ಮೇಷ :-
ಉದ್ಯಮಿಗಳಿಗೆ ಈ ದಿನವು ಲಾಭದಾಯಕವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಮನೆಯಲ್ಲಿನ ಸಂತಸಭರಿತ ವಾತಾವರಣವು ನಿಮ್ಮ ಮನಸ್ಸನ್ನು ಖುಷಿಯಲ್ಲಿರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಸಂಭ್ರಮದ ಸಮಾರಂಭವು ನಡೆಯುವ ಸಾಧ್ಯತೆಯಿದೆ. ನಿಮ್ಮ ದೈಹಿಕ ಆರೋಗ್ಯವೂ ವೃದ್ಧಿಗೊಳ್ಳಬಹುದು.
ನಿಮ್ಮ ಉಪಕಾರಿಗಳಿಂದ ನಿಮಗೆ ಯೋಗ್ಯ ಸಹಾಯ ದೊರೆಯಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮತ್ತು ಖ್ಯಾತಿಯನ್ನು ಗಳಿಸುವಿರಿ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧವು ಸಂತಸದಿಂದ ಕೂಡಿರುತ್ತದೆ. ನಿಮ್ಮ ಅರ್ಧಾಂಗಿಯೊಂದಿಗಿನ ಆತ್ಮೀಯತೆಯು ಇಂದು ಇನ್ನಷ್ಟು ವರ್ಧಿಸಲಿದೆ.
ವೃಷಭ :-
ಇಂದು ಬೌದ್ಧಿಕ ಚರ್ಚೆಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಈ ದಿನವು ವಿದ್ಯಾರ್ಥಿಗಳಿಗೆ ಕಷ್ಟಕರವಾಗಿರುವುದು ಸಾಬೀತಾಗಲಿದೆ. ನಿಮ್ಮ ಮನಸ್ಸು ಇಂದು ಚಿಂತೆಯಿಂದ ಕೂಡಿರುವ ಸಾಧ್ಯತೆಯಿದೆ. ಉದರ ಸಂಬಂಧಿ ವ್ಯಾಧಿಗಳು ನಿಮ್ಮ ಚಿಂತೆಗೆ ಇನ್ನೊಂದು ಕಾರಣವಾಗಲಿದೆ. ಆದರೆ ಮಧ್ಯಾಹ್ನದ ಬಳಿಕ, ಈ ವ್ಯಾಧಿಯಿಂದ ನೀವು ನೆಮ್ಮದಿಯನ್ನು ಪಡೆಯುವ ಸಾಧ್ಯತೆಯಿದೆ. ಮಾನಸಿಕವಾಗಿಯೂ ಒತ್ತಡಗಳಿಂದ ನೀವು ಮುಕ್ತಿಯನ್ನು ಪಡೆಯುವಿರಿ. ನಿಮ್ಮ ಕಾರ್ಯಗಳು ಪ್ರಶಂಸೆಯನ್ನು ಗಳಿಸಲಿವೆ. ನಿಮ್ಮ ಹೆತ್ತವರಿಂದ ಶುಭಸುದ್ದಿಯನ್ನು ಪಡೆಯುವಿರಿ.
ಮಿಥುನ :-
ಇಂದು ನೀವು ಚೈತನ್ಯರಹಿತರಾಗಿರುವಂತೆ ನಿಮಗೆ ಅನಿಸುತ್ತದೆ. ಇಂದು ನಿಮ್ಮ ಕುಟುಂಬ ಸದಸ್ಯರು ಮಾತುಕತೆಗೆ ಒಳಪಡುವ ಸಾಧ್ಯತೆಯಿದೆ. ಸ್ಥಿರಾಸ್ತಿಗಳಿಗೆ(ಭೂಮಿ ಇತ್ಯಾದಿಸಂಬಂಧಿಸಿದ ವಿಚಾರದಲ್ಲಿ ನೀವು ಎಂದು ಎಚ್ಚರಿಕೆಯಿಂದಿರಬೇಕಾಗುತ್ತದೆ. ಇಂದು ಅನಿರೀಕ್ಷಿತ ವೆಚ್ಚ ಉಂಟಾಗಲಿದೆ. ತೀವ್ರ ಬೌದ್ಧಿಕ ಚರ್ಚೆಗಳಿಂದ ದೂರವಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ಕರ್ಕಾಟಕ :-
ಆಲೋಚನಾರಹಿತ ಕಾರ್ಯಗಳನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಪ್ರೀತಪಾತ್ರರ ಭೇಟಿಯಿಂದಾಗಿ ನೀವು ಖುಷಿಯಿಂದಿರುತ್ತೀರಿ. ಅವರೊಂದಿಗಿನ ನಿಮ್ಮ ಸಂಬಂಧದಲ್ಲಿರುವ ಮಮತೆಯು ನಿಮ್ಮ ಸಂತೋಷವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಸ್ಪರ್ಧಿಗಳ ಮುಂದೆ ನಿಮ್ಮ ಸ್ಥಾನವನ್ನು ಆತ್ಮವಿಶ್ವಾಸದೊಂದಿಗೆ ಉಳಿಸಿಕೊಳ್ಳಿಯ ಆದರೆ, ಮಧ್ಯಾಹ್ನದ ಬಳಿಕ ಪರಿಸ್ಥಿತಿಗಳು ನಿಮಗೆ ಕೊಂಚ ಕಷ್ಟಕರವೆನಿಸುತ್ತದೆ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಮನಹರಿಸಿ. ನಿಮ್ಮ ತಾಯಿಯ ಆರೋಗ್ಯವು ನಿಮಗೆ ಚಿಂತೆಯನ್ನು ನೀಡಬಹುದು. ಇಂದು ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಸಿಂಹ :-
ನಿಮ್ಮಲ್ಲಿನ ಬೌದ್ಧಿಕ ಸಾಮರ್ಥ್ಯದ ಹೆಚ್ಚಳದಿಂದಾಗಿ, ಬೌದ್ಧಿಕ ಚರ್ಚೆಯಲ್ಲಿ ಭಾಗವಹಿಸುವಂತೆ ನೀವು ಪ್ರಚೋದನೆಗೆ ಒಳಗಾಗಬಹುದು , ಆದರೆ, ಅಂತಹ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಡಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ನಡುವೆ ತೆರೆದ ಮನಸ್ಸಿನ ವಾತಾವರಣವಿರಬಹುದು. ಇಂದು ನೀವು ಆರ್ಥಿಕ ಲಾಭ ಪಡೆಯುತ್ತೀರಿ. ಆದರೆ, ಮಧ್ಯಾಹ್ನದ ಬಳಿಕ, ನೀವು ತೆಗೆದುಕೊಳ್ಳುವ ಪ್ರತೀ ಹೆಜ್ಜೆಯಲ್ಲೂ ಎಚ್ಚರಿಕೆಯ ವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಸಹೋದರರಿಂದ ನಿಮಗೆ ಲಾಭ ಉಂಟಾಗಲಿದೆ. ಆಧ್ಯಾತ್ಮ ಕ್ಷೇತ್ರದಲ್ಲಿ ನೀವು ಸಾಧನೆಗೈಯುವ ಸಂಭಾವ್ಯತೆಯಿದೆ.
ಕನ್ಯಾ :-
ನಿಮ್ಮ ಮಾತುಗಳಿಂದ ಇಂದು ನಿಮಗೆ ಪ್ರಯೋಜನ ಉಂಟಾಗುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇದರಿಂದಾಗಿ, ಜನರೊಂದಿಗಿನ ನಿಮ್ಮ ಸಂಬಂಧದಲ್ಲಿರುವ ಪ್ರೀತಿಯು ಇನ್ನಷ್ಟು ಹೆಚ್ಚಲಿದೆ. ನಿಮ್ಮ ಪ್ರವಾಸದಿಂದ ನೀವು ಖುಷಿಯನ್ನು ಪಡೆಯುವಿರಿ. ನಿಮ್ಮ ಉದ್ಯಮದಿಂದಲೂ ನಿಮಗೆ ಲಾಭ ಉಂಟಾಗಲಿದೆ. ನಿಮ್ಮ ಕುಟುಂಬ ವಾತಾವರಣವು ಉತ್ಸಾಹದಿಂದ ಕೂಡಿರಬಹುದು. ಆರ್ಥಿಕ ಲಾಭ ಉಂಟಾಗಲಿದೆ. ವಿದೇಶ ರಾಷ್ಟ್ರಗಳೊಂದಿಗಿನ ಉದ್ಯಮ ಮಾತುಗತೆಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮಗಿಷ್ಟವಾದ ಆಹಾರವನ್ನು ಸೇವಿಸುವಿರಿ.
ತುಲಾ :-
ನಿಮ್ಮ ಕೋಪವನ್ನು ನಿಯಂತ್ರಣದಲ್ಲಿರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ನಾಲಗೆಯ ಹಿಡಿತದಿಂದಾಗಿ, ನೀವು ಶಾಂತಿಯುತ ವಾತಾವರಣವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಕಾನೂನು ಸಂಬಂಧಿ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಎಚ್ಚರಿಕೆ ವಹಿಸಿ. ನಿಮ್ಮ ಖರ್ಚುವೆಚ್ಚಗಳು ಇಂದು ಹೆಚ್ಚಾಗಲಿವೆ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ಕುಂಠಿತಗೊಳ್ಳಲಿದೆ. ಆದರೆ, ಮಧ್ಯಾಹ್ನದ ಬಳಿಕ, ನೀವು ಸಂತೋಷವನ್ನು ಅನುಭವಿಸಬಹುದು. ಆರ್ಥಿಕ ಲಾಭ ಉಂಟಾಗಲಿದೆ.
ವೃಶ್ಚಿಕ :-
ಸಂಗಾತಿಯ ಆಯ್ಕೆಗೆ ಇಂದು ಶುಭಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಆದಾಯ ವೃದ್ಧಿಸಲಿದೆ ಮತ್ತು ನಿಮ್ಮ ವ್ಯವಹಾರಗಳು ಇಂದು ಪ್ರಗತಿ ಕಾಣಲಿವೆ. ನೀವು ನಿಮ್ಮ ಸ್ನೇಹಿತರೊಂದಿಗೆ ಸಂತಸಭರಿತ ಪ್ರವಾಸವನ್ನು ಆನಂದಿಸುವಿರಿ. ಆದರೆ, ಮಧ್ಯಾಹ್ನದ ಬಳಿಕ, ನೀವು ಹೆಚ್ಚು ಕೋಪ ಹಾಗೂ ದುರಾಕ್ರಮಣದಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದ್ದರಿಂದ ಯಾರೊಂದಿಗೂ ಮಿತಿಮೀರಿದ ದುರಾಕ್ರಮಣ ಪ್ರವೃತ್ತಿಯನ್ನು ತಪ್ಪಿಸಿ. ನಿಮ್ಮ ಸ್ನೇಹಿತರೊಂದಿಗಿನ ಮಾತುಕತೆಗೆ ಸಂಬಂಧಿಸಿ, ನೀವು ಮಾನಸಿಕ ಅಸ್ಥಿರತೆಯನ್ನು ಅನುಭವಿಸುವಿರಿ.
ಧನು :-
ಗಣೇಶನ ಆಶೀರ್ವಾದದೊಂದಿಗೆ, ಇಂದು ನೀವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವಿರಿ. ನಿಮ್ಮ ಉದ್ಯಮದಲ್ಲೂ ನೀವು ಯಶಸ್ಸು ಸಾಧಿಸುವಿರಿ. ನಿಮ್ಮ ಕಚೇರಿಯ ವಾತಾವರಣವು ಅನುಕೂಲಕರವಾಗಿರುತ್ತದೆ. ನೀವು ಪರಿಶ್ರಮದ ಫಲವಾಗಿ ನೀವು ಬಡ್ತಿಯನ್ನು ಪಡೆಯುವಿರಿ. ನಿಮ್ಮ ಕುಟುಂಬ ವಾತಾವರಣವು ಸಂತಸದಿಂದ ಕೂಡಿರುತ್ತದೆ. ಸ್ನೇಹಿತರ ಭೇಟಿಯಿಂದ ನೀವು ಖುಷಿ ಪಡೆಯುವಿರಿ. ಸಂತಸಭರಿತ ಪ್ರವಾಸ ಕೈಗೊಳ್ಳಲು ಇದು ಉತ್ತಮ ಸಮಯ. ಧನಲಾಭಕ್ಕೆ ಇಂದು ಶುಭಕರ ದಿನ. ನಿಮ್ಮ ಮಕ್ಕಳಿಗೆ ಸಂಬಂಧಿಸಿ ನೀವು ಶುಭ ಸುದ್ದಿಯನ್ನು ಪಡೆಯುವ ನಿರೀಕ್ಷೆಯಿದೆ.
ಮಕರ :-
ವಿದೇಶಿ ಪ್ರಯಾಣದ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಈ ದಿನವು ಉತ್ತಮ ದಿನವಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಧಾರ್ಮಿಕ ಪ್ರವಾಸಗಳ ಮೂಲಕ ನೀವು ಇಂದು ದೈವಿಕ ಆನಂದವನ್ನು ಪಡೆಯುವಿರಿ. ನಿಮ್ಮ ಕುಟುಂಬ ಸದಸ್ಯರು ಇಂದು ಉತ್ಸಾಹದಿಂದಿರುತ್ತಾರೆ. ವೃತ್ತಿಯಲ್ಲಿಯೂ ನೀವು ಉತ್ತಮ ನಿರ್ವಹಣೆಯನ್ನು ತೋರುತ್ತೀರಿ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತುಷ್ಟರಾಗುತ್ತಾರೆ. ಆರ್ಥಿಕ ಲಾಭದೊಂದಿಗೆ, ನಿಮ್ಮ ಗೌರವವೂ ವೃದ್ಧಿಸಲಿದೆ. ನಿಮ್ಮ ತಂದೆಯಿಂದ ಲಾಭ ಉಂಟಾಗಲಿದೆ. ನಿಮ್ಮ ಕುಟುಂಬದಲ್ಲಿ ಮಾತುಕತೆ ಮತ್ತು ಸೆಣಸಾಟಗಳು ಉಂಟಾಗಬಹುದು.
ಕುಂಭ :-
ಹೊಸ ಯೋಜನೆಗಳ ಪ್ರಾರಂಭವನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಆರೋಗ್ಯದಿಂದಿರಲು ನಿಮ್ಮ ತಿನ್ನುವ ಹವ್ಯಾಸದ ಬಗ್ಗೆ ಎಚ್ಚರದಿಂದಿರಬೇಕಾಗುತ್ತದೆ. ನಿಮ್ಮ ನಾಲಗೆಯನ್ನು ಹಿಡಿತದಲ್ಲಿರಿಸುವುದರಿಂದ, ನೀವು ಅಸಮಾಧಾನ ಮತ್ತು ದುರಾಕ್ರಮಣ ವಾಗ್ವಾದಗಳನ್ನು ತಪ್ಪಿಸಬಹುದು. ಮಧ್ಯಾಹ್ನದ ಬಳಿಕ ನಿಮ್ಮ ಸಂತಸವು ಹೆಚ್ಚಾಗುವುದನ್ನು ಕಾಣಬಹುದು. ನಿಮ್ಮ ಆರೋಗ್ಯವೂ ಇದರೊಂದಿಗೆ ವೃದ್ಧಿಸಲಿದೆ. ಧಾರ್ಮಿಕ ಚಟುವಟಿಕೆ ಮತ್ತು ತೀರ್ಥಯಾತ್ರೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ನಿಮ್ಮ ಒಡಹುಟ್ಟಿದವರಿಂದ ನಿಮ್ಮ ಒಡಹುಟ್ಟಿದವರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ. ಧನಲಾಭದ ಯೋಗವಿದೆ.
ಮೀನ :-
ಉದ್ಯಮದಲ್ಲಿ ಪಾಲುದಾರಿಕೆಯಿಂದ ನಿಮಗೆ ಲಾಭ ಉಂಟಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರವಾಸೀ ತಾಣಗಳಿಗೆ ತೆರಳುವುದರಿಂದ ನಿಮ್ಮ ಮನಸ್ಸು ಉಲ್ಲಾಸಿತಗೊಳ್ಳುವ ಸಾಧ್ಯತೆಯಿದೆ. ಆದರೆ ಮಧ್ಯಾಹ್ನದ ಬಳಿಕ, ನಿಮ್ಮ ಪರಿಸ್ಥಿತಿಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು. ಆದ್ದರಿಂದ ಹೊಸ ಯೋಜನೆಗಳಲ್ಲಿ ತೊಡಗಿಕೊಳ್ಳಬೇಡಿ. ಪ್ರಯಾಣವನ್ನು ತಪ್ಪಿಸಿ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸೆಣಸಾಟದಲ್ಲಿ ತೊಡಗಬಹುದು.
Horoscope Today : 07 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now