Govt Updates : ನಮಸ್ಕಾರ ಸ್ನೇಹಿತರೇ, ಇದೇ ಜುಲೈ ಒಂದರಿಂದ ಇಡೀ ದೇಶಾದ್ಯಂತ ನಾಲ್ಕು ಹೊಸ ರೂಲ್ಸ್ಗಳು ಜಾರಿಯಾಗಲಿದ್ದು, ಪ್ರತಿಯೊಬ್ಬರ ಮೇಲೂ ಕೂಡ ಇದು ದೊಡ್ಡ ಪರಿಣಾಮವನ್ನು ಉಂಟುಮಾಡಲಿದೆ. ಕೂಲಿ ಕೆಲಸ ಮಾಡುವದರಿಂದ ಹಿಡಿದು ಸರ್ಕಾರಿ ಹುದ್ದೆಯಲ್ಲಿರುವವರಿಗೂ, ರೈತರಿಗೂ, ಮಹಿಳೆಯರಿಗೂ ಕೂಡ ಈ ನಾಲ್ಕು ಹೊಸ ರೂಲ್ಸ್ಗಳು ಪರಿಣಾಮವನ್ನುಂಟು ಮಾಡಲಿವೆ. ಇದೇ ಜುಲೈ ಒಂದರಿಂದ ಜಾರಿಗೆ ಬರುತ್ತಿರುವ ಆ ನಾಲ್ಕು ಹೊಸ ರೂಲ್ಸ್ ಗಳು ಯಾವುದು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಮಂತ್ರಿ ಹುದ್ದೆಗೇರಿದ ನರೇಂದ್ರ ಮೋದಿ ಅವರು ದೇಶಾದ್ಯಂತ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತ ಬಂದಿದ್ದಾರೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅದೇ ರೀತಿಯಾಗಿ ಕರ್ನಾಟಕದಲ್ಲಿಯೂ ಕೂಡ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಚುಕ್ಕಾಣಿಯನ್ನ ಕೈಗೆತ್ತಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ಇನ್ನು ಕೂಡ ಜಮೆ ಆಗಿಲ್ಲ. ಎಲ್ಲವನ್ನೂ ಪರಿಗಣಿಸುತ್ತಾ ಬಂದ್ರೆ ಜುಲೈ ಒಂದರಿಂದ ಸಾಕಷ್ಟು ಬದಲಾವಣೆಗಳು ಉಂಟಾಗಲಿದೆ ಎನ್ನುವ ಬಗ್ಗೆ ವರದಿಯಾಗುತ್ತಿವೆ.
ಇದನ್ನೂ ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ.! ಹೊಸ ಅಪ್ಡೇಟ್ ಏನು.?
ಸಿಮ್ ಕಾರ್ಡ್ ನ ಹೊಸ ನಿಯಮ :- ಟೆಲಿಕಾಂ ನಿಯಂತ್ರಕ ಟ್ರಾಯ್, ಸಿಮ್ ಸ್ವ್ಯಾಪ್ ವಂಚನೆಯನ್ನು ತಡೆಯಲು ಜುಲೈ 1 ರಿಂದ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ನಿಯಮವನ್ನ ಬದಲಿಸಲು ನಿರ್ಧರಿಸಿದೆ. ಸಿಮ್ ಕಾರ್ಡ್ ಕಳ್ಳತನ ಅಥವಾ ಹಾನಿಯ ಸಂದರ್ಭದಲ್ಲಿ ಲಾಕ್ ಅವಧಿಯನ್ನು ಏಳು ದಿನದವರೆಗೆ ಹೆಚ್ಚಿಸಲಾಗಿದೆ. ಮೊದಲು ಹೊಸ ಸಿಮ್ ತಕ್ಷಣವೇ ಲಭ್ಯವಾಗುತ್ತಿತ್ತು.
ಕ್ರೆಡಿಟ್ ಕಾರ್ಡ್ ಪಾವತಿಯ ಹೊಸ ನಿಯಮ :- ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ಜುಲೈ ಒಂದರಿಂದ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಇದರಲ್ಲಿ ಎಲ್ಲ ಬ್ಯಾಂಕ್ಗಳು ಭಾರತದಲ್ಲಿನ ಒಂದು ಸಂಯೋಜಿತ ಬಿಲ್ ಪಾವತಿ ವ್ಯವಸ್ಥೆ ಆಗಿರುವ ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿಯನ್ನ ಪ್ರಕ್ರಿಯೆಗೊಳಿಸಬೇಕಾಗುತ್ತದೆ. ಆದರೆ, ಈ ಸೂಚನೆಗಳನ್ನ ಬ್ಯಾಂಕ್ಗಳು ಇನ್ನೂ ಪಾಲಿಸಿಲ್ಲ. ಇಲ್ಲಿಯವರೆಗೆ ಕೇವಲ ಎಂಟು ಬ್ಯಾಂಕ್ಗಳು ಬಿಬಿಪಿಎಸ್ ನಲ್ಲಿ ಬಿಲ್ ಪಾವತಿಯನ್ನು ಸಕ್ರಿಯಗೊಳಿಸಿವೆ.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಎಲ್ ಪಿಜಿ, ಎಟಿಎಫ್ ನ ಹೊಸ ಬೆಲೆಗಳು :- ಪ್ರತಿ ತಿಂಗಳ ಮೊದಲನೆಯ ದಿನ ಪೆಟ್ರೋಲಿಯಂ ಕಂಪನಿಗಳು ಎಲ್ಪಿಜಿ ಸಿಲಿಂಡರ್ಗಳು ಮತ್ತು ಎಟಿಎಫ್ ಗಳ ಬೆಲೆಗಳನ್ನ ಪರಿಷ್ಕರಿಸುತ್ತವೆ. ಆದರೆ ಕಳೆದ ಕೆಲವು ತಿಂಗಳಿನಿಂದ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬಾರಿ ವಾಣಿಜ್ಯದ ಜೊತೆಗೆ 14 ಕೆಜಿ ಎಲ್ಪಿಜಿ ಸಿಲಿಂಡರ್ ದರವೂ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಿರುವಾಗ ಜುಲೈ ಒಂದರಂದು ಗ್ಯಾಸ್ ಬೆಲೆಯಲ್ಲಿ ಜನಸಾಮಾನ್ಯರಿಗೆ ಪರಿಹಾರ ಸಿಗುತ್ತದೋ.? ಇಲ್ಲವೋ.? ಕಾದು ನೋಡಬೇಕಿದೆ.
ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳು :- ಸರ್ಕಾರಿ ತೈಲ ಮಾರಾಟ ಕಂಪನಿಗಳು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನ ನವೀಕರಣ ಮಾಡಿದ್ದು, ಜುಲೈ 1 ರ ಮುಂಜಾನೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಸಾಮಾನ್ಯ ಜನರು ರಿಲೀಫ್ ಪಡೆಯುತ್ತಾರಾ.? ಕಾದು ನೋಡಬೇಕಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- Gold Rate Today : ಇಳಿಕೆಯ ಹಾದಿ ಮರೆತ ಬಂಗಾರ.! ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ಗೊತ್ತಾ.?
- IPL 2025 : ಇಂದು ಬೆಂಗಳೂರಿನಲ್ಲಿ ಆರ್ ಸಿಬಿಯ ವಿಜಯ ಯಾತ್ರೆ : ಎಲ್ಲಿಂದ ಎಲ್ಲಿಗೆ.?
- ವಿರಾಟ್, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್ನಿಂದ!
- ದುಡ್ಡು ಕೊಟ್ರೇ RCB ಆಟಗಾರ ನಾಳೆ JCB ಕಡೆ ಹೋಗ್ತಾನೆ! ವ್ಯಂಗ್ಯವಾಡಿದ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ
- Gold Rate : ಇಂದಿನ ಚಿನ್ನದ ಬೆಲೆ ಎಷ್ಟಾಗಿದೆ ನೋಡಿ – ಹೆಣ್ಣುಮಕ್ಕಳಿಗೆ ಸಿಹಿಸುದ್ದಿ ನೀಡುತ್ತಾ ಬಂಗಾರ.!
- ಕೋಟ್ಯಂತರ ಗ್ರಾಹಕರಿಗೆ ಗುಡ್ ನ್ಯೂಸ್, ಮಿನಿಮಂ ಬ್ಯಾಲೆನ್ಸ್ ದಂಡ ರದ್ದುಗೊಳಿಸಿದ ರಾಷ್ಟ್ರೀಕೃತ ಬ್ಯಾಂಕ್
- ಐಪಿಎಲ್ ಫೈನಲ್ ಪಂದ್ಯಕ್ಕೆ ಮಳೆ ಭೀತಿ.? ಮ್ಯಾಚ್ ರದ್ದಾದರೆ ಚಾಂಪಿಯನ್ ಕಿರೀಟ ಯಾರಿಗೆ.? ಇಬ್ಬರಿಗೂ ಟ್ರೋಫಿ ಹಂಚಲಾಗುತ್ತಾ?
- ಆರ್ಸಿಬಿ ಹಾಗು ಪಂಜಾಬ್ ಐಪಿಎಲ್ ಫೈನಲ್ ಪಂದ್ಯ ಪ್ರದರ್ಶಿಸಲು ಮುಂದಾದ ಚಿತ್ರಮಂದಿರಗಳು.! ಆರ್ಸಿಬಿ ಸೋತರೆ ಅಷ್ಟೇ ಕಥೆ!
- 18 ವರ್ಷಗಳ ಕಾಯುವಿಕೆ, RCB – ಕೊಹ್ಲಿ ಕನಸು ; ಯಾರಾಗಲಿದ್ದಾರೆ ಚೊಚ್ಚಲ ಚಾಂಪಿಯನ್.?
- ಕನ್ನಡವನ್ನ ಅವಮಾನಿಸಿ ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!
- Gold Rate Today : ಇಂದಿನ ಗೋಲ್ಡ್ ರೇಟ್ ಎಷ್ಟಾಗಿದೆ ಗೊತ್ತಾ.? ಹೆಣ್ಣುಮಕ್ಕಳಿಗೆ ಸಿಹಿಸುದ್ದಿ ನೀಡುತ್ತಾ ಚಿನ್ನ.!
- RCB ಕಪ್ ಗೆದ್ರೆ ದಿನೇಶ್ ಕಾರ್ತಿಕ್ ಅನ್ನು ಹಿಡಿಯೋದು ಮಾತ್ರ ಬಹಳ ಕಷ್ಟ! ಯಾಕೆ.? ನಾಸೀರ್ ಹುಸೇನ್ ಅಚ್ಚರಿಯ ಹೇಳಿಕೆ
- IPL 2025 : RCB ಫೈನಲ್ಸ್ ಎಂಟ್ರಿಗೆ ಡಿಂಪಲ್ ಕ್ವೀನ್ ಸಂತಸ, ‘ಈ ಸಲ ಕಪ್ ನಮ್ದೇ’ ಎಂದ ರಚಿತಾ ರಾಮ್
- ಗಂಟಲಲ್ಲಿ ಕಪ್ ಕೇಕ್ ಸಿಲುಕಿ ಮಹಿಳೆ ಸಾವು ; ಮಗಳ ಮದುವೆಗೆ ಒಂದು ದಿನ ಇರುವಾಗ ನಡೆಯಿತು ದುರಂತ
- ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂದ ಮುಖ್ಯಮಂತ್ರಿ ಚಂದ್ರು
- ಕನ್ನಡಿಗರ ಮೇಲೆ ನಿಲ್ಲದ ಪರ ರಾಜ್ಯದವರ ದಬ್ಬಾಳಿಕೆ, ಆಟೋ ಡ್ರೈವರ್ ಗೆ ಚಪ್ಪಲಿಯಿಂದ ಥಳಿಸಿದ ಯುವತಿ!
- ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡೋಕಾಗಲ್ಲ ; ಕಾರಣ ಬಿಚ್ಚಿಟ್ಟ ನಿರ್ಮಾಪಕ ಕೆ ಮಂಜು
- ಮೋದಿ ಸರಕಾರದ ಮುಖವಾಡ ಕಳಚಿ ಬಿದ್ದಿದೆ, ತಕ್ಷಣ ಅಧಿವೇಶನ ಕರೆಯಿರಿ : ಸಿಡಿಎಸ್ ಮಾತಿಗೆ ಸಿಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
- ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೆ ಸಂಕಷ್ಟ – ಥಿಯೇಟರ್ ಸುಡ್ತೀವಿ ಅಂದ್ರೂ ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ಗೆ ಸಿದ್ಧತೆ!
- ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’- ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ನಟ ಕಿಶೋರ್