Dina Bhavishya : 09 ಜನವರಿ 2026ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಒಟ್ಟಾಗಿ ವೈಯಕ್ತಿಕವಾಗಿ ಮತ್ತು ವೃತ್ತಿಗೆ ಸಂಬಂಧಿಸಿ ಈ ದಿನವು ನಿಮಗೆ ಧನಾತ್ಮಕ ಸೂಚನೆಗಳನ್ನು ನೀಡಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ವ್ಯವಹಾರವು ಇಂದು ಲಾಭದಾಯಕವಾಗಲಿದೆ. ಸುರಕ್ಷಿತ ಹಣಕಾಸಿನೊಂದಿಗೆ, ಹಣಕಾಸು ಮೂಲಗಳನ್ನು ನೀವು ಸಮಯೋಚಿತವಾಗಿ ನಿಭಾಯಿಸುತ್ತೀರಿ.

ಈ ಎಲ್ಲಾ ಕಾರಣಗಳು ನಿಮ್ಮನ್ನು ದಿನಪೂರ್ತಿ ಖುಷಿ ಹಾಗೂ ಉಲ್ಲಾಸದಿಂದಿರಿಸುತ್ತದೆ. ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸಂಜೆಯ ವೇಳೆ ಅತ್ಯಂತ ಸಂತಸದ ಕ್ಷಣವಾಗಿರಬಹುದು. ಪ್ರವಾಸ ಯೋಜನೆಯು ಉತ್ತಮ ಆಲೋಚನೆ. ಧಾರ್ಮಿಕ ಚಟುವಟಿಕೆಗಳು ನಿಮ್ಮನ್ನು ಸ್ವಲ್ಪ ಸಮಯ ಕ್ರಿಯಾಶೀಲರಾಗಿರಿಸಬಹುದು. ಬಲು ಸೊಗಸಾದ ದಿನವು ನಿಮಗಾಗಿ ಕಾದಿದೆ.

ವೃಷಭ :-

ನಿಮ್ಮ ಸಿಹಿಯಾದ ಮಾತು ಇಂದು ಜನರ ಮನಸ್ಸನ್ನು ಗೆಲ್ಲಲಿದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ಇದು ನಿಮ್ಮ ಪರಿಚಯಸ್ಥರ ಪಟ್ಟಿಯಲ್ಲಿ ಇನ್ನು ಸ್ವಲ್ಪ ಜನರನ್ನು ಸೇರ್ಪಡೆಗೊಳಿಸಬಹುದು. ಕೆಲವು ಸಂದರ್ಭಗಳು ನಿಮ್ಮನ್ನು ಉತ್ಸಾಹ ಮತ್ತು ಪ್ರಕಾಶಿಸುವಂತೆ ಮಾಡಬಹುದು. ಇದು ನಿಮಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಅದು ಫಲಪ್ರದ ಫಲಿತಾಂಶವನ್ನು ನೀಡುವವರೆಗೆ ಅದರ ಬಗ್ಗೆ ಗಮನ ಹರಿಸಲು ನಿಮ್ಮನ್ನು ಪ್ರಚೋದಿಸಬಹುದು.ನಿಮ್ಮ ಹಣಕಾಸು ಮೂಲಗಳನ್ನು ನಿಭಾಯಿಸಲು ಇಂದು ಸೂಕ್ತ ದಿನ. ಸಂಕ್ಷಿಪ್ತವಾಗಿ, ನೀವು ಬಯಸಿದ ಎಲ್ಲವನ್ನೂ ಸಾಧಿಸಲು ಇಂದು ಉತ್ತಮ ದಿನ.

ಮಿಥುನ :-

ಇಂದು ನೀವು ಅಸ್ಥಿರತೆ ಹಾಗೂ ಚಂಚಲದಿಂದ ಕೂಡಿರುತ್ತೀರಿ. ಬಹುಶಃ ಪರಸ್ಪರ ಭಿನ್ನವಾಗಿರು ಎರಡು ಆಯ್ಕೆಗಳ ವಿಚಾರದಲ್ಲಿ ನೀವು ಗೊಂದಲಕ್ಕೆ ಬೀಳಬಹುದು. ಈ ಆಯ್ಕೆಗಳಲ್ಲಿನ ವಿಚಾರಕ್ಕೆ ಸಂಬಂಧಿಸಿದಂತೆ ತುಂಬಾ ಭಾವುಕರಾಗಬೇಡಿ. ನಿಮ್ಮ ತಾಯಿಯ ಸಾಂಗತ್ಯದೊಂದಿಗೆ ನೀವು ನೆಮ್ಮದಿಯನ್ನು ಕಾಣಬಹುದು. ನೀವು ಆಧ್ಯಾತ್ಮ ಅಥವಾ ಬೌದ್ಧಿಕ ಚರ್ಚೆಯಲ್ಲಿ ತೊಡಗಿಕೊಂಡಲ್ಲಿ, ವಾಗ್ವಾದದಿಂದ ತಪ್ಪಿಸಿಕೊಳ್ಳಿ. ಕುಟುಂಬ ಪಿತ್ರಾರ್ಜಿತ ಅಥವಾ ಸ್ಥಿರ ಅಥವಾ ಚರ ಆಸ್ತಿಯ ಕುರಿತಂತೆ ಮನೆಯ ಕುಟುಂಬ ಸದಸ್ಯರೊಂದಿಗಿನ ಮಾತುಕತೆ ಅಥವಾ ಚರ್ಚೆಗಳನ್ನು ಮುಂದೂಡಿ. ಇಲ್ಲವಾದಲ್ಲಿ ನೀವು ಅಪ್ರಿಯಗೊಳ್ಳಬಹುದು ಅಥವಾ ಬೇಸರಗೊಳ್ಳಬಹುದು. ಕಾರ್ಯ ಸಂಬಂಧ ಪ್ರಯಾಣ ಬೆಳೆಸಬಹುದು.ಇದನ್ನು ಸಾಧ್ಯವಿದ್ದಷ್ಟು ತಪ್ಪಿಸಿ.

ಕರ್ಕಾಟಕ :-

ಇಂದು ನಿಮ್ಮ ಸೋದರಭಾವದ ಪ್ರೀತಿಯನ್ನು ಪ್ರದರ್ಶಿಸಲು ಸೂಕ್ತ ಸಮಯ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸಹೋದರರು ಒಂಟಿ ಭಾವನೆಯನ್ನು ಹೊಂದಿರಬಹುದು ಮತ್ತು ನಿಮ್ಮ ಸಾಂಗತ್ಯವು ಅವರನ್ನು ಉಲ್ಲಾಸಿತಗೊಳಿಸಬಹುದು. ಇದು ನಿಮಗೆ ಪ್ರಯೋಜನವನ್ನು ಉಂಟುಮಾಡಲಿದೆ. ಸತ್ವವಿಲ್ಲದ ಮಾತುಗಳು ನಿಮ್ಮ ವ್ಯವಹಾರದ ಆಸಕ್ತಿಯ ಆಲೋಚನೆಗಳಲ್ಲಿ ನೀವು ಎಡವಿಬೀಳುವಂತೆ ಮಾಡಬಹುದು. ಎಲ್ಲಾ ರೀತಿಯ ಸಂವಾದಗಳಿಂದಲೂ ನೀವು ಪ್ರಯೋಜನವನ್ನು ಪಡೆಯಲಿದ್ದೀರಿ ಆದ್ದರಿಂದ ನಿಮ್ಮ ಕ್ಷಣಗಳನ್ನು ಸ್ನೇಹಿತರು ಮತ್ತು ನಿಕಟ ಸಂಬಂಧಿಗಳೊಂದಿಗೆ ಆನಂದಿಸಿ. ಭಾವುಕತೆಯು ನಿಮ್ಮನ್ನು ಪರವಶಗೊಳಿಸಬಹುದು. ನೀವು ಇಂದು ಆಕರ್ಷಕ ಸ್ಥಳಗಳಿಗೆ ಪ್ರವಾಸ ತೆರಳಬಹುದು. ಇಂದು ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಾದಿರುತ್ತದೆ. ಈ ಅದೃಷ್ಟ ಸಮಯದಲ್ಲಿ, ನಿಮ್ಮ ಸಮಾಜದಲ್ಲಿನ ಗೌರವ ವೃದ್ಧಿಸಲಿದೆ ಮತ್ತು ಆರ್ಥಿಕವಾಗಿ ನೀವು ಏಳಿಗೆಯನ್ನು ಕಾಣುವಿರಿ.

ಸಿಂಹ :-

ಸಾಮಾನ್ಯ ದಿನವು ನಿಮಗಾಗಿ ಕಾದಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನೀವು ಪಟ್ಟ ಶ್ರಮವನ್ನು ಹೋಲಿಸಿದರೆ, ಫಲಿತಾಂಶವು ಕಡಿಮೆ ಮತ್ತು ವಿಳಂಬವಾಗಿರಬಹುದು. ಆದರೂ ಧೈರ್ಯಕಳೆದುಕೊಳ್ಳಬೇಡಿ. ಮುಂದುವರಿಸಿ. ಇಂದು ನೀವು ಮಾಡಬೇಕಾದ ಆಯ್ಕೆಗಳಿಂದಾಗಿ ನೀವು ಸ್ವಲ್ಪ ಗೊಂದಲದಲ್ಲಿ ಸಿಲುಕಬಹುದು. ಸದ್ಯಕ್ಕೆ ಅವುಗಳನ್ನು ಮನಸ್ಸಿನಿಂದ ತೊರೆದು ಹಾಕಿ ಮತ್ತು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಿರಿ ಮತ್ತು ಖುಷಿಯಾಗಿರಿ. ನಿರ್ಧಾರವು ಕಾಯಬಹುದು ಮತ್ತು ಯಾರಿಗೆ ಗೊತ್ತು ಈ ವೇಳೆ ನೀವು ಸರಿಯಾದ ನಿರ್ಧಾರವನ್ನೇ ಕಂಡುಕೊಳ್ಳಬಹುದು. ದೂರದ ಸಂಬಂಧಗಳು ಇನ್ನಷ್ಟು ಬಲಗೊಳ್ಳಲಿವೆ. ಇದು ನಂತರ ನಿಮಗೆ ಪ್ರಯೋಜನವನ್ನು ಉಂಟುಮಾಡಲಿವೆ. ಮಿತಿಮೀರಿದ ವೆಚ್ಚವನ್ನು ತಪ್ಪಿಸಿ.

ಕನ್ಯಾ :-

ಶಾಂತಿ ಹಾಗೂ ಗಂಭೀರವಾದ ದಿನವು ನಿಮಗಾಗಿ ಕಾದಿದೆ. ಇಂದು ನೀವು ಕುಟುಂಬ ಸದಸ್ಯರೊಂದಿಗೆ ನಯವಾದ ಮತ್ತು ಖುಷಿಯ ಕ್ಷಣಗಳನ್ನು ಕಳೆಯುವಿರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಮನಸ್ಸಿಗೆ ಹತ್ತಿರದ ಮಾತುಕತೆಯಲ್ಲಿ ತೊಡಗಿಕೊಳ್ಳುವಿರಿ ಹಾಗೂ ಸ್ವಾದಿಷ್ಟ ಭೋಜನ ಮತ್ತು ಮನರಂಜನೆಯನ್ನು ಹಂಚಿಕೊಳ್ಳುವಿರಿ. ಆರೋಗ್ಯ ಇದು ಉತ್ತಮ ಸ್ಥಿತಿಯಲ್ಲಿರಲಿದೆ. ಮತ್ತು ನೀವು ಅಪರೂಪದ ಪರಿಪೂರ್ಣ ಮಾನಸಿಕ ಸ್ಥಿತಿಯನ್ನು ಆನಂದಿಸುವಿರಿ. ಲಕ್ಷ್ಮೀದೇವಿಯು ನಿಮ್ಮ ಮೇಲೆ ಅನುಗ್ರಹ ಬೀರುತ್ತಾರೆ ಮತ್ತು ಪರಿಣಾಮವಾಗಿ ನಿಮ್ಮ ಆರ್ಥಿಕ ಸ್ಥಿತಿ ವೃದ್ಧಿಸಲಿದೆ. ಇಂದು ನೀವು ಪ್ರಯಾಣ ಕೈಗೊಂಡರೆ ಸಂತಸದಿಂದ ತುಂಬಿರುತ್ತದೆ. ಈ ಅದೃಷ್ಟದ ದಿನವನ್ನು ಆನಂದಿಸಿ ಮತ್ತು ಇತರರೊಂದಿಗೆ ಖುಷಿಯನ್ನು ಹಂಚಿಕೊಳ್ಳಿ.

ತುಲಾ :-

ನಿಮ್ಮ ಕೋಪದ ಮೇಲೆ ಹತೋಟಿಯಿಡುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಇಂದು ನಿಮಗೆ ಕೆಲವು ಕಾನೂನು ಸಂಬಂಧಿ ಕಾರ್ಯಗಳಿರಬಹುದು ಮತ್ತು ಅದಕ್ಕಾಗಿ ನೀವು ನ್ಯಾಯಾಲಯಕ್ಕೆ ತೆರಳಬೇಕಾಗಿ ಬರಬಹುದು. ಎಚ್ಚರಿಕೆಯಿಂದಿರಿ. ಆದರೂ, ಯಾರಾದರೂ ನಿಮಗೆ ಟೀಕೆ ಮಾಡಿದರೆ ಅದಕ್ಕೆ ಪ್ರತ್ಯುತ್ತರ ನೀಡದಂತೆ ನಿಮ್ಮ ಮನಸ್ಸನ್ನು ತಡೆಯಿರಿ. ನಿಮ್ಮನ್ನು ಕಾಡುವ ಸಂಘರ್ಷದ ದೃಶ್ಯಗಳಿಂದ ದೂರವಿರಿ. ಅಥವಾ ಪಶ್ಚಾತ್ತಾಪದ ರೂಪದಲ್ಲಿ ಅದಕ್ಕೆ ಬೆಲೆ ತೆತ್ತಲು ಸಿದ್ಧರಾಗಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಒತ್ತಡದಿಂದಾಗಿ ಮತ್ತು ನಿಂದನೆಯಿಂದಾಗಿ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಆಕಸ್ಮಿಕಗಳ ಬಗ್ಗೆ ಎಚ್ಚರದಿಂದಿರಿ. ಇಲ್ಲವಾದಲ್ಲಿ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇಂದು ನೀವು ಮಾಡಬೇಕಾಗಿರುವ ಕಣ್ಣಿನ ಪರೀಕ್ಷೆಯನ್ನು ತಪ್ಪಿಸಬೇಡಿ. ಆಧ್ಯಾತ್ಮ ಮತ್ತು ಪ್ರಾರ್ಥನೆಯಲ್ಲಿ ನೆಮ್ಮದಿಯನ್ನು ಕಾಣಿ.

ವೃಶ್ಚಿಕ :-

ಉತ್ತಮ ಅದೃಷ್ಟ, ಪ್ರಾಪಂಚಿಕ ನೆಮ್ಮದಿ,ಸಾಕಷ್ಟು ಸಂತೋಷ ನಿಮಗಾಗಿ ಕಾದಿದೆ. ಈ ದಿನಪೂರ್ತಿ ನಿಮಗೆ ಪರಮಸುಖ ಮತ್ತು ರೋಮಾಂಚನವನ್ನು ಗಣೇಶ ನಿಮಗಾಗಿ ತರುತ್ತಾರೆ. ಎಲ್ಲಾ ಉತ್ತಮ ಅದೃಷ್ಟ ಹಾಗೂ ಉತ್ತಮ ಸಮಯವನ್ನು ಆನಂದಿಸಿ. ನೀವು ಹೆಚ್ಚಿನ ಮಂದಿ ಮಧುಚಂದ್ರಕ್ಕೆ ತೆರಳಬಹುದು. ಏಕಾಂಗಿಗಳಿಗೆ ವಿವಾಹವಾಗಿ ನಿಮ್ಮ ಕನಸಿನ ಸಂಗಾತಿಯೊಂದಿಗೆ ಜೀವನದಲ್ಲಿ ನೆಲೆಯನ್ನು ಕಾಣಲು ಇದು ಸೂಕ್ತ ಸಮಯ. ಆಕರ್ಷಕವಾಗಿರುವ ಯಾರಾದರೊಬ್ಬರನ್ನು ನೀವು ಭೇಟಿ ಮಾಡಬಹುದು. ಕಾರ್ಯ ಮತ್ತು ವ್ಯವಹಾರಗಳಿಗೆ ಉತ್ತಮ ಸಮಯ. ನಿಮ್ಮ ಮೇಲಾಧಿಕಾರಿಗಳು ಹೆಚ್ಚಿನ ಬೆಂಬಲವನ್ನು ನೀಡಲಿದ್ದಾರೆ ಮತ್ತು ಪ್ರಶಂಸಿಸಲಿದ್ದಾರೆ. ನಿಮ್ಮ ಸ್ನೇಹಿತೆ ಅಥವಾ ಪ್ರಿಯತಮೆಯೊಂದಿಗೆ ಪ್ರಣಯ ಪ್ರವಾಸಕ್ಕೆ ತೆರಳಬಹುದು. ಇದು ಆನಂದದಾಯಕವಾಗಿರುತ್ತದೆ.

ಧನು :-

ಧನು ರಾಶಿಯವರಿಗೆ ಈ ದಿನ ಸಂತೋಷಕರ ಚಟುವಟಿಕೆಗಳು ಮತ್ತು ಆಸಕ್ತಿಗಳಿಂದ ಕೂಡಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ವಿವಾಹಿತರು ತೀವ್ರ ಸಂತೋಷ ಹಾಗೂ ಉತ್ಸಾಹವನ್ನು ಹೊಂದುತ್ತಾರೆ. ಗ್ರಹಗತಿಗಳ ಅದ್ಭುತ ಹೊಂದಾಣಿಕೆಯಿಂದಾಗಿ ಮನೆಯ ವಾತಾವರಣವು ಅನುಕೂಲಕರ, ಶುಭಪ್ರದ ಹಾಗೂ ಖುಷಿಯಿಂದ ಕೂಡಿರುತ್ತದೆ. ನೀವು ಎಲ್ಲಾ ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುತ್ತೀರಿ. ಮತ್ತು ಇದು ನಿಮ್ಮ ಕೆಲಸ ಮತ್ತು ಹಣಕಾಸಿನಲ್ಲೂ ಕಂಡುಬರುತ್ತದೆ. ಮೇಲಾಧಿಕಾರಿಗಳು ಪ್ರೋತ್ಸಾಹಿಸುತ್ತಾರೆ ಮತ್ತು ನಿಮ್ಮ ಪ್ರಯತ್ನಗಳಿಗೆ ಪ್ರಶಂಸೆ ನೀಡುತ್ತಾರೆ ಮತ್ತು ಪರಿಣಾಮವಾಗಿ ನೀವು ಖುಷಿಯಿಂದಿರುತ್ತೀರಿ. ನಿಮ್ಮ ಕಾರ್ಯದ ಹೊಣೆಯು ಇದರಿಂದಾಗಿ ಹೆಚ್ಚಳಗೊಳ್ಳಲಿದೆ. ಕಾರ್ಯ ಸಂಬಂಧ ಪ್ರಯಾಣ ಬೆಳೆಸಲಿದ್ದೀರಿ. ನಿಮ್ಮ ತಂದೆಯಿಂದ ಮತ್ತು ಸಹೋದರರಿಂದ ಲಾಭ ಸಿಗಲಿದೆ. ಆರ್ಥಿಕವಾಗಿ ಇಂದು ಅದ್ಭುತ ದಿನ.

ಮಕರ :-

ಈ ದಿನವು ಮಿಶ್ರ ಪ್ರಭಾವವನ್ನು ಹೊಂದಿರುತ್ತದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಇದು ದಿನವು ಎರಡು ಭಾಗಗಳನ್ನಾಗಿ ಮಾಡಿದಂತಿರುತ್ತದೆ. ಪ್ರಾರಂಭದ ಭಾಗವು ಅನುಕೂಲಕರವಾಗಿರುತ್ತದೆ ಮತ್ತು ಎರಡನೆಯ ಭಾಗವು ಕಡಿಮೆ ತೊಂದರೆ ವಿಷಯಗಳನ್ನು ಹೊಂದಿದೆ. ಬೌದ್ಧಿಕ ಮತ್ತು ವ್ಯಾಪಾರ ಹಾಗೂ ವ್ಯವಹಾರಗಳಿಗೆ ಉತ್ತಮ ಸಮಯ. ಮಾತುಕತೆಗಳಲ್ಲಿ ನೀವು ಅತ್ಯುತ್ತಮರಾಗಿರುತ್ತೀರಿ ಮತ್ತು ನಿಮ್ಮ ಆಲೋಚನೆಗಳ ಸಾಂದ್ರತೆ ಮತ್ತು ಅಂತರ್ದೃಷ್ಟಿಯ ಬಗ್ಗೆ ಜನ ಪ್ರಭಾವಕ್ಕೆ ಒಳಗಾಗುತ್ತಾರೆ. ಕ್ರಿಯಾತ್ಮಕ ಚಟುವಟಿಕೆಗಳು ಅನುಕೂಲಕರವಾಗಿರುತ್ತದೆ ಮತ್ತು ಅವುಗಳಲ್ಲಿ ಉಜ್ವಲ ನಿರ್ವಹಣೆಯನ್ನು ತೋರುತ್ತೀರಿ. ಆದರೂ, ನಿಮ್ಮಲ್ಲಿ ಏಕಾಗ್ರತೆಯ ಕೊರತೆ ಕಂಡುಬರಬಹುದು ಮತ್ತು ನಿಮ್ಮ ಮನಸ್ಸು ಅಸ್ಥಿರತೆಯಿಂದ ಕೂಡಿರಬಹುದು. ಪ್ರಯೋಜನವಿಲ್ಲದ ಆಸಕ್ತಿಗಳಲ್ಲಿ ಮತ್ತು ಮಕ್ಕಳ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸಿ. ಸಾರ್ವಜನಿಕ ಕ್ಷೇತ್ರದಲ್ಲಿನ ಕಾರ್ಯವು ನಿಮ್ಮನ್ನು ಚಿಂತೆಗೀಡುಮಾಡಬಹುದು ಮತ್ತು ಅನಗತ್ಯ ಚರ್ಚೆಗಳಿಂದ ನೀವು ತೊಡಕಿಗೆ ಒಳಗಾಗಬಹುದು. ಸಂತಸಭರಿತ ಪ್ರವಾಸನು ಉತ್ತಮ ಆಲೋಚನೆ.

ಕುಂಭ :-

ಯಾವುದೇ ಕೆಟ್ಟ ಅಥವಾ ಅನೈತಿಕ ಯೋಜನೆ ಅಥವಾ ಆಲೋಚನೆಗಳಿಂದ ದೂರವಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ನಿಮ್ಮ ಮಾತು ಮತ್ತು ಸಿಡುಕಿನ ಮೇಲೆ ನಿಯಂತ್ರಣವಿರಿ ಮತ್ತು ಸಾಧ್ಯವಿದ್ದಷ್ಟು ಕುಟುಂಬ ಸದಸ್ಯರೊಂದಿಗಿನ ಸಂಘರ್ಷವನ್ನು ತಪ್ಪಿಸಿ. ಇಂದು ನೀವು ಅತೀ ಭಾವುಕರಾಗಿರಬಹುದು. ಋಣಾತ್ಮಕ, ತಿರಸ್ಕಾರ ಮತ್ತು ನಿರಾಶಾಭಾವವನ್ನು ಹೊಂದಬಹುದು. ನಿಮ್ಮ ಆಲೋಚನೆಗಳನ್ನು ಹಿಂಬಾಲಿಸಿ. ಉದ್ದೇಶಿಸಿದಕ್ಕಿಂತ ಹೆಚ್ಚೇ ಖರ್ಚುಮಾಡುವ ಕಾರಣ ನೀವು ಹಣಕಾಸು ಬಿಕ್ಕಟ್ಟು ಎದುರಿಸಬೇಕಾಗಬಹುದು. ದುಂದುವೆಚ್ಚವನ್ನು ತಪ್ಪಿಸಿ ಮತ್ತು ನಿಮ್ಮ ತಪ್ಪುಗಳಿಗಾಗಿ ಬೇರೆಯವರನ್ನು ದೂಷಿಸಬೇಡಿ. ಭಾವನಾತ್ಮಕ ಪ್ರಕ್ಷುಬ್ಧತೆಯಿಂದ ಆರೋಗ್ಯವು ತೊಂದರೆಗೊಳಗಾಗಬಹುದು. ಎಚ್ಚರಿಕೆಯಿಂದಿರಿ ಮತ್ತು ವಿವೇಚನೆಯಿಂದ ವರ್ತಿಸಿ.

ಮೀನ :-

ನಿಮ್ಮ ದೈನಂದಿನ ಕಾರ್ಯಗಳಿಂದ ದೂರವಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಸೋಮವಾರವಾಗಿದ್ದರೂ, ನೀವು ಕೆಲಸಕ್ಕೆ ಹಾಜರಾಗಲೇಬೇಕಾದ್ದರೂ ಪರವಾಗಿಲ್ಲ. ಇಲ್ಲವಾದಲ್ಲಿ, ನೀವು ಕೆಲವು ಹೊತ್ತು ಮನರಂಜನೆಗಾಗಿ ಹೊರಗೆ ತೆರಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಗ್ರಹಗತಿಗಳು ಎಲ್ಲಾ ಖುಷಿ, ಸಂತೋಷಕರ ಆಸಕ್ತಿಗಳಲ್ಲಿ ಅನುಕೂಲಕರವಾಗಿವೆ,ಇದರಿಂದಾಗಿ ಹೊರಗೆ ಹೋಗಿ ವಿನೋದ, ಸಡಗರ, ಸಂಭ್ರಮದಲ್ಲಿ ಆನಂದಿಸುವಂತೆ ಮತ್ತು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸ್ವಾದಿಷ್ಟ ಭೋಜನಕ್ಕೆ ಪ್ರಚೋದನೆ ನೀಡುತ್ತದೆ. ಈ ಸಂತೋಷದಲ್ಲಿ ಭಾಗಿಯಾಗುವಂತೆ ನಿಮ್ಮ ಪ್ರೀತಿಪಾತ್ರರಿಗೆ ಅಥವಾ ನಿಮ್ಮ ಪ್ರೇಮಿಗೆ ಒತ್ತಾಯಿಸಿ ಮತ್ತು ಪರಿಶುದ್ಧ ಹಾಗೂ ಧಾರಾಕಾರ ಸಂತೋಷದ ಭರವಸೆ ನೀಡಿ. ಪರಿಣಾಮವಾಗಿ ನೀವು ಮಾನಸಿಕವಾಗಿ ವಿಶ್ರಾಂತರಾಗುತ್ತೀರಿ ಮತ್ತು ದೈಹಿಕವಾಗಿ ಆರೋಗ್ಯದಿಂದಿರುತ್ತೀರಿ. ಇವೆಲ್ಲವೂ ಹಿತಕರವಾಗಿರುತ್ತದೆ. ನಿಮ್ಮ ಗೌರವ ಮತ್ತು ಕೀರ್ತಿಯ ವಿಷಯದಲ್ಲೂ.

WhatsApp Group Join Now

Spread the love

Leave a Reply