Daily Horoscope : ದಿನ ಭವಿಷ್ಯ (18-12-2025) ಯಾವ ರಾಶಿಗೆ ಶುಭ..? ಯಾರಿಗೆ ರಾಶಿಗೆ ಅಶುಭ..?

Spread the love

ಮೇಷ :-

ಲೌಕಿಕ ವಿಷಯಗಳ ಬಗ್ಗೆ ನೀವು ಆಸಕ್ತಿಯನ್ನು ಹೊಂದುವುದಿಲ್ಲ. ಇಂದು ನೀವು ವಿಭಿನ್ನ ಸ್ತರದಲ್ಲಿರುತ್ತೀರಿ. ನಿಮ್ಮದೇ ಆಧ್ಯಾತ್ಮಿಕ ಮತ್ತು ಬೌದ್ಧಿಕ ಪ್ರಪಂಚದಲ್ಲಿ ನೀವು ಸಂಪೂರ್ಣವಾಗಿ ಕಳೆದುಹೋಗುವಿರಿ. ಇದು ಖಂಡಿತವಾಗಿಯೂ ಕೆಟ್ಟ ವಿಚಾರವಲ್ಲ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ.

ಬದಲಾಗಿ ಈ ಆಳವಾದ ಆಲೋಚನೆಗಳಿಂದ ನಿಮಗೆ ಪ್ರಯೋಜನ ಸಿಗಲಿದೆ. ಪರ್ಯಾಯ ರೋಗನಿವಾರಣಾ ಚಿಕಿತ್ಸೆ, ನಿಸರ್ಗಾತೀತ ಮತ್ತು ಅಂತೀದ್ರಯ ವಿಷಯಗಳತ್ತ ನೀವು ಆಸಕ್ತಿ ಹೊಂದುವಿರಿ. ರೇಖೀ, ನ್ಯಾಚುರೋಪತಿ ಮುಂತಾದವುಗಳಲ್ಲಿ ತೊಡಗಲು ಯೋಜನೆ ರೂಪಿಸಿದ್ದಲ್ಲಿ ಇದು ಸಕಾಲ. ಆಧ್ಯಾತ್ಮ, ಸ್ವಯಂ ಮತ್ತು ವಿಶ್ವ, ಜೊತೆಗೆ ಸ್ವಯಂ ಅರಿಯುವಿಕೆ ಮುಂತಾದವುಗಳಲ್ಲಿ ಆಳವಾದ ಅಂತರ್ದೃಷ್ಟಿಯನ್ನು ಪಡೆಯಲು ಈ ಸಮಯವು ಅನುಕೂಲಕರವಾಗಿದೆ. ಆದರೂ, ಸ್ವಯಂ ಸಾಧನೆಯ ಮೊದಲ ಹೆಜ್ಜೆಯಲ್ಲಿ ನಿಮ್ಮ ಉತ್ಸಾಹವನ್ನು ನಿಯಂತ್ರಿಸಿಕೊಳ್ಳಲು ಮರೆಯದಿರಿ, ಕೋಪ, ಒರಟು ವರ್ತನೆ, ಸಂಘರ್ಷ ಮತ್ತು ವಿರೋಧಿಗಳಿಂದ ದೂರವಿರಿ. ಅನಿರೀಕ್ಷಿತ ಐಶ್ವರ್ಯ ಪ್ರಾಪ್ತಿಯ ಯೋಗವಿದೆ.

ವೃಷಭ :-

ಅದೃಷ್ಟ ಶಾಲಿ ವೃಷಭ ರಾಶಿಯವರು ದಿನಪೂರ್ತಿ ಸಂತಸ ಹಾಗೂ ಖುಷಿಯಿಂದ ತುಂಬಿರುತ್ತಾರೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮತ್ತ ಬರುವ ಎಲ್ಲಾ ಲವಲವಿಕೆ ಮತ್ತು ಮೋಜನ್ನು ಆನಂದಿಸಿ. ಸಂತಸಭರಿತ ಪ್ರಯಾಣವನ್ನು ಪ್ರಾರಂಭಿಸಬಹುದು ಅಥವಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ವಿಹಾರಕ್ಕೆ ತೆರಳಬಹುದು ಅಥವಾ ಸಾಮಾಜಿಕ ಉದ್ದೇಶವನ್ನು ಹೊಂದಬಹುದು. ನಿಮ್ಮ ದಾನಶೀಲ ಆತ್ಮವು ಇತರರಿಗಾಗಿ ಏನನ್ನಾದರೂ ಮಾಡಲು ಬಯಸುತ್ತದೆ. ನಿಮ್ಮ ವ್ಯವಹಾರ ಮತ್ತು ವೃತ್ತಿಕ್ಷೇತ್ರದಲ್ಲಿ ವಿಫುಲ ಲಾಭವನ್ನು ದೇವರು ದಯಪಾಲಿಸುತ್ತಾರೆ, ಇಂದು ನೀವು ಫಲಪ್ರದ ವ್ಯವಹಾರ ಮೈತ್ರಿಯಲ್ಲಿ ತೊಡಗಬಹುದು ಅಥವಾ ವ್ಯವಹಾರ ವೃದ್ಧಿಯ ಬಗ್ಗೆ ಆಲೋಚಿಸಬಹುದು. ನಿಮ್ಮ ಪೂಜ್ಯಭಾವ ಮತ್ತು ಸಾಮಾಜಿಕ ನಿಲುವಿನಲ್ಲಿ ವರ್ಧನೆ ಉಂಟಾಗಲಿದೆ. ನೀವು ಪ್ರಶಂಸೆ ಮತ್ತು ಮೆಚ್ಚುಗೆ ಗಳಿಸುತ್ತೀರಿ. ನೀವು ಒಮ್ಮೆಲೇ ಪಿತ್ರಾರ್ಜಿತ ಆಸ್ತಿ ಪಡೆಯಬಹುದು ಅಥವಾ ಬಹುಮಾನ ಗೆಲ್ಲಬಹುದು, ಬಹುಶಃ ಲಾಟರಿಯಲ್ಲಿಯೂ ಗೆಲುವು ಸಿಗಬಹುದು. ಅನಿರೀಕ್ಷಿತ ಧನಲಾಭದ ಯೋಗವು ಖಂಡಿತವಾಗಿಯೂ ಇದೆ.

ಮಿಥುನ :-

ಮಿಥುನ ರಾಶಿಯವರಿಗೆ ಅದ್ಭುತ ದಿನವು ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗಲಿದೆ. ಸಾಹಿತ್ಯವಾಗಿ ಅಲ್ಲದಿದ್ದರೂ, ಕಾರ್ಯ, ಶೈಕ್ಷಣಿಕ, ವ್ಯವಹಾರ, ರಂಗ ನಿರ್ವಹಣೆ ಮತ್ತು ಸಂಬಂಧಗಳಲ್ಲಿ ನೀವು ಯಶಸ್ಸು ಕಾಣುವಿರಿ. ವ್ಯಾಪಾರ ಮತ್ತು ಖುಷಿಭರಿತ ಚಟುವಟಿಕೆಗಳ ಹೊರತಾಗಿಯೂ ನೀವು ಈ ಸಂಭ್ರಮವನ್ನು ಮತ್ತು ಎಲ್ಲಾ ಅದೃಷ್ಟಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಸಡಗರದಿಂದ ಆಚರಿಸುತ್ತೀರಿ. ಹಣಕಾಸು ಲಾಭ ಉಂಟಾಗಲಿದೆ ಆದ್ದರಿಂದ ಅಗತ್ಯ ಖರ್ಚುವೆಚ್ಚಗಳನ್ನು ಮಾಡಿ ನಿಮ್ಮ ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಒಳ್ಳೆಯದಲ್ಲವೆ?ನೀವು ಉತ್ಸಾಹ, ಆರೋಗ್ಯಕರ ಮತ್ತು ಹಗುರವಾಗಿರುವಂತೆ ಭಾಸವಾಗುತ್ತೀರಿ. ಇವೆಲ್ಲವೂ ನಿಮ್ಮನ್ನು ದುರಭಿಮಾನಪಡುವಂತೆ ಮಾಡಬೇಡಿ ಇಲ್ಲವಾದಲ್ಲಿ ನೀವು ನಿಮ್ಮ ಸಿಡುಕಿನ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳಬಹುದು ಮತ್ತು ನೀವು ನಿಮ್ಮ ಪ್ರೀತಿಪಾತ್ರರ ಅಥವಾ ನಿಮ್ಮದೇ ಮನಸ್ಸನ್ನು ನೋಯಿಸಬಹುದು.ಸಹೋದ್ಯೋಗಿಗಳ ಸಹಕಾರ, ಮೇಲಾಧಿಕಾರಿಗಳ ಪ್ರಶಂಸೆ, ಇವುಗಳಿಂದ ನೀವು ಸಂತೋಷವಾಗಿ ನಿಮ್ಮ ಕಾರ್ಯಗಳನ್ನು ಪ್ರಾರಂಭಿಸುತ್ತೀರಿ.ಖುಷಿಯಿಂದಿರಿ.

ಕರ್ಕಾಟಕ :-

ಕಳೆದ ಕೆಲವು ದಿನಗಳ ಉಲ್ಲಾಸಭರಿತ ಹಾಗೂ ಹುರುಪಿನ ಅಭಿವೃದ್ಧಿಯಲ್ಲಿದ್ದ ಗ್ರಹಗತಿಗಳು ಇಂದು ಸಂಪೂರ್ಣವಾಗಿ ನಿಶ್ಚಿಂತೆಯಿಂದ ಇರುವಂತಿಲ್ಲ. ಈ ದಿನ ನೀವು ದೈಹಿಕವಾಗಿ ಕಳೆಗುಂದಿರುತ್ತೀರಿ ಮತ್ತು ಮಾನಸಿಕವಾಗಿ ಆತಂಕ ತುಂಬಿರುತ್ತೀರಿ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಬಹುಶಃ ಇದು ವಾರಾಂತ್ಯವಾಗಿದ್ದು, ನೀವು ಒತ್ತಡ , ಅಹಿತಕರ ಹಾಗೂ ಉದ್ವೇಗದಿಂದ ತುಂಬಿರುವಂತೆ ಮಾಡಬಹುದು. ಖುಷಿಯಿಂದಿರಿ ಮತ್ತು ವಿಶ್ರಾಂತರಾಗಿ. ಚಿಂತಿಸುವುದನ್ನು ನಿಲ್ಲಿಸಿ ಮತ್ತು ಖಂಡಿತವಾಗಿಯೂ ನೀವು ನಿಮ್ಮ ಸ್ನೇಹಿತರೊಂದಿಗೆ ಹೋಲಿಸಲು ಹೋಗಬೇಡಿ. ಅವರು ವಿಭಿನ್ನ ವ್ಯಕ್ತಿಗಳು ಮತ್ತು ಸಂಪೂರ್ಣವಾಗಿ ವಿಭಿನ್ನ ಜೀವನವನ್ನು ಹೊಂದಿರುತ್ತಾರೆ. ನೀವೂ ವಿಭಿನ್ನ ವ್ಯಕ್ತಿಗಳೇ. ಇಂದು ನೀವು ಖಂಡಿತವಾಗಿಯೂ ಯಥೇಚ್ಛ ಅನುಗ್ರಹವನ್ನು ಪಡೆಯುತ್ತೀರಿ. ಅವುಗಳನ್ನು ಪರಿಗಣಿಸಿ ಮತ್ತು ವಿಷಣ್ಣ ಏಡಿಯಾಗಿರುವುದನ್ನು ನಿಲ್ಲಿಸಿ. ಇಲ್ಲವಾದಲ್ಲಿ ನೀವು ಸಂಘರ್ಷದಿಂದ ದಿನವನ್ನು ಅಂತ್ಯಗೊಳಿಸಬಹುದು ಮತ್ತು ಆಸಿಡಿಟಿ ಮುಂತಾದ ವ್ಯಾಧಿಯಿಂದ ನರಳಬಹುದು. ಪ್ರಯಾಣ ಮತ್ತು ಬೌದ್ಧಿಕ ಚರ್ಚೆಗಳನ್ನು ತಪ್ಪಿಸಿ.

ಸಿಂಹ :-

ಇಂದು ಜಾಗರೂಕಾರಾಗಿರುವಂತೆ ಮತ್ತು ಸಂಯಮದಿಂದಿರುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಎಲ್ಲಾ ವಿಷಯಗಳಲ್ಲೂ ಎಚ್ಚರಿಕೆಯಿಂದಿರಿ ಮತ್ತು ಸಾಧ್ಯವಿದ್ದರೆ ಶಾಂತವಾಗಿ ಪ್ರಯಾಣಗಳನ್ನು ನಿಭಾಯಿಸಿ. ಇವೂ ಕಳೆದುಹೋಗಬಹುದು. ನಿಮ್ಮ ಮಾತು, ಕೋಪ ಮತ್ತು ಚರ್ಚೆಯ ಮೇಲಿನ ಸ್ಥಿರ ಮತ್ತು ಕಟ್ಟುನಿಟ್ಟಿನ ನಿಯಂತ್ರಣವು ನಿಮ್ಮನ್ನು ಸಂಘರ್ಷ, ವಾಗ್ವಾದ ಮತ್ತು ವ್ಯಾಜ್ಯದಳಲ್ಲಿ ಸಿಲುಕಿಸದಂತೆ ನೋಡಿಕೊಳ್ಳುತ್ತದೆ. ನಿಮ್ಮ ತಾಯಿಯೊಂದಿಗೆ ನೀವು ಅಸಮಾಧಾಮವನ್ನು ಹೊಂದಿದ್ದಲ್ಲಿ, ಚರ್ಚೆಯನ್ನು ಮುಂದೂಡಿ. ಇಂದು ನೀವು ನಕಾರಾತ್ಮಕ ಮತ್ತು ತಿರಸ್ಕಾರಿ ಭಾವವನ್ನು ಹೊಂದಬಹುದು. ಅದನ್ನು ಅನುಸರಿಸಲೇಬಾರದು. ನ್ಯಾಯಸಮ್ಮತ ಪರಿಶೀಲನೆಯ ಹೊರತಾಗಿ ಸಹಿ ಹಾಕಬೇಡಿ. ಬಿಡುವ ಪಡೆದುಕೊಳ್ಳಿ, ಈಜು ಪಾಠವನ್ನು ರದ್ದುಪಡಿಸಿ. ಮತ್ತು ನಿಮ್ಮ ಆರೋಗ್ಯ ಮತ್ತು ದೈನಂದಿನ ದೈಹಿಕ ಅರ್ಹತೆಯ ಬಗ್ಗೆ ಗಮನಹರಿಸಿ.

ಕನ್ಯಾ :-

ಇತರ ರಾಶಿಗಳಿಗಿಂತ ನೀವು ಶಾಂತ ಮತ್ತು ಸಮಾಧಾನದ ದಿನವನ್ನು ಹೊಂದಿರುವಿರಿ ಎಂಬುದಾಗಿ ಗಣೇಶ ಭರವಸೆ ನೀಡುತ್ತಾರೆ. ನಿಮ್ಮ ಜೀವನದ ಶಾಂತ ಹಾಗೂ ಸಮಾಧಾನದ ಸರೋವರದಲ್ಲಿ ಯಾವುದೇ ಅಹಿತಕರ ಅಲೆಗಳು ಕಂಡುಬರುವುದಿಲ್ಲ. ನೀವು ಇಂದು ಉತ್ಸಾಹ ಮತ್ತು ಸಂತೋಷದಿಂದ ಕೂಡಿರುತ್ತೀರಿ ಮತ್ತು ಇದನ್ನು ಇತರರೊಂದಿಗಿನ ಸಂಭಾಷಣೆಯಲ್ಲಿ ಪ್ರದರ್ಶಿಸುತ್ತೀರಿ. ಸಂಬಂಧಗಳು ವೃದ್ಧಿಸಲಿವೆ ಮತ್ತು ಬಲಗೊಳ್ಳಲಿವೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ಸಮಯ. ಆಧ್ಯಾತ್ಮ, ವೇದ ಮುಂತಾದ ಆಳ ಅಧ್ಯಯನಗಳು ಅಥವಾ ನಿಮ್ಮನ್ನು ಮರುಳು ಮಾಡಿರುವ ಇನ್ನಾವುದೇ ವಿಚಾರಗಳ ಬಗ್ಗೆ ಆಸಕ್ತಿ ಮೂಡಲಿದೆ. ಸ್ವಯಂ ಅರಿವಿನ ಪ್ರವಾಸವನ್ನು ನೀವು ಪ್ರಾರಂಭಿಸಬಹುದು.

ತುಲಾ :-

ಯಾವುದೇ ಒಂದು ವಿಚಾರದ ಬಗ್ಗೆ ದಿನಪೂರ್ತಿ ನಿಮ್ಮ ಮನಸ್ಸು ಇಬ್ಬಾಗವಾಗಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಬಹುಶಃ ನಿಮಗೆ ಆಯ್ಕೆಗಳಿರಬಹುದು. ಅಥವಾ ನಷ್ಟದಲ್ಲಿರಬಹುದು. ಈಗಲೇ ನೀವು ದೃಢ ನಿರ್ಧಾರವನ್ನು ತಾಳದಿದ್ದರೆ ಚಿಂತೆಯಿಲ್ಲ. ನಿಮಗೆ ಕಾಯಲು ಸಾಧ್ಯವಿಲ್ಲ ಎಂದೇನಲ್ಲ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಸೂಕ್ತ ದಿನವಲ್ಲ. ಮತ್ತು ಈ ದಿನವ ಚರ್ಚೆಯಲ್ಲಿ ನೀವು ಗೆಲುವು ಸಾಧಿಸಲಾರಿರಿ. ಹೆಚ್ಚು ಹೊಂದಿಕೊಂಡಿರುವಂತೆ ಮತ್ತು ಜನರು, ಸಾಮಾನ್ಯ ಜೀವನ ಮತ್ತು ವಿಚಾರಗಳ ಬಗ್ಗೆ ಕಡಿಮೆ ಹಠಮಾರಿತನದ ದೃಷ್ಟಿಯನ್ನು ಹೊಂದುವಂತೆ ಸಲಹೆ ನೀಡಲಾಗುತ್ತದೆ. ಕೂಡಲೇ ನಿಮಗೆ ಧನಾತ್ಮಕತೆಯು ಗೋಚರಿಸಲಿದೆ. ನಿಮ್ಮ ಆರೋಗ್ಯ ವೃದ್ಧಿಸಲಿದೆ. ಮಾನಸಿಕ ಶಾಂತಿಯು ಹೆಚ್ಚಾಗಲಿದೆ. ಸಂಘರ್ಷಗಳು ಸರಿದಾರಿಗೆ ಬರುತ್ತವೆ ಮತ್ತು ಹಣಕಾಸು ಪ್ರತಿಫಲಗಳು ಸಿಗಲಿವೆ. ಇಲ್ಲವಾದಲ್ಲಿ ಬೇಸರದ ವಿನಿಮಯವು ಕಾದಿದೆ.

ವೃಶ್ಚಿಕ :-

ಈ ದಿನವು ಅದೃಷ್ಟ ಮತ್ತು ಉತ್ತಮ ಅನುಗ್ರಹವನ್ನು ಹೊಂದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಸಂತೋಷವಾಗಿರಿ ಮತ್ತು ಈ ಸಂತಸ ಸಮಯವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಮತ್ತು ಸ್ನೇಹಿತರೊಂದಿಗೆ ಆಚರಿಸಿ. ನೀವು ಮಾನಸಿಕ ಶಾಂತಿಯನ್ನು ಅನುಭವಿಸುವಿರಿ. ಮತ್ತು ಉತ್ತಮ ದೈಹಿಕ ಆರೋಗ್ಯವಿರುತ್ತದೆ. ಮತ್ತು ಮನೆಯ ವಾತಾವರವು ಶಾಂತ ಮತ್ತು ಉಲ್ಲಾಸಭರಿತವಾಗಿರುತ್ತದೆ. ರಜೆಯ ಕುರಿತಾಗಿ ಯೋಜನೆ ರೂಪಿಸಲು ಅಥವಾ ಚಿತ್ರಕಲೆ ಮುಂತಾದ ಸಾಲ್ಸ ಮತ್ತು ಲವಲವಿಕೆಯ ಕ್ರಿಯಾತ್ಮಕ ತರಗತಿಗಳಿಗೆ ಸೇರಲು ಇದು ಉತ್ತಮ ಸಮಯ. ನಿಮ್ಮ ಪ್ರೇಮಿಯೊಂದಿಹೆ ಪ್ರಣಯಭರಿತ ಸ್ಥಳಗಳಿಗೆ ಭೇಟಿ ನೀಡಲು ಸೂಕ್ತ ದಿನ. ನಿಮ್ಮ ಸ್ನೇಹಿತರೊಂದಿಗೆ ಕಾಫಿ ಹರಟೆ ಹೊಡೆಯಬಹುದು ಮತ್ತು ಕೆಲವು ಅವಿಸ್ಮರಣೀಯ ಸಮಯಗಳನ್ನು ಕಳೆಯಬಹುದು. ಶುದ್ಧ ಮತ್ತು ಸರಳ ಸಂತಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಧನು :-

ಧನುರಾಶಿಯವರಿಗೆ ಈ ದಿನವು ವಿಶೇಷವಾಗಿ ಸಿಡುಕಿನಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಎಚ್ಚರಿಕೆ ನೀಡುತ್ತಾರೆ. ಇತರರತ್ತ ಬಾಣ ಎಸೆಯುವಾಗ ಜಾಗರೂಕರಾಗಿರಿ. ಅವರು ಉತ್ತಮವಾಗಿ ಪಡೆದುಕೊಂಡ ಜೇನನ್ನು ಹೊಂದಿದ್ದಾರೆ. ಅಥವಾ ನೀವು ನಿಜವಾಗಿಯೂ ಕ್ಲಿಷ್ಟಕರ ವ್ಯಾಜ್ಯಗಳಲ್ಲಿ ಬೀಳಬಹುದು. ಇದು ನೀವು ಇತರರತ್ತ ವ್ಯಂಗ್ಯದ ಮಾತುಗಳನ್ನು ಆಡುವುದರಿಂದ ಉಂಟಾಗಬಹುದು. ಅವರು ಇದನ್ನು ಒಪ್ಪಿಕೊಳ್ಳಬಹುದು ಆದರೆ ಇದು ಕ್ರಾಂತಿಕಾರಿಯಾಗಿರುತ್ತದೆ. ನಿಮಗೆ ಎಚ್ಚರಿಕೆ ನೀಡಲಿಲ್ಲ ಎಂಬುದಾಗಿ ಮತ್ತೆ ದೂಷಿಸಬೇಡಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ ಮತ್ತು ಮಾನಸಿಕ ಸ್ಥಿರತೆ ಮತ್ತು ಶಾಂತಿಯನ್ನು ಪಡೆಯಲು ಪ್ರಯತ್ನಿಸಿ. ಪ್ರಾರ್ಥನೆ, ಧ್ಯಾನ, ಆಧ್ಯಾತ್ಮದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಿ. ಹಣವನ್ನು ಮತ್ತು ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಳ್ಳಿ.

ಮಕರ :-

ಈ ದಿನವು ಅದೃಷ್ಟಕರವಾಗಿ ಪ್ರಾರಂಭಗೊಳ್ಳಲು ಸಿದ್ಧವಾಗಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನಿಮ್ಮ ಪ್ರೀತಿಪಾತ್ರರ ಭೇಟಿಯಿಂದ ನೀವು ಖುಷಿಯಲ್ಲಿರಬಹುದು ಮತ್ತು ಅವರೊಂದಿಗಿನ ಸಂತಸಭರಿತ ಸಾಂಗತ್ಯವನ್ನು ಆನಂದಿಸಬಹುದು. ನೀವು, ಬಹುಮಾನ ಅಥವಾ ಉಡುಗೊರೆ ಅಥವಾ ಎರಡನ್ನೂ ಪಡೆಯಬಹುದು. ಆನಂದಿಸಿ, ದೇಶಪರ್ಯಟನೆ ಬಯಸಿದ್ದಲ್ಲಿ ಇದು ಸಕಾಲ. ಪ್ರಯಾಣವು ಅತ್ಯಂತ ತೃಪ್ತಿಕರ ಹಾಗೂ ಹರ್ಷದಾಯಕವಾಗಿರುತ್ತದೆ. ಅಗತ್ಯವಿಲ್ಲದಿದ್ದರೂ, ಅದು ಹೊಸದಾಗಿರುವುದರಿಂದ ಅದನ್ನು ಖರೀದಿಸಲು ನೀವು ವೆಚ್ಚಮಾಡಬಹುದು. ಅದರಲ್ಲಿ ಯಶಸ್ಸು ಸಾಧಿಸಿದರೆ ನೀವು ಇನ್ನೂ ಖುಷಿಯಾಗಿರುತ್ತೀರಿ. ವ್ಯವಹಾರ, ವ್ಯಾಪಾರ ಲಾಭಗಳಿಗೆ ಉತ್ತಮ ದಿನ. ಮುಖ್ಯವಾಗಿ, ವಿವಾಹದ ಯೋಜನೆಯಲ್ಲಿರುವವರಿಗೆ ಇದು ಸೂಕ್ತ ಸಮಯ. ಅವರಿಗೆ ಒಬ್ಬರು ಸದ್ಯದಲ್ಲಿಯೇ ಸಿಗಲಿದ್ದಾರೆ. ಇದು ಅವರನ್ನು ಸಂಭ್ರಮದಲ್ಲಿರಿಸುತ್ತದೆ.

ಕುಂಭ :-

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಸಂಕ್ಷಿಪ್ತವಾಗಿ ಅನುಕೂಲಕರ ಗ್ರಹಗತಿಗಳಿಂದಾಗಿ, ನೀವು ವೃತ್ತಿಯಲ್ಲಿ ಯಶಸ್ಸನ್ನು ಮತ್ತು ಪ್ರಶಂಸೆಗಳನ್ನು ಹಾಗೂ ನಿಮ್ಮ ಅತ್ಯುತ್ತಮ ಕಾರ್ಯಗಳಿಗೆ ಹಾಗೂ ಕ್ರಿಯಾತ್ಮಕ ಆಲೋಚನೆಗಳಿಗೆ ಮೆಚ್ಚುಗೆಯನ್ನು ಗಳಿಸುತ್ತೀರಿ. ಇದು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ವೃತ್ತಿಕ್ಷೇತ್ರದಲ್ಲಿ ನೀವು ಸಹೋದ್ಯೋಗಿಗಳೊಂದಿಗೆ ಅನ್ಯೋನ್ಯವಾಗಿರುತ್ತೀರಿ ಮತ್ತು ಸ್ನೇಹಪರವಾಗಿರುತ್ತೀರಿ. ಸಾಮಾಜಿಕ ವಲಯಗಳಲ್ಲಿ ನಿಮ್ಮ ಪೂಜ್ಯಭಾವವು ವರ್ಧಿಸುತ್ತದೆ ಮತ್ತು ನೀವು ಸಂಬಂಧಿಗಳು ಹಾಗೂ ಕುಟುಂಬ ಸದಸ್ಯರೊಂದಿಗಿನ ಪ್ರಯಾಣದಲ್ಲಿ ನೀವು ಅತ್ಯಂತ ಹರ್ಷದಾಯಕ ಸಮಯವನ್ನು ಕಳೆಯುವಿರಿ. ಈಗ ನೀವು ಏನೇ ಮಾಡಿದರೂ ಅದು ಪ್ರಶಂಸೆ ಪಡೆಯಲಿವೆ.

ಮೀನ :-

ನಿಮ್ಮ ಮನಸ್ಸು ನಿಮಗೆ ಇಂದು ತೊಂದರೆಯನ್ನು ನೀಡಲಿದೆ. ಇಂದು ನೀವು ಆಲಸ್ಯ ಮತ್ತು ಅನಿರ್ಧಾರದಿಂದ ಕೂಡಿರುತ್ತೀರಿ. ಇದು ಯಾಕೆಂದರೆ, ನಿಮ್ಮ ಮನಸ್ಥಿತಿ ಉತ್ತಮವಾಗಿರುವುದಿಲ್ಲ. ನಿಮ್ಮ ಸ್ಥಿರ ಆಲೋಚನೆ ಮತ್ತು ಅಸಮಾಧನವು ನಿಮಗೆ ಮತ್ತು ನಿಮ್ಮ ಸುತ್ತಲಿರುವವರಿಗೆ ಕಿರಿಕರಿಯನ್ನುಂಟುಮಾಡುತ್ತದೆ. ಕಾರ್ಯಸ್ಥಳದಲ್ಲಿ ನಿಮ್ಮ ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ನೀವು ಎಚ್ಚರಿಂದಿರಬೇಕು. ನಿಮ್ಮ ಮಾನಸಿಕ ಒತ್ತಡಕ್ಕೆ ಒಂದು ಮುಖ್ಯ ಕಾರಣ ನಿಮ್ಮ ಮಕ್ಕಳು. ನಿಮ್ಮ ವ್ಯವಹಾರದಲ್ಲಿ ಹಿಂಜರಿತ ಉಂಟಾಗಲಿಗೆ ಆದರೂ, ಅದನ್ನು ಸಮಸ್ಥಿತಿಗೆ ತರುವ ಅರ್ಹತೆಯನ್ನು ನೀವು ಹೊಂದಿರುವಿರಿ. ಪ್ರಮುಖ ನಿರ್ಧಾರ ಕೈಗೊಳ್ಳುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ.

WhatsApp Group Join Now

Spread the love

Leave a Reply