Horoscope Today : 28 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ಮೇಷ ರಾಶಿಯವರಿಗೆ ಇದು ಅತ್ಯಂತ ಸೂಕ್ಷ್ಮ ಸಮಯ. ಎಲ್ಲಾ ರೀತಿಯ ಉದ್ವಿಗ್ನತೆಗಳು ಉಕ್ಕಿ ಹರಿದು ನಿಮ್ಮನ್ನು ಅವಮಾನದಲ್ಲಿರುವಂತೆ ಮಾಡುತ್ತದೆ ಎಂಬುಗಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ನೀವು ಮುಟ್ಟಿದರೆ ಮುನಿ’ ಎಂಬಂತೆ ವರ್ತಿಸುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಸ್ನೇಹಿತರ ಅನಿರೀಕ್ಷಿತ ಪ್ರತಿಕ್ರಿಯೆಗಳಿಂದ ನಿಮ್ಮ ಮನಸ್ಸಿಗೆ ಬೇಸರ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ವಿಚಾರಾಸಕ್ತರಾಗಿರುವುದು ಸೂಕ್ತ. ಆಸ್ತಿ ಅಥವಾ ಭೂ ವಿವಾದಗಳಿಂದ ಆದಷ್ಟು ದೂರವಿರಿ. ಅದಕ್ಕೆ ಸಂಬಂಧಿಸಿದ ಯಾವುದೇ ಒಪ್ಪಂದಗಳಿಗೆ ಸಹಿ ಹಾಕಲು ಇಂದು ಸೂಕ್ತ ದಿನವಲ್ಲ. ನಿಮ್ಮ ಹೆತ್ತವರ … Read more

ಬೆಂಗಳೂರು ಗ್ಯಾಂಗ್ ರೇಪ್ ಕೇಸಿಗೆ ಟ್ವಿಸ್ಟ್: ನಿಖಿಲ್-ಡಿಕ್ಸನ್‌ರಿಂದ 19 ಕಾಲೇಜು ಯುವತಿಯರ ಮೇಲೆ ಅತ್ಯಾಚಾರ!

ರಾಜಧಾನಿಯ ಪ್ರತಿಷ್ಠಿತ ಕಾಲೇಜು ಯುವತಿಯರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಭೀಕರ ‘ಅತ್ಯಾ*ಚಾರ ದಂಧೆ’ಯನ್ನು ಅಮೃತಹಳ್ಳಿ ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಸಕಲೇಶಪುರ ಮೂಲದ ನಿಕಿಲ್ ಮತ್ತು ಆತನಿಗೆ ಸಾಥ್ ನೀಡುತ್ತಿದ್ದ ಪಶ್ಚಿಮ ಬಂಗಾಳದ ಡಿಕ್ಸನ್ ಸಾಂಡ್ರಾ ಎಂಬುವವರನ್ನು ಬಂಧಿಸಿದ ಬೆನ್ನಲ್ಲೇ, ಬೆಚ್ಚಿಬೀಳಿಸುವ ಸತ್ಯಗಳು ಹೊರಬಂದಿವೆ. ಇದು ಕೇವಲ ಒಬ್ಬ ಯುವತಿಯ ಮೇಲೆ ನಡೆದ ಹಲ್ಲೆಯಲ್ಲ, ಬದಲಿಗೆ ಹತ್ತಾರು ಹೆಣ್ಣುಮಕ್ಕಳ ಜೀವನದೊಂದಿಗೆ ಆಟವಾಡಿರುವ ದೊಡ್ಡ ಜಾಲ ಎನ್ನುವುದು ಪತ್ತೆಯಾಗಿದೆ. ದಂಧೆಯ ಸ್ವರೂಪ: ಇನ್‌ಸ್ಟಾಗ್ರಾಮ್ ಟು ವಿಲ್ಲಾ ಪಾರ್ಟಿ … Read more

ಪ್ರೀತಿಯ ನಾಟಕವಾಡುತ್ತಾ ಯುವಕನನ್ನು ಬಲೆಗೆ ಬೀಳಿಸಿ ಅತ್ಯಾಚಾರಕ್ಕೆ ಯತ್ನಿಸಿದ ಯುವತಿ.!

ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿಕಲಚೇತನ (ಕಿವುಡು ಮತ್ತು ಮೂಗ) ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ ಲಾಡ್ಜ್‌ಗೆ ಕರೆಸಿಕೊಂಡ ಯುವತಿ, ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಚ್ಚಿಯ ಪನಂಪಿಳ್ಳಿ ನಗರದಲ್ಲಿ ನಡೆದಿದೆ. ಘಟನೆಯ ವಿವರ: ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ ಯುವತಿ, ತನ್ನ ಸ್ನೇಹಿತರಾದ ಜಾನ್ ರಾಹುಲ್, ಅಮಲ್ ಮತ್ತು ಆನಂದ್ ಎಂಬವರೊಂದಿಗೆ ಸೇರಿ ಕೊಲ್ಲಂನ ನಿಲ್ಲಿಲ್ಲಾ ನಿವಾಸಿ ಅಮಲ್ ದೇವ್ ಎಂಬ ಯುವಕನನ್ನು ಹನಿಟ್ರಾಪ್ ಮಾಡಿದ್ದಾಳೆ. ಈಕೆ ಸಂತ್ರಸ್ತ ಯುವಕನೊಂದಿಗೆ ಕಳೆದ ಕೆಲವು … Read more

ರಾತ್ರಿ ವೇಳೆ ಈ 5 ಲಕ್ಷಣಗಳು ಕಂಡುಬಂದರೆ ಎಚ್ಚರ : ನಿಮ್ಮ ಲಿವರ್ ಹಾನಿಗೊಳಗಾಗಿದೆ ಎಂದರ್ಥ.!

ಇತ್ತೀಚಿನ ದಿನಗಳಲ್ಲಿ ಲಿವರ್ ಸಂಬಂಧಿತ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸರಿಯಿಲ್ಲದ ಜೀವನಶೈಲಿ ಮತ್ತು ಆಹಾರ ಪದ್ಧತಿಗಳಿಂದಾಗಿ ಲಿವರ್ ಹಾನಿಗೊಳಗಾಗುತ್ತಿದೆ. ಈ ಕಾರಣದಿಂದಾಗಿ ಅನೇಕ ಜನರು ಯಾವುದೋ ಒಂದು ರೀತಿಯ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶೇಷವೆಂದರೆ, ಲಿವರ್ ಸಮಸ್ಯೆಗಳು ತುಂಬಾ ತಡವಾಗಿ ಬೆಳಕಿಗೆ ಬರುತ್ತವೆ. ಆದ್ದರಿಂದ ಲಿವರ್ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಲಿವರ್ ಸಮಸ್ಯೆಗಳು ತಡವಾಗಿ ಪತ್ತೆಯಾದರೂ, ಅದಕ್ಕೂ ಮೊದಲು ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ. ಮುಖ್ಯವಾಗಿ ರಾತ್ರಿಯ … Read more

ಪತಿಯ ಸಾವಿನ ದುಃಖ ಮಾಸುವ ಮುನ್ನವೇ ಮತ್ತೆ ಹಸೆಮಣೆಯೇರಿದ ಪತ್ನಿ; ಪತಿಯ ಸಾವಿಗೆ ಪತ್ನಿಯೇ ಕಾರಣಾನಾ.?

ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ಬೆಳಕಿಗೆ ಬಂದಿದೆ. ಪತಿ ಮೃತಪಟ್ಟ ಕೆಲವೇ ದಿನಗಳಲ್ಲಿ ಪತ್ನಿ ಮತ್ತೊಂದು ಮದುವೆಯಾಗಿರುವ ಹಿನ್ನೆಲೆ ಮೃತನ ಸಾವಿನ ಕುರಿತು ಸಂಶಯ ವ್ಯಕ್ತವಾಗಿದ್ದು, ವ್ಯಕ್ತಿ ಸತ್ತ 23 ದಿನಗಳ ಬಳಿಕ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತನ ಸಹೋದರಿಯಿಂದ ಪೊಲೀಸ್ ಠಾಣೆಗೆ ದೂರು! ದಾಸರಹಳ್ಳಿ ನಿವಾಸಿ ಪರಮೇಶ್ (50) ಜನವರಿ 31ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅದೇ ದಿನ ಅಂತ್ಯಕ್ರಿಯೆ ನಡೆಸಿ ಮಣ್ಣಿನಲ್ಲಿ ಸಮಾಧಿ ಮಾಡಲಾಗಿತ್ತು. ಆದರೆ ಪರಮೇಶ್ … Read more

ದಲಿತರಿಗೆ ಹೇರ್ ಕಟ್ ಮಾಡಲು ನಿರಾಕರಣೆ : ಗದಗದಲ್ಲಿ ಸರ್ಕಾರದಿಂದಲೇ ‘ಕ್ಷೌರದ ಅಂಗಡಿ’ ಪ್ರಾರಂಭ.!

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸರ್ಕಾರವೇ ಮುಂದೆ ನಿಂತು ಗ್ರಾಮದಲ್ಲಿ ಹೊಸದಾಗಿ ಕ್ಷೌರದ ಅಂಗಡಿಯನ್ನು ಪ್ರಾರಂಭಿಸಿದೆ. ಘಟನೆಯ ಹಿನ್ನೆಲೆ : ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಸ್ಥಳೀಯ ಕ್ಷೌರಿಕರು ಹಿಂದೇಟು ಹಾಕಿದ್ದರು. ಈ ಬಗ್ಗೆ ದೂರುಗಳು ಕೇಳಿಬಂದಾಗ ತಹಶೀಲ್ದಾರ್ ಸಭೆ ನಡೆಸಿ, ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕ್ಷೌರಿಕರು ತಮ್ಮ ಪಟ್ಟನ್ನು ಸಡಿಲಿಸದೆ ಅಂಗಡಿಗಳನ್ನೇ ಬಂದ್ ಮಾಡಿದ್ದರು. ನಿರಾಕರಣೆಗೆ ಕಾರಣವೇನು.? ಗ್ರಾಮದ ನಂಬಿಕೆಯಂತೆ, ಪ್ರತಿವರ್ಷ ಮಹಾನವಮಿಯ … Read more

Dandruff : ತಲೆಹೊಟ್ಟು ಸಮಸ್ಯೆಯೇ? ಕೆಮಿಕಲ್ ಬಿಡಿ, ಮುತ್ತಿನಂತಹ ಕೂದಲಿಗೆ ಮನೆಯಲ್ಲೇ ಇದೆ ಮದ್ದು

ಇತ್ತೀಚಿನ ದಿನಗಳಲ್ಲಿ ಬದಲಾದ ಹವಾಮಾನ, ಹೆಚ್ಚುತ್ತಿರುವ ಧೂಳು ಮತ್ತು ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ತಲೆಹೊಟ್ಟು (Dandruff) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ಈ ಸಮಸ್ಯೆ ಆತ್ಮವಿಶ್ವಾಸವನ್ನು ಕುಗ್ಗಿಸುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಶಾಂಪೂಗಳಿಗಿಂತ ಮನೆಯಲ್ಲಿ ಸಿಗುವ ಪದಾರ್ಥಗಳೇ ಇದಕ್ಕೆ ರಾಮಬಾಣ. ತಲೆಹೊಟ್ಟು ನಿವಾರಣೆಗೆ ಇಲ್ಲಿವೆ ಕೆಲವು ಸುಲಭ ಮನೆಮದ್ದುಗಳು: 1. ನಿಂಬೆ ರಸದ ಚಮತ್ಕಾರ ನಿಂಬೆ ರಸವು ಸಿಟ್ರಿಕ್ ಆಮ್ಲದ ಸಮೃದ್ಧ ಮೂಲವಾಗಿದ್ದು, ಇದು ತಲೆಹೊಟ್ಟಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಇದರಲ್ಲಿರುವ ಆಂಟಿಮೈಕ್ರೊಬಿಯಲ್ … Read more

ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆ | ಡಿಕೆಶಿಗೆ ಜ್ಞಾನೋದಯವಾಗಿದೆ: ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ

‘ಗ್ಯಾರಂಟಿಗಳಿಗೆ ಖರ್ಚು ಮಾಡಿದ ಹಣವನ್ನು ರಾಜ್ಯ ಸರ್ಕಾರವು ಶಾಲೆ-ಆಸ್ಪತ್ರೆಗಳಿಗೆ ವಿನಿಯೋಗಿಸಿದ್ದರೆ ಸಮಸ್ಯೆ ಪರಿಹಾರವಾಗುತ್ತಿತ್ತು. ಈಗ ಆಸ್ಪತ್ರೆಗಳಲ್ಲಿ ಔಷಧಿಗಳಿಲ್ಲ. ಅವಧಿ ಮುಗಿದ ಔಷಧಿ ವಿತರಿಸಲಾಗುತ್ತಿದೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ‘ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಾಲ್ಲೂಕಿನ ಕೊಡಕಹಳ್ಳಿಯಲ್ಲಿ ಗುರುವಾರ ಸುದ್ದಿಗಾರರಿಗೆ ‍‍ಪ್ರತಿಕ್ರಿಯಿಸಿ, ‘ಅವರಿಗೆ ತಡವಾಗಿ ಜ್ಞಾನೋದಯವಾಗಿದೆ. ಇದೇ ಮಾತನ್ನು ಆರ್‌.ವಿ. ದೇಶಪಾಂಡೆ ಹಾಗೂ ಬಸವರಾಜ ರಾಯರೆಡ್ಡಿ ಮೊದಲೇ ಹೇಳಿದ್ದರು’ ಎಂದರು. ‘ರಾಜ್ಯದ ಜನರ ಬಗ್ಗೆ ಭಯಭಕ್ತಿ ಇದ್ದರೆ, ದೇವರಾಜ ಅರಸು … Read more

Horoscope Today : 27 ಫೆಬ್ರವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

ಮೇಷ :- ನಿಮ್ಮ ಇಂದಿನ ದಿನವು ಅದೃಷ್ಟಕರವಾಗಿರುತ್ತದೆ ಮತ್ತು ವಿಶೇಷವಾಗಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಆದರೆ, ಮಾನಸಿಕವಾಗಿ ಪ್ರಕ್ಷುಬ್ಧಗೊಂಡಿರುವ ಕಾರಣ ಪ್ರಮುಖ ವಿಚಾರಗಳ ಬಗ್ಗೆ ನಿಮ್ಮ ಮನಸ್ಸು ಸೂಕ್ತ ನಿರ್ಣಯ ತೆಗೆದುಕೊಳ್ಳುವುದಿಲ್ಲ ಅಥವಾ ವಿಶ್ವಾಸ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ. ಎಲ್ಲಾ ಮುಖ್ಯವಾದ ನಿರ್ಧಾರಗಳನ್ನು ತಡೆಹಿಡಿಯಿರಿ. ವ್ಯವಹಾರದ ನಿಮಿತ್ತ ಪ್ರವಾಸ ಕೈಗೊಳ್ಳಬಹುದು. ಪತ್ರ ವ್ಯವಹಾರ ಅಥವಾ ಕರಡು ಪತ್ರ ಹಾಗೂ ದಾಖಲೆಗಳ ಕಾರ್ಯಗಳಲ್ಲಿ ಈ ಪ್ರವಾಸವನ್ನು ಬಳಸಿಕೊಳ್ಳಬಹುದು. ಬೌದ್ಧಿಕ ಚರ್ಚೆಯಲ್ಲಿ ಪಾಲ್ಗೊಳ್ಳುವ ಸಂಭಾವ್ಯತೆಯಿದೆ. ಇಂದು ಯಾವುದೇ ವ್ಯಕ್ತಿ … Read more

ಹಠಾತ್ ಹೃದಯಾಘಾತ : ಪ್ರಾಣ ಉಳಿಸಲು ಕೈಯಲ್ಲಿರಲಿ ಈ 2 ಮಾತ್ರೆಗಳು ! ತಜ್ಞ ವೈದ್ಯರ ಮಹತ್ವದ ಸಲಹೆ

ಇತ್ತೀಚಿನ ದಿನಗಳಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಅಥವಾ ಕ್ರೀಡಾ ಚಟುವಟಿಕೆಗಳ ಸಮಯದಲ್ಲಿ ಯುವಕರು ಮತ್ತು ಮಧ್ಯವಯಸ್ಕರು ದಿಢೀರನೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೇವಲ ಹೃದಯಾಘಾತ (Heart Attack) ಮಾತ್ರ ಕಾರಣವಲ್ಲ, ಇದರ ಹಿಂದೆ ಹತ್ತು ಹಲವು ವೈದ್ಯಕೀಯ ಕಾರಣಗಳಿವೆ ಎಂದು ಖ್ಯಾತ ಹೃದಯ ಮತ್ತು ಶ್ವಾಸಕೋಶ ಶಸ್ತ್ರಚಿಕಿತ್ಸಕ ಡಾ.ಸಿ. ಪ್ರಭಾಕರ್ ರೆಡ್ಡಿ ತಿಳಿಸಿದ್ದಾರೆ. ಹಠಾತ್ ಸಾವುಗಳಿಗೆ ಪ್ರಮುಖ ಕಾರಣಗಳೇನು? ಕೇವಲ ರಕ್ತನಾಳದ ಬ್ಲಾಕ್ ಮಾತ್ರವಲ್ಲದೆ, ಈ ಕೆಳಗಿನ ಕಾರಣಗಳಿಂದಲೂ ಸಾವು ಸಂಭವಿಸಬಹುದು: ಪತ್ತೆಯಾಗದ … Read more