡುತ್ತದೆ. ಕುಟುಂಬ ಸದಸ್ಯರ ಜೊತೆ ಸಂತಸಭರಿತ ತಿರುಗಾಟಕ್ಕೆ ತೆರಳುವ ಸಾಧ್ಯತೆಯಿದೆ. ಇಂದು ನೀವು ಸ್ಪಷ್ಟ ಮನಸ್ಸು ಹಾಗೂ ಆಧ್ಯಾತ್ಮ ಸುಧಾರಿತ ಮನಸ್ಥಿತಿಯನ್ನು ಹೊಂದಿರುತ್ತೀರಿ. ಸ್ನೇಹಿತರು ಮತ್ತು ಸಂಬಂಧಿಕರಿಂದ ಉಡುಗೊರೆ ಮತ್ತು ಬಹುಮಾನಗಳು ಸಿಗಲಿದೆ. ಎಲ್ಲಾ ನಕಾರಾತ್ಮಕತೆಗಳಿಂದ ದೂರವಿರುವಂತೆ ಗಣೇಶ ನಿಮ್ಮನ್ನು ಒತ್ತಾಯಿಸುತ್ತಾರೆ. ಈ ದಿನವು ವೈವಾಹಿಕ ಸಂತೋಷವನ್ನು ನೀಡುವ ಭರವಸೆಯಿದೆ.

ಮೀನ :-

ಇಂದು ನಿಮ್ಮಲ್ಲಿ ಏಕಾಗ್ರತೆ ಮತ್ತು ಗಮನದ ಕೊರತೆ ಉಂಟಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಖಿನ್ನತೆ ಮತ್ತು ಅನಾಸಕ್ತಿ ನಿಮ್ಮನ್ನು ಕುಗ್ಗಿಸುತ್ತದೆ. ಧಾರ್ಮಿಕ ವಿಚಾರಗಳಿಗಾಗಿ ಸಾಕಷ್ಟು ಖರ್ಚು ಮಾಡಲಿದ್ದೀರಿ. ಬಂಡವಾಳ ಹೂಡಿಕೆಯ ವೇಳೆ ವಿವೇಚನೆಯಿಂದಿರುವ ಅಗತ್ಯವಿದೆ. ಮನೆಯ ಸದಸ್ಯರೊಂದಿಗೆ ಸಣ್ಣ ಸಂಘರ್ಷ ನಡೆಯುವ ಸಾಧ್ಯತೆಯಿದೆ ಮತ್ತು ನಂತರ ಅಲ್ಪಕಾಲ ದೂರವಾಗಬಹುದು. ಸಣ್ಣ ಲಾಭದಲ್ಲಿ ಸಾಗಿದ ನಂತರ ನಿಮಗೆ ಅಗಾಧ ನಷ್ಟ ಉಂಟಾಗಬಹುದು.ಕಾನೂನು ವಿಚಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯವಿದೆ. ಪ್ರಾರ್ಥನೆ ಮತ್ತು ಧ್ಯಾನವು ನಿಮ್ಮನ್ನು ದಿನಪೂರ್ತಿ ನೋಡಿಕೊಳ್ಳುತ್ತದೆ.

WhatsApp Group Join Now

Spread the love

Leave a Reply