Horoscope Today : 03 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದು ನಿಮ್ಮ ಸಿಟ್ಟನ್ನು ನಿಗ್ರಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮಾನಸಿಕ ಆಯಾಸವನ್ನು ನೀವು ಇಂದು ಅನುಭವಿಸಬಹುದು. ಇಂದು ನೀವು ಹೆಚ್ಚು ಶ್ರಮಪಡುತ್ತೀರಿ ಆದರೆ, ಪ್ರಯೋಜನಗಳು ಅಷ್ಟೊಂದು ಇರುವುದಿಲ್ಲ. ನೀವು ನಿಮ್ಮ ಮಕ್ಕಳ ಬಗ್ಗೆ ಚಿಂತೆಗೊಳಗಾಗುವಿರಿ.

ಕಾರ್ಯದೊತ್ತಡವು ನಿಮ್ಮ ಮನೆಮಂದಿಯೊಂದಿಗೆ ಕಾಲಕಳೆಯಲು ಸಾಧ್ಯವಾಗುವಿದಿಲ್ಲ. ಸರಕಾರಿ ಸಂಬಂಧಿತ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಉದರ ಸಂಬಂಧಿ ತೊಂದರೆಗಳು ಉಂಟಾಗಬಹುದು.

ವೃಷಭ :-

ಇಂದು ನೀವು ನಿಮ್ಮ ಕಾರ್ಯವನ್ನು ಅತ್ಯುತ್ತಮ ಆತ್ಮವಿಶ್ವಾಸ ಹಾಗೂ ಸ್ಥೈರ್ಯದೊಂದಿಗೆ ಹೊಂದುತ್ತೀರಿ ಮತ್ತು ನಿಮ್ಮ ಎಲ್ಲಾ ಶ್ರಮಗಳಲ್ಲೂ ಯಶಸ್ಸು ಸಿಗಲಿದೆ. ನಿಮ್ಮ ತಂದೆಯ ಕಡೆಯಿಂದ ಪ್ರಯೋಜನ ಸಿಗಲಿದೆ. ವಿದ್ಯಾರ್ಥಿಗಳಲ್ಲಿ ನೀವು ಹೆಚ್ಚು ಆಸಕ್ತಿ ಇರುವ ವಿದ್ಯಾರ್ಥಿಗಳಾಗುವಿರಿ. ಸರಕಾರಿ ಕಾರ್ಯಗಳಿಂದ ನೀವು ಹಣಕಾಸು ಪ್ರಯೋಜನಗಳನ್ನು ಪಡೆಯುವಿರಿ. ನಿಮ್ಮ ಮಕ್ಕಳಿಗಾಗಿ ಹೂಡಿಕೆ ಮಾಡುವಿರಿ.

ಮಿಥುನ :-

ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಸರಕಾರಿ ಕಾರ್ಯಗಳಿಂದ ನಿಮಗೆ ಪ್ರಯೋಜನ ಸಿಗಬಹುದು ಮತ್ತು ನಿಮ್ಮ ಮೇಲಾಧಿಕಾರಿಗ ಳಿಂದ ನೀವು ಪ್ರಶಂಸೆಗೆ ಒಳಗಾಗಬಹುದು. ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗಿನ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಆಲೋಚನೆಗಳನ್ನು ಬದಲಾಯಿಸುವ ಸಾಮರ್ಥ್ಯವು ಹೆಚ್ಚಾಗಿರುತ್ತದೆ. ಹಣಕಾಸು ವಹಿವಾಟುಗಳಲ್ಲಿ ಎಚ್ಚರಿಕೆಯಿಂದಿರುವಂತೆ ಗಣೇಶ ಸಲಹೆ ನೀಡುತ್ತಾರೆ.

ಕರ್ಕಾಟಕ :-

ಋಣಾತ್ಮಕ ಆಲೋಚನೆಗಳನ್ನು ತೊರೆಯಿರಿ ಮತ್ತು ಧನಾತ್ಮಕ ದೃಷ್ಟಿಕೋನವನ್ನು ಹೊಂದಿ ಎಂಬುದಾಗಿ ಗಣೇಶ ಹೇಳುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಸುಸ್ಥಿತಿಯಲ್ಲಿರುವುದಿಲ್ಲ ಮತ್ತು ಮನಸ್ಸಿನಲ್ಲಿ ಮತ್ತು ಚೈತನ್ಯದಲ್ಲಿ ಕಿರಿಕಿರಿಯುಂಟಾದ ಭಾವನೆಯನ್ನು ಹೊಂದಿರಬಹುದು.ವಿದ್ಯಾರ್ಥಿಗಳು ಅವರ ಫಲಿತಾಂಶದ ಬಗ್ಗೆ ಅತೃಪ್ತರಾಗುತ್ತಾರೆ. ಅನೈತಿಕ ಚಟುವಟಿಕೆಗಳಿಂದ ದೂರವಿರಿ.

ಸಿಂಹ :-

ಇಂದು ನೀವು ಹೆಚ್ಚು ಆತ್ಮವಿಶ್ವಾಸದಿಂದಿರುತ್ತೀರಿ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಯಾವುದೇ ಕ್ರಮ ಕೈಗೊಂಡರು ಅದು ತ್ವರಿತ ನಿರ್ಧಾರವಾಗುತ್ತದೆ. ನಿಮ್ಮ ತಂದೆ ಮತ್ತು ಹಿರಿಯರಿಂದ ಪ್ರಯೋಜನವ ಉಂಟಾಗಬಹುದು. ನಿಮ್ಮ ಸಾಮಾಜಿಕ ಮೌಲ್ಯ ಮತ್ತು ಗೌರವದಲ್ಲಿ ವೃದ್ಧಿಯಾಗಲಿದೆ. ಮಾತು ಮತ್ತು ನಡತೆಯಲ್ಲಿ ವಿನಯವನ್ನು ಬೆಳೆಸಿಕೊಳ್ಳಿ ಎಂಬುದಾಗಿ ಗಣೇಶ ಹೇಳುತ್ತಾರೆ ಇಲ್ಲವಾದಲ್ಲಿ ನೀವು ಬೇಗನೆ ಸಿಡುಕನ್ನು ತೋರಬಹುದು. ಆರೋಗ್ಯ ತೊಂದರೆ ಉಂಟಾಗಲಿದೆ.

ಕನ್ಯಾ :-

ಯಾರೊಂದಿಗೂ ಅಹಂ ಸಂಘರ್ಷವನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನೀವು ದೈಹಿಕ ಆಯಾಸ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುವ ಸಂಭಾವ್ಯತೆಯಿದೆ. ಸಣ್ಣ ವಿಚಾರಗಳಿಗಾಗಿ ಸ್ನೇಹಿತರ ಜೊತೆ ಮನಸ್ತಾಪ ಉಂಟಾಗಬಹುದು. ಸಿಟ್ಟು ಈ ದಿನದ ಸಾಮಾನ್ಯ ಭಾವೋತ್ಕರ್ಷವಾಗಿದೆ. ಧಾರ್ಮಿಕ ಚಟುವಟಿಕೆಗಳಿಂದ ವೆಚ್ಚ ಉಂಟಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ಜಗಳ ಮತ್ತು ಕಲಹದಿಂದ ದೂರವಿರಿ.

ತುಲಾ :-

ಅತ್ಯಂತ ಹಿತಕರ ಮತ್ತು ಫಲಭರಿತ ದಿನವು ನಿಮಗಾಗಿ ಕಾದಿಗೆ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ಎಲ್ಲಾ ಕಡೆಗಳಿಂದ ಬರುವ ಲಾಭ ಮತ್ತು ಪ್ರಯೋಜನಗಳು ನಿಮ್ಮನ್ನು ಸಂತೋಷದಲ್ಲಿರಿಸಲಿವೆ. ನಿಮ್ಮ ಗಳಿಕೆಯಲ್ಲಿ ಗಣನೀಯ ಏರಿಕೆ ಕಾಣುವಿರಿ. ಸ್ನೇಹಿತರ ಮನೋರಂಜನೆಗಾಗಿ ವೆಚ್ಚವು ನಿಮಗೆ ಹೇರಳವಾಗಿ ಹಿಂತಿರುಗಲಿದೆ. ತಿರುಗಾಟಕ್ಕೆ ಹೋಗುವುದರಿಂದ ಅಥವಾ ಸಣ್ಣ ಪ್ರವಾಸ ತೆರಳುವುರಿಂದ ನಿಮ್ಮ ದಿನವು ಇನ್ನಷ್ಟು ಆನಂದಕರ ಹಾಗೂ ಅವಿಸ್ಮರಣೀಯವಾಗಬಹುದು. ನೀವು ಇನ್ನೂ ಅವಿವಾಹಿತರಾಗಿದ್ದಲ್ಲಿ ವಿವಾಹದ ಯೋಜನೆಗಳು ಅನುಕೂಲಕರ ಹಾದಿಯಲ್ಲಿ ಸಾಗಲಿವೆ. ಇಂದು ಸ್ವಾದಿಷ್ಟ ಭೋಜನ ಸವಿಯುವಿರಿ.

ವೃಶ್ಚಿಕ :-

ಅದೃಷ್ಟವು ನಿಮ್ಮೆಡೆಗೆ ನಗು ಬೀರುತ್ತಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಸ್ನೇಹಪರ ವಾತಾವರಣವಿರುತ್ತದೆ. ಹಿರಿಯ ಅಧಿಕಾರಿಗಳು ನಿಮ್ಮ ಬಗ್ಗೆ ಸಂತುಷ್ಟರಾಗುತ್ತಾರೆ. ನೀವು ಕೈಗೊಂಡ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ. ನೀವು ಗುರುತಿಸಲ್ಪಡುತ್ತೀರಿ ಮತ್ತು ಬಡ್ತಿ ಅಥವಾ ವೇತನ ಹೆಚ್ಚಳವಾಗುವ ಸಂಭವವಿದೆ. ಮಕ್ಕಳ ಅಭಿವೃದ್ಧಿಯು ಮನೆಯ ವಾತಾವರಣವನ್ನು ಸಂತಸದಲ್ಲಿರಿಸುತ್ತದೆ.

ಧನು :-

ಇಂದು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ಬೇಕಾಗಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ದೈಹಿಕವಾಗಿ ನೀವು ನಿರುತ್ಸಾಹ ಮತ್ತು ಅನಾರೋಗ್ಯದಿಂದ ಹಾಗೂ ಮಾನಸಿಕ ಒತ್ತಡದಿಂದ ಕೂಡಿರುತ್ತೆದ. ವ್ಯವಹಾರದಲ್ಲಿ ಅಥವಾ ಕಾರ್ಯಸ್ಥಳದಲ್ಲಿ ಅಡಚಣೆಗಳು ಉಂಟಾಗುತ್ತವೆ. ಅಪಾಯಕಾರಿ ಆಲೋಚನೆಗಳಿಂದ ಮತ್ತು ವರ್ತನೆಗಳಿಂದ ದೂರವಿರೆ. ಪ್ರತಿಸ್ಪರ್ಧಿಗಳೊಂದಿಗಿನ ಸಂಘರ್ಷವನ್ನು ತಪ್ಪಿಸಿ.

ಮಕರ :-

ಅನಿರೀಕ್ಷಿತ ಖರ್ಚುವೆಚ್ಚಗಳು ಸಂಭವಿಸಲಿದೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಇದು ಆರೋಗ್ಯ ಸಮಸ್ಯೆಯಿಂದಲೂ ಆಗಿರಬಹುದು. ಅಥವಾ ಕೌಟುಂಬಿಕ ಅಥವಾ ಸಾಮಾಜಿಕ ಕಾರಣಗಳಿಂದ ಆಗಿರಬಹುದು. ನೀವು ತಿನ್ನುವಾಗ ಮತ್ತು ಕುಡಿಯುವಾಗ ಎಚ್ಚರದಿಂದಿರಿ. ನಿಮ್ಮ ಕೋಪ ಮತ್ತು ಋಣಾತ್ಮಕ ಆಲೋಚನೆಗಳನ್ನು ನಿಯಂತ್ರಿಸಿ. ಉದ್ಯೋಗ ಮತ್ತು ವ್ಯವಹಾರದಲ್ಲಿನ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಪಾಲುದಾರರೊಂದಿಗೆ ಭಿನ್ನಾಭಿಪ್ರಾಯ ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕುಂಭ :-

ನಿಮ್ಮ ಪ್ರಣಯ ಸಂಬಂಧಗಳು ಇಂದು ಸಂಪೂರ್ಣ ಅರಳಲಿವೆ ಎಂಬುದಾಗಿ ಗಣೇಶ ಭಾವಿಸುತ್ತಾರೆ. ಇಂದು ನೀವು ಎಲ್ಲಾ ಕಾರ್ಯಗಳನ್ನೂ ಆತ್ಮವಿಶ್ವಾಸ ಹಾಗೂ ದೃಢನಿಷ್ಠೆಯಿಂದ ಕೈಗೊಳ್ಳುತ್ತೀರಿ. ಪ್ರವಾಸದ ಸಾಧ್ಯತೆಗಳಿವೆ. ಉತ್ತಮ ಆಹಾರ, ಹೊಸ ಉಡುಗೆಗಳಿಗೆ ವಿಫುಲ ಅವಕಾಶಗಳಿವೆ. ಪಾಲುದಾರಿಕೆಯಲ್ಲಿ ಪ್ರಯೋಜನ ಉಂಟಾಗಲಿಗೆ. ಇಂದು ನೀವು ವಾಹನ ಖರೀದಿಸಬಹುದು.

ಮೀನ :-

ಇಂದು ಶುಭಕರ ದಿನವಾಗಿದೆ ಎಂದು ಗಣೇಶ ಹೇಳುತ್ತಾರೆ. ನಿಮ್ಮ ಸ್ಥೈರ್ಯ, ಆತ್ಮವಿಶ್ವಾಸ ಮತ್ತು ದೈಹಿಕ ಆರೋಗ್ಯದಲ್ಲಿ ವೃದ್ಧಿಯ ಅನುಭವವಾಗುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ತುಂಬಿರುತ್ತದೆ. ಮಾತು ಮತ್ತು ನಡತೆಯಲ್ಲಿ ನಿಗ್ರಹವಿರಲಿ ಹಾಗೂ ಹಗೆತನವನ್ನು ತಪ್ಪಿಸಿ. ನಿಮ್ಮ ಜೊತೆಕೆಲಸಗಾರರಿಂದ ನೀವು ಸಂಪೂರ್ಣ ಸಹಕಾರವನ್ನು ಪಡೆಯುವಿರಿ. ಉತ್ತಮ ಬಂಧಗಳ ಸುದ್ದಿಯು ಹೆತ್ತವರ ಕಡೆಯಿಂದ ಬರಬಹುದು.

WhatsApp Group Join Now

Spread the love

Leave a Reply