Annabhagya Scheme : ಇನ್ನೂ ನಿಮಗೆ ಅನ್ನಭಾಗ್ಯ ಅಕ್ಕಿ ಹಣ ಬಂದಿಲ್ವಾ.? ಹಣ ಬೇಕಂದ್ರೆ ಈ ಕೆಲಸ ನೀವು ಮಾಡಲೇಬೇಕು

Annabhagya Scheme : ನಮಸ್ಕಾರ ಸ್ನೇಹಿತರೇ, ಇಂದಿನ ಲೇಖನದಲ್ಲಿ ಅನ್ನ ಭಾಗ್ಯ ಯೋಜನೆಯಡಿ ಎಷ್ಟೋ ಮಂದಿಗೆ ಅನ್ನ ಭಾಗ್ಯದ ಹಣ ಇನ್ನೂ ಕೂಡ ಏಕೆ ಬಂದಿಲ್ಲ ಎನ್ನುವ ಬಗ್ಗೆ ಎಲ್ಲಾ ವಿವರಗಳನ್ನು ತಿಳಿಸಲಾಗಿದೆ.

ಅನ್ನ ಭಾಗ್ಯ ಕಾರ್ಯಕ್ರಮದಡಿ ನಿಮ್ಮ ಬ್ಯಾಂಕ್ ಖಾತೆಗೆ ಇನ್ನು ಹಣ ಜಮಾ ಆಗಿಲ್ವಾ.? ಇದಕ್ಕೆ ಅಸಲಿ ಕಾರಣವೇನು? ನೀವು ಯಾವ ಕೆಲಸ ಮಾಡದಿದ್ದರೆ ನಿಮಗೆ ಅನ್ನ ಭಾಗ್ಯ ಯೋಜನೆಯ(Annabhagya Scheme) ಅಕ್ಕಿಯ ಹಣ ಸಿಗುವುದಿಲ್ಲ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಇಂದಿನಿಂದ ಪ್ರತಿ ತಿಂಗಳು ನಿಮ್ಮ ಅಕ್ಕಿ ಹಣವನ್ನು ಸ್ವೀಕರಿಸಲು ಪ್ರಾರಂಭಿಸಿ.

Annabhagya Scheme

ಬಿಪಿಎಲ್(BPL) ಪಡಿತರ ಚೀಟಿ ಹೊಂದಿದ್ದರೂ ಕೂಡ ಅಕ್ಕಿ ಹಣ ಸಿಗುತ್ತಿಲ್ಲ.? ಕಾರಣ ಏನು.?

ಅನ್ನಭಾಗ್ಯ ಯೋಜನೆಯ(Annabhagya Scheme) ಫಲಾನುಭವಿಗಳಿಗೆ, ಐದು ಕೆಜಿಗಳಷ್ಟು ಅಕ್ಕಿ ಹಣವು ಅನೇಕ ಕಾರಣಗಳಿಂದ ಸಂಪೂರ್ಣವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿಲ್ಲ.

ಬಿಪಿಎಲ್(BPL) ಪಡಿತರ ಚೀಟಿದಾರರಿಗೆ ರಾಜ್ಯ ಸರಕಾರ ನೀಡುತ್ತಿರುವ 10 ಕೆಜಿ ಅಕ್ಕಿಯಲ್ಲಿ, 5 ಕೆಜಿ ಅಕ್ಕಿ ಬದಲು ಅಕ್ಕಿಗೆ ಹಣ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ತಿಳಿಸಿತ್ತು. ಹಲವು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಿದೆ. ಆದರೆ ಇನ್ನೂ ಹಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇದುವರೆಗೂ ಹಣ ವರ್ಗಾವಣೆಯಲ್ಲ ಎನ್ನುವ ಮಾಹಿತಿ ಬಂದಿದೆ. ಸರ್ಕಾರವು ಪ್ರತೀ ಕೆಜಿಗೆ 34 ರೂಪಾಯಿಯಂತೆ ಹಣ ವರ್ಗಾವಣೆ ಮಾಡುತ್ತಿದೆ.

ನಿಮ್ಮ ರೇಷನ್ ಕಾರ್ಡ್ ಈ-ಕೆವೈಸಿ ಆಗಿದೆಯಾ.? ಹೇಗೆ ತಿಳಿಯುವುದು.?

ನೋಡಿ ಸ್ನೇಹಿತರೇ, ಎಲ್ಲವೂ ದಾಖಲೆಗಳು ಸರಿಯಾಗಿದ್ದರೂ ನಮ್ಮ ಬ್ಯಾಂಕ್ ಖಾತೆಗೆ ಇನ್ನೂ ಅನ್ನ ಭಾಗ್ಯ ಯೋಜನೆಯ(Annabhagya Scheme) ಹಣ ಜಮೆ ಆಗಿಲ್ಲ ಎಂದು ಅರ್ಹ ಫಲಾನುಭವಿಗಳು ತುಂಬಾ ಬೇಸರಗೊಂಡಿದ್ದಾರೆ. ಆದ್ದರಿಂದ, ನೀವು ಅನ್ನ ಭಾಗ್ಯ ಯೋಜನೆಯಡಿ(Annabhagya Scheme) ನಿಮ್ಮ ಬ್ಯಾಂಕ್‌ಗೆ ನೇರವಾಗಿ ಹಣವನ್ನು ವರ್ಗಾವಣೆಯಾಗಲು ಬಯಸಿದರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಸೀಡಿಂಗ್ ಮಾಡಿಸಿರಬೇಕು.

ಆದರೆ ಇನ್ನೂ ಅನೇಕರು ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಮತ್ತು ಈ ಹಣ ಬರದ ಕಾರಣ ನೀವು ತಕ್ಷಣ ನಿಮ್ಮ ಬ್ಯಾಂಕ್‌ಗೆ ಹೋಗಿ ಆಧಾರ್ ಲಿಂಕ್ ಮಾಡಿ ಮತ್ತು ಅಲ್ಲಿನ ಸಿಬ್ಬಂದಿ ಸಹ ನಿಮಗೆ ಸಹಾಯ ಮಾಡುತ್ತಾರೆ.

ಬ್ಯಾಂಕ್ ಖಾತೆ ಸರಿಯಾಗಿದ್ದರೂ ಅನ್ನ ಭಾಗ್ಯ ಯೋಜನೆಯ(Annabhagya Scheme) ಹಣ ಜಮಾ ಆಗುತ್ತಿಲ್ಲ.!

ನಿಮಗೆ ತಿಳಿದಿರುವಂತೆ, ಇನ್ನೂ ಅನೇಕ ಜನರು, ವಿಶೇಷವಾಗಿ ಗ್ರಾಮೀಣ ನಿವಾಸಿಗಳು, ಬ್ಯಾಂಕ್ ಖಾತೆಯನ್ನು ಹೊಂದಿಲ್ಲ.

ಬ್ಯಾಂಕ್ ಖಾತೆ ಇಲ್ಲದ ಕಾರಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವುದಿಲ್ಲ, ಆದರೆ ಅಂಚೆ ಕಚೇರಿಯಲ್ಲಿ ಹೊಸ ಖಾತೆ ತೆರೆದು ಅಲ್ಲಿಂದ ಹಣ ಜಮಾ ಮಾಡಲು ಆಹಾರ ಇಲಾಖೆಯೂ ಮಾಹಿತಿ ನೀಡಿದೆ. ಅನೇಕ ಜನರು ಹೊಸ ಖಾತೆಗಳನ್ನು ರಚಿಸಿದ್ದಾರೆ ಮತ್ತು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ನಮ್ಮ ದೇಶದ 77% ಗ್ರಾಮೀಣ ಜನಸಂಖ್ಯೆಯು ತಮ್ಮ ಮನೆಯಿಂದ ಹೊರಹೋಗದೆ IPB ಶೆಡ್ಯೂಲ್ಡ್ ಬ್ಯಾಂಕ್ ಇಂಡಿಯಾ ಪೋಸ್ಟ್ ಮೂಲಕ ಹಣವನ್ನು ಪಡೆಯಬಹುದು ಅಥವಾ ಠೇವಣಿ ಮಾಡಬಹುದು.

ಕೇವಲ ಮೂರರಿಂದ ಮೂರು ನಿಮಿಷಗಳಲ್ಲಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬಹುದು. ನಾವು ಕರ್ನಾಟಕದಲ್ಲಿ ಒಟ್ಟು 33 IPPB ಶಾಖೆಗಳನ್ನು ಹೊಂದಿದ್ದೇವೆ.

ಹಾಗೆಯೇ ನೀವು ಐಪಿಪಿಬಿಯಲ್ಲಿ ಖಾತೆ ತೆರೆದಾಗ ಅನ್ನ ಭಾಗ್ಯ ಯೋಜನೆಯ(Annabhagya Scheme) ಮತ್ತು ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಹಣ ನೇರವಾಗಿ ನಿಮ್ಮ ಖಾತೆಗೆ ಬರಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ, ನಗದು ವರ್ಗಾವಣೆ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply