ರಾಜ್ಯದಲ್ಲಿ ನಿಯಮ ಉಲ್ಲಂಘಿಸಿ ಮನೆ ಕಟ್ಟಡ ನಿರ್ಮಿಸಿದವರಿಗೆ ಭರ್ಜರಿ ಗುಡ್ ನ್ಯೂಸ್ – ಸಕ್ರಮ ಮಾಡಿಕೊಳ್ಳಲು ಅರ್ಜಿ ಆಹ್ವಾನ

Spread the love

ರಾಜ್ಯ ಸರ್ಕಾರದಿಂದ ಇದೀಗ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದವರಿಗೆ ಗುಡ್ ನ್ಯೂಸ್ ನೀಡಲಾಗಿದ್ದು, ನಗರಪಾಲಿಕೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದರೂ ದಂಡವನ್ನ ಕಟ್ಟಿಸಿಕೊಂಡು ವಿನಾಯತಿ ನೀಡುವುದಕ್ಕೆ ಇದೀಗ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ರಾಜ್ಯದ ನಗರಪಾಲಿಕೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ವಿನಯತಿ ನೀಡಿ ದಂಡ ಕಟ್ಟಿ ಪರಿಷ್ಕೃತ ನಕ್ಷೆ ಪಡೆಯಲು ಸರಕಾರ ಅವಕಾಶವನ್ನ ನೀಡಿದೆ. ಆದರೆ ಅದಕ್ಕಾಗಿ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದಂತಹ ಮಾಲೀಕರು ಶೇಕಡ 15%ರಷ್ಟು ಮಿತಿಯೊಳಗೆ ನಿಯಮ ಉಲ್ಲಂಘಿಸಿದರೆ ಮಾತ್ರ ಈ ಆದೇಶವು ಅನ್ವಯ ಆಗಲಿದೆ. ಯಾರು ನಿಯಮ ಉಲ್ಲಂಘಿಸಿ ಕಾರ್ ಪಾರ್ಕಿಂಗ್ ಮಾಡಿ ಕಟ್ಟಡ ಕಟ್ಟಿರುತ್ತಾರೋ ಅವರಿಗೆಲ್ಲ ಅನುಕೂಲ ಆಗಲಿದೆ.

ಈ ಪರವಾನಿಗೆ ಉಲ್ಲಂಘಿಸಿದ ಕಟ್ಟಡಗಳಿಗೆ ವಿನಾಯತಿ ನೀಡಲು ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಗಿನಂತೆ ದಂಡ ನಿಗದಿಪಡಿಸಲಾಗಿದೆ. ಈ ಆದೇಶವು 15%ರಷ್ಟು ಮಿತಿಯೊಳಗೆ ನಿಯಮ ಉಲ್ಲಂಘಿಸಿ ಕಟ್ಟಿದಂತಹ ಕಟ್ಟಡಗಳಿಗೆ ಮಾತ್ರವೇ ಅನ್ವಯವಾಗಲಿದೆ. ಸೆಟ್ ಬ್ಯಾಕ್ ಕಾರ್ ಪಾರ್ಕಿಂಗ್ ಉಲ್ಲಂಘನೆ ಮಾಡಿದವರಿಗೆ ದಂಡ ಕಟ್ಟಲು ಅವಕಾಶ ಇದೀಗ ನೀಡಲಾಗಿದೆ.

ಯಾವ ಯಾವ ಕಟ್ಟಡಕ್ಕೆ ಪರವಾನಗೆ ಇಲ್ಲದೆಯೇ ನಿಯಮ ಉಲ್ಲಂಘನೆ ಮಾಡಿರುತ್ತಾರೋ, ದಂಡದ ಮೊತ್ತವನ್ನ ಪಾವತಿ ಮಾಡಬಹುದು. ಹಣ ಪಾವತಿ ಮಾಡಲು ನೀವು ಪಂಚಾಯತಿ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗೆ ಭೇಟಿ ಮಾಡಬೇಕಾಗುತ್ತದೆ.

WhatsApp Group Join Now

Spread the love

Leave a Reply