e-Shram Card : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ನೀಡುವ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳ ಮೂರು ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ. ಇದು ಯಾವ ಯೋಜನೆ ಮತ್ತು ಈ ಯೋಜನೆಯ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನಾವು ಸವಿಸ್ತಾರವಾಗಿ ನಿಮಗೆ ತಿಳಿಸಿದ್ದೇವೆ. ಅದನ್ನು ಸಂಪೂರ್ಣವಾಗಿ ನೋಡಿಕೊಂಡು ನಿಮಗೂ ಅಥವಾ ನಿಮ್ಮ ಕುಟುಂಬದಲ್ಲಿ ಇರುವ ಯಾವುದಾದರೂ ಸದಸ್ಯರ ಹೆಸರನ್ನು ಈ ಯೋಜನೆಯಲ್ಲಿ ನೊಂದಾಯಿಸಬೇಕು ಅನ್ನುವ ಹಾಗಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅದನ್ನು ಸರಿಯಾಗಿ ಓದಿಕೊಂಡು ನೀವು ಈ ಒಂದು ಕಾರ್ಡಿಗೆ ಅರ್ಜಿ ಹಾಕಬಹುದು.
ಈ ಒಂದು ಯೋಜನೆಯ ಬಗ್ಗೆ ನಮ್ಮ ದೇಶದಲ್ಲಿನ ಹಲವು ಜನರಿಗೆ ಮಾಹಿತಿ ಗೊತ್ತಿಲ್ಲ. ಆದ್ದರಿಂದ ಈ ಲೇಖನದಲ್ಲಿ ಇದು ಯಾವ ಯೋಜನೆ ಮತ್ತು ಈ ಯೋಜನೆ ಮೂಲಕ ಹೇಗೆ ಲಾಭ ಪಡೆಯಬೇಕು ಅನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಈ ಯೋಜನೆಗೆ ಅರ್ಜಿ ಹಾಕಿದರೆ ಪ್ರತಿ ತಿಂಗಳು 3000 ಹಣವನ್ನು ಉಚಿತವಾಗಿ ಪಡೆಯಬಹುದು. ಆದ್ದರಿಂದ ಈ ಯೋಜನೆಯ ಬಗ್ಗೆ ಎಲ್ಲರೂ ತಿಳಿದುಕೊಂಡು ಈ ಯೋಜನೆಯ ಲಾಭವನ್ನು ಪಡೆಯಬೇಕು ಅನ್ನುವುದು ಇವತ್ತಿನ ಈ ನಮ್ಮ ಲೇಖನದ ಉದ್ದೇಶವಾಗಿದೆ. ಈ ಯೋಜನೆಗೆ ಬೇಕಾಗುವ ಪ್ರತಿಯೊಂದು ಮಾಹಿತಿಯನ್ನು ಸರಳ ಭಾಷೆಯಲ್ಲಿ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ ನಾವು ಈ ಕೆಳಗೆ ನೀಡಿದ್ದೇವೆ ಅದನ್ನು ಕೊನೆಯವರೆಗೂ ಓದಿ.
ಈ ಮೇಲೆ ಹೇಳಿದ ರೀತಿಯಲ್ಲಿ ನೀವು ಪ್ರತಿ ತಿಂಗಳು 3000 ಹಣವನ್ನು ಪಡೆಯಲು ಇ -ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೌದು ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ನೀಡುವ ಈ ಒಂದು ಕಾರ್ಡ್ ಅರ್ಜಿ ಹಾಕಿ, ಈ ಒಂದು ಕಾರ್ಡನ್ನು ನೀವು ಪಡೆದರೆ ನಿಮಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ 3000 ಹಣವನ್ನು ನೀಡಲಾಗುತ್ತದೆ. ಇ -ಶ್ರಮ ಕಾರ್ಡ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಸರ್ಕಾರಿ ನೌಕರರಿಗೆ ಯಾವ ರೀತಿ ರಿಟೈರ್ಮೆಂಟ್ ಆದ ಮೇಲೆ ಪೆನ್ಷನ್ ಹಣ ಬರುತ್ತದೆ. ಅದೇ ರೀತಿ ಕೂಲಿ ಕಾರ್ಮಿಕರು ವೃದ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ನೀಡಬೇಕು ಅನ್ನುವ ಉದ್ದೇಶಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ, ಈ ಯೋಜನೆಯಲ್ಲಿ ಅರ್ಜಿ ಹಾಕಿದವರಿಗೆ ಪ್ರತಿ ತಿಂಗಳು 3000 ರೂಪಾಯಿ ಹಣವನ್ನು ನೀಡಲಾಗುತ್ತದೆ. ಆದ್ದರಿಂದ ಈ ಯೋಜನೆಗೆ ತಪ್ಪದೆ ಎಲ್ಲರೂ ಅರ್ಜಿ ಹಾಕಿ. ಈ ಯೋಜನೆಗೆ ಯಾರೆಲ್ಲಾ ಅರ್ಜಿ ಹಾಕಬಹುದು ಮತ್ತು ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳೇನು ಅನ್ನುವ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ನಮ್ಮ ಲೇಖನಗಳಲ್ಲಿ ಭಾರತದಲ್ಲಿನ ರೈತರಿಗಾಗಿ ತರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ, ರೈತರಿಗೆ ನೀಡುವ ಸಬ್ಸಿಡಿ ಉಪಕರಣಗಳ ಅರ್ಜಿಯ ಮಾಹಿತಿ, ರೈತರ ಜಮೀನಿಗೆ ಸಂಬಂಧಪಟ್ಟ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಎಕ್ಸಾಮ್ ರಿಸಲ್ಟ್, ಹೊಸ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರದಿಂದ ಹೊರಡಿಸುವ ಹೊಸ ಹೊಸ ವಿವಿಧ ಹುದ್ದೆಗಳ ಅಧಿಸೂಚನೆಯ ಮಾಹಿತಿಯನ್ನು ಸಂಪೂರ್ಣವಾಗಿ ಸರಳ ಭಾಷೆಯಲ್ಲಿ ನಿಮಗೆ ತಿಳಿಸುತ್ತೇವೆ. ಈ ಮೇಲೆ ಹೇಳಿದ ಪ್ರತಿಯೊಂದು ವಿಷಯಗಳ ಮಾಹಿತಿ ನೇರವಾಗಿ ಪಡೆಯಲು ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ತಪ್ಪದೇ ಜಾಯಿನ್ ಆಗಿರಿ.
ಇ-ಶ್ರಮ್ ಕಾರ್ಡ್ ವಿವರ :-
ಈ ಒಂದು ಇ-ಶ್ರಮ್ ಕಾರ್ಡ್ ನ್ನು ಅಗಸ್ಟ್ 2021 ರಂದು ಜಾರಿಗೆ ತರಲಾಯಿತು. ಈ ಒಂದು ಯೋಜನೆಯನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ದಿನಗೂಲಿ ಕೆಲಸಗಾರರಿಗೆ ವಯಸ್ಸಾದಾಗ ಅಂದರೆ ವೃದ್ಧ ವಯಸ್ಸಿನಲ್ಲಿ ಆರ್ಥಿಕವಾಗಿ ಭದ್ರತೆ ನೀಡಬೇಕು ಅನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.
ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ನೀಡಬೇಕು ಅನ್ನುವ ಉದ್ದೇಶದಿಂದ ಈ ಒಂದು ಇ -ಶ್ರಮ ಕಾರ್ಡ್ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧ ವಯಸ್ಸಿನಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡುತ್ತದೆ. ಈ ರೀತಿಯಾಗಿ ಪ್ರತಿ ತಿಂಗಳು ಹಣವನ್ನು ಪಿಂಚಣಿ ರೂಪದಲ್ಲಿ ನೀಡಿ, ಕಾರ್ಮಿಕರಿಗೆ ವೃದ್ಧ ಆಯಸ್ಸಿನಲ್ಲಿ ಆರ್ಥಿಕವಾಗಿ ಸಹಕರಿಸಬೇಕು ಅನ್ನುವುದು ಈ ಒಂದು ಇ -ಶ್ರಮ ಕಾರ್ಡ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಈಗಾಗಲೇ ಹಲವು ಅಸಂಘಟಿತ ಕಾರ್ಮಿಕರು ಲಾಭವನ್ನು ಪಡೆದಿದ್ದಾರೆ.
ನೀವೇನಾದರೂ ಅಸಂಘಟಿತ ವಲಯಕ್ಕೆ ಸೇರಿದ ಕೂಲಿ ಕಾರ್ಮಿಕರಾಗಿದ್ದರೆ ತಪ್ಪದೆ ಈ ಒಂದು ಯೋಜನೆಯಲ್ಲಿ ನೋಂದಾಯಿಸಿಕೊಂಡು ಯೋಜನೆಯನ್ನು ಮುಂದುವರಿಸಿಕೊಂಡು ಹೋಗಿ. ಏಕೆಂದರೆ ಮುಂದೆ ನಿಮಗೆ ವಯಸ್ಸಾದಾಗ ಯಾವುದೇ ರೀತಿಯ ಆರ್ಥಿಕ ತೊಂದರೆಗಳಾಗದಂತೆ ಜೀವನ ನಡೆಸಲು ಈ ಒಂದು ಯೋಜನೆಯ ಮೂಲಕ ನಿಮಗೆ ವಯಸ್ಸಾದಾಗ ಪ್ರತಿ ತಿಂಗಳು ಪಿಂಚಣಿ ನೀಡುವ ಮೂಲಕ, ಆರ್ಥಿಕವಾಗಿ ಭದ್ರತೆಯನ್ನು ಈ ಯೋಜನೆಯ ನೀಡುತ್ತದೆ. ಆದ್ದರಿಂದ ಇ -ಶ್ರಮ ಕಾರ್ಡ್ ಯೋಚನೆಯಲ್ಲಿ ಎಲ್ಲಾ ಕೂಲಿಕಾರ್ಮಿಕರು ತಪ್ಪದೆ ನೊಂದಣಿ ಮಾಡಿಕೊಳ್ಳಿ.
ಯಾರೆಲ್ಲ ಈ ಯೋಜನೆಗೆ ಅರ್ಜಿ ಹಾಕಬಹುದು :-
ಕೂಲಿ ಕಾರ್ಮಿಕರು : ಪ್ರತಿದಿನ ಕೂಲಿ ಮಾಡಿ ತಮ್ಮ ಕುಟುಂಬದ ಸಂಸಾರವನ್ನು ನಡೆಸುವ ಕೂಲಿ ಕಾರ್ಮಿಕರು ಅಂದರೆ ಯಾವುದೇ ರೀತಿಯ ಪ್ರತಿದಿನ ಕೂಲಿ ಮಾಡುವ ಕೆಲಸಗಾರರಾಗಿರಬಹುದು ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯಿಂದ 3000 ಹಣವನ್ನು ಪ್ರತಿ ತಿಂಗಳು ಪಡೆಯಬಹುದು.
ತರಕಾರಿ ವ್ಯಾಪಾರಿಗಳು : ಗ್ರಾಮೀಣ ಅಥವಾ ನಗರಗಳಲ್ಲಿ ತಮ್ಮ ಜೀವನವನ್ನು ನಡೆಸಲು ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಕೆಲಸಗಾರರು ಕೂಡ ಅಸಂಘಟಿತ ವಲಯದಲ್ಲಿ ಪರಿಗಣಿಸಲಾಗುತ್ತದೆ ಇಂಥವರು ಕೂಡ ಈ ಒಂದು ಯೋಜನೆಗೆ ಅರ್ಜಿ ಹಾಕಿ ಇ -ಶ್ರಮ ಕಾರ್ಡ್ ಪಡೆದು ಯೋಜನೆಯ ಲಾಭ ಪಡೆಯಬಹುದಾಗಿದೆ.
ಗಾರೆ ಕೆಲಸ ಮಾಡುವವರು : ನಮಗೆ ಗೊತ್ತಿರುವ ಹಾಗೆ ಗಾರೆ ಕೆಲಸ ಮಾಡುವವರು ಪ್ರತಿದಿನದ ಕೂಲಿಯನ್ನು ತೆಗೆದುಕೊಳ್ಳುತ್ತಾರೆ. ಈ ಪ್ರತಿದಿನ ಕೂಲಿಯಿಂದ ತಮ್ಮ ಕುಟುಂಬದವನ್ನು ನಡೆಸಿಕೊಂಡು ಹೋಗುತ್ತಾರೆ. ಇಂತಹ ಗಾರೆ ಕೆಲಸಗರನ್ನು ಕೂಡ ಅಸಂಘಟಿತ ಕೆಲಸಗಾರರು ಆದ್ದರಿಂದ ಇವರು ಕೂಡ ಇ -ಶ್ರಮ ಕಾರ್ಡ್ ಯೋಜನೆಯ ಲಾಭ ಪಡೆಯಬಹುದಾಗಿದೆ.
ಬೀದಿ ಬದಿ ವ್ಯಾಪಾರಿಗಳು : ಬೀದಿ ಬದಿಯಲ್ಲಿ ಚಪ್ಪಲಿ ಮಾರುವವರು, ಹಣ್ಣು ಮಾರುವವರು, ಬಟ್ಟೆ ಮಾರುವವರು, ಯಾವುದಾದರೂ ಊಟ ಮಾರುವವರು ಮತ್ತು ಮಕ್ಕಳ ಆಟಿಕೆ ಗಳ ಮಾರಾಟ ಮಾಡುವವರು ಈ ರೀತಿಯ ಬೀದಿ ಬದಿ ವ್ಯಾಪಾರಿಗಳು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ ಇವರು ಕೂಡ ಈ ಒಂದು ಕಾರ್ಡ್ ಮಾಡಿಸಿಕೊಂಡು ಯೋಜನೆಯ ಲಾಭ ಪಡೆಯಬಹುದು.
ಕೃಷಿ ಕಾರ್ಮಿಕರು : ರೈತರ ಜಮೀನಿನಲ್ಲಿ ಕೆಲಸ ಮಾಡುವ ಕೆಲವು ಹೆಣ್ಣುಮಕ್ಕಳು ಹಾಗೂ ಕೆಲವು ಪುರುಷರು ದಿನದ ಕೂಲಿಯನ್ನು ಪಡೆದು ಕೆಲಸ ಮಾಡುತ್ತಾರೆ. ಇಂತವರು ಕೂಡ ಅಸಂಘಟಿತ ಕೆಲಸಗರಾರೆ. ಅದಕ್ಕಾಗಿ ಇವರು ಕೂಡ ಈ ಯೋಜನೆಗೆ ಅರ್ಜಿ ಹಾಕಬಹುದು.
ಒಟ್ಟಿನಲ್ಲಿ ಪ್ರತಿ ದಿನ ತಮ್ಮ ಕುಟುಂಬವನ್ನು ನಡೆಸಲು ಸಣ್ಣ ಪುಟ್ಟ ವ್ಯಾಪಾರ ಅಥವಾ ಕೂಲಿ ಕೆಲಸವನ್ನು ಮಾಡುವ ಮತ್ತು ಅಸಂಘಟಿತ (ಅಂದರೆ ಸಂಘಗಳನ್ನು ಕಟ್ಟಿಕೊಂಡು ಕೆಲಸ ಮಾಡುವವರಲ್ಲ) ಕೆಲಸಗಾರರು ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಬಹುದು.
ಇದನ್ನೂ ಕೂಡ ಓದಿ : PM Kisan Scheme : ಪಿಎಂ ಕಿಸಾನ್ ರೈತರಿಗೆ ಸಿಹಿಸುದ್ಧಿ.! ಹೊಸ ವರ್ಷಕ್ಕೆ ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಜಮಾ.!
ಇ-ಶ್ರಮ್ ಕಾರ್ಡ್ ನ ಲಾಭಗಳು :-
• ನೀವೇನಾದರೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದು, ಈ ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದರೆ ನಿಮಗೆ ಮುಂದೆ ವಯಸ್ಸಾದಾಗ ಈ ಯೋಚನೆಯ ಮೂಲಕ ಪ್ರತಿ ತಿಂಗಳ 3000 ರೂಪಾಯಿ ಪಿಂಚಣಿಯನ್ನು ನೀಡಲಾಗುತ್ತದೆ.
• ಇ-ಶ್ರಮ್ ಕಾರ್ಡ್ ಯೋಜನೆಯಲ್ಲಿ ನೊಂದಾಯಿಸಿಕೊಂಡ ವ್ಯಕ್ತಿಯು ಯಾವುದಾದರೂ ಅಪಘಾತಗಳಿಗೆ ಸಿಲುಕಿ ಮರಣ ಹೊಂದಿದ್ದರೆ, ಅವರು ನಾಮಿನಿ ಹೆಸರಿನವರಿಗೆ ಎರಡು ಲಕ್ಷದ ತನಕ ಪರಿಹಾರಧನವನ್ನು ನೀಡಲಾಗುತ್ತದೆ.
• ಇ-ಶ್ರಮ್ ಕಾರ್ಡ್ ಯೋಜನೆಯಲ್ಲಿ ನೋಂದಾಯಿಸಿಕೊಂಡ ವ್ಯಕ್ತಿ ಯಾವುದಾದರೂ ಅಪಘಾತಗಳಿಂದ ಅಂಗವಿಕಲರಾದರೆ ಅಂತವರಿಗೆ ಈ ಯೋಜನೆಯ ಮೂಲಕ ಒಂದು ಲಕ್ಷದ ತನಕ ಸಹಾಯಧನ ನೀಡಲಾಗುತ್ತದೆ.
ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಅರ್ಹತೆಗಳು :–
• ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ನೀವು ಅಸಂಘಟಿತ ವಲಯದಲ್ಲಿ ಸೇರುವ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿರಬೇಕು.
• ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಪ್ರಮುಖವಾದ ಅರ್ಹತೆ ಎಂದರೆ, ಅರ್ಜಿ ಹಾಕಲು ಬಯಸುವ ವ್ಯಕ್ತಿಯು 18 ವರ್ಷ ಮೇಲೆ ಮತ್ತು 59 ವರ್ಷ ವಯಸ್ಸು ಕೆಳಗೆ ಇರಬೇಕು. ಅಂತವರು ಈ ಯೋಜನೆಗೆ ಅರ್ಜಿ ಹಾಕಬಹುದು.
ಈ ಮೇಲೆ ನೀಡಿದ ಅರ್ಹತೆಗಳ ಹೊಂದಿದ ಅಸಂಘಟಿತ ವಲಯದ ಮೇಲೆ ನೀಡಿದ ಎಲ್ಲಾ ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಿಗಳು ಈ ಒಂದು ಯೋಜನೆಗೆ ಅರ್ಜಿ ಹಾಕಿ, ಇ -ಶ್ರಮ ಕಾರ್ಡ್ ಪಡೆದು ಯೋಚನೆಯ ಮೂಲಕ ಪ್ರತಿ ತಿಂಗಳು 3000 ರೂಪಾಯಿಯ ಪಿಂಚಣಿ ಹಣವನ್ನು ಪಡೆಯಬಹುದು.
ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :-
• ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಕಾರ್ಮಿಕ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ವ್ಯಕ್ತಿಯ ಗುರುತಿನ ಚೀಟಿ
ಇ -ಶ್ರಮ ಕಾರ್ಡ್ ಗೆ ಹೇಗೆ ಅರ್ಜಿ ಹಾಕುವುದು :-
ನೀವು ಅಸಂಘಟಿತ ವಲಯಕ್ಕೆ ಸೇರಿದ ಕೂಲಿ ಕಾರ್ಮಿಕರಾಗಿದ್ದು, ಮೇಲೆ ನೀಡಿದ ಎಲ್ಲಾ ಅರ್ಹತೆಗಳು ಹಾಗೂ ದಾಖಲೆಗಳನ್ನು ಹೊಂದಿದ್ದರೆ ಈ ಕೆಳಗೆ ನೀಡಿದ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಒತ್ತಿ ನಂತರ ಅಲ್ಲಿ ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಇ -ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಇಲ್ಲಿ ಒತ್ತಿ :- https://eshram.gov.in/
ಸೂಚನೆ : ನಿಮಗೆ ಈ ಮೇಲೆ ನೀಡಿದ ಮೇಲೆ ಒತ್ತಿ ಮೊಬೈಲ್ ಅಲ್ಲಿ ಅರ್ಜಿ ಹಾಕಲು ಬರಲ್ಲ ಅಂದರೆ, ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
- ಬಾಡಿಗೆ ಮನೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ!! ನಿಮ್ಮ ಕನಸು ನನಸಾಗುತ್ತದೆ!!
- ಜಾತಿಗಣತಿಯಲ್ಲಿ ಕೆಲಸ ಮಾಡಿದ ಎಲ್ಲಾ ಶಿಕ್ಷಕರಿಗೂ ಗುಡ್ ನ್ಯೂಸ್ | Karnataka Caste Census 2025
- ಅಕ್ಟೋಬರ್ 21 ರವರೆಗೆ ಮಳೆ.! ಮಳೆ.! || 12 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ | Rain Update
- ‘ಇಂಡಸ್ಟ್ರಿಗೆ ಎಲ್ಲಾ ಫ್ರೀ ಕೊಡ್ತಾರೆ..’ ಗೂಗಲ್ಗೆ ಆಂಧ್ರಪ್ರದೇಶ ನೀಡಿರುವ ಪ್ಯಾಕೇಜ್ ಆರ್ಥಿಕ ವಿಪತ್ತು ಎಂದ ಪ್ರಿಯಾಂಕ್ ಖರ್ಗೆ!
- Canara Bank : ಕೆನರಾ ಬ್ಯಾಂಕ್ ನಲ್ಲಿ ಖಾತೆ ಇರುವ 60 ವರ್ಷದ ದಾಟಿದವರಿಗೆ ಗುಡ್ ನ್ಯೂಸ್
- ವಿಷ್ಣುವರ್ಧನ್ ಜೊತೆ ನಟಿಸಿದ್ದ ಖ್ಯಾತ ನಟ ಇನ್ನಿಲ್ಲ.! ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ
- ರಾಜ್ಯದಲ್ಲಿ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ನೌಕರರ ಅಮಾನತು ಎಂದ ಸಚಿವ ಪ್ರಿಯಾಂಕ್ ಖರ್ಗೆ
- ಕೊನೆಗೂ ಕ್ಯಾನ್ಸರೇ ಗೆದ್ದುಬಿಡ್ತು… ಕ್ಯಾನ್ಸರ್ ಪೀಡಿತ 21ರ ಹರೆಯದ ಯುವಕನ ಕೊನೆಯ ಪೋಸ್ಟ್ ಭಾರೀ ವೈರಲ್
- ನನಗೂ ಮುಖ್ಯಮಂತ್ರಿ ಆಫರ್ ಇತ್ತು : ಡಿಸಿಎಂ ಡಿಕೆ ಶಿವಕುಮಾರ್ ಬಳಿಕ ಎಚ್ ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ
- ಜಾತಿಗಣತಿಗೆ ಮಾಹಿತಿ ನಿರಾಕರಿಸಿದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೆ, ಪ್ರದೀಪ್ ಈಶ್ವರ್ ಟೆಂಪಲ್ ಕೌಂಟರ್!
- ದೀಪಾವಳಿಗೂ ಮುನ್ನ PF ಅಕೌಂಟ್ ಗೆ ಗುಡ್ ನ್ಯೂಸ್ | PF Account Rules
- ರಾಜ್ಯದ ಸರ್ಕಾರೀ ನೌಕರರಿಗೆ ನವೆಂಬರ್ 1 ರಿಂದ ಹೊಸ ರೂಲ್ಸ್ | ಹೊಸ ಆದೇಶ
- SSLC Exam : ಈ ವರ್ಷದಿಂದ 33% ಅಂಕ ಪಡೆದರೆ SSLC ಪಾಸ್
- ವೈಟ್ ಬೋರ್ಡ್ ವಾಹನ ಇದ್ದವರಿಗೆ ಕೋರ್ಟ್ ಹೊಸ ಆದೇಶ | ವಾಹನ ಚಾಲಕರು, ಮಾಲೀಕರು ತಪ್ಪದೇ ಈ ನಿಯಮವನ್ನ ಪಾಲಿಸಿ
- ಸರ್ಕಾರೀ ಜಾಗದಲ್ಲಿದ್ದವರಿಗೆ ಕೊನೆಗೂ ದೊಡ್ಡ ಗುಡ್ ನ್ಯೂಸ್ | Akrama Sakarama 2025
- Gold Rate : ಭಾರೀ ಏರಿಕೆಯತ್ತ ಸಾಗಿದ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ದರ.?
- ಪಿಂಚಣಿ ಮೊತ್ತದಲ್ಲಿ 7500 ರೂ ಏರಿಕೆ, ದೀಪಾವಳಿ ಗುಡ್ ನ್ಯೂಸ್ | Senior Citizens Pension Hike
- ಈ 5 ಆಸ್ತಿಯಲ್ಲಿ ಹೆಣ್ಣಿಗೆ ಸಿಗುತ್ತಿದ್ದ ಪಾಲು ರದ್ದುಗೊಳಿಸಿದ ಕೋರ್ಟ್, ಕೇಸ್ ಹಾಕಿದ್ರು ಫೇಲ್ | Property Act
- ಸ್ವಂತ ಕೃಷಿಭೂಮಿ ಇದ್ದವರಿಗೆ ದೀಪಾವಳಿ ಘೋಷಣೆ | ಹೊಸ 2 ಸೇವೆ – ಸಂಪೂರ್ಣ ಮಾಹಿತಿ ಇಲ್ಲಿದೆ
- ಈ 5 ದಾಖಲೆ ಸಾಬೀತು ಮಾಡಿದರೆ ಮಾತ್ರ BPL ಕಾರ್ಡ್ | ಹೊಸ ಆದೇಶ – BPL Ration Card
- ದಸರಾ ರಜೆ ಬೆನ್ನಲ್ಲೆ ಎಸ್ಎಸ್ಎಲ್ಸಿ (SSLC) ಪರೀಕ್ಷೆಗೆ ರಾಜ್ಯದ್ಯಂತ ಹೊಸ ರೂಲ್ಸ್ – SSLC Exam 2026
- ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ ಕುರಿತು ಹೊಸ ಆದೇಶ ಪ್ರಕಟ | Retirement Age
- ಈ 3 ಬ್ಯಾಂಕ್ ನಲ್ಲಿ 2 ಲಕ್ಷದವರೆಗೆ ಹಣ ಇದ್ದವರಿಗೆ ಹೊಸ ರೂಲ್ಸ್ | Bank Account Rules
- ದಸರಾ ರಜೆ ಮುಂದೂಡಿದ ಬೆನ್ನಲ್ಲೇ ಮಕ್ಕಳಿಗೆ ಹೊಸ ರೂಲ್ಸ್ | Dasara Holiday
- Gold Rate : ಅಲ್ಪ ಇಳಿಕೆ ಕಂಡಿದ ಚಿನ್ನದ ಬೆಲೆ.? ಎಷ್ಟಾಗಿದೆ ಗೊತ್ತಾ ಇವತ್ತಿನ ಚಿನ್ನದ ಬೆಲೆ.?
- ರಾಜ್ಯದಲ್ಲಿ ಸಿಎಂ ‘ಕುರ್ಚಿಗಾಗಿ’ ಹೊಡೆದಾಟ : ಸಿದ್ದರಾಮಯ್ಯ ‘CM’ ಸ್ಥಾನದ ಕುರಿತು ಬ್ರಹ್ಮಾಂಡ ಗುರೂಜಿ ಸ್ಫೋಟಕ ಭವಿಷ್ಯ!
- ಬೆಳೆಹಾನಿ ಪರಿಹಾರಕ್ಕಾಗಿ ಕಾಯುತ್ತಿದ್ದವರಿಗೆ ದೊಡ್ಡ ಗುಡ್ ನ್ಯೂಸ್ – Crop Insurance & Loan Waiver