e-Shram Card : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ನೀಡುವ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳ ಮೂರು ಸಾವಿರ ರೂಪಾಯಿ ಹಣವನ್ನು ನೀಡಲಾಗುತ್ತದೆ. ಇದು ಯಾವ ಯೋಜನೆ ಮತ್ತು ಈ ಯೋಜನೆಯ ಎಲ್ಲಾ ಪ್ರಮುಖ ವಿಷಯಗಳ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನಾವು ಸವಿಸ್ತಾರವಾಗಿ ನಿಮಗೆ ತಿಳಿಸಿದ್ದೇವೆ. ಅದನ್ನು ಸಂಪೂರ್ಣವಾಗಿ ನೋಡಿಕೊಂಡು ನಿಮಗೂ ಅಥವಾ ನಿಮ್ಮ ಕುಟುಂಬದಲ್ಲಿ ಇರುವ ಯಾವುದಾದರೂ ಸದಸ್ಯರ ಹೆಸರನ್ನು ಈ ಯೋಜನೆಯಲ್ಲಿ ನೊಂದಾಯಿಸಬೇಕು ಅನ್ನುವ ಹಾಗಿದ್ದರೆ, ಅದಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅದನ್ನು ಸರಿಯಾಗಿ ಓದಿಕೊಂಡು ನೀವು ಈ ಒಂದು ಕಾರ್ಡಿಗೆ ಅರ್ಜಿ ಹಾಕಬಹುದು.
ಈ ಒಂದು ಯೋಜನೆಯ ಬಗ್ಗೆ ನಮ್ಮ ದೇಶದಲ್ಲಿನ ಹಲವು ಜನರಿಗೆ ಮಾಹಿತಿ ಗೊತ್ತಿಲ್ಲ. ಆದ್ದರಿಂದ ಈ ಲೇಖನದಲ್ಲಿ ಇದು ಯಾವ ಯೋಜನೆ ಮತ್ತು ಈ ಯೋಜನೆ ಮೂಲಕ ಹೇಗೆ ಲಾಭ ಪಡೆಯಬೇಕು ಅನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ. ಈ ಯೋಜನೆಗೆ ಅರ್ಜಿ ಹಾಕಿದರೆ ಪ್ರತಿ ತಿಂಗಳು 3000 ಹಣವನ್ನು ಉಚಿತವಾಗಿ ಪಡೆಯಬಹುದು. ಆದ್ದರಿಂದ ಈ ಯೋಜನೆಯ ಬಗ್ಗೆ ಎಲ್ಲರೂ ತಿಳಿದುಕೊಂಡು ಈ ಯೋಜನೆಯ ಲಾಭವನ್ನು ಪಡೆಯಬೇಕು ಅನ್ನುವುದು ಇವತ್ತಿನ ಈ ನಮ್ಮ ಲೇಖನದ ಉದ್ದೇಶವಾಗಿದೆ. ಈ ಯೋಜನೆಗೆ ಬೇಕಾಗುವ ಪ್ರತಿಯೊಂದು ಮಾಹಿತಿಯನ್ನು ಸರಳ ಭಾಷೆಯಲ್ಲಿ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ ನಾವು ಈ ಕೆಳಗೆ ನೀಡಿದ್ದೇವೆ ಅದನ್ನು ಕೊನೆಯವರೆಗೂ ಓದಿ.
ಈ ಮೇಲೆ ಹೇಳಿದ ರೀತಿಯಲ್ಲಿ ನೀವು ಪ್ರತಿ ತಿಂಗಳು 3000 ಹಣವನ್ನು ಪಡೆಯಲು ಇ -ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೌದು ಸ್ನೇಹಿತರೆ, ಕೇಂದ್ರ ಸರ್ಕಾರದಿಂದ ನೀಡುವ ಈ ಒಂದು ಕಾರ್ಡ್ ಅರ್ಜಿ ಹಾಕಿ, ಈ ಒಂದು ಕಾರ್ಡನ್ನು ನೀವು ಪಡೆದರೆ ನಿಮಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರದಿಂದ 3000 ಹಣವನ್ನು ನೀಡಲಾಗುತ್ತದೆ. ಇ -ಶ್ರಮ ಕಾರ್ಡ್ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಸರ್ಕಾರಿ ನೌಕರರಿಗೆ ಯಾವ ರೀತಿ ರಿಟೈರ್ಮೆಂಟ್ ಆದ ಮೇಲೆ ಪೆನ್ಷನ್ ಹಣ ಬರುತ್ತದೆ. ಅದೇ ರೀತಿ ಕೂಲಿ ಕಾರ್ಮಿಕರು ವೃದ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ನೀಡಬೇಕು ಅನ್ನುವ ಉದ್ದೇಶಕ್ಕೆ ಈ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ, ಈ ಯೋಜನೆಯಲ್ಲಿ ಅರ್ಜಿ ಹಾಕಿದವರಿಗೆ ಪ್ರತಿ ತಿಂಗಳು 3000 ರೂಪಾಯಿ ಹಣವನ್ನು ನೀಡಲಾಗುತ್ತದೆ. ಆದ್ದರಿಂದ ಈ ಯೋಜನೆಗೆ ತಪ್ಪದೆ ಎಲ್ಲರೂ ಅರ್ಜಿ ಹಾಕಿ. ಈ ಯೋಜನೆಗೆ ಯಾರೆಲ್ಲಾ ಅರ್ಜಿ ಹಾಕಬಹುದು ಮತ್ತು ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ಅರ್ಹತೆಗಳೇನು ಅನ್ನುವ ಮಾಹಿತಿಯನ್ನು ಕೆಳಗೆ ಸಂಪೂರ್ಣವಾಗಿ ನೀಡಲಾಗಿದೆ.
ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?
ನಮ್ಮ ಲೇಖನಗಳಲ್ಲಿ ಭಾರತದಲ್ಲಿನ ರೈತರಿಗಾಗಿ ತರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ಮಾಹಿತಿ, ರೈತರಿಗೆ ನೀಡುವ ಸಬ್ಸಿಡಿ ಉಪಕರಣಗಳ ಅರ್ಜಿಯ ಮಾಹಿತಿ, ರೈತರ ಜಮೀನಿಗೆ ಸಂಬಂಧಪಟ್ಟ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಎಕ್ಸಾಮ್ ರಿಸಲ್ಟ್, ಹೊಸ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರದಿಂದ ಹೊರಡಿಸುವ ಹೊಸ ಹೊಸ ವಿವಿಧ ಹುದ್ದೆಗಳ ಅಧಿಸೂಚನೆಯ ಮಾಹಿತಿಯನ್ನು ಸಂಪೂರ್ಣವಾಗಿ ಸರಳ ಭಾಷೆಯಲ್ಲಿ ನಿಮಗೆ ತಿಳಿಸುತ್ತೇವೆ. ಈ ಮೇಲೆ ಹೇಳಿದ ಪ್ರತಿಯೊಂದು ವಿಷಯಗಳ ಮಾಹಿತಿ ನೇರವಾಗಿ ಪಡೆಯಲು ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ತಪ್ಪದೇ ಜಾಯಿನ್ ಆಗಿರಿ.
ಇ-ಶ್ರಮ್ ಕಾರ್ಡ್ ವಿವರ :-
ಈ ಒಂದು ಇ-ಶ್ರಮ್ ಕಾರ್ಡ್ ನ್ನು ಅಗಸ್ಟ್ 2021 ರಂದು ಜಾರಿಗೆ ತರಲಾಯಿತು. ಈ ಒಂದು ಯೋಜನೆಯನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ದಿನಗೂಲಿ ಕೆಲಸಗಾರರಿಗೆ ವಯಸ್ಸಾದಾಗ ಅಂದರೆ ವೃದ್ಧ ವಯಸ್ಸಿನಲ್ಲಿ ಆರ್ಥಿಕವಾಗಿ ಭದ್ರತೆ ನೀಡಬೇಕು ಅನ್ನುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.
ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ನೀಡಬೇಕು ಅನ್ನುವ ಉದ್ದೇಶದಿಂದ ಈ ಒಂದು ಇ -ಶ್ರಮ ಕಾರ್ಡ್ ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧ ವಯಸ್ಸಿನಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡುತ್ತದೆ. ಈ ರೀತಿಯಾಗಿ ಪ್ರತಿ ತಿಂಗಳು ಹಣವನ್ನು ಪಿಂಚಣಿ ರೂಪದಲ್ಲಿ ನೀಡಿ, ಕಾರ್ಮಿಕರಿಗೆ ವೃದ್ಧ ಆಯಸ್ಸಿನಲ್ಲಿ ಆರ್ಥಿಕವಾಗಿ ಸಹಕರಿಸಬೇಕು ಅನ್ನುವುದು ಈ ಒಂದು ಇ -ಶ್ರಮ ಕಾರ್ಡ್ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಈಗಾಗಲೇ ಹಲವು ಅಸಂಘಟಿತ ಕಾರ್ಮಿಕರು ಲಾಭವನ್ನು ಪಡೆದಿದ್ದಾರೆ.
ನೀವೇನಾದರೂ ಅಸಂಘಟಿತ ವಲಯಕ್ಕೆ ಸೇರಿದ ಕೂಲಿ ಕಾರ್ಮಿಕರಾಗಿದ್ದರೆ ತಪ್ಪದೆ ಈ ಒಂದು ಯೋಜನೆಯಲ್ಲಿ ನೋಂದಾಯಿಸಿಕೊಂಡು ಯೋಜನೆಯನ್ನು ಮುಂದುವರಿಸಿಕೊಂಡು ಹೋಗಿ. ಏಕೆಂದರೆ ಮುಂದೆ ನಿಮಗೆ ವಯಸ್ಸಾದಾಗ ಯಾವುದೇ ರೀತಿಯ ಆರ್ಥಿಕ ತೊಂದರೆಗಳಾಗದಂತೆ ಜೀವನ ನಡೆಸಲು ಈ ಒಂದು ಯೋಜನೆಯ ಮೂಲಕ ನಿಮಗೆ ವಯಸ್ಸಾದಾಗ ಪ್ರತಿ ತಿಂಗಳು ಪಿಂಚಣಿ ನೀಡುವ ಮೂಲಕ, ಆರ್ಥಿಕವಾಗಿ ಭದ್ರತೆಯನ್ನು ಈ ಯೋಜನೆಯ ನೀಡುತ್ತದೆ. ಆದ್ದರಿಂದ ಇ -ಶ್ರಮ ಕಾರ್ಡ್ ಯೋಚನೆಯಲ್ಲಿ ಎಲ್ಲಾ ಕೂಲಿಕಾರ್ಮಿಕರು ತಪ್ಪದೆ ನೊಂದಣಿ ಮಾಡಿಕೊಳ್ಳಿ.
ಯಾರೆಲ್ಲ ಈ ಯೋಜನೆಗೆ ಅರ್ಜಿ ಹಾಕಬಹುದು :-
ಕೂಲಿ ಕಾರ್ಮಿಕರು : ಪ್ರತಿದಿನ ಕೂಲಿ ಮಾಡಿ ತಮ್ಮ ಕುಟುಂಬದ ಸಂಸಾರವನ್ನು ನಡೆಸುವ ಕೂಲಿ ಕಾರ್ಮಿಕರು ಅಂದರೆ ಯಾವುದೇ ರೀತಿಯ ಪ್ರತಿದಿನ ಕೂಲಿ ಮಾಡುವ ಕೆಲಸಗಾರರಾಗಿರಬಹುದು ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯಿಂದ 3000 ಹಣವನ್ನು ಪ್ರತಿ ತಿಂಗಳು ಪಡೆಯಬಹುದು.
ತರಕಾರಿ ವ್ಯಾಪಾರಿಗಳು : ಗ್ರಾಮೀಣ ಅಥವಾ ನಗರಗಳಲ್ಲಿ ತಮ್ಮ ಜೀವನವನ್ನು ನಡೆಸಲು ತರಕಾರಿಗಳನ್ನು ಮಾರಾಟ ಮಾಡುತ್ತಿರುವ ಕೆಲಸಗಾರರು ಕೂಡ ಅಸಂಘಟಿತ ವಲಯದಲ್ಲಿ ಪರಿಗಣಿಸಲಾಗುತ್ತದೆ ಇಂಥವರು ಕೂಡ ಈ ಒಂದು ಯೋಜನೆಗೆ ಅರ್ಜಿ ಹಾಕಿ ಇ -ಶ್ರಮ ಕಾರ್ಡ್ ಪಡೆದು ಯೋಜನೆಯ ಲಾಭ ಪಡೆಯಬಹುದಾಗಿದೆ.
ಗಾರೆ ಕೆಲಸ ಮಾಡುವವರು : ನಮಗೆ ಗೊತ್ತಿರುವ ಹಾಗೆ ಗಾರೆ ಕೆಲಸ ಮಾಡುವವರು ಪ್ರತಿದಿನದ ಕೂಲಿಯನ್ನು ತೆಗೆದುಕೊಳ್ಳುತ್ತಾರೆ. ಈ ಪ್ರತಿದಿನ ಕೂಲಿಯಿಂದ ತಮ್ಮ ಕುಟುಂಬದವನ್ನು ನಡೆಸಿಕೊಂಡು ಹೋಗುತ್ತಾರೆ. ಇಂತಹ ಗಾರೆ ಕೆಲಸಗರನ್ನು ಕೂಡ ಅಸಂಘಟಿತ ಕೆಲಸಗಾರರು ಆದ್ದರಿಂದ ಇವರು ಕೂಡ ಇ -ಶ್ರಮ ಕಾರ್ಡ್ ಯೋಜನೆಯ ಲಾಭ ಪಡೆಯಬಹುದಾಗಿದೆ.
ಬೀದಿ ಬದಿ ವ್ಯಾಪಾರಿಗಳು : ಬೀದಿ ಬದಿಯಲ್ಲಿ ಚಪ್ಪಲಿ ಮಾರುವವರು, ಹಣ್ಣು ಮಾರುವವರು, ಬಟ್ಟೆ ಮಾರುವವರು, ಯಾವುದಾದರೂ ಊಟ ಮಾರುವವರು ಮತ್ತು ಮಕ್ಕಳ ಆಟಿಕೆ ಗಳ ಮಾರಾಟ ಮಾಡುವವರು ಈ ರೀತಿಯ ಬೀದಿ ಬದಿ ವ್ಯಾಪಾರಿಗಳು ಕೂಡ ಅಸಂಘಟಿತ ವಲಯದ ಕೂಲಿ ಕಾರ್ಮಿಕರಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ ಇವರು ಕೂಡ ಈ ಒಂದು ಕಾರ್ಡ್ ಮಾಡಿಸಿಕೊಂಡು ಯೋಜನೆಯ ಲಾಭ ಪಡೆಯಬಹುದು.
ಕೃಷಿ ಕಾರ್ಮಿಕರು : ರೈತರ ಜಮೀನಿನಲ್ಲಿ ಕೆಲಸ ಮಾಡುವ ಕೆಲವು ಹೆಣ್ಣುಮಕ್ಕಳು ಹಾಗೂ ಕೆಲವು ಪುರುಷರು ದಿನದ ಕೂಲಿಯನ್ನು ಪಡೆದು ಕೆಲಸ ಮಾಡುತ್ತಾರೆ. ಇಂತವರು ಕೂಡ ಅಸಂಘಟಿತ ಕೆಲಸಗರಾರೆ. ಅದಕ್ಕಾಗಿ ಇವರು ಕೂಡ ಈ ಯೋಜನೆಗೆ ಅರ್ಜಿ ಹಾಕಬಹುದು.
ಒಟ್ಟಿನಲ್ಲಿ ಪ್ರತಿ ದಿನ ತಮ್ಮ ಕುಟುಂಬವನ್ನು ನಡೆಸಲು ಸಣ್ಣ ಪುಟ್ಟ ವ್ಯಾಪಾರ ಅಥವಾ ಕೂಲಿ ಕೆಲಸವನ್ನು ಮಾಡುವ ಮತ್ತು ಅಸಂಘಟಿತ (ಅಂದರೆ ಸಂಘಗಳನ್ನು ಕಟ್ಟಿಕೊಂಡು ಕೆಲಸ ಮಾಡುವವರಲ್ಲ) ಕೆಲಸಗಾರರು ಈ ಯೋಜನೆಗೆ ಅರ್ಜಿ ಹಾಕಿ ಯೋಜನೆಯ ಲಾಭ ಪಡೆಯಬಹುದು.
ಇದನ್ನೂ ಕೂಡ ಓದಿ : PM Kisan Scheme : ಪಿಎಂ ಕಿಸಾನ್ ರೈತರಿಗೆ ಸಿಹಿಸುದ್ಧಿ.! ಹೊಸ ವರ್ಷಕ್ಕೆ ಪಿಎಂ ಕಿಸಾನ್ ಯೋಜನೆಯ 19 ನೇ ಕಂತಿನ ಹಣ ಜಮಾ.!
ಇ-ಶ್ರಮ್ ಕಾರ್ಡ್ ನ ಲಾಭಗಳು :-
• ನೀವೇನಾದರೂ ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿದ್ದು, ಈ ಯೋಜನೆಯಲ್ಲಿ ನೊಂದಾಯಿಸಿಕೊಂಡಿದ್ದರೆ ನಿಮಗೆ ಮುಂದೆ ವಯಸ್ಸಾದಾಗ ಈ ಯೋಚನೆಯ ಮೂಲಕ ಪ್ರತಿ ತಿಂಗಳ 3000 ರೂಪಾಯಿ ಪಿಂಚಣಿಯನ್ನು ನೀಡಲಾಗುತ್ತದೆ.
• ಇ-ಶ್ರಮ್ ಕಾರ್ಡ್ ಯೋಜನೆಯಲ್ಲಿ ನೊಂದಾಯಿಸಿಕೊಂಡ ವ್ಯಕ್ತಿಯು ಯಾವುದಾದರೂ ಅಪಘಾತಗಳಿಗೆ ಸಿಲುಕಿ ಮರಣ ಹೊಂದಿದ್ದರೆ, ಅವರು ನಾಮಿನಿ ಹೆಸರಿನವರಿಗೆ ಎರಡು ಲಕ್ಷದ ತನಕ ಪರಿಹಾರಧನವನ್ನು ನೀಡಲಾಗುತ್ತದೆ.
• ಇ-ಶ್ರಮ್ ಕಾರ್ಡ್ ಯೋಜನೆಯಲ್ಲಿ ನೋಂದಾಯಿಸಿಕೊಂಡ ವ್ಯಕ್ತಿ ಯಾವುದಾದರೂ ಅಪಘಾತಗಳಿಂದ ಅಂಗವಿಕಲರಾದರೆ ಅಂತವರಿಗೆ ಈ ಯೋಜನೆಯ ಮೂಲಕ ಒಂದು ಲಕ್ಷದ ತನಕ ಸಹಾಯಧನ ನೀಡಲಾಗುತ್ತದೆ.
ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಅರ್ಹತೆಗಳು :–
• ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ನೀವು ಅಸಂಘಟಿತ ವಲಯದಲ್ಲಿ ಸೇರುವ ಕೂಲಿ ಕಾರ್ಮಿಕರ ಕೆಲಸ ಮಾಡುತ್ತಿರಬೇಕು.
• ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಪ್ರಮುಖವಾದ ಅರ್ಹತೆ ಎಂದರೆ, ಅರ್ಜಿ ಹಾಕಲು ಬಯಸುವ ವ್ಯಕ್ತಿಯು 18 ವರ್ಷ ಮೇಲೆ ಮತ್ತು 59 ವರ್ಷ ವಯಸ್ಸು ಕೆಳಗೆ ಇರಬೇಕು. ಅಂತವರು ಈ ಯೋಜನೆಗೆ ಅರ್ಜಿ ಹಾಕಬಹುದು.
ಈ ಮೇಲೆ ನೀಡಿದ ಅರ್ಹತೆಗಳ ಹೊಂದಿದ ಅಸಂಘಟಿತ ವಲಯದ ಮೇಲೆ ನೀಡಿದ ಎಲ್ಲಾ ಕೂಲಿ ಕಾರ್ಮಿಕರು ಹಾಗೂ ವ್ಯಾಪಾರಿಗಳು ಈ ಒಂದು ಯೋಜನೆಗೆ ಅರ್ಜಿ ಹಾಕಿ, ಇ -ಶ್ರಮ ಕಾರ್ಡ್ ಪಡೆದು ಯೋಚನೆಯ ಮೂಲಕ ಪ್ರತಿ ತಿಂಗಳು 3000 ರೂಪಾಯಿಯ ಪಿಂಚಣಿ ಹಣವನ್ನು ಪಡೆಯಬಹುದು.
ಇ-ಶ್ರಮ್ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವ ದಾಖಲೆಗಳು :-
• ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
• ಆಧಾರ್ ಕಾರ್ಡ್
• ರೇಷನ್ ಕಾರ್ಡ್
• ಕಾರ್ಮಿಕ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ವ್ಯಕ್ತಿಯ ಗುರುತಿನ ಚೀಟಿ
ಇ -ಶ್ರಮ ಕಾರ್ಡ್ ಗೆ ಹೇಗೆ ಅರ್ಜಿ ಹಾಕುವುದು :-
ನೀವು ಅಸಂಘಟಿತ ವಲಯಕ್ಕೆ ಸೇರಿದ ಕೂಲಿ ಕಾರ್ಮಿಕರಾಗಿದ್ದು, ಮೇಲೆ ನೀಡಿದ ಎಲ್ಲಾ ಅರ್ಹತೆಗಳು ಹಾಗೂ ದಾಖಲೆಗಳನ್ನು ಹೊಂದಿದ್ದರೆ ಈ ಕೆಳಗೆ ನೀಡಿದ ಅಧಿಕೃತ ವೆಬ್ ಸೈಟ್ ಲಿಂಕ್ ಮೇಲೆ ಒತ್ತಿ ನಂತರ ಅಲ್ಲಿ ಎಲ್ಲ ದಾಖಲೆಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
ಇ -ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಇಲ್ಲಿ ಒತ್ತಿ :- https://eshram.gov.in/
ಸೂಚನೆ : ನಿಮಗೆ ಈ ಮೇಲೆ ನೀಡಿದ ಮೇಲೆ ಒತ್ತಿ ಮೊಬೈಲ್ ಅಲ್ಲಿ ಅರ್ಜಿ ಹಾಕಲು ಬರಲ್ಲ ಅಂದರೆ, ನಿಮ್ಮ ಹತ್ತಿರದ ಯಾವುದಾದರೂ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
- ಆರ್ಸಿಬಿ ಹಾಗು ಪಂಜಾಬ್ ಐಪಿಎಲ್ ಫೈನಲ್ ಪಂದ್ಯ ಪ್ರದರ್ಶಿಸಲು ಮುಂದಾದ ಚಿತ್ರಮಂದಿರಗಳು.! ಆರ್ಸಿಬಿ ಸೋತರೆ ಅಷ್ಟೇ ಕಥೆ!
- 18 ವರ್ಷಗಳ ಕಾಯುವಿಕೆ, RCB – ಕೊಹ್ಲಿ ಕನಸು ; ಯಾರಾಗಲಿದ್ದಾರೆ ಚೊಚ್ಚಲ ಚಾಂಪಿಯನ್.?
- ಕನ್ನಡವನ್ನ ಅವಮಾನಿಸಿ ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ತಡೆಯದಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ನಟ ಕಮಲ್ ಹಾಸನ್!
- Gold Rate Today : ಇಂದಿನ ಗೋಲ್ಡ್ ರೇಟ್ ಎಷ್ಟಾಗಿದೆ ಗೊತ್ತಾ.? ಹೆಣ್ಣುಮಕ್ಕಳಿಗೆ ಸಿಹಿಸುದ್ದಿ ನೀಡುತ್ತಾ ಚಿನ್ನ.!
- RCB ಕಪ್ ಗೆದ್ರೆ ದಿನೇಶ್ ಕಾರ್ತಿಕ್ ಅನ್ನು ಹಿಡಿಯೋದು ಮಾತ್ರ ಬಹಳ ಕಷ್ಟ! ಯಾಕೆ.? ನಾಸೀರ್ ಹುಸೇನ್ ಅಚ್ಚರಿಯ ಹೇಳಿಕೆ
- IPL 2025 : RCB ಫೈನಲ್ಸ್ ಎಂಟ್ರಿಗೆ ಡಿಂಪಲ್ ಕ್ವೀನ್ ಸಂತಸ, ‘ಈ ಸಲ ಕಪ್ ನಮ್ದೇ’ ಎಂದ ರಚಿತಾ ರಾಮ್
- ಗಂಟಲಲ್ಲಿ ಕಪ್ ಕೇಕ್ ಸಿಲುಕಿ ಮಹಿಳೆ ಸಾವು ; ಮಗಳ ಮದುವೆಗೆ ಒಂದು ದಿನ ಇರುವಾಗ ನಡೆಯಿತು ದುರಂತ
- ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್ ಹಾಸನ್ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು ಎಂದ ಮುಖ್ಯಮಂತ್ರಿ ಚಂದ್ರು
- ಕನ್ನಡಿಗರ ಮೇಲೆ ನಿಲ್ಲದ ಪರ ರಾಜ್ಯದವರ ದಬ್ಬಾಳಿಕೆ, ಆಟೋ ಡ್ರೈವರ್ ಗೆ ಚಪ್ಪಲಿಯಿಂದ ಥಳಿಸಿದ ಯುವತಿ!
- ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡೋಕಾಗಲ್ಲ ; ಕಾರಣ ಬಿಚ್ಚಿಟ್ಟ ನಿರ್ಮಾಪಕ ಕೆ ಮಂಜು
- ಮೋದಿ ಸರಕಾರದ ಮುಖವಾಡ ಕಳಚಿ ಬಿದ್ದಿದೆ, ತಕ್ಷಣ ಅಧಿವೇಶನ ಕರೆಯಿರಿ : ಸಿಡಿಎಸ್ ಮಾತಿಗೆ ಸಿಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
- ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೆ ಸಂಕಷ್ಟ – ಥಿಯೇಟರ್ ಸುಡ್ತೀವಿ ಅಂದ್ರೂ ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ಗೆ ಸಿದ್ಧತೆ!
- ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’- ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ನಟ ಕಿಶೋರ್
- IPL 2025 : ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಗುಡ್ ನ್ಯೂಸ್.! ಟಿಮ್ ಡೇವಿಡ್ ಕಣಕ್ಕಿಳೀತಾರಾ.?
- RCB ಯ ಪ್ರತಿ ಪಂದ್ಯದಲ್ಲೂ ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂರುವ ಈ ಮಹಿಳೆ ಯಾರು.? ಗೂಗಲ್ನಲ್ಲಿ ಯಾಕೆ ಈ ಮಹಿಳೆ ಬಗ್ಗೆ ಸರ್ಚ್ ಆಗ್ತಿದೆ.?
- ದುಬೈನಲ್ಲಿ ಪಾಕಿಸ್ತಾನಿ ಕ್ರಿಕೆಟಗ ಶಾಹಿದ್ ಅಫ್ರಿದಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ ; ತೀವ್ರ ಆಕ್ರೋಶ.!
- ಚೆಪಾಕ್ನಲ್ಲಿ ಸಿಎಸ್ಕೆ ಸೋಲಿಸುವುದರಿಂದ ಹಿಡಿದು ಫೈನಲ್ವರೆಗೆ… ಐಪಿಎಲ್ 2025ರಲ್ಲಿ ಫೈನಲ್ವರೆಗಿನ ಹಾದಿಯಲ್ಲಿ ಆರ್ಸಿಬಿ ಮಾಡಿರುವ ಮಹಾ ರೆಕಾರ್ಡ್ಗಳು!
- Rachita Ram : ಎಲ್ಲಾದರೂ ಇರು ಎಂತಾದರೂ ಇರು ಕನ್ನಡದವನಾಗಿರು ; ಕಮಲ್ ಎದುರು ತೆಪ್ಪಗಿದ್ದ ಶಿವಣ್ಣನಿಗೆ ಟಾಂಗ್ ಕೊಟ್ಟ ರಚಿತಾ ರಾಮ್!?
- ರಾಜ್ಯದಲ್ಲಿನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದರೆ, ಗುಟ್ಕಾ/ತಂಬಾಕು ಉಗುಳಿದರೆ 1000 ದಂಡ : ನಿಷೇಧ ಕಾಯ್ದೆ ಜಾರಿಗೊಳಿಸಿದ ಸರ್ಕಾರ
- Head Master Suspended : ಮಕ್ಕಳು ಬಿಸಿಲಲ್ಲಿ ಕೂರಬಾರದೆಂದು ಶಾಲಾ ಕೊಠಡಿ ಕೇಳಿದ ಮುಖ್ಯಶಿಕ್ಷಕನಿಗೆ ಅಮಾನತು ಶಿಕ್ಷೆ
- Bantwal Murder : ಮುಸ್ಲಿಮರ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ, ರಾಜ್ಯಕ್ಕೆ ಹೊಸ ಹೋಂ ಮಿನಿಸ್ಟರ್ ಬರ್ತಾರಾ.?
- ಇನ್ನೆಂದೂ ಹೀಗೆ ಮಾಡೋಲ್ಲ – ಕೊನೆಗೂ ಕನ್ನಡಿಗರ ಬಳಿ ಕ್ಷಮೆಯಾಚಿಸಿದ ನಟ ಕಮಲ್ ಹಾಸನ್.!
- Gold Rate Today : ಗೋಲ್ಡ್ ರೇಟ್ ಎಷ್ಟಾಗಿದೆ ಗೊತ್ತಾ.? ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.?
- ಆರ್ ಸಿಬಿ ಬಗ್ಗೆ ಹಿಂಗೆಲ್ಲಾ ಹೇಳಲು ನಿಮಗೆಷ್ಟು ಧೈರ್ಯ : ಸಿಡಿದೆದ್ದ ಕನ್ನಡಿಗರ ದತ್ತು ಪುತ್ರ ಎಬಿಡಿ ವಿಲಿಯರ್ಸ್
- RCB ಗೆಲುವಿನ ಕ್ರೆಡಿಟ್ ಅನ್ನು ರಜತ್ ಕೊಟ್ಟಿದ್ದು ಯಾರಿಗೆ.? ಪಂದ್ಯದಲ್ಲಿ ಕೊನೆವರೆಗೆ ಪಂಜಾಬ್ ಅನ್ನು ಮೇಲೇಳಲು ಬಿಡಲೇ ಇಲ್ಲ ಈತ
- IPL 2025 : ಪಂಜಾಬ್ ಮಣಿಸಿ ಫೈನಲ್ಗೆ ಎಂಟ್ರಿ ಕೊಟ್ಟ ಆರ್ಸಿಬಿ : ಈ ಸಲ ಕಪ್ ನಮ್ಮದೇ ಎಂದ ಆರ್ ಸಿಬಿ ಫ್ಯಾನ್ಸ್
- Rain Alert : ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.!