ನೀವು ಮಾಧ್ಯಮದವರೆಲ್ಲಾ ಸೇರಿ ನನ್ನನ್ನ ರೇಪ್ ಒಂದು ಮಾಡಿಲ್ಲ… ಇನ್ ಏನ್ ಮಾಡಬೇಕೆಲ್ಲಾ ಮಾಡಿದ್ದೀರಿ, ಸುಳ್ಳು ಪಳ್ಳು ಹೇಳಿ ನನ್ನನ್ನು ವಿಲನ್ ಮಾಡಿದ್ದೀರಿ… ಎಂದು ಉಪಮುಖ್ಯಮಂತ್ರಿ ಡಿ.ಕ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೀವು ಮಾಧ್ಯಮದವರು ಸೇರಿ ನನ್ನನ್ನ ರೇಪ್ ಒಂದು ಮಾಡಿಲ್ಲ. ಇನ್ನು ಏನೇನ್ ಮಾಡಬೇಕ ಎಲ್ಲಾ ಮಾಡಿ, ಸುಳ್ಳು ಪಳ್ಳು ಹೇಳಿ ನನ್ನ ವಿಲನ್ ಮಾಡಿದ್ದೀರಿ. ಜಾತಿಗಣತಿ ವರದಿ ಬಗ್ಗೆ ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರು ಹಾಗೂ ಮಂತ್ರಿಗಳ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾನೂನಿನಲ್ಲಿ ಏನು ಮಾಡಬೇಕು ಎಲ್ಲಾ ಮಾಡಿದ್ದೀವಿ. ನಾಳೆ ಬೆಳಗ್ಗೆ ಯಾರಾದರೂ ಕೋರ್ಟ್ಗೆ ಹೋದ್ರೆ ಸಮಸ್ಯೆ ಆಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಮಾಡಿದ ಹಳೇ ಜಾತಿಗಣತಿಗೆ ಈಗಾಗಲೇ 10 ವರ್ಷ ಆಗಿದೆ. ಮೂರ್ನಾಲ್ಕು ತಿಂಗಳಿಂದ ಐದಾರು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೀವಿ. ಅಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನಮ್ಮ ಹೈಕಮಾಂಡ್ನವರು ನಮ್ಮನ್ನ ಕರೆಸಿ ಕೆಲವೊಂದು ಮಾರ್ಗದರ್ಶನಗಳನ್ನು ಕೊಟ್ಟಿದ್ದಾರೆ. ಎಲ್ಲರೂ ಸೇರಿ ಎಲ್ಲರ ಅಭಿಪ್ರಾಯ ನೀಡಿದ್ದಾರೆ. ಇದರ ಜೊತೆಗೆ ವಿರೋಧ ಪಕ್ಷದವರು ಜಾತಿ ಗಣತಿ ವರದಿ ಜಾರಿಗೆ ಬಹಳ ಒತ್ತಾಯ ಮಾಡುತ್ತಿದ್ದರು. ಈಗ ವಿರೋಧ ಪಕ್ಷದವರು ಏನೇನು ಮಾತನಾಡಿದ್ದಾರೆ ನೋಡಿ ಎಂದು ಹೇಳಿದರು.
ಜಾತಿ ಗಣತಿಯ ಬಗ್ಗೆ ಹೈಕಮಾಂಡ್ ಸೂಚನೆಯ ಬೆನ್ನಲ್ಲಿಯೇ ವಿಪಕ್ಷ ನಾಯಕರು ಏನೇನು ಮಾತನಾಡುತ್ತಿದ್ದಾರೆ ನೋಡಿ. ಅದಕ್ಕೆಲ್ಲಾ ಉತ್ತರ ಕೋಡೋಣ… ಯಾರಾರು ಏನೇನು ಹೇಳುತ್ತಿದ್ದಾರೆ, ಏನೇನು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ನೋಡುತ್ತಿದ್ದೇನೆ. ವಿಪಕ್ಷ ನಾಯಕ ಆರ್.ಅಶೋಕ್ ಏನ್ ಹೇಳಿದ್ದಾರೆ ಅಂತ ನೀವು ರೀ ಕಾಲ್ ಮಾಡಿ. ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಒಟ್ಟಿಗೆ ಸುದ್ದಿಗೋಷ್ಟಿ ಮಾಡಿ ಹೇಳಿದ್ದಾರೆ. ಈಗ ಎಲ್ಲರೂ ಹಳೇ ವರದಿಯನ್ನ ಒಪ್ಪಿಕೊಳ್ಳಲಿ ಎಂದು ಹೇಳಲಿ ನೋಡೋಣ. ಇಷ್ಟು ಹಣ ವೇಸ್ಟ್ ಆಗುತ್ತದೆ, ಅದನ್ನೆ ಅಕ್ಸೆಪ್ಟ್ ಮಾಡಲಿ ಎಂದು ಹೇಳಲಿ? ಅವರು ಹಿಂದೆ ಒಂದು, ಮುಂದೆ ಒಂದು ಮಾತಾಡನಾಡುತ್ತಿದ್ದಾರೆ. ನಮಗೆ ರಾಜಕೀಯ ಬಣ್ಣ ಬೇಡ. ಜನರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಅದಕ್ಕೆ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಹೇಳಿದರು.

ಮಾಧ್ಯಮದವರು ನನ್ನನ್ನ ರೇಪ್ ಒಂದು ಮಾಡಿಲ್ಲ..! ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ
WhatsApp Group
Join Now