ಮೇಷ :-
ನೀವು ಇಂದು ಪರಹಿತ ಚಿಂತನೆಯಿಂದ ತುಂಬಿರುವಿರಿ. ಅಗತ್ಯವಿದ್ದವರಿಗೆ ಸಹಾಯಹಸ್ತ ಚಾಚುವ ನಿಮ್ಮ ಗುಣವನ್ನು ಕೆಲವು ಅವಿವೇಕವೆಂದರೂ, ಸಿಕ್ಕಿಹಾಕಿಕೊಳ್ಳುವ ಪರಿಸ್ಥಿತಿಯಿಂದ ನಿಮ್ಮನ್ನು ಈ ಗುಣವು ಪಾರು ಮಾಡುತ್ತದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಇದು ಇಂದು ನಿಮಗೆ ಮಾನಸಿಕ ಶಾಂತಿಯನ್ನು ತರಲಿದೆ ಅಲ್ಲದೆ, ನಿಮಗೆ ಈ ಶಾಂತಿಯ ಅಗತ್ಯವೂ ಇದೆ.
ನಿಮ್ಮ ಈ ಸಂತಸದ ಮನಶಾಂತಿಯು ನಿಮಗೆ ಲಾಭದಾಯಕವಾಗಲಿದೆ.
ವೃಷಭ :-
ನೀವು ಕೆಲಸ ಮಾಡುವಲ್ಲಿ ಎಲ್ಲರೊಂದಿಗೂ ಉತ್ತಮ ರೀತಿಯ ಸಂಭಾಷಣೆಯನ್ನು ಹೊಂದುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಸ್ನೇಹಿತರ ಮತ್ತು ಪರಿಚಯವನ್ನು ಮಾಡಿಕೊಳ್ಳುವಿರಿ. ನಿಮ್ಮ ಆಲೋಚನಾ ಸಾಮರ್ಥ್ಯವು ವೃದ್ಧಿಸಲಿದೆ. ಈ ದಿನವು ನಿಮಗೆ ಅನುಕೂಲಕರವಾಗಿದೆ ಮತ್ತು ದಿನಪೂರ್ತಿ ನೀವು ಸಂತೋಷದಿಂದಿರುತ್ತೀರಿ. ನಿಮ್ಮ ಕೆಲಸವು ಶ್ಲಾಘನೀಯವಾಗಿರುವುದಿಲ್ಲ ಆದರೆ, ಅದು ನಿಮ್ಮನ್ನು ಮುಂದಕ್ಕೆ ಕೆಲಸ ಮಾಡದಂತೆ ಅಡ್ಡಿಪಡಿಸುವುದಿಲ್ಲ. ಹೂಡಿಕೆ ಸಂಬಂಧಿತ ಎಲ್ಲಾ ವಿಚಾರಗಳನ್ನು ತೀರ್ಮಾನ ಮಾಡಲು ಇಂದು ಸಕಾಲ.
ಮಿಥುನ :-
ನಿಮ್ಮ ಭಾವನೆಗಳು ನಿಮ್ಮನ್ನು ಮೀರದಂತೆ ನೋಡಿಕೊಳ್ಳಿ ಅದೂ ಮುಖ್ಯವಾಗಿ ಹುಡುಗಿಯೊಂದಿಗೆ ವ್ಯವಹರಿಸುವಾಗ.ಹೆಣ್ಣಿಗೆ ಭಾವನಾತ್ಮಕವಾಗಿ ನಿಮ್ಮನ್ನು ಬದಲಾಯಿಸಲು ಅನುವು ಮಾಡಿಕೊಟ್ಟರೆ ನೀವು ಗೊಂದಲದಲ್ಲಿ ಬೀಳುವಿರಿ. ಇಂದು ಹೆಣ್ಣಿಗಿಂತ ಹೆಚ್ಚಿಗಿರುವ ಒಂದೇ ಒಂದು ಅಪಾಯವೆಂದರೆ ಅದು ನೀರಿರುವ ಪ್ರದೇಶಗಳು. ನೀರಿನಿಂದ ದೂರವಿರಿ. ಮದ್ಯ ಮುಂತಾದ ಹಾನಿಕಾರಕ ವಸ್ತುಗಳಿಂದ ದೂರವಿರಿ. ಕೆಲವು ವಿಚಾರಗಳು ದಿನವಿಡೀ ಪೀಡಿಸುತ್ತಿರುತ್ತವೆ. ನೀವು ನಿದ್ದೆ ಕಳೆದುಕೊಳ್ಳುವಿರಿ. ಅದು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಕುಟುಂಬದ ಸದಸ್ಯರೊಂದಿಗಿನ ಅನಗತ್ಯ ಮುಖಾಮುಖಿಯನ್ನು ತಪ್ಪಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಪ್ರಯಾಣ ಬೇಡಿ.
ಕರ್ಕಾಟಕ :-
ನೀವು ಇಂದು ಹರ್ಷ ಮತ್ತು ಗೆಲುವಿನಿಂದ ತುಂಬಿರುವಿರಿ. ಹೊಸ ಯೋಜನೆಗಳ ನಿರಾಯಾಸದ ಪ್ರಾರಂಭ, ಸ್ನೇಹಿತರ ಮತ್ತು ಪ್ರೀತಿಪಾತ್ರರ ಭೇಟಿಯು ಇವುಗಳು ನಿಮ್ಮನ್ನು ಮತ್ತಷ್ಟು ಖುಷಿಯಲ್ಲಿರಿಸುತ್ತದೆ.ಈ ಅದೃಷ್ಟಕ್ಕಾಗಿ ನಿಮ್ಮನ್ನು ನೀವೇ ತಟ್ಟಿಕೊಳ್ಳುವಿರಿ. ಮತ್ತು ಇದು ನಿಮ್ಮನ್ನು ಉತ್ಸಾಹ ಹಾಗೂ ಚೈತನ್ಯದಿಂದ ಇರುವಂತೆ ಮಾಡುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುವರು ಮತ್ತು ನೀವು ನಿಮ್ಮ ಪ್ರೀತಿಪಾತ್ರರ ಹೃದಯವನ್ನು ಗೆಲ್ಲುವಿರಿ. ಒಂದು ಹರ್ಷ ತರುವ ಸಣ್ಣ ಯಾತ್ರೆ ನಿಮಗೆ ಒದಗಲಿದೆ. ನಿಮ್ಮ ಸಾಮಾಜಿಕ ನಿಲುವ ಮತ್ತು ಮರ್ಯಾದೆಯಲ್ಲಿ ಉನ್ನತಿಯಾಗಲಿದೆ ಎಂಬುದಾಗಿ ಗಣೇಶ ನಂಬುತ್ತಾರೆ.
ಸಿಂಹ :-
ಎಲ್ಲಾ ರೀತಿಯಿಂದಲೂ ಇದು ಒಂದು ಸಾಮಾನ್ಯ ದಿನವಾಗಲಿದೆ. ಇದು ಕುಟುಂಬದೊಂದಿಗಿನ ಆಹ್ಲಾದಕರ ದಿನವಾಗಲಿದೆ ಆದರೆ, ಅಸಾಮಾನ್ಯವೇನೂ ಆಗಿರಲಾರದು. ನೀವೇನಾದರೂ ತೊಂದರೆಯಲ್ಲಿದ್ದರೆ ನಿಮ್ಮ ಹಿಂದೆ ನಿಂತು ಬೆಂಬಲಿಸುವರು. ಆರ್ಥಿಕವಾಗಿ ಇಂದು ಸೂಕ್ತದಿನವಾಗಲಿದೆ. ಆದರೆ, ಆರ್ಥಿಕವಾಗಿ ನೀವು ಏನನ್ನು ಕಳೆದುಕೊಳ್ಳುವಿರೋ ಅದಕ್ಕಿಂತ ಹೆಚ್ಚಿನದನ್ನು ನೀವು ಹೊಸ ಸಂಬಂಧಗಳಿಂದ ಪಡೆದುಕೊಳ್ಳುವಿರಿ. ನಿಮ್ಮ ಕಾರ್ಯದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ.
ಕನ್ಯಾ :-
ನಿಮ್ಮ ಕೋಮಲ ಸ್ವಭಾವ ಮತ್ತು ಮೃದು ಮಾತುಗಳಿಂದ ನೀವು ಇತರರನ್ನು ಆಕರ್ಷಿತಗೊಳಿಸುತ್ತೀರಿ. ಇದು ನಿಮಗೆ ಎಂದಿಗಿಂತ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ. ಬೌದ್ಧಿಕವಾಗಿ ನೀವು ಹಂತಹಂತವಾಗಿ ವೃದ್ಧಿಗೊಳ್ಳಬಹುದು. ಗೊತ್ತುಗುರಿಯಿಲ್ಲದ ಆಲೋಚನೆಗಳು ನೀವು ಕಾಣುವ ಹಾದಿಯನ್ನು ಬದಲಾಯಿಸಬಹುದು. ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯ ಹೊಂದಿರುತ್ತೀರಿ. ಕೆಲವು ಶುಭಸುದ್ದಿಗಳು ನಿಮಗಾಗಿ ಕಾದಿವೆ. ಇಂದು ನಿಮ್ಮದು ಸಂತೋಷದ ಕುಟುಂಬವಾಗಿರಲಿದೆ.
ತುಲಾ :-
ಈ ದಿನವು ಅಷ್ಟೊಂದು ಉತ್ತಮವಾಗಿರುವುದಿಲ್ಲ. ಹೆಚ್ಚು ಜಾಗರೂಕರಾಗಿರುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯ ಸ್ಥಿತಿಯು ಉತ್ತಮಾಗಿರುವುದಿಲ್ಲ. ಅದನ್ನು ಕಡೆಗಣಿಸಬೇಡಿ. ಆಲೋಚನೆಯಿಲ್ಲದ ಮಾತಿನ ಮೂಲಕ ನೀವು ಇತರರನ್ನು ಅವಮಾನಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಿಡುಕಿನ ಬಗ್ಗೆ ನಿಯಂತ್ರಣವಿರಲಿ. ನಿಮ್ಮ ದಿನವು ತೊಂದರೆಗಳಿಂದ ತುಂಬಿರಬಹುದು ಮತ್ತು ಇದಕ್ಕೆ ತ್ವರಿತ ಗಮನದ ಅಗತ್ಯವಿದೆ..
ವೃಶ್ಚಿಕ :-
ಈ ದಿನವು ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ಸ್ನೇಹಿತರನ್ನು ಭೇಟಿ ಮಾಡುವಿರಿ ಮತ್ತು ಅವರೊಂದಿಗೆ ಸಂತೋಷದಿಂದ ಕಾಲಕಳೆಯುವಿರಿ. ಆದರೂ, ಈಗ ಸದ್ಯದಲ್ಲಿಯೇ ನೀವು ವೇತನ ಮತ್ತು ಆದಾಯದಲ್ಲಿ ವೃದ್ಧಿಯನ್ನು ಕಾಣಬಹುದು. ವಾಸ್ತವವಾಗಿ, ಈ ದಿನವು ಉತ್ತಮ ದಿನವಾಗಿರುವಂತೆ ಅನಿಸುತ್ತದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಮತ್ತು ನೀವು ಸಂಗಾತಿಯೊಂದಿಗೆ ಖುಷಿಯಿಂದಿರುವಿರಿ.
ಧನು :-
ನಿಮ್ಮ ಅದೃಷ್ಟ ಗ್ರಹಗತಿಗಳು ಇಂದು ಇನ್ನಷ್ಟು ಪ್ರಕಾಶಿಸುತ್ತಿವೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇಂದು ನೀವು ‘ಸಹಾಯ ಮಾಡಲು ಸಂತೋಷ’ ಮನಸ್ಥಿತಿಯಲ್ಲಿರುತ್ತೀರಿ. ಇದು ನಿಮ್ಮ ಸುತ್ತಲಿರುವ ಜನರಿಂದ ಶ್ಲಾಘನೆಗೊಳಪಡುತ್ತದೆ. ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ನಿಮ್ಮ ಮೇಲಾಧಿಕಾರಿಗಳನ್ನು ಪ್ರಭಾವಿತಗೊಳಿಸುವುದು ಇಂದು ನಿಮ್ಮ ಗುರಿಯಾಗಲಿದೆ. ನೀವು ಬಡ್ತಿ ಪಡೆಯುವ ಸಾಧ್ಯತೆಯಿರುವುದರಿಂದ ನೀವು ಅದೃಷ್ಟಶಾಲಿಗಳಾಗುವಿರಿ. ವ್ಯವಹಾರ ಸಂಬಂಧ ಪ್ರವಾಸ ತೆರಳುವಿರಿ. ಹಿರಿಯರು ವಿಶೇಷವಾಗಿ ತಂದೆಯು ನಿಮಗೆ ಶುಭಸುದ್ದಿಯನ್ನು ತಿಳಿಸಲಿದ್ದಾರೆ ಮತ್ತು ಇದು ನಿಮಗೆ ದೀರ್ಘಕಾಲದವರೆಗೆ ಲಾಭದಾಯಕವಾಗಲಿದೆ.
ಮಕರ :-
ಈ ದಿನವು ಸಾಮಾನ್ಯ ದಿನವಾಗಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಏನೇ ಆದರೂ, ಬೌದ್ಧಿಕ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸೂಕ್ತ ದಿನ. ನಿಮ್ಮ ಸೃಜನಶೀಲತೆಯು ಸರಾಗವಾಗಿ ಹರಿಯುತ್ತದೆ ಮತ್ತು ಇಂದು ನೀವು ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಉತ್ತಮ ನಿರ್ವಹಣೆಯನ್ನು ಮಾಡುತ್ತೀರಿ. ಇಷ್ಟು ಸಾಕಾಗದಿದ್ದಲ್ಲಿ, ಸೃಜನಶೀಲ ಹಂಬಲವನ್ನು ಸಂತೃಪ್ತಿಗೊಳಿಸಲು ನೀವು ಪುಸ್ತಕ ಪಠಣ ಸಭೆಯ ಕಲಾ ಪ್ರದರ್ಶನವನ್ನು ಸಂಘಟಿಸಬಹುದು. ಸರಕಾರಿ ಸಂಬಂಧಿ ವಿಚಾರಗಳಲ್ಲಿ ನೀವು ವಿರೋಧಿಗಳನ್ನು ಎದುರಿಸಬೇಕಾದೀತು. ಇಂದು ನೀವು ನಿರುತ್ಸಾಹ ಮತ್ತು ಮುಂಗೋಪದಿಂದ ಇರುವ ಸಾಧ್ಯತೆಯಿರುವುದರಿಂದ ನಿಮ್ಮ ಆರೋಗ್ಯವು ಎಂದಿನಂತೆ ಉತ್ತಮ ಸ್ಥಿತಿಯಲ್ಲಿರುವುದಿಲ್ಲ.
ಕುಂಭ :-
ಸಾಕಷ್ಟು ಚಿಂತೆಗಳು ನಿಮ್ಮಲ್ಲಿ ಅಧಿಕ ಒತ್ತಡವನ್ನು ಆಹ್ವಾನಿಸಬಹುದು ಮತ್ತು ಇದು ಕ್ರಮೇಣ ಕೋಪ ಮತ್ತು ಸಿಡುಕಿಗೆ ಹಾದಿಮಾಡಿಕೊಡಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ದೇವರನ್ನು ನೆನಪಿಸುವ ಮೂಲಕ, ಶಾಂತರಾಗಿರುವ ಮೂಲಕ ಮತ್ತು ಧ್ಯಾನದ ಮೂಲಕ ಇಂತಹ ಸಂದರ್ಭಗಳಿಂದ ದೂರವಿರಲು ಪ್ರಯತ್ನಿಸಿ. ಇಂದು ವಿಷಯಗಳನ್ನು ಶಾಂತಗೊಳಿಸುತ್ತದೆ. ಕಳ್ಳತನ ಮುಂತಾದ ಅನ್ಯಾಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ನಿರಾಶಾವಾದದ ವರ್ತನೆಯು ಬೇರೆಯವರ ಮನಸ್ಸನ್ನು ನೋಯಿಸಬಹುದು. ನಿಮ್ಮ ಮಾತಿನಲ್ಲಿ ಕಹಿ ಬೆರೆಸಬೇಡಿ. ನಿಮ್ಮ ಮನೆಯಲ್ಲಿ ಶುಭಕರ ಸಮಾರಂಭ ನಡೆಯಬಹುದು ಮತ್ತು ಇದರಿಂದಾಗಿ ನಿಮ್ಮ ಖರ್ಚಿನಲ್ಲಿ ಹೆಚ್ಚಳ ಉಂಟಾಗಬಹುದು.
ಮೀನ :-
ನಿಮ್ಮ ಗ್ರಹಗತಿಗಳು ಅನುಕೂಲಕರವಾಗಿವೆ ಮತ್ತು ಎಲ್ಲಾ ರೀತಿಯ ಕಲೆಯಲ್ಲೂ ಅತ್ಯುತ್ತಮ ನಿರ್ವಹಣೆಯನ್ನು ಮಾಡಲು ಅವುಗಳು ನಿಮಗೆ ಸಹಕರಿಸಲಿವೆ ಎಂಬುದಾಗಿ ಗಣೇಶ ಹೇಳುತ್ತಾರೆ. ವ್ಯವಹಾರದಲ್ಲಿ ಹೊಸ ಪಾಲುದಾರಿಕೆಗೆ ಉತ್ತಮ ಸಮಯ. ದೈನಂದಿನ ಬೇಸರದಿಂದ ಸೋತು ಹೋಗಿರುವವರು ದಿನವನ್ನು ಸಂಭ್ರಮಿಸಲು ಬಯಸುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಸ್ನೇಹಕೂಟ ಅಥವಾ ವಿಹಾರಕ್ಕೆ ತೆರಳುವ ಬಗ್ಗೆ ಆಲೋಚಿಸಬಹುದು. ನಿಮ್ಮ ಕುಟುಂಬ ಸದಸ್ಯರನ್ನು ತಿರುಗಾಟಕ್ಕೆ ಕರೆದುಕೊಂಡು ಹೋಗುವ ಮೂಲಕ ಅವರೊಂದಿಗಿನ ಬಾಂಧವ್ಯವು ಇನ್ನಷ್ಟು ಭಿಗಿಯಾಗಲಿದೆ. ಯಶಸ್ಸು ನಿಮಗೆ ಗೌರವವನ್ನು ತರುತ್ತದೆ.
Horoscope Today : 05 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now