Horoscope Today : 13 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ನಿಮ್ಮ ವಾರ್ಡ್‌ರೋಬ್ ಮತ್ತು ಆಭರಣ ಪೆಟ್ಟಿಗೆಯು ಇಂದು ಬದಲಾವಣೆಗೊಳ್ಳುವ ಸಾಧ್ಯತೆಯಿದೆ. ಸ್ನೇಹಿತರೊಂದಿಗೆ ಶಾಪಿಂಗ್ ತೆರಳುವಿರಿ. ಇದು ತಿನ್ನುವ ಶಾಪಿಂಗ್ ತೆರಳುವ ಮತ್ತು ಸಂಭ್ರಮಿಸುವ ಸಮಯ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ಮಧ್ಯಾಹ್ನದ ವರೆಗೆ ಶಾಪಿಂಗ್ ಮಾಡಿದ ನಂತರ, ನಿಮ್ಮ ವೆಚ್ಚವು ಮಿತಿಮೀರಿದೆ ಎಂದು ನಿಮಗೆ ಅನಿಸಬಹುದು.

ಸಾಮಾಜಿಕ ಘನತೆ ಮತ್ತು ಸ್ಥಾನಮಾನದಲ್ಲಿ ವೃದ್ಧಿಯಾಗಲಿಗದೆ. ಕಷ್ಟಕರ ಮುಂಜಾನೆಯು ಉತ್ತಮವಾಗಿರುವಂತೆ ಅನಿಸುತ್ತದೆ, ಆದರೂ ಸಂಜೆಯ ವೇಳೆ ನಿರುತ್ಸಾಹ ಹೊಂದಬಹುದು. ನೀವು ಭೇಟಿ ಮಾಡುವ ಹೊಸ ವ್ಯಕ್ತಿಗಳೊಂದಿಗೆ ಸ್ನೇಹ ಸಂಪಾದಿಸುವ ಮುನ್ನ ಎರಡೆರಡು ಬಾರಿ ಯೋಚಿಸಿ. ನಿಮ್ಮ ಪ್ರತಿಸ್ಪರ್ಧಿಗಳು ನಿಮ್ಮ ಮೇಲೆಯೇ ಕಣ್ಣಿಟ್ಟಿರುವುದರಿಂದ ಅವರ ಬಗ್ಗೆ ಎಚ್ಚರವಹಿಸಿ. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.

ವೃಷಭ :-

ಉದ್ಯಮಿಗಳು ಈ ದಿನವು ಭರವಸೆಯ ದಿನವಾಗಿರುವುದರಿಂದ ಲಾಭಗಳ ಮಳೆಗೆರೆಯಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಉದ್ಯಮಕ್ಕೆ ಸಂಬಂಧಿಸಿ ನೀವು ನಿಮ್ಮ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುತ್ತೀರಿ ಮತ್ತು ನಿಮ್ಮೊಳಗೆ ಗೆಲುವಿನ ಸನ್ನಿವೇಶವನ್ನು ಸೃಷ್ಟಿಸುತ್ತೀರಿ. ನಿಮ್ಮ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲು ಸಂತಸವನ್ನು ಹೊಂದಿರುವುದರಿಂದ, ಅವರಲ್ಲಿ ಬೆಂಬಲವನ್ನು ಕೇಳಲು ಹಿಂಜರಿಯಬೇಡಿ. ನೀವು ನಿಮ್ಮ ಸ್ನೇಹಿತರೊಂದಿಗೆ ಸಿನಿಮಾ ನೋಡುವ ಅಥವಾ ದೂರದ ಪ್ರವಾಸಿ ತಾಣಕ್ಕೆ ತೆರಳುವ ಕುರಿತು ಯೋಜನೆ ರೂಪಿಸುವುದರಿಂದ ಸಂಜೆಯ ವೇಳೆ ಅವರೊಂದಿಗೆ ಸಂತಸಕರ ಸಮಯವನ್ನು ಕಳೆಯುವಿರಿ.

ಮಿಥುನ :-

ಈ ದಿನವು ನಿಮಗೆ ಸಾಧಾರಣ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಕಾರ್ಯಗಳ ಮುಂದೂಡುವಿಕೆಯಿಂದಾಗಿ ಉಂಟಾದ ಪ್ರಾರಂಭಿಕ ತೊಡಕುಗಳನ್ನು, ನಿಯಮಿತ ಸಾಮಾಜಿಕ ಸಂವಾದ ಮತ್ತು ಮಕ್ಕಳ ಕುರಿತಾದ ನಿಮ್ಮ ಚಿಂತೆಗಳನ್ನು ಎದುರಿಸಿದ ನಂತರ, ಸಂಜೆಯನ್ನು ನೀವು ಆನಂದಿಸುವಿರಿ. ಮತ್ತು ಇದು ನಿಮಗೆ ಸಮಾಧಾನ ಹಾಗೂ ಶಾಂತಿಯನ್ನು ನೀಡುತ್ತದೆ. ಮನೆಯಲ್ಲಿನ ಸ್ನೇಹಪರ ವಾತಾವರಣವು ಕೆಲವು ಕ್ರಿಯಾತ್ಮಕ ಕಾರ್ಯಗಳನ್ನು ಮಾಡಲು ನಿಮಗೆ ಪ್ರಚೋದನೆ ನೀಡುತ್ತದೆ. ಇಂದು ಸಾಮಾಜಿಕ ಮನ್ನಣೆ ದೊರೆಯಲಿದೆ ಮತ್ತು ಆರ್ಥಿಕ ಲಾಭ ಉಂಟಾಗಲಿದೆ.

ಕರ್ಕಾಟಕ :-

ಇಂದು ನೀವು ತೀವ್ರ ಒತ್ತಡಕ್ಕೆ ಒಳಗಾಗುವಿರಿ ಮತ್ತು ಕಿರಿಕಿರಿ ಹಾಗೂ ನಿರುತ್ಸಾಹವು ನಿಮ್ಮ ಸುತ್ತಲೂ ಆವರಿಸಲಿದೆ. ನಿಮ್ಮ ಚಂಚಲ ಮನಸ್ಸನ್ನು ನಿಯಂತ್ರಣದಲ್ಲಿರಿಸಿ, ದೃಢ ನಿರ್ಘಾರ ಕೈಗೊಳ್ಳುವಿಕೆಯನ್ನು ಕಾಪಾಡಿಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಈ ದಿನವು ಕಚೇರಿ ಕೆಲಸಗಳಿಗೆ ಲಾಭದಾಯಕವಲ್ಲದ ಕಾರಣ ನಿಮ್ಮ ಪ್ರಯಾಣ ಯೋಜನೆಗಳನ್ನು ಮರುನಿಗದಿಪಡಿಸಿ. ನಿಮ್ಮ ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯಿದೆ. ಅವರ ಬಗ್ಗೆ ತುಂಬಾ ಕಾಳಜಿವಹಿಸಿ. ಇಂದು ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಿದರೆ ಅದು ಯಶಸ್ವಿಯಾಗುವುದಿಲ್ಲ. ಸಂಗೀತ ಕೇಳಿ, ಲವಲವಿಕೆಯ ನೃತ್ಯ ಮಾಡಿ; ಇದು ನಿಮ್ಮನ್ನು ಶಾಂತಿಯಲ್ಲಿರಿಸುತ್ತದೆ. ಮತ್ತು ನಿಮಗೆ ವಾತಾವರಣವನ್ನು ಸಮಾಧಾನದಲ್ಲಿರಿಸಲು ಸಹಕರಿಸುತ್ತದೆ.

ಸಿಂಹ :-

ಹೊಸ ಯೋಜನೆಗಳನ್ನು ಪ್ರಾರಂಭಿಸುವ ಆಲೋಚನೆಯಿದ್ದಲ್ಲಿ, ಅದು ಇಂದು ಪ್ರಾರಂಭಗೊಳ್ಳಲೇಬೇಕು ಎಂಬುದಾಗಿ ಗಣೇಶ ಹೇಳುತ್ತಾರೆ. ಇದೇ ಸಮಯಕ್ಕೆ, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಇದು ಅನುಕೂಲಕರ ದಿನ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು ಅಥವಾ ದೇವಾಲಯಗಳಿಗೆ ತೆರಳಬಹುದು. ಮಧ್ಯಾಹ್ನದ ವೇಳೆಗೆ ನೀವು ಹೆಚ್ಚು ಭಾವೋದ್ವೇಗಕ್ಕೆ ಒಳಗಾಗಬಹುದು ಮತ್ತು ಇದು ನಿಮ್ಮನ್ನು ಖಿನ್ನತೆ ಹಾಗೂ ಅಸಮಾಧಾನದಲ್ಲಿರಿಸಲಿದೆ. ಇಂದು ನಿಮ್ಮ ತಾಯಿಯ ಆರೋಗ್ಯವು ಉತ್ತಮವಾಗಿರುವುದಿಲ್ಲ. ಮನೆ ಅಥವಾ ಆಸ್ತಿಗೆ ಸಂಬಂಧಿಸಿ ವ್ಯವಹಾರವನ್ನು ಅಂತಿಮಗೊಳಿಸಲು ಈ ದಿನವನ್ನು ಆಯ್ದುಕೊಳ್ಳಬೇಡಿ. ಎಚ್ಚರಿಕೆಯ ದಿನವನ್ನು ಹೊಂದಿರಿ.

ಕನ್ಯಾ :-

ಮೌನ ಇಂದು ನಿಮಗೆ ನೀಡಿರುವ ಪದವಾಗಿದೆ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಕಣ್ಣ ಮತ್ತು ಕಿವಿ ತೆರೆದಿರಲಿ ಆದರೆ, ಬಾಯಿ ಮಾತ್ರ ಮುಚ್ಚಿರಲಿ. ಖಂಡಿತವಾಗಿಯೂ ನಿಮ್ಮ ದಿನ ಶಾಂತಿಯಿಂದ ಸಾಗಲಿದೆ.ಆತುರಪಟ್ಟರೆ ಕೆಲಸ ಹಾಳಾಗುತ್ತದೆ. ಆದ್ದರಿಂದ ಪೂರ್ವ ಅಧ್ಯಯನವಿಲ್ಲದೆ ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಬೇಡಿ. ಆರೋಗ್ಯಕ್ಕೆ ಸಂಬಂಧಿಸಿಯು ಇಂದು ಸಾಧಾರಾಣ ದಿನವಾಗಿದೆ. ಮನೆಯಲ್ಲಿನ ವಿರಾಮದ ಅವಧಿಯಲ್ಲಿ ನೀವು ಕುಟುಂಬಕ್ಕೆ ಸಂಬಂಧಿಸಿದ ಬೌದ್ಧಿಕ ಮತ್ತು ಮುಖ್ಯ ಚರ್ಚೆಗಳನ್ನು ಪ್ರಾರಂಭಿಸುವಿರಿ. ನಿಮ್ಮ ಕಷ್ಟಪಟ್ಟು ಸಂಪಾದಿಸಿರುವ ಹಣವನ್ನು ಹೂಡಿಕೆ ಮಾಡಲು ಇದು ಉತ್ತಮ ಸಮಯ. ಮನಮೋಹಕ ಪ್ರವಾಸಿ ತಾಣಗಳಿಗೆ ತೆರಳಲು ಯೋಜನೆ ರೂಪಿಸುವ ಮೂಲಕ ನಿಮ್ಮ ಸಂಜೆಯನ್ನು ಕಳೆಯಿರಿ.

ತುಲಾ :-

ಇಂದು ನೀವು ಸಮತೋಲನ ಹಾಗೂ ನಿಲುವಿನಿಂದ ಕೂಡಿರುತ್ತೀರಿ. ಮುಂಜಾನೆಯ ನಡಿಗೆ ಅಥವಾ ಜಾಗಿಂಗ್ ತೆರಳಿ ನೀವು ನಿರಾಳತೆಯನ್ನು ಅನುಭವಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಉಡುಪು ಮತ್ತು ಸೌಂದರ್ಯ ಸಾಧನಗಳೊಂದಿಗೆ ನಿಮ್ಮನ್ನು ನೀವು ಅಲಂಕರಿಸಿ ಆದರೆ, ಇದೇ ಸಮಯಕ್ಕೆ ಅನಗತ್ಯ ವಸ್ತುಗಳಿಗೆ ವೆಚ್ಚಮಾಡುವುದನ್ನು ತಪ್ಪಿಸಲು ನಿಮ್ಮ ಕಿಸೆಯ ಮೇಲೆಯೂ ಕಣ್ಣಟ್ಟಿರಿ. ನಿಮ್ಮ ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವಂತಹ ಸಮಯವನ್ನು ನೀವು ಇಂದು ಹೊಂದುವಿರಿ. ನಿಮ್ಮ ಅಹಂ ನಿಮ್ಮ ಕಾರ್ಯಸ್ಥಳದಲ್ಲಿ ಆವರಿಸದಂತೆ ನೋಡಿಕೊಳ್ಳಿ. ಹೊಂದಾಣಿಕೆ ಮತ್ತು ರಾಜಿಯು ಜನರ ಹೃದಯವನ್ನು ಗೆಲ್ಲುವ ಹಾದಿಯಾಗಿದೆ.

ವೃಶ್ಚಿಕ :-

ನಿಮ್ಮ ಗ್ರಹಗತಿಗಳು ಇಂದು ನಿಷ್ಕ್ರಿಯವಾಗಿರುವ ಸಾಧ್ಯತೆಯಿದೆ. ನಿಮ್ಮ ನಿರಾಶಾವಾದದ ವರ್ತನೆಯನ್ನು ದೂರವಿರಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಕಾನೂನು ನ್ಯಾಯಾಲಯ ವಿಚಾರಗಳು ಅದರದೇ ಹಂತದಲ್ಲಿ ಸಾಗಲಿ. ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾದ್ಯತೆಯಿರುವುದರಿಂದ ಅದರ ಬಗ್ಗೆ ಕಾಳಜಿ ವಹಿಸಿ. ಏನೇ ಆದರೂ, ದಿನದ ದ್ವಿತೀಯಾರ್ಧದಲ್ಲಿ ಪರಿಸ್ಥಿತಿಗಳು ಸುಧಾರಿಸಲು ಪ್ರಾರಂಭಿಸುತ್ತವೆ. ನೀವು ಹೆಚ್ಚು ಚೈತನ್ಯ ಹಾಗೂ ವಿಶ್ವಾಸದಿಂದ ಕೂಡಿರುವಿರಿ ಮತ್ತು ಅಪೂರ್ಣಗೊಂಡಿರುವ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸಿನಿಮಾ , ಆಟೋಟ ಮುಂತಾದ ಮನರಂಜನಾ ಚಟುವಟಿಕೆಗಳು ನಿಮ್ಮ ಕಿಸೆಯನ್ನು ತೂತು ಮಾಡಲಿವೆ.

ಧನು :-

ಇದು ಅನುಗ್ರಹಗಳ ಮಳೆ. ಈ ದಿನ ನಿಮಗೆ ಸಂಪೂರ್ಣ ಪ್ರಯೋಜನಗಳ ಸಿಗಲಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆದಾಯ ಅಥವಾ ಲಾಭದಲ್ಲಿ ವೃದ್ಧಿಯಾಗುವ ಸಾಧ್ಯತೆಯಿರುವುದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಏನೇ ಆದರೂ, ನಿಮ್ಮ ವೆಚ್ಚಗಳು ಮಿತಿಮೀರದಂತೆ ನೋಡಿಕೊಳ್ಳಿ. ಸಾಮಾಜಿಕ ಸಮಾರಂಭಗಳು ಮತ್ತು ಸಂವಾದಗಳಲ್ಲಿ ನಿಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಿ ಮತ್ತು ಖಂಡಿತವಾಗಿಯೂ ನೀವು ಶೋಭಿಸುವಿರಿ. ಆದರೆ, ಇದೇ ಸಮಯಕ್ಕೆ ನಿಮ್ಮ ಮುಂಗೋಪವು ಉತ್ತಮ ಸಮಾರಂಭಗಳನ್ನು ಹಾಳುಗೆಡಹುವ ಸಾಧ್ಯತೆಯಿರುವುದರಿಂದ ಜನರೊಂದಿಗೆ ವ್ಯವಹರಿಸುವಾಗ ಶಾಂತಿ ಮತ್ತು ತಾಳ್ಮೆಯಿಂದಿರಬೇಕು. ವಾಹನ ಚಾಲನೆಯ ಮೇಲೆ ಸಮಾಧಾನದಿಂದಿರಿ ಮತ್ತು ಸಂಚಾರಿ ನಿಯಮಗಳನ್ನು ಉಲ್ಲಂಘಿಸಬೇಡಿ ಯಾಕೆಂದರೆ ಇಂದು ನಿಮಗೆ ಅಪಘಾತದ ಸಂಭಾವ್ಯತೆಯಿದೆ.

ಮಕರ :-

ಎಂತಹ ದಿನ! ಇಂದು ನೀವು ಕೇಳಿದ ಎಲ್ಲವನ್ನೂ ಪಡೆಯುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳನ್ನು ಪೂರ್ಣಗೊಳಿಸಲು ಇದು ಸೂಕ್ತ ಸಮಯ. ಕಾರ್ಯಸ್ಥಳದಲ್ಲಿ ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಬಹುದು ಮತ್ತು ಕಾರ್ಯಗತಗೊಳಿಸಬಹುದು.ಇದು ಕಾರ್ಯದಲ್ಲಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿಸತಗೊಳಿಸುತ್ತದೆ. ಮತ್ತೇನು ಯೋಚನೆ? ನಂತರದಲ್ಲಿ ಬಡ್ತಿ ಹೊಂದುವವರಲ್ಲಿ ನೀವೇ ಮೊದಲಿಗರಾಗಬಹುದು. ಸಂಬಂಧಗಳು ಜೀವನದ ನಿರ್ಣಾಯಕ ಭಾಗಗಳಾಗಿವೆ. ನಿಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಮೂಲಕ ಈ ಅನುಗ್ರಹಪೂರ್ವಕ ದಿನದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಿ. ನಿಮ್ಮ ಕನಸುಗಳೊಂದಿಗೆ ಜೀವಿಸಲು ಮತ್ತು ಆಸೆಗಳನ್ನು ನೆರವೇರಿಸಲು ಇದು ಉತ್ತಮ ಸಮಯ.

ಕುಂಭ :-

ವೃತ್ತಿಪರರು ತಮ್ಮ ದಿನ ಪ್ರಾರಂಭಗೊಳ್ಳುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳೊಂದಿಗೆ ವರ್ತಿಸುವಾಗ ಉದ್ವೇಗರಹಿತರಾಗಿರಿ. ಇದು ನಿಮಗೆ ಪ್ರಯೋಜನವನ್ನು ನೀಡಬಹುದು. ಏನೇ ಆದರೂ, ಮಧ್ಯಾಹ್ನದ ಬಳಿಕ ಕಚೇರಿಯಲ್ಲಿನ ನಿಮ್ಮ ವಾತಾವರಣವು ಹೆಚ್ಚು ಅನುಕೂಲಕರ ಹಾಗೂ ಶಾಂತಿಯಿಂದ ಕೂಡಿರುತ್ತದೆ. ಮನೆಯಲ್ಲಿಯೂ ಹಾಗೆನೇ. ಶಾಂತಿಯುತ ವಾತಾವರಣವು ನಿಮ್ಮನ್ನು ಉತ್ಸಾಹ ಮತ್ತು ಲವಲವಿಕೆಯಿಂದಿರಿಸುತ್ತದೆ. ದೀರ್ಘ ಸಮಯಕ್ಕಾಗಿ ವಿರಾಮದ ಅಥವಾ ಕಚೇರಿ ಸಂಬಂಧಿ ಪ್ರವಾಸಗಳನ್ನು ನೀವು ಕೈಗೊಳ್ಳಬಹುದು. ಇಂದು ನೀವು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ.

ಮೀನ :-

ಕ್ರಿಯಾತ್ಮಕವಾಗಿ ಮತ್ತು ಆತ್ಮವಿಮರ್ಶೆಯಾಗಿ ನೀವು ಉತ್ತಮವಾದರು ಎಂಬುದನ್ನು ತಿಳಿದುಕೊಳ್ಳಲು ಕಾರ್ಯತಃ ಪ್ರಯಾಣ ಬೆಳೆಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆಲೋಚನೆಗಳನ್ನು ಸ್ವತಂತ್ರಗೊಳಿಸಿ ಮತ್ತು ಬರಹದ ಮೂಲಕ ನಿಮ್ಮನ್ನು ನೀವೇ ತೋರ್ಪಡಿಸಿಕೊಳ್ಳಿ. ಆಧ್ಯಾತ್ಮ ವಿಚಾರಗಳ ಹೊರತಾಗಿ, ಖುಷಿಯೊಂದಿಗೆ ಪ್ರಾರಂಭ ಹಾಗೂ ಅಂತ್ಯಗೊಳ್ಳುವ ವಿಚಾರಗಳ ಬಗ್ಗೆ ನೀವು ಆಸಕ್ತಿವಹಿಸುವ ಸಾಧ್ಯತೆಯಿದೆ. ಸ್ವಲ್ಪ ಸಮಯದವರೆಗೆ ಮೌನವಾಗಿರಿ ಮತ್ತು ಸ್ವಲ್ಪ ಆತ್ಮವಿಮರ್ಷೆ ಮಾಡಿಕೊಳ್ಳಿ. ನೀವು ಹೊಸ ನೀವನ್ನು ಕಂಡುಕೊಳ್ಳುವಿರಿ. ಕಾರ್ಯಸ್ಥಳದಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ದೀರ್ಘ ಚರ್ಚೆಯನ್ನು ತಪ್ಪಿಸಿ ಅಥವಾ ನಿಮ್ಮ ಅಸಹಜ ಮನಸ್ಥಿತಿಯು ವಿನೋದಗೇಡಿಯಾಗಿ ವರ್ತಿಸಬಹುದು. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

WhatsApp Group Join Now

Spread the love

Leave a Reply