ಮೇಷ :-
ಅದೃಷ್ಟಕಾರಿ ಮೇಷರಾಶಿಯವರಿಗೆ ಸೋಮವಾರದ ಹತಾಶೆಯು ಇಂದು ಚರ್ಚಿಸಿ ಫಲವಿಲ್ಲದ್ದು. ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಈ ದಿನ ಪೂರ್ತಿ ಹರ್ಷ, ನಗು ಮತ್ತು ನೆಮ್ಮದಿಯನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಹಣಕಾಸು ವಿಚಾರಗಳಲ್ಲಿ ಒಲವು ಹೆಚ್ಚಾಗುವುದರೊಂದಿಗೆ ಇಂದು ಲಕ್ಷ್ಮೀದೇವಿಯು ನಿಮ್ಮನ್ನು ಅನುಗ್ರಹಿಸುತ್ತಾರೆ ಮತ್ತು ಪರಿಣಾಮವಾಗಿ ನೀವು ಏಳಿಗೆಯನ್ನು ಕಾಣಬಹುದು.
ನಿಮ್ಮ ಪ್ರಯತ್ನವನ್ನು ಸೂಕ್ತರೀತಿಯಲ್ಲಿ ಪ್ರಾಮಾಣೀಕರಿಸಲು ನಿಮಗೆ ಸಾಧ್ಯವಾಗಬಹುದು. ಇದು ಇಂದು ನೀವು ವ್ಯವಹಾರದಲ್ಲಿ ಹೊಂದಿರುವ ಜಾಹೀರಾತು ಯೋಜನೆಗಳನ್ನು ಉಲ್ಲೇಖಿಸಬಹುದು. ಮುಂದಕ್ಕೆ ಸಾಗಿ. ಅವುಗಳು ಫಲಪ್ರದವಾಗಿರುತ್ತದೆ. ನಿಮ್ಮ ಸಂಪರ್ಕ ಕೌಶಲ್ಯದಿಂದಾಗಿ ಸಂವಾದಗಳು ಪ್ರಯೋಜನಕಾರಿಯಾಗಿರುತ್ತದೆ. ವ್ಯವಹಾರದೊಂದಿಗೆ ಆನಂದವನ್ನು ಬೆರೆಸಿಕೊಳ್ಳಿ. ಸಣ್ಣ ಮಟ್ಟದ ಪ್ರವಾಸ ತೆರಳುವ ಸಾಧ್ಯತೆಯಿದೆ. ಸಾಮಾಜಿಕ ಸಂಬಂಧಿತ ಕಾರ್ಯಗಳಿಗೆ ಮತ್ತು ಅವುಗಳ ಪ್ರಸ್ತುತಿಗೆ ಇಂದು ಸೂಕ್ತ ದಿನ.
ವೃಷಭ :-
ನಿಮ್ಮ ಉತ್ಸಾಹ ಮಾನಸಿಕ ಸ್ಥಿತಿ, ಆಲೋಚನೆ ಮತ್ತು ಸಿಹಿಯಾದ ಮಾತುಗಳಿಂದ ನೀವು ಇತರರನ್ನು ಪ್ರಭಾವಿತಗೊಳಿಸುತ್ತೀರಿ. ಸೂಕ್ಷ್ಮ ವಿವೇಚನೆ ಅಗತ್ಯವಿರುವ ವಿಚಾರಗಳಲ್ಲಿ ಸೂಕ್ಷ್ಮತೆಯನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ಜನರ ಕೌಶಲ್ಯದಲ್ಲಿ ನೀವು ಉತ್ಕೃಷ್ಟರಾಗಿರುವಿರಿ ಮತ್ತು ನಿಮ್ಮ ಮಾತುಗಳು ಕಷ್ಟಕರ ಶ್ರೋತೃಗಳನ್ನೂ ಮಂತ್ರಮುಗ್ಧಗೊಳಿಸುತ್ತದೆ. ಆದ್ದರಿಂದ ವಿಚಾರಗೋಷ್ಠಿ, ಚರ್ಚೆ, ಮಾತುಕತೆಗಳಲ್ಲಿ ಭಾಗವಹಿಸಲು ಇಂದು ಸೂಕ್ತ ದಿನ. ಅಪೇಕ್ಷಿತ ಫಲಿತಾಂಶವು ಲಭಿಸದಿದ್ದರೆ ಪರವಾಗಿಲ್ಲ. ನಿರಾಶರಾಗಬೇಡಿ. ಸಂದರ್ಭಗಳು ಅಭಿವೃದ್ಧಿಗೊಳ್ಳಲಿವೆ. ಜೀರ್ಣಾಂಗಕ್ಕೆ ಸಂಬಂಧಿಸಿದ ವ್ಯಾಧಿಯು ನಿಮ್ಮನ್ನು ಕಾಡಬಹುದು. ಆದ್ದರಿಂದ ಹೊರಗಡೆ ತಿನ್ನುವುದನ್ನು ತಪ್ಪಿಸಿ. ಸಾಹಿತ್ಯದಲ್ಲಿ ನೀವು ಆಸಕ್ತಿ ಹೊಂದಬಹುದು.
ಮಿಥುನ :-
ಈ ದಿನ ನಿಮ್ಮ ಆಲೋಚನೆಗಳಲ್ಲಿ ನೀವು ಕಳೆದುಹೋಗುವುದನ್ನು ಗಣೇಶ ಕಾಣುತ್ತಾರೆ. ಇಂದು ನೀವು ನಿಭಾಯಿಸಬೇಕಾದ ಕಾರ್ಯದ ಬಗ್ಗೆ ಉತ್ತಮ ನಿರ್ವಹಣೆಯನ್ನು ನೀಡಬೇಕಾಗಬಹುದು. ಚರ್ಚೆ ಮತ್ತು ವಾಗ್ವಾದಗಳಿಂದ ದೂರವಿರಿ. ಸಾಮಾನ್ಯವಾಗಿ ನಿಮ್ಮ ತಾಯಿ ಹಾಗೂ ಮಹಿಳೆಯರಿಗೆ ಸಂಬಂಧಿಸಿದಂತೆ ನೀವು ಭಾವುಕರಾಗುವಿರಿ. ಪ್ರಯಾಣ ಮಾಡಲಿದ್ದೀರಿ ಆದರೆ, ಹಾಗೆ ಮಾಡದಂತೆ ಸಲಹೆ ನೀಡಲಾಗುತ್ತದೆ. ಕೆಲವೊಂದು ವಿಚಾರಗಳ ಬಗ್ಗೆ ಗೊಂದಲ ಉಂಟಾಗಬಹುದು ಮತ್ತು ಅದೇ ಕುರಿತಾದ ಮಿತಿಮೀರಿದ ಆಲೋಚನೆಯು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು. ನೀರು ಮತ್ತು ಇತರ ಹರಿಯುವ ವಸ್ತುಗಳಿಂದ ಅಪಾಯವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ.
ಕರ್ಕಾಟಕ :-
ಇಂದು ನಿಮಗೆ ಅದೃಷ್ಟದ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸಕಾಲ. ಸ್ನೇಹಿತರ ಮತ್ತು ಆತ್ಮೀಯರೊಂದಿಗಿನ ಭಿನ್ನಾಭಿಪ್ರಾಯಗಳನ್ನು ನಿರಾಕರಿಸಲು ಸಾಧ್ಯವಿಲ್ಲದಿದ್ದರೂ, ಅವರೊಂದಿಗೆ ನೀವು ಸಣ್ಣ ಪ್ರವಾಸವನ್ನು ಕೈಗೊಳ್ಳಬಹುದು. ನೀವು ನಿಮ್ಮ ಕೆಲಸದಲ್ಲಿ ಸಂತುಷ್ಟರಾಗುವಿರಿ. ಇಂದು ನೀವು ಏನೇ ಮಾಡಿದರು ಅದರಲ್ಲಿ ಯಶಸ್ಸನ್ನು ಸಾಧಿಸುವಿರಿ. ವ್ಯವಹಾರದಲ್ಲಿ ನಿಮ್ಮ ಸ್ಪರ್ಧಿಗಳಿಗಿಂತ ನೀವು ಮುನ್ನಡೆ ಸಾಧಿಸುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ನಿಮ್ಮ ಸಾಮಾಜಿಕ ನಿಲುವ ವೃದ್ಧಿಯಾಗುವ ಸಾಧ್ಯತೆಯಿದೆ.
ಸಿಂಹ :-
ಇಂದು ಧನಲಾಭದ ದಿನ. ಆದರೆ, ಖರ್ಚುವೆಚ್ಚಗಳೂ ಅಧಿಕವಾಗಿರುತ್ತದೆ. ದೂರದ ಪ್ರದೇಶಗಳ ಜನರೊಂದಿಗಿನ ಸಂಪರ್ಕದಿಂದ ನಿಮಗೆ ಪ್ರಯೋಜನ ಉಂಟಾಗಬಹುದು. ಕುಟುಂಬದಿಂದ ಮತ್ತು ವಿಶೇಷವಾಗಿ ಸ್ನೇಹಿತೆಯರಿಂದ ಬೆಂಬಲ ಸಿಗುವ ಭರವಸೆಯಿದೆ. ನಿಮ್ಮ ಹಲ್ಲು ಅಥವಾ ಕಣ್ಣು ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ. ನಿಮ್ಮ ವಿನಯ ಸ್ವಭಾವದಿಂದ ನೀವು ಅನೇಕ ಜನರ ಮನಗೆಲ್ಲುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ.
ಕನ್ಯಾ :-
ಇಂದು ನಿಮಗೆ ಹೊಸ ಪರಿಚಯವಾಗಲಿದ್ದು, ಇದರಿಂದಾಗಿ ಭವಿಷ್ಯದಲ್ಲಿ ನಿಮಗೆ ಪ್ರಯೋಜನ ಉಂಟಾಗಲಿದೆ. ಆತ್ಮವಿಶ್ವಾಸದೊಂದಿಗೆ ನೀವು ಮುಂದಕ್ಕೆ ಸಾಗುವಿರಿ. ವ್ಯವಹಾರ ಸ್ಥಿತಿಯು ಅತ್ಯುತ್ತಮವಾಗಿರುತ್ತದೆ. ಇಂದು ನಿಮ್ಮ ಆರೋಗ್ಯವು ಸುಸ್ಥಿಯಿಲ್ಲಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಕೆಲಸ ಮಾಡು ರೀತಿಯ ಬಗ್ಗೆ ನೀವು ಸಂತೋಷಪಡುವಿರಿ. ಧನಲಾಭದ ಭರವಸೆಯಿದೆ. ಜೊತೆಗೆ ನೀವು ಕೆಲವು ಶುಭಸುದ್ದಿಗಳನ್ನು ಪಡೆಯುವಿರಿ. ನಿಮ್ಮ ಪ್ರಯಾಣವು ಅಡೆತಡೆಗಳಿಂದ ಮುಕ್ತವಾಗಿರುತ್ತದೆ. ಇಂದು ನೀವು ಚೆನ್ನಾಗಿ ನಿದ್ರಿಸುವಿರಿ.
ತುಲಾ :-
ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಸಿಡುಕು ಮತ್ತು ಅಜಾಗೂರಕತೆಯ ನಿಮ್ಮ ವರ್ತನೆಯು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸುತ್ತದೆ. ತುಲಾ ರಾಶಿಯವರಿಗೆ ಇಂದು ಅಪಘಾತದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಖರ್ಚುವೆಚ್ಚಗಳು ವರ್ಧಿಸಲಿವೆ. ವ್ಯವಹಾರ ಪಾಲುದಾರರೊಂದಿಗೆ ಸಣ್ಣ ಜಗಳ ಉಂಟಾಗುವ ಸಾಧ್ಯತೆಯಿದೆ. ನಿಮ್ಮ ಮಾತುಗಳ ಬಗ್ಗೆ ಗಮನವಿಡಿ. ಅನಗತ್ಯ ಜಗಳಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಡಿ. ಕಾನೂನು ವಿಚಾರಗಳಿಗೆ ಸಂಬಂಧಿಸಿ ನೀವು ಅತ್ಯಂತ ಎಚ್ಚರಿಕೆಯಿಂದಿರಬೇಕು.ಹೊಸ ಪರಿಚಯಸ್ಥರ ಬಳಿ ವಾಗ್ವಾದ ನಡೆಸುವ ಸಾಧ್ಯತೆಯಿದೆ. ಆದ್ಯಾತ್ಮದತ್ತ ನೀವು ಒಲವು ತೋರುತ್ತೀರಿ ಮತ್ತು ಖಂಡಿತವಾಗಿಯೂ ಇದು ನಿಮಗೆ ಪ್ರಯೋಜನವನ್ನು ತರಲಿದೆ.
ವೃಶ್ಚಿಕ :-
ಇಂದು ನೀವು ಅನೇಕ ರೀತಿಯಿಂದ ಪ್ರಯೋಜನ ಪಡೆಯುವಿರಿ ಎಂಬುದಾಗಿ ಗಣೇಶ ಹೇಳುತ್ತಾರೆ. ವ್ಯವಹಾರದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಸಂತುಷ್ಟರಾಗುತ್ತಾರೆ. ನೀವು ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು ಮತ್ತು ಅವರೊಂದಿಗೆ ಪ್ರವಾಸ ತೆರಳಬಹುದು. ವಿವಾಹವಾಗುವ ಆಲೋಚನೆ ಉಳ್ಳವರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ನಿಮಗೆ ನಿಮ್ಮ ಸಂಗಾತಿಯಿಂದ ಮಾತ್ರವಲ್ಲದೆ ಇತರ ಮಹಿಳಾ ಸ್ನೇಹಿತರಿಂದ ಪ್ರಯೋಜನ ಉಂಟಾಗಲಿದೆ. ಅತ್ಯಂತ ಸುಂದರ ಪ್ರದೇಶಗಳಿಗೆ ವಿಹಾರಕೂಟ ತೆರಳಲು ನೀವು ಯೋಜನೆ ರೂಪಿಸಬಹುದು. ಇಂದು ನೀವು ಉಡುಗೊರೆಗಳನ್ನು ಪಡೆಯುವ ಸಂಭವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವೈವಾಹಿಕ ಸಂತಸದಲ್ಲಿ ತೇಲಾಡುವಿರಿ.
ಧನು :-
ಧನು ರಾಶಿಯವರಿಗೆ ಇಂದು ಅದೃಷ್ಟಕಾರಿ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲೇ ನಿರ್ವಹಿಸುತ್ತೀರಿ. ನಿಮ್ಮ ಕೆಲಸವನ್ನು ಇಂದು ನೀವು ಯಶಸ್ವಿಯಾಗಿ ಪೂರೈಸುವಿರಿ ಮತ್ತು ಇತರರಿಗೆ ಸಂತೋಷದಿಂದಲೇ ಕೆಲಸದಲ್ಲಿ ಸಹಕರಿಸುವಿರಿ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ನಿರ್ಧಾರಗಳನ್ನು ಇಂದು ಕೈಗೊಳ್ಳಬಹುದು. ವ್ಯವಹಾರ ಸಂಬಂಧ ಪ್ರಯಾಣ ಸಂಭವವಿದೆ. ನಿಮ್ಮ ಪ್ರತಿಭೆಯಿಂದ ನಿಮ್ಮ ಮೇಲಾಧಿಕಾರಿಗಳ ಮನಗೆಲ್ಲುವಿರಿ ಮತ್ತು ಇದರಿಂದಾಗಿ ಬಡ್ತಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ನಿಮ್ಮ ತಂದೆಯಿಂದ ಅಥವಾ ಮನೆಯಲ್ಲಿನ ಹಿರಿಯರಿಂದ ನಿಮಗೆ ಪ್ರಯೋಜನ ಉಂಟಾಗಲಿದೆ.
ಮಕರ :-
ಇಂದು ಇನ್ನೊಂದು ರೀತಿಯ ಆರಾಮದಾಯಕ ದಿನವಾಗಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಬುದ್ಧಿಶಕ್ತಿಯ ಬಳಸಿ ಮಾಡಬೇಕಾದ ಕಾರ್ಯಗಳಿಗೆ ಸಂಬಂಧಿಸಿ ನಿಮ್ಮನ್ನು ತೊಡಗಿಸಿಕೊಳ್ಳಲು ಇದು ಸಕಾಲವೆನಿಸುತ್ತದೆ. ಬರಹ ಮತ್ತು ಸಾಹಿತ್ಯದಲ್ಲಿ ತೊಡಗಿರುವವರಿಗೆ ಇಂದು ಉತ್ತಮ ದಿನ. ಸರಕಾರಿ ಸಂಬಂಧಿತ ವಿಚಾರಗಳಲ್ಲಿ ಉಂಟಾಗುವ ಅಹಿತಕರ ಸಂದರ್ಭಗಳ ವಿರುದ್ಧ ನೀವು ಸೆಣಸಾಡಬೇಕಾಗಬಹುದು. ದಿನದಂತ್ಯದಲ್ಲಿ ನೀವು ಪ್ರಯಾಸಗೊಂಡಿರುವಂತೆ ನಿಮಗೆ ಭಾಸವಾಗಬಹುದು. ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನೀವು ತೀವ್ರವಾಗಿ ಬಳಲುವಿರಿ.
ಕುಂಭ :-
ಇಂದು ನಿಮ್ಮ ಮನಸ್ಸು ಪೂರ್ತಿ ಆಲೋಚನೆಗಳಿಂದ ತುಂಬಿರುತ್ತದೆ ಮತ್ತು ಅದು ನಿಮ್ಮನ್ನು ಆಯಾಸಗೊಳಿಸಬಹುದು. ನೀವು ಕುಪಿತಗೊಳ್ಳುವಿರಿ ಮತ್ತು ನಿಮ್ಮಲ್ಲೇ ನೀವು ಶಾಂತರಾಗುವುದರಿಂದ ಮತ್ತು ಆಲೋಚನೆಯನ್ನು ಕಡಿಮೆ ಮಾಡುವುದರಿಂದ ನಿಮಗೆ ಸ್ವಲ್ಪ ಆರಾಮದಾಯಕವೆನಿಸಬಹುದು. ಕಳ್ಳತನ ಅಥವಾ ಇತರ ಅನೈತಿಕ ಕಾರ್ಯಗಳಿಂದ ಅಂತರ ಕಾಯ್ದುಕೊಳ್ಳಿ. ನಿರಾಶಾ ಮನೋಭಾವವನ್ನು ತಪ್ಪಿಸಿ ಮತ್ತು ನಿಮ್ಮ ಮಾತಿನ ಬಗ್ಗೆ ಗಮನಹರಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬದಲ್ಲಿ ಮದುವೆ ಸಮಾರಂಭ ನಡೆಯುವ ಸಾಧ್ಯತೆಯಿದೆ. ಖರ್ಚುವೆಚ್ಚಗಳು ಹೆಚ್ಚಳಗೊಳ್ಳಬಹುದು ಮತ್ತು ನೀವು ಇದನ್ನು ನಿಯಂತ್ರಿಸಬಹುದು. ದೇವರ ನಾಮ ಸ್ಮರಣೆಯಿಂದ ನೀವು ಸಮಾಧಾನ ಹೊಂದಬಹುದು.
ಮೀನ :-
ಈ ರಾಶಿಯ ಎಲ್ಲಾ ಕನಸುಗಾರ ಮತ್ತು ಸೃಜನಶೀಲರಿಗೆ ಒಳ್ಳೆಯ ಸಮಯ ಎಂದು ಗಣೇಶ ಹೇಳುತ್ತಾರೆ. ಹಾಗೇ ನೀವು ಲೇಖಕ, ಕವಿ, ಚಿತ್ರಕಾರ ಅಥವಾ ಮೂರ್ತಿಗಾರರಾಗಿದ್ದರೆ ಈ ಗ್ರಹಗತಿಗಳ ಸಂಯೋಜನೆಯಿಂದ ಬಹಳಷ್ಟು ಗಳಿಸುವಿರಿ. ಇದು ವ್ಯಾವಹಾರಿಕ ಸಹಕಾರಕ್ಕೆ ಮತ್ತು ಹೊಸ ಸಂಬಂಧಗಳ ಜೋಡಣೆಗೆ ತೊಂದರೆ ಇಲ್ಲದ ಸಮಯ. ನಿಮ್ಮ ಒಳ್ಳೆಯ ಕೆಲಸಕ್ಕೆ ನಿಮ್ಮನ್ನು ನೀವೇ ಗೌರವಿಸಿಕೊಳ್ಳಿ, ಸಾಂಸಾರಿಕ ಜೀವನದಿಂದ ದೂರವಿರಿ, ಆಹ್ಲಾದಕರ ಗಾಳಿಯನ್ನು ಸವಿಯಿರಿ. ಸಂಕ್ಷಿಪ್ತವಾಗಿ ನಿಮ್ಮ ಮನಸ್ಸಿಗೆ ಉತ್ತೇಜಿಸುವ ಮತ್ತು ಸೃಜನಶೀಲವಾಗಿ ಸ್ಪೂರ್ತಿ ನೀಡುವ ಒಂದು ವಿರಾಮವನ್ನು ಕೊಡಿ. ಇಂದು ಗೆಳೆಯರು, ಕುಟುಂಬಿಕರು ಮತ್ತು ಸಹೋದ್ಯೋಗಿಗಳೊಂದಿಗೆ ವಿಹಾರ ಏರ್ಪಡಿಸಲು ಸುದಿನ. ನೀವು ಪ್ರೀತಿಸಿದ ವ್ಯಕ್ತಿಯೊಂದಿಗೆ ಸಿನಿಮಾ ವೀಕ್ಷಣೆಗ ಹೋದಾಗ ಆತ್ಮೀಯರಾಗುವಿರಿ. ಮುನ್ನುಗ್ಗಿ, ನಿಮ್ಮನ್ನು ನೀವು ಆನಂದಿಸಿ. ನಿಮ್ಮ ಸಾಮಾಜಿಕ ಗೌರವ ಹೆಚ್ಚುತ್ತದೆ.
Horoscope Today : 10 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now