ಮೇಷ :-
ಇಂದು ಲೌಕಿಕ ಆಕಾಂಕ್ಷೆಗಳಿಗಿಂತ ಆಧ್ಯಾತ್ಮಿಕ ಆಕಾಂಕ್ಷೆಗಳು ಹೆಚ್ಚು ದೃಢವಾಗಿರುತ್ತದೆ. ಆಧ್ಯಾತ್ಮದಲ್ಲಿನ ನಿಮ್ಮ ಅನ್ವೇಷಣೆಯು ಇಂದು ದಿನಪೂರ್ತಿ ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಆಳವಾದ ಚಿಂತನೆಯಿಂದ ಇದು ಸಾಧ್ಯವಾಗಲಿದೆ. ನೀವು ಗಣನೀಯ ಆಧ್ಯಾತ್ಮ ವೃದ್ಧಿಯನ್ನು ಕಾಣಬಹುದು.
ಆದರೆ ನೀವು ಏನು ಮಾತನಾಡುತ್ತೀರಿ ಎಂಬುದರ ಬಗ್ಗೆ ಎಚ್ಚರದಿಂದಿರಬೇಕು. ಎಚ್ಚರಿಕೆಯಿಲ್ಲದೆ ಆಡಿದ ಮಾತುಗಳು ಮತ್ತು ನಿಮ್ಮ ಮಾತಿನ ಶೈಲಿಯು ನಿಮ್ಮ ಜೀವನದಲ್ಲಿನ ಕೋಲಾಹಲವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಬೇಡಿ ಮತ್ತು ಪ್ರತಿಸ್ಪರ್ಧಿಗಳಿಂದ ದೂರವಿರಿ. ಅಸಂಭವನೀಯ ಮೂಲಗಳಿಂದ ಲಾಭ ಉಂಟಾಗುವ ಸಾಧ್ಯತೆಯಿದೆ.
ವೃಷಭ :-
ಸಾಮಾಜಿಕ ಸಮಾರಂಭಗಳಿಗೆ ಅಥವಾ ಹೊರಗಡೆ ತಿರುಗಾಟಕ್ಕೆ ಅಥವಾ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ನೀವು ಉದ್ಯಮಿಗಳಾಗಿದ್ದಲ್ಲಿ ನಿಮ್ಮ ಉದ್ಯಮದಲ್ಲಿ ಕೆಲವು ಅನುಕೂಲಕರ ವೃದ್ಧಿಯನ್ನು ಕಾಣಬಹುದು. ನಿಮ್ಮ ಉದ್ಯಮವನ್ನು ವೃದ್ಧಿಗೊಳಿಸಬಲ್ಲ ಮಾತುಕತೆ ಅಥವಾ ಸಂಭಾಷಣೆಯಲ್ಲಿ ನೀವು ತೊಡಗಬಹುದು. ಸಾಮಾಜಿಕವಾಗಿ, ನೀವು ಉತ್ತಮ ಗಮನಾರ್ಹ ಗೌರವವನ್ನು ಪಡೆಯುವಿರಿ. ನೀವು ಭರ್ಜರಿ ಮೊತ್ತದ ಹಣ ಸಂಪಾದಿಸುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ.
ಮಿಥುನ :-
ಯಾವುದೇ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಇಂದು ಉತ್ತಮ ದಿನ ಎಂಬುದಾಗಿ ಗಣೇಶ ನಂಬುತ್ತಾರೆ. ಈ ದಿನವು ನಿಮಗೆ ಹೆಸರು ಮತ್ತು ಖ್ಯಾತಿಯನ್ನು ತರುವ ಭರವಸೆಯಿದೆ. ಮನೆಯ ವಾತಾವರಣವು ಆನಂದದಾಯಕವಾಗಿರುತ್ತದೆ. ಬೃಹತ್ ಮೊತ್ತದ ಧನಲಾಭ ಉಂಟಾಗಲಿದೆ. ಆದರೆ, ತಪ್ಪಿಸಲಾಗದ ವೆಚ್ಚವಾಗಿ ನೀವು ತುಂಬಾ ಪ್ರಮಾಣದಲ್ಲಿ ಖರ್ಚು ಮಾಡುವಿರಿ.ಏನೇ ಆದರೂ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ತಾಜಾ ಭಾವನೆಯನ್ನು ಹೊಂದಿರುತ್ತೀರಿ. ಕಾರ್ಯಕ್ಷೇತ್ರದಲ್ಲಿ ನೀವು ನಿಮ್ಮ ಸಹೋದ್ಯೋಗಿಗಳಿಂದ ಉತ್ತಮ ಬೆಂಬಲವನ್ನು ಪಡೆಯುವಿರಿ ಮತ್ತು ನಿಮ್ಮ ಕಠಿಣ ಪರಿಶ್ರಮಕ್ಕೆ ಒಳ್ಳೆಯ ಮನ್ನಣೆ ಪಡೆಯುವಿರಿ. ಏನೇ ಆದರೂ, ನಿಮ್ಮ ಮಾತಿನಲ್ಲಿ ಹತೋಟಿಯಿದ್ದರೆ ಇನ್ನೂ ಉತ್ತಮ ನಿರ್ವಹಣೆಯನ್ನು ಮಾಡಬಹುದು.
ಕರ್ಕಾಟಕ :-
ನೀವು ಅತ್ಯಂತ ನಿರಾಸಕ್ತಿ ಭಾವನೆಯನ್ನು ಹೊಂದಿರುತ್ತೀರಿ ಮತ್ತು ಅನೇಕ ವಿಚಾರಗಳು ನಿಮ್ಮ ಮನಸ್ಸನ್ನು ಆವರಿಸಿಕೊಂಡಿರಬಹುದು. ನಿಮ್ಮ ಚಿಂತೆಗೆ ಮೊದಲ ಕಾರಣ ನಿಮ್ಮ ಸ್ನೇಹಿತರು, ಮಕ್ಕಳು ಅಥವಾ ಎರಡೂ ಆಗಿರಬಹುದು. ನೀವು ಏನು ಮಾತನಾಡುತ್ತಿದ್ದೀರಿ ಮತ್ತು ಹೇಗೆ ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ.ಅನಗತ್ಯ ಚರ್ಚೆಗಳನ್ನು ತಪ್ಪಿಸಿ. ಮತ್ತು ಸಾಧ್ಯವಿದ್ದರೆ ಪ್ರಯಾಣದ ಯೋಜನೆಗಳನ್ನು ಮುಂದೂಡಿ. ಗ್ರಹಗತಿಗಳು ನಿಮ್ಮ ಮನಸ್ಸಿನ ಮೇಲೆ ವ್ಯತಿರಿಕ್ತ ಪ್ರಭಾವವನ್ನು ಬೀರುವುದರಿಂದ ನಿಮ್ಮ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಅರ್ಹತೆ ಅಗತ್ಯವಿರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ.
ಸಿಂಹ :-
ಇಂದು ನೀವು ಸ್ವಲ್ಪ ಎಚ್ಚರಿಕೆಯಿಂದಿರಲು ಗಣೇಶ ಬಯಸುತ್ತಾರೆ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಮತ್ತು ನಿಮ್ಮ ಹಿಂದೆ ನಡೆಯುವ ಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಿ.ನಿಮ್ಮ ತಾಯಿಯೊಂದಿಗಿನ ಸಂಬಂಧದಲ್ಲಿ ಕೆಡುಕು ಉಂಟಾಗಬಹುದು. ಮಿತಿಮೀರಿದ ಒರಟುತನ ಮತ್ತು ನಕಾರಾತ್ಮಕ ವರ್ತನೆಯು ವಾಗ್ವಾದಗಳಲ್ಲಿ ನಿಮ್ಮನ್ನೇ ಮುಖ್ಯಪಾತ್ರವನ್ನಾಗಿಸಬಹುದು. ಸಾಧ್ಯವಾದಷ್ಟು ಶೀಘ್ರದಲ್ಲೇ ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಕಾಗದಪತ್ರಗಳಿಗೆ ಮತ್ತು ನೀರಿಗೆ ಸಂಬಂಧಿಸಿ ಎಚ್ಚರಿಕೆಯಿಂದಿರಿ. ತಪ್ಪುಗಳು ನಿಮ್ಮ ಅದೃಷ್ಟವನ್ನು ಮುಳುಗಿಸಿಬಿಡಬಹುದು ಮತ್ತು ಇತರರು ನಿಮ್ಮನ್ನೇ ಮುಳಿಗಿಸಿಬಿಡಬಹುದು.
ಕನ್ಯಾ :-
ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿರುತ್ತದೆ. ಮತ್ತು ನಿಮ್ಮ ಮನಸ್ಸು ಮತ್ತು ನಿಮ್ಮ ದೇಹವು ಸಾಕಷ್ಟು ಆರೋಗ್ಯದಲ್ಲಿರುತ್ತದೆ. ಇದು ದಿನಪೂರ್ತಿ ನಿಮ್ಮನ್ನು ಉಲ್ಲಾಸದಲ್ಲಿರಿಸುತ್ತದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ನಿರ್ವಹಣೆಯು ಉತ್ತಮವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಪರಿಣಾಮವಾಗಿ ಅವರು ತಮ್ಮ ನಿರ್ಬಂಧವಿಲ್ಲದ ಬೆಂಬಲವನ್ನು ಇನ್ನಷ್ಟು ಮುಂದುವರಿಸುತ್ತಾರೆ. ನಿಮ್ಮ ಆಧ್ಯಾತ್ಮಿಕದಲ್ಲಿನ ಜ್ಞಾನವು ಗುರುತಿಸಲ್ಪಡುತ್ತದೆ.
ತುಲಾ :-
ನಿಮ್ಮ ಮನಸ್ಸು ನಿರಂತರ ಗೊಂದಲದಲ್ಲಿರುತ್ತದೆ ಮತ್ತು ಇದು ಸ್ಪಷ್ಟ ನಿರ್ಧಾರ ಕೈಗೊಳ್ಳುವುದನ್ನು ಇನ್ನಷ್ಟು ಕಷ್ಟಕರವಾಗಿಸಲಿದೆ. ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಇಂದು ಉತ್ತಮ ಸಮಯವಲ್ಲ. ನಿಮ್ಮ ಮೊಂಡುತನವು ನಿಮ್ಮನ್ನು ಮತ್ತು ಇತರರನ್ನು ಅಸಮಾಧಾನದಲ್ಲಿ ಇರಿಸಲಿದೆ. ನಿಮ್ಮೊಳಗಿನ ಮನಸ್ತಾಪವು ಇತರರನ್ನು ತೊಂದರೆಯಲ್ಲಿ ಸಿಲುಕಿಸಲಿದೆ. ಏನೇ ಆದರೂ, ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆಯಿರುವುದಿಲ್ಲ.
ವೃಶ್ಚಿಕ :-
ಇಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಹಠವಾದಿಗಳಾಗಿರುವ ಸಾಧ್ಯತೆಯಿದೆ. ನಿಮ್ಮ ಮನೆಯ ವಾತಾವರಣವು ಅತ್ಯುತ್ತಮವಾಗಿರುತ್ತದೆ ಮತ್ತು ಎಲ್ಲರೂ ಸಂಪೂರ್ಣ ನಿಶ್ಚಿಂತೆಯಿಂದಿರುತ್ತಾರೆ. ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಮತ್ತು ಇದು ನಿಮ್ಮ ಮುಖದಲ್ಲಿನ ನಗುವನ್ನು ಇನ್ನಷ್ಟು ಹೆಚ್ಚಿಸುತ್ತದೆ. ದಿನದ ಹೆಚ್ಚಿನ ಭಾಗವನ್ನು ಸುಂದರ ಪ್ರದೇಶಗಳಲ್ಲಿ ತೆರಳುವ ಬಗ್ಗೆ ಅಥವಾ ಯೋಜನೆ ರೂಪಿಸುವ ಬಗ್ಗೆ ಕಳೆಯಲಿದ್ದೀರಿ.
ಧನು :-
ನಿಮ್ಮ ಮಾತು ಮತ್ತು ಸಿಟ್ಟನ್ನು ಸ್ತಿಮಿತದಲ್ಲಿರಿಸಲಾಗದ ನಿಮ್ಮ ಅಸಾಮರ್ಥ್ಯವು ನಿಮ್ಮನ್ನು` ಅನೇಕ ತೊಂದರೆಗಳಿಗೆ ತಳ್ಳುತ್ತದೆ. ಗಣೇಶ ಏನು ಹೇಳಲು ಸಾಧ್ಯವೆಂದರೆ ಶ್ರಮಪಡಿ ಇಲ್ಲವಾದಲ್ಲಿ ನೀವು ಇಡೀ ದಿನವನ್ನು ವಾಗ್ವಾದಗಳಿಂದ ಮತ್ತು ಅದಕ್ಕೆ ಸ್ಪಷ್ಟನೆ ನೀಡುವುದರಿಂದ ಕಳೆಯಬಹುದು. ನಿಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರುವ ಸಾಧ್ಯತೆಯಿಲ್ಲ. ನಿಮ್ಮ ಸಮಸ್ಯೆಗಳು ನೀವು ಎಣಿಸಿಕೊಂಡಿರುವುದಕ್ಕಿಂತಲೂ ಹೆಚ್ಚು ವಿನಾಶಕಾರಿಯಾಗಿರಬಹುದು. ನಿಮ್ಮ ಪ್ರೀತಿಪಾತ್ರರೊಂದಿಗೆ ನಗುವ ಹಂಚಿಕೊಳ್ಳುವುದರಲ್ಲಿ ಸಮಸ್ಯೆ ಉಂಟಾಗಬಹುದು. ಆರೋಗ್ಯ ಸ್ಥಿತಿ ಉತ್ತಮವಾಗಿರುವುದಿಲ್ಲ.
ಮಕರ :-
ಇಂದು ಅತಿಶಯವಾಗಿ ಅನುಕೂಲಕರ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ನಿಮ್ಮ ಎಲ್ಲಾ ಇಷ್ಟದ ಸಂಬಂಧಿಗಳನ್ನು ಮತ್ತು ಆತ್ಮೀಯ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ನೀವು ವಿವಾಹವಾಗಿ ನೆಲೆಯನ್ನು ಕಂಡುಕೊಳ್ಳುವ ಯೋಜನೆಯಲ್ಲಿದ್ದಲ್ಲಿ, ಇಂದಿನಷ್ಟು ಉತ್ತಮ ದಿನ ಬೇರೆ ಸಿಗಲಾರದು.ನಿಮ್ಮ ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆಗಳನ್ನು ನಿರೀಕ್ಷಿಸಿ.ಪ್ರಯಾಣದ ಸಾಧ್ಯತೆಗಳಿವೆ. ನಿಮ್ಮ ಉದ್ಯಮವು ಇನ್ನಷ್ಟು ವಿಕಸಿಸಲಿದೆ ಮತ್ತು ಆದ್ದರಿಂದ ಆಡಂಬರ ವಸ್ತುಗಳ ಮೇಲಿನ ವೆಚ್ಚವು ನಿಮಗೆ ಅಷ್ಟೊಂದು ಹೊರೆ ಅನಿಸುವುದಿಲ್ಲ.
ಕುಂಭ :-
ಇಂದು ನಿಮ್ಮ ಮನಸ್ಸು ಮತ್ತು ದೇಹವು ಶಾಂತಿಯಿಂದ ಇರಲಿದೆ. ಎಲ್ಲವೂ ಕ್ರಮವತ್ತಾಗಿಯೇ ಸಾಗುವಂತೆ ಅನಿಸುತ್ತದೆ. ವೃತ್ತಿಗೆ ಸಂಬಂಧಿಸಿ ನೀವು ಉತ್ತಮ ನಿರ್ವಹಣೆಯನ್ನೇ ಮಾಡುತ್ತೀರಿ ಮತ್ತು ನಿಮ್ಮ ಕಾರ್ಯವು ಶ್ಲಾಘನೆಗೆ ಒಳಗಾಗುತ್ತದೆ. ಇದು ನಿಮ್ಮಲ್ಲಿ ಇನ್ನಷ್ಟು ಉತ್ಸಾಹವನ್ನು ತುಂಬುವ ಸಾಧ್ಯತೆಯಿದೆ ಮತ್ತು ನಿಮ್ಮ ಸಹೋದ್ಯೋಗಿಗಳ ಸ್ವಲ್ಪ ಬೆಂಬಲದಿಂದ ನೀವು ಅದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಸಾಮಾಜಿಕವಾಗಿ ನಿಮಗೆ ಹೆಚ್ಚು ಗೌರವ ಮತ್ತು ಶ್ಲಾಘನೆಗಳು ದೊರೆಯುತ್ತವೆ. ಸ್ನೇಹಿತರು ಮತ್ತು ಪ್ರೀತಿಪಾತ್ರರು ನಿಮ್ಮ ಬಗ್ಗೆ ಹೆಮ್ಮೆಪಡುತ್ತಾರೆ.
ಮೀನ :-
ಮಾನಸಿಕ ಒತ್ತಡದಿಂದಾಗಿ ಉಂಟಾಗುವ ಆತಂಕವು ನಿಮ್ಮನ್ನು ವಶಕ್ಕೆ ತೆಗೆದುಕೊಳ್ಳಲಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕ ಶ್ರಮ ಮತ್ತು ಆಲಸ್ಯವು ನಿಮಗೆ ತೊಂದರೆಯನ್ನು ನೀಡಬಹುದು. ಮೇಲಾಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುವಾಗ ಎಚ್ಚರಿಕೆಯಿಂದಿರಿ. ನಿಮ್ಮ ಮಕ್ಕಳ ಬಗ್ಗೆ ದಿನವಿಡೀ ನೀವು ಚಿಂತೆಗೊಳಗಾಗಬಹುದು. ಇಂದು ಅತೀ ಮುಖ್ಯ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.ವ್ಯವಹಾರದಲ್ಲಿರುವವರಿಗೆ ಅಡೆತಡೆಗಳು ಉಂಟಾಗಬಹುದು. ಋಣಾತ್ಮಕತೆಯನ್ನು ತಪ್ಪಿಸಿ.
Horoscope Today : 11 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now