e-Shram Card 2024 : ನಮಸ್ಕಾರ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ಈ ಯೋಜನೆಯಡಿ ಅರ್ಹ ಕಾರ್ಮಿಕರಿಗೆ ಉಚಿತ ಇ-ಶ್ರಮ್ ಕಾರ್ಡ್(e-Shram Card) ನೀಡಲಾಗುತ್ತದೆ. ಇದು ಅರ್ಹ ಫಲಾನುಭವಿ ಕಾರ್ಮಿಕರಿಗೆ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.? ಅರ್ಹತಾ ಮಾನದಂಡ, ನೋಂದಣಿ ಪ್ರಕ್ರಿಯೆ ಹೇಗೆ.? ಲಭ್ಯವಿರುವ ಪ್ರಯೋಜನಗಳೇನು ಎನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಉದ್ದೇಶಗಳೇನು.?
- ಸಾಮಾಜಿಕ ಭದ್ರತೆ : ಈ ಯೋಜನೆಯಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ದುರ್ಘಟನೆ, ಅನಾರೋಗ್ಯ, ವೃದ್ಧಾಪ್ಯ ಮತ್ತು ಮರಣದಂತಹ ಸಂದರ್ಭಗಳಲ್ಲಿ ಆರ್ಥಿಕ ನೆರವು ಒದಗಿಸುವುದು.
- ವಿಮಾ ರಕ್ಷಣೆ : ಈ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಅಪಘಾತ ವಿಮೆ ಮತ್ತು ಜೀವ ವಿಮೆಯನ್ನು ಒದಗಿಸಲಾಗುವುದು.
- ಕೌಶಲ್ಯ ಅಭಿವೃದ್ಧಿ : ಅರ್ಹ ಫಲಾನುಭವಿ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು.
- ಸರ್ಕಾರಿ ಯೋಜನೆಗಳಿಗೆ ಪ್ರವೇಶ : ಈ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿ ಕಾರ್ಮಿಕರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಜನ್ ಧನ ಯೋಜನೆ ಮತ್ತು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಗಳಂತಹ ವಿವಿಧ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಇ-ಶ್ರಮ್ ಕಾರ್ಡ್(e-Shram Card) ಯೋಜನೆಯ ಬಗ್ಗೆ ಮಾಹಿತಿ :-
- ಇ-ಶ್ರಮ್ ಕಾರ್ಡ್(e-Shram Card) ಅನೌಪಚಾರಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರ್ಕಾರದಿಂದ ಒದಗಿಸಲಾದ ಒಂದು ಯೋಜನೆಯಾಗಿದೆ. ಈ ಕಾರ್ಡ್ ಹೊಂದಿರುವವರು ಹಲವಾರು ಸೌಲಭ್ಯಗಳ ಪ್ರಯೋಜನವನ್ನ ಪಡೆದುಕೊಳ್ಳಬಹುದು.
- ಅಪಘಾತ ವಿಮೆ : ಯಾವುದೇ ಅಪಘಾತದ ಸಂದರ್ಭದಲ್ಲಿ, ಇ-ಶ್ರಮ್ ಕಾರ್ಡ್(e-Shram Card) ಹೊಂದಿರುವವರಿಗೆ ₹2 ಲಕ್ಷದವರೆಗೆ ವಿಮೆ ಲಭ್ಯವಿದೆ.
- ಮರಣೋತ್ತರ ಪರಿಹಾರ : ಕಾರ್ಮಿಕ ಮೃತಪಟ್ಟರೆ, ಅವರ ಕುಟುಂಬಕ್ಕೆ ₹3,000 ಪರಿಹಾರ ನೀಡಲಾಗುತ್ತದೆ.
- ವೃದ್ಧಾಪ್ಯ ಪಿಂಚಣಿ : 60 ವರ್ಷಕ್ಕೆ ತಲುಪಿದ ನಂತರ ಅರ್ಹ ಫಲಾನುಭವಿ ಕಾರ್ಮಿಕರಿಗೆ ತಿಂಗಳಿಗೆ ₹3,000 ರೂಪಾಯಿ ವೃದ್ಧಾಪ್ಯ ಪಿಂಚಣಿ ಸಿಗುತ್ತದೆ.
- ಶಿಕ್ಷಣ ಸಹಾಯ : ಇ-ಶ್ರಮ್ ಕಾರ್ಡ್(e-Shram Card) ಯೋಜನೆಯಡಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯಧನ ನೀಡಲಾಗುವುದು.
- ಆರೋಗ್ಯ ವಿಮೆ : ಈ ಯೋಜನೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಆರೋಗ್ಯ ವಿಮೆಯನ್ನ ಪಡೆಯಬಹುದು.
ಇ-ಶ್ರಮ್ ಕಾರ್ಡ್(e-Shram Card) ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು.?
- ಭಾರತೀಯ ನಾಗರಿಕರಾಗಿರಬೇಕು.
- 16 ರಿಂದ 59 ವರ್ಷ ವಯಸ್ಸಿನವರಾಗಿರಬೇಕು.
- ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು. (ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಮನೆಗೆಲಸದವರು, ಕೃಷಿ ಕಾರ್ಮಿಕರು ಇತ್ಯಾದಿ)
ಇ-ಶ್ರಮ್ ಕಾರ್ಡ್(e-Shram Card)ಗೆ ಬೇಕಾದ ಅಗತ್ಯ ದಾಖಲೆಗಳೇನು.?
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವೋಟರ್ ಐಡಿ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಗಾತ್ರದ ಫೋಟೋ
ಆನ್ಲೈನ್ ಹೇಗೆ ನೋಂದಣಿ ಮಾಡಿಸುವುದು :-
Ministry of Labour & Employment Government of India ವೆಬ್ ಸೈಟ್ ಗೆ ಭೇಟಿ ನೀಡಿ.“ರೆಜಿಸ್ಟರ್ ಆನ್ಲೈನ್” ಮೇಲೆ ಕ್ಲಿಕ್ ಮಾಡಿ.ನಂತರ ಅರ್ಜಿದಾರರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಎಂಟರ್ ಮಾಡಿ ಮತ್ತು “OTP ಯನ್ನು ನಮೂದಿಸಿ ಕ್ಲಿಕ್ ಮಾಡಿ.ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ, ಕೆಲಸದ ವಿವರಗಳು ಇತ್ಯಾದಿಗಳನ್ನು ಭರ್ತಿ ಮಾಡಿ. ಅಲ್ಲಿ ಕೇಳಿರುವಅಗತ್ಯವಿರುವ ದಾಖಲೆಗಳನ್ನು (ಆಧಾರ್ ಕಾರ್ಡ್, ಫೋಟೋ) ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡೋಕಾಗಲ್ಲ ; ಕಾರಣ ಬಿಚ್ಚಿಟ್ಟ ನಿರ್ಮಾಪಕ ಕೆ ಮಂಜು
- ಮೋದಿ ಸರಕಾರದ ಮುಖವಾಡ ಕಳಚಿ ಬಿದ್ದಿದೆ, ತಕ್ಷಣ ಅಧಿವೇಶನ ಕರೆಯಿರಿ : ಸಿಡಿಎಸ್ ಮಾತಿಗೆ ಸಿಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
- ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾಗೆ ಸಂಕಷ್ಟ – ಥಿಯೇಟರ್ ಸುಡ್ತೀವಿ ಅಂದ್ರೂ ಕರ್ನಾಟಕದಲ್ಲಿ ‘ಥಗ್ ಲೈಫ್’ ರಿಲೀಸ್ಗೆ ಸಿದ್ಧತೆ!
- ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’- ಕಮಲ್ ಹಾಸನ್ ಪರ ಬ್ಯಾಟ್ ಬೀಸಿದ ನಟ ಕಿಶೋರ್
- ಅತ್ತಿಗೆಯ ಶಿರಚ್ಛೇದ ಮಾಡಿ ರುಂಡ ಹಿಡಿದು ಪೊಲೀಸ್ ಠಾಣೆಗೆ ಬಂದ ವ್ಯಕ್ತಿ : ಬೆಚ್ಚಿ ಬೀಳಿಸೋ ವಿಡಿಯೋ ವೈರಲ್
- IPL 2025 : ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನ RCB ಅಭಿಮಾನಿಗಳಿಗೆ ಗುಡ್ ನ್ಯೂಸ್.! ಟಿಮ್ ಡೇವಿಡ್ ಕಣಕ್ಕಿಳೀತಾರಾ.?
- RCB ಯ ಪ್ರತಿ ಪಂದ್ಯದಲ್ಲೂ ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂರುವ ಈ ಮಹಿಳೆ ಯಾರು.? ಗೂಗಲ್ನಲ್ಲಿ ಯಾಕೆ ಈ ಮಹಿಳೆ ಬಗ್ಗೆ ಸರ್ಚ್ ಆಗ್ತಿದೆ.?
- ದುಬೈನಲ್ಲಿ ಪಾಕಿಸ್ತಾನಿ ಕ್ರಿಕೆಟಗ ಶಾಹಿದ್ ಅಫ್ರಿದಿಗೆ ಕೇರಳ ಸಮುದಾಯದವರಿಂದ ಅದ್ದೂರಿ ಸ್ವಾಗತ ; ತೀವ್ರ ಆಕ್ರೋಶ.!
- ಚೆಪಾಕ್ನಲ್ಲಿ ಸಿಎಸ್ಕೆ ಸೋಲಿಸುವುದರಿಂದ ಹಿಡಿದು ಫೈನಲ್ವರೆಗೆ… ಐಪಿಎಲ್ 2025ರಲ್ಲಿ ಫೈನಲ್ವರೆಗಿನ ಹಾದಿಯಲ್ಲಿ ಆರ್ಸಿಬಿ ಮಾಡಿರುವ ಮಹಾ ರೆಕಾರ್ಡ್ಗಳು!
- Rachita Ram : ಎಲ್ಲಾದರೂ ಇರು ಎಂತಾದರೂ ಇರು ಕನ್ನಡದವನಾಗಿರು ; ಕಮಲ್ ಎದುರು ತೆಪ್ಪಗಿದ್ದ ಶಿವಣ್ಣನಿಗೆ ಟಾಂಗ್ ಕೊಟ್ಟ ರಚಿತಾ ರಾಮ್!?
- ರಾಜ್ಯದಲ್ಲಿನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿದರೆ, ಗುಟ್ಕಾ/ತಂಬಾಕು ಉಗುಳಿದರೆ 1000 ದಂಡ : ನಿಷೇಧ ಕಾಯ್ದೆ ಜಾರಿಗೊಳಿಸಿದ ಸರ್ಕಾರ
- Head Master Suspended : ಮಕ್ಕಳು ಬಿಸಿಲಲ್ಲಿ ಕೂರಬಾರದೆಂದು ಶಾಲಾ ಕೊಠಡಿ ಕೇಳಿದ ಮುಖ್ಯಶಿಕ್ಷಕನಿಗೆ ಅಮಾನತು ಶಿಕ್ಷೆ
- Bantwal Murder : ಮುಸ್ಲಿಮರ ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ, ರಾಜ್ಯಕ್ಕೆ ಹೊಸ ಹೋಂ ಮಿನಿಸ್ಟರ್ ಬರ್ತಾರಾ.?
- ಇನ್ನೆಂದೂ ಹೀಗೆ ಮಾಡೋಲ್ಲ – ಕೊನೆಗೂ ಕನ್ನಡಿಗರ ಬಳಿ ಕ್ಷಮೆಯಾಚಿಸಿದ ನಟ ಕಮಲ್ ಹಾಸನ್.!
- Gold Rate Today : ಗೋಲ್ಡ್ ರೇಟ್ ಎಷ್ಟಾಗಿದೆ ಗೊತ್ತಾ.? ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಳಿತ ಕಂಡಿದೆ.?
- ಆರ್ ಸಿಬಿ ಬಗ್ಗೆ ಹಿಂಗೆಲ್ಲಾ ಹೇಳಲು ನಿಮಗೆಷ್ಟು ಧೈರ್ಯ : ಸಿಡಿದೆದ್ದ ಕನ್ನಡಿಗರ ದತ್ತು ಪುತ್ರ ಎಬಿಡಿ ವಿಲಿಯರ್ಸ್
- RCB ಗೆಲುವಿನ ಕ್ರೆಡಿಟ್ ಅನ್ನು ರಜತ್ ಕೊಟ್ಟಿದ್ದು ಯಾರಿಗೆ.? ಪಂದ್ಯದಲ್ಲಿ ಕೊನೆವರೆಗೆ ಪಂಜಾಬ್ ಅನ್ನು ಮೇಲೇಳಲು ಬಿಡಲೇ ಇಲ್ಲ ಈತ
- IPL 2025 : ಪಂಜಾಬ್ ಮಣಿಸಿ ಫೈನಲ್ಗೆ ಎಂಟ್ರಿ ಕೊಟ್ಟ ಆರ್ಸಿಬಿ : ಈ ಸಲ ಕಪ್ ನಮ್ಮದೇ ಎಂದ ಆರ್ ಸಿಬಿ ಫ್ಯಾನ್ಸ್
- Rain Alert : ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ : ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ.!
- ನಿನ್ನ ಮೇಲೆ ಅನುಮಾನಪಟ್ಟಿದ್ದಕ್ಕೆ ಕ್ಷಮಿಸು – ಜಿತೇಶ್ ಶರ್ಮಾಗೆ ಇಷ್ಟು ಮಂದಿ ಕ್ಷಮೆಯಾಚಿಸಿದ್ದೇಕೆ.?