ಪುನೀತ 60 ಕೋಟಿ ವ್ಯವಹಾರ ಮಾಡ್ತಾ ಇದ್ದೀನಿ ಅಂದ ಒಂದು ಚಿಟಿಕೆಗೆ ಹೊರಟುಹೋದ ಎಂದ ನಟ ಜಗ್ಗೇಶ್

Spread the love

ನಿನ್ನೆ ( ಜೂನ್ 15 ) ವಿಶ್ವ ತಂದೆಯಂದಿರ ದಿನದ ಸಲುವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ತಂದೆಯ ಮಹತ್ವ ಹಾಗೂ ತ್ಯಾಗದ ಕುರಿತು ಭಾಷಣ ಮಾಡಿದರು. ತಂದೆ ಎಂಬ ವ್ಯಕ್ತಿಗೆ ಯಾವ ಯೋಚನೆಯೂ ಇರುವುದಿಲ್ಲ, ನನ್ನ ಹೆಂಡತಿ ಚೆನ್ನಾಗಿರಬೇಕು, ನನ್ನ ಮಕ್ಕಳು ಚೆನ್ನಾಗಿರಬೇಕು ಎಂದು ಯೋಚಿಸುವ ಒಂದು ಆತ ಓರ್ವ ನಿಷ್ಕಲ್ಮಶ ಜೀವಿ ಎಂದು ಕೊಂಡಾಡಿದರು.

ಆತ ಎತ್ತು ದುಡಿದ ಹಾಗೆ ದುಡೀತಾನೆ, ಕೊನೆಗೆ ಸಾಯುತ್ತಾನೆ, ಆತ ನಿಮ್ಮಿಂದ ಏನೂ ಕೇಳಲ್ಲ, ಅಪ್ಪ ಐ ಲವ್‌ಯೂ ಪಾ ಎಂದು ಹಾಡು ಬರೆದಿದ್ದಾರಲ್ಲ ಅಷ್ಟನ್ನೇ ಆತ ಕೇಳುವುದು. ತಬ್ಬಿಕೊಂದು ಧನ್ಯವಾದ ಅಪ್ಪ, ಲವ್‌ಯೂ ಅಪ್ಪ ಎಂದುಬಿಡಿ ಸಾಕು ಎಂದು ಯುವ ಜನತೆಗೆ ಕರೆ ನೀಡಿದರು.

ಅಂತಹ ವ್ಯಕ್ತಿ ಸತ್ತಾಗ ಆಸ್ತಿ ವಿಂಗಡಣೆ ಮಾಡುವುದನ್ನು ನೋಡಬಾರದು, ನಾನು ನೋಡಿಬಿಟ್ಟಿದ್ದೀನಿ. ನಮ್ಮ ಬಂಧುಗಳು, ಮಿತ್ರರು ಇನ್ನೂ ಹೆಣವನ್ನೇ ಎತ್ತಿರುವುದಿಲ್ಲ ಆಗಲೇ ಕಿತ್ತಾಡ್ತಾ ಇರುತ್ತಾರೆ, ಅವರಿಗೆ ಒಂದೇ ಮಾತನ್ನು ಹೇಳುತ್ತೇನೆ ಭಗವಂತ ಎನ್ನುವವನು ಒಂದೇ ಚಿಟಿಕೆ ಹೀಗೆ ಹೊಡೆದರೆ ಸಾಕು ಎಲ್ಲವನ್ನೂ ಎಲ್ಲಿರುತ್ತೆ ಅಲ್ಲೇ ಬಿಟ್ಟು ಹೋಗ್ತಾ ಇರಬೇಕು ಎಂದರು.

ಈ ವೇಳೆ ಪುನೀತ್‌ ರಾಜ್‌ಕುಮಾರ್‌ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡ ಜಗ್ಗೇಶ್‌ ಈ ವಿಷಯದಲ್ಲಿ ಪುನೀತ್ ಒಬ್ಬ ಸಂತನಾಗಿ ಕಾಣಿಸಿಬಿಟ್ಟ ನನಗೆ ಎಂದರು. ಒಂದಿನ ನನ್ನ ಬಳಿ ಬಂದು 60 ಕೋಟಿ ರೂಗಳಷ್ಟು ವ್ಯವಹಾರವನ್ನು ಒಪ್ಪಿಕೊಂಡಿದ್ದೇನೆ ಎಂದ, ನನಗೆ ಬಹಳ ಖುಷಿಯಾಯಿತು, ನಿಮ್ಮಪ್ಪ ಇದ್ದಿದ್ರೆ ಎಷ್ಟು ಖುಷಿಪಡ್ತಾ ಇದ್ರು ಅವರು ಇರಬೇಕಿತ್ತು ಎಂದೆ ಎಂದರು. ಕೆಲವೇ ದಿನಗಳಲ್ಲಿ ಭಗವಂತ ಒಂದು ಚಿಟಿಕೆ ಹೊಡೆದ ಪುನೀತ ಎಲ್ಲವನ್ನೂ ಬಿಟ್ಟುಹೋದ, ಇದೇ ಸ್ಥಿತಿ ಎಲ್ಲರಿಗೂ ಎಂದು ಹೇಳಿದರು.

WhatsApp Group Join Now

Spread the love

Leave a Reply