ನಾನು, ಸಿಎಂ ಒಟ್ಟಿಗೆ ರಾಜಕೀಯ ಕೊನೆಗೊಳಿಸುತ್ತೇವೆ ಎಂದ ಸಚಿವ ಡಾ. ಎಚ್‌ ಸಿ ಮಹದೇವಪ್ಪ

ಸಾರ್ವಜನಿಕ ಜೀವನಕ್ಕೆ 1985ರಲ್ಲಿ ನಾನು ಬಂದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 1983ನಲ್ಲಿ ಶಾಸಕರಾಗಿದ್ದರು. ನಂತರ ನಾನು ಹಾಗೂ ಅವರು ಇಬ್ಬರೂ ಜೊತೆಗೆ ಬಂದು, ಜೊತೆಗೆ ಇದ್ದೇವೆ. ಜೊತೆಗೇ ರಾಜಕೀಯ ಕೊನೇ ಮಾಡುತ್ತೇವೆ ಎಂದು ಸಚಿವ ಡಾ. ಎಚ್‌.ಸಿ.ಮಹದೇವಪ್ಪ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಮತ್ತೆ ಮುಖ್ಯಮಂತ್ರಿ’ ಕೃತಿ ಬಿಡುಗಡೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತ್ತೆ ಮುಖ್ಯಮಂತ್ರಿ ಅಂತ ನೋಡಿದಾಗ, ಮುಖ್ಯಮಂತ್ರಿ ಆಗಬೇಕಾ, ಅದು ಬೇಕಾ ಅನ್ನಿಸುತ್ತಿದೆ. ಏಕೆಂದರೆ, ಸಾರ್ವಜನಿಕ ಹಿತವನ್ನೇ ಕೇಂದ್ರೀಕೃತವಾಗಿರುವಂತಹ ಬದುಕು, ವ್ಯಕ್ತಿಗತವಾದ ಆಸೆಗಳನ್ನು … Read more

ದೇಶದ್ರೋಹಕ್ಕೆ ಕ್ಷಮೆ ಇಲ್ಲ, ಜೈಲಿನಲ್ಲಿದ್ದರೂ ಬಿಡಲ್ಲ: ರಿಸಿನ್ ದಾಳಿ ಸಂಚುಕೋರ ವೈದ್ಯ ಉಗ್ರನಿಗೆ ಸಹಕೈದಿಗಳಿಂದಲೇ ಭೀಕರ ಥಳಿತ!

ದೇಶದ ಭದ್ರತೆಗೆ ಸವಾಲು ಹಾಕಿ, ಅಮಾಯಕರ ರಕ್ತ ಹರಿಸಲು ಸಂಚು ರೂಪಿಸುವ ದೇಶದ್ರೋಹಿಗಳಿಗೆ ಎಲ್ಲಿದ್ದರೂ ರಕ್ಷಣೆ ಇಲ್ಲ ಎಂಬುದಕ್ಕೆ ಗುಜರಾತ್ ನ ಸಬರಮತಿ ಜೈಲಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ರಿಸಿನ್ ಎಂಬ ಮಾರಕ ರಾಸಾಯನಿಕ ಬಳಸಿ ದೇಶಾದ್ಯಂತ ಭಯೋತ್ಪಾದಕ ದಾಳಿ ನಡೆಸಲು ಯೋಜನೆ ರೂಪಿಸಿದ್ದ ಕುಖ್ಯಾತ ಉಗ್ರ ಡಾ.ಅಹ್ಮದ್ ಗೆ ಸಹಕೈದಿಗಳೇ ಪಾಠ ಕಲಿಸಿದ್ದು, ಜೈಲಿನಲ್ಲೇ ಭರ್ಜರಿ ಧರ್ಮದೇಟು ನೀಡಿದ್ದಾರೆ. ವೈದ್ಯಕೀಯ ವೃತ್ತಿಯ ಮುಖವಾಡ ಧರಿಸಿ ದೇಶವನ್ನೇ ಸ್ಮಶಾನ ಮಾಡಲು ಹೊರಟಿದ್ದ ಈತನ ಕೃತ್ಯಕ್ಕೆ ಜೈಲಿನ ಇತರೆ … Read more

ಪೈಲಟ್‌ಗೆ ಅಂತಿಮ ವಿದಾಯ ; ಸಮವಸ್ತ್ರ ತೊಟ್ಟು, ಕಣ್ಣೀರು ಹಾಕುತ್ತ ಪತಿಗೆ ಸೆಲ್ಯೂಟ್‌ ಹೊಡೆದ ಪತ್ನಿ

ದುಬೈ ಏರ್‌ ಶೋ ವೇಳೆ ಶುಕ್ರವಾರ ತೇಜಸ್‌ ಯುದ್ಧ ವಿಮಾನ ಪತನಗೊಂಡು ಮೃತಪಟ್ಟಿದ್ದ ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಪೈಲಟ್‌ ನಮಾಂಶ್‌ ಸ್ಯಾಲ್ ಪಾರ್ಥೀವ ಶರೀರವನ್ನು ಸ್ವದೇಶಕ್ಕೆ ತರಲಾಗಿದೆ. ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ಶೋಕದ ಛಾಯೆ ಆವರಿಸಿತ್ತು. ನಮಾಂಶ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ನೂರಾರು ಸ್ಥಳೀಯರು ಜಮಾಯಿಸಿದ್ದರು. ಈ ಸಂದರ್ಭ ಭಾರತೀಯ ವಾಯುಪಡೆಯಿಂದ ಗೌರವ ನಮನ ಸಲ್ಲಿಸಲಾಯಿತು. ವಾಯುಪಡೆಯ ಉನ್ನತ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಸಕಲ ಸರ್ಕಾರಿ ಗೌರವಗಳು ಮತ್ತು … Read more

ʻಲಕ್ಷ್ಮಿ ದೇಗುಲ ಕಟ್ಟಿಸಿ ನಿಮ್ಮ ಜಾತಕಕ್ಕೆ ಒಳ್ಳೇದುʼ; ಜ್ಯೋತಿಷಿ ಮಾತು ನಂಬಿ 1 ಕೋಟಿ ನಗದು, 180 ಗ್ರಾಂ ಚಿನ್ನ ಕಳ್ಕೊಂಡ ಟೀಚರ್

ʻಲಕ್ಷ್ಮಿ ದೇಗುಲ ಕಟ್ಟಿಸಿದರೆ ನಿಮ್ಮ ಜಾತಕಕ್ಕೆ ತುಂಬಾ ಒಳ್ಳೆದುʼ ಎಂದು ಜ್ಯೋತಿಷಿಯೊಬ್ಬ, 56 ವರ್ಷದ ಸಂಗೀತ ಶಿಕ್ಷಕಿಯೊಬ್ಬರಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಾಗೂ ಚಿನ್ನಾಭರಣ ವಂಚಿಸಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್‌ಠಾಣಾ ವ್ಯಾಪ್ತಿ ನಡೆದಿದೆ. ಜ್ಯೋತಿಷಿಗಳ ಮೇಲಿದ್ದ ನಂಬಿಕೆ ಮತ್ತು ದೇವರ ಮೇಲಿದ್ದ ಅಪಾರ ಭಕ್ತಿಯನ್ನೇ ಬಂಡವಾಳ ಮಾಡಿಕೊಂಡ ಖತರ್ನಾಕ್‌ ಜ್ಯೋತಿಷಿ ಮಂಜುನಾಥ್‌ ಸಂಗೀತ ಶಿಕ್ಷಕಿ ಸರ್ವಮಂಗಳಾ ಅವರಿಗೆ ವಂಚಿಸಿದ್ದಾನೆ. ಸದ್ಯ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಆರೋಪಿಗಳಾದ ಮಂಜುನಾಥ್, ರಾಘವೇಂದ್ರ, ಮಧುಸೂದನ್ … Read more

ಅಪರಾಧಗಳಲ್ಲಿ ಪೊಲೀಸರು ಭಾಗಿಯಾಗಿದ್ದರೆ ಮುಲ್ಲಾಜಿಲ್ಲದೆ ಸೇವೆಯಿಂದ ವಜಾ ಎಂದ ಗೃಹ ಸಚಿವ ಪರಮೇಶ್ವರ್‌

ಪೊಲೀಸ್‌‍ ಸಿಬ್ಬಂದಿ ಮತ್ತು ಅಧಿಕಾರಿಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಮುಲ್ಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ದರೋಡೆ ಪ್ರಕರಣದಲ್ಲಿ ಮತ್ತು ಕೊರಮಂಗಲ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಮಾಲೂರು ಪೊಲೀಸ್‌‍ ಠಾಣೆಯ ಕಾನ್ಸ್ ಟೆಬಲ್‌ ಭಾಗಿಯಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಮತ್ತಷ್ಟು ಎಚ್ಚರಿಕೆಯಿಂದ ಇರುವಂತೆ ಪೊಲೀಸ್‌‍ ಸಿಬ್ಬಂದಿಗಳಿಗೆ ಸೂಚನೆ ನೀಡುತ್ತೇನೆ. ಅಪರಾಧ ಕೃತ್ಯಗಳಲ್ಲಿ ಯಾರಾದರೂ ಭಾಗಿಯಾಗಿರುವುದು ಕಂಡು ಬಂದರೆ ಮುಲಾಜಿಲ್ಲದೆ … Read more

ರೈಲು ಹಳಿ ಮೇಲೆ ಕಬ್ಬಿಣದ ರಾಡ್ ಇಟ್ಟ ಕಿಡಿಗೇಡಿಗಳು : ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ರಾಮನಗರ -ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದ ಬಳಿ ರೈಲು ಹಳಿ ಮೇಲೆ ಕಿಡಿಗೇಡಿಗಳು ಕಬ್ಬಿಣದ ರಾಡ್ ಇಟ್ಟಿದ್ದಾರೆ. ರಾಡ್ ಇದೇ ಮಾರ್ಗವಾಗಿ ಚಲಿಸುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ರೈಲಿನ ಡೀಸೆಲ್ ಟ್ಯಾಂಕ್ ಗೆ ಬಡಿದ ಪರಿಣಾಮ ಡೀಸೆಲ್ ಲೀಕ್ ಆಗಿ ಇಂಜಿನ್ ತಾಂತ್ರಿಕ ವೈಫಲ್ಯ ಕಂಡುಬಂದಿದ್ದು, ಸುಮಾರು 2 ಗಂಟೆ ಕಾಲ ರೈಲು ನಿಂತಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ಪ್ರೆಸ್ ರೈಲು ರಾಮನಗರ- ಚನ್ನಪಟ್ಟಣ ನಡುವಿನ ವಂದರಗೂಪ್ಪೆ ಗ್ರಾಮದಲ್ಲಿ ಕೆಟ್ಟು ನಿಂತಿದೆ. ನಂತರ ಬೇರೆ ಎಂಜಿನ್ … Read more

ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳ ವಿತರಣೆ, ತನಿಖೆಯಲ್ಲಿ ಆಘಾತಕಾರಿ ಅಂಶ ಬಯಲು

ಆಂಧ್ರದ ತಿರುಪತಿ ದೇವಾಲಯಕ್ಕೆ (Tirupati Tirumala) ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಅಲ್ಲಿನ ಲಡ್ಡು ಬಹಳ ಫೇಮಸ್‌. ಆದರೆ ಇದೀಗ ಕಲಬೆರಕೆ ತುಪ್ಪ ಬಳಸಿ ಅಂದಾಜು 20 ಕೋಟಿ ಲಡ್ಡುಗಳನ್ನು ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದುತಿರುಮಲ ತಿರುಪತಿ ದೇವಸ್ಥಾನಂ (TTD) ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ನೀಡಿರುವ ಮಾಹಿತಿ ಪ್ರಕಾರ, 2019-2024ರ ಅವಧಿಯಲ್ಲಿ ವಿತರಿಸಲಾದ ಒಟ್ಟು 48.76 ಕೋಟಿ ಲಡ್ಡುಗಳಲ್ಲಿ ಇದೂ ಒಂದು ಎಂದಿದ್ದಾರೆ. ಇದರ … Read more

ಹಣದ ವಿಚಾರಕ್ಕೆ ಗಲಾಟೆ : ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಚೀಲದಲ್ಲಿ ಹಾಕಿ ಎಸೆದ!

ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮನೆಯ ಆವರಣ ಗೋಡೆ ಸಮೀಪ ಎಸೆದ ಘಟನೆ ಕೇರಳ ಕೊಚ್ಚಿ ಸಮೀಪದ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೊಂತುರ್ತಿ ನಿವಾಸಿ ಜಾರ್ಜ್ ಕೆ.ಕೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಾನೇ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಲೈಂಗಿಕ ಕಾರ್ಯಕರ್ತೆಯಾಗಿರುವ ಆಕೆಯನ್ನು ತೇವರದಲ್ಲಿರುವ ಬಾಲಕಿಯ ಪ್ರೌಢ ಶಾಲೆಯ ಬಳಿಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. ಮಾತಿನ … Read more

ಬೆಂಗಳೂರು ಟ್ರಾಫಿಕ್‌ಗಿಂತ ಬಾಹ್ಯಾಕಾಶ ಪ್ರಯಾಣ ಸುಲಭ ಎಂದ ಗಗನಯಾತ್ರಿ ಶುಭಾಂಶು ಶುಕ್ಲಾ

ಬೆಂಗಳೂರು ಟ್ರಾಫಿಕ್‌ ಅಂದ್ರೆ ಯಾರಿಗೆ ತಾನೆ ಭಯ ಇಲ್ಲ? ಅಪ್ಪಿ ತಪ್ಪಿಯೂ ಮಾತಿನ ಮಧ್ಯೆ ಬೆಂಗಳೂರು ಟ್ರಾಫಿಕ್‌ ವಿಚಾರ ಬಂದ್ರೆ ಒಂದು ಕ್ಷಣ ಅವರು ಸೈಲೆಂಟ್‌ ಆಗ್ತಾರೆ. ಅಷ್ಟರಮಟ್ಟಿಗೆ ಸಿಲಿಕಾನ್‌ ಸಿಟಿಯ ಟ್ರಾಫಿಕ್‌ ಹವಾ ಇಟ್ಟಿದೆ. ಗಗನಯಾತ್ರಿ ಶುಭಾಂಶು ಶುಕ್ಲಾ ಕೂಡ ಬೆಂಗಳೂರು ಟ್ರಾಫಿಕ್‌ ಬಗ್ಗೆ ಮಾತನಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಶುಭಾಂಶು ಶುಕ್ಲಾ, “ಬಾಹ್ಯಾಕಾಶದಿಂದ ಬೆಂಗಳೂರಿಗೆ ಬರುವುದು ಸುಲಭ. ಆದರೆ ಮಾರತ್ತಹಳ್ಳಿಯಿಂದ ಮಾದಾವರಕ್ಕೆ ಹೋಗುವುದು ತುಂಬಾ ಕಷ್ಟ” ಎಂದು … Read more

Tejas Fighter Jet Crash: ದುಬೈನಲ್ಲಿ ಪತನಗೊಂಡ ಭಾರತದ ತೇಜಸ್‌..! ವಿಮಾನದ ಬೆಲೆ ಎಷ್ಟು ಗೊತ್ತಾ..? ಸರ್ಕಾರಕ್ಕೆ ಭಾರೀ ನಷ್ಟ

Tejas Fighter Jet Crash : ಮಾಧ್ಯಮ ವರದಿಗಳ ಪ್ರಕಾರ.. ನಿನ್ನೆ ಪ್ರದರ್ಶನದಲ್ಲಿ ತೇಜಸ್ ತನ್ನ ಚುರುಕುತನ ಮತ್ತು ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಿತ್ತು. ಎಲ್ಲವೂ ಸುಗಮವಾಗಿ ನಡೆಯುತ್ತಿದ್ದಾಗ ವಿಮಾನವು ಇದ್ದಕ್ಕಿದ್ದಂತೆ ತನ್ನ ಹಿಡಿತವನ್ನು ಕಳೆದುಕೊಂಡಿತು. ಕೆಲವೇ ಕ್ಷಣಗಳಲ್ಲಿ, ವಿಮಾನವು ನಿಯಂತ್ರಣ ತಪ್ಪಿ ಭೂಮಿಗೆ ವೇಗದಲ್ಲಿ ಬಂದು ಅಪ್ಪಳಿಸಿತು. ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ವಿಮಾನವು ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ಪೈಲಟ್ ಅಪಘಾತದಲ್ಲಿ ಸಾವನ್ನಪ್ಪಿದರು. ಈ ತೇಜಸ್ ಫೈಟರ್ ಜೆಟ್‌ನ ಮೌಲ್ಯ ಸುಮಾರು 680 ಕೋಟಿ ರೂ. ಇಷ್ಟು ದುಬಾರಿ ಸ್ವದೇಶಿ … Read more