ಮೇಷ :-
ನಿಮ್ಮ ದುರಾಕ್ರಮಣ ಪ್ರವೃತ್ತಿಯ ಬಗ್ಗೆ ನಿಯಂತ್ರಣವಿರಿಸುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನೀವು ಆಯಾಸಗೊಂಡಿರುವಂತೆ ಅನಿಸಬಹುದು. ಕಠಿಣ ಶ್ರಮದ ಹೊರತಾಗಿಯೂ ನೀವು ನಿಮ್ಮ ಕಾರ್ಯಗಳಲ್ಲಿ ಸಂಪೂರ್ಣ ಯಶಸ್ಸನ್ನು ಸಾಧಿಸುವುದಿಲ್ಲ.
ಮಕ್ಕಳಿಗೆ ಸಂಬಂಧಿಸಿದ ಚಿಂತೆಗಳು ನಿಮ್ಮನ್ನು ಕಾಡಲಿವೆ. ನೀವು ದಿನಪೂರ್ತಿ ನಿಮ್ಮ ಕಾರ್ಯದಲ್ಲೇ ಮುಳುಗಿಹೋಗುವುದರಿಂದ, ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಾಕಷ್ಟು ಸಮಯವನ್ನು ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಋಣಾತ್ಮಕ ಆಲೋಚನೆ ಮತ್ತು ವರ್ತನೆಯನ್ನು ತಪ್ಪಿಸಿ. ಇಂದು ನಿಮಗೆ ಹೊಟ್ಟೆನೋವಿನ ಅನುಭವವಾಗಬಹುದು. ಸಾಧ್ಯವಿದ್ದರೆ ಪ್ರಯಾಣವನ್ನು ತಪ್ಪಿಸಿ. ಎಲ್ಲಾ ಸರಕಾರಿ ಸಂಬಂಧಿ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ಸನ್ನು ಸಾಧಿಸುವಿರಿ.
ವೃಷಭ :-
ಆತ್ಮವಿಶ್ವಾಸ ಮತ್ತು ದೃಢತೆಯನ್ನು ಗಣೇಶನು ನಿಮಗೆ ಇಂದು ದಯಪಾಲಿಸುತ್ತಾರೆ. ಮತ್ತು ಇದು ಅಪೇಕ್ಷಿತ ಫಲಿತಾಂಶವನ್ನು ನೀಡುತ್ತದೆ. ನೀವು ನಿಮ್ಮ ಹೆತ್ತವರಿಂದ ಶುಭಸುದ್ದಿಯನ್ನು ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಆಸಕ್ತಿ ತೋರಬಹುದು. ಸರಕಾರಿ ಪ್ರಯೋಜನಗಳು ಉಂಟಾಗುವ ಸಾಧ್ಯತೆಯಿದೆ. ಹಣಕಾಸು ವಿಚಾರಗಳನ್ನು ದಕ್ಷವಾಗಿ ನಿಭಾಯಿಸುತ್ತೀರಿ. ಮಕ್ಕಳ ಕುರಿತಂತೆ ಖರ್ಚು ಉಂಟಾಗುವ ಸಾಧ್ಯತೆಯಿದೆ. ಕಲಾವಿದರಿಗೆ ಮತ್ತು ಕ್ರೀಡಾಳುಗಳಿಗೆ ಅವರ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ದಿನ.
ಮಿಥುನ :-
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಸರಕಾರಿ ಲಾಭ ಉಂಟಾಗುವ ಸಾಧ್ಯತೆಯಿದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಾಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತೀರಿ. ಇಂದು ನೀವು ಸಣ್ಣ ಪ್ರವಾಸ ಕೈಗೊಳ್ಳಬಹುದು. ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಅಥವಾ ನೆರೆಹೊರೆಯವರೊಂದಿಗೆ ಹೊಂದಿದ ಅಕ್ರಮ ಅಥವಾ ಜಗಳಗಳು ಧನಾತ್ಮಕ ಪರಿಣಾಮವಾಗಿ ಮೂಡಿಬರಲಿದೆ. ನಿಮ್ಮ ಆಲೋಚನಾ ಶ್ರೇಣಿಯಲ್ಲಿ ಕೆಲವು ಬದಲಾವಣೆಗಳಾಗಬಹುದು. ನಿಮ್ಮ ಸ್ಪರ್ಧಿಗಳು ಸೋಲೊಪ್ಪಿಕೊಳ್ಳುತ್ತಾರೆ. ಒಟ್ಟಾರೆಯಾಗಿ, ಈ ದಿನ ನಿಮಗೆ ಉತ್ತಮವಾಗಿದ್ದರೂ, ಹಣಕಾಸು ನಿಮಗೆ ಅಗತ್ಯವಿರುವ ಕಾರಣ ಅದಕ ಬಗ್ಗೆ ಹೆಚ್ಚು ಗಮನಹರಿಸಿ.
ಕರ್ಕಾಟಕ :-
ಇಂದು ನಿರಾಶಾವದದಿಂದಿರುವುದನ್ನು ತಪ್ಪಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ದೈಹಿಕವಾಗಿ ಅನಾರೋಗ್ಯದಿಂದಿರುತ್ತೀರಿ ಮತ್ತು ಮಾನಸಿಕವಾಗಿ ಅಸ್ಥಿರತೆಯಿಂದ ಕೂಡಿರುತ್ತೀರಿ. ಇಂದು ನೀವು ಅತೃಪ್ತಿ ಹಾಗೂ ಬೇಸರದಿಂದ ಕೂಡಿರುವ ಸಾಧ್ಯತೆಯಿದೆ. ಕಣ್ಣು ಸಂಬಂಧಿತ ತೊಂದರೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕುಟುಂಬದ ವಾತಾವರಣವು ದಿನಪೂರ್ತಿ ಚಂಚಲವಾಗಿರುತ್ತದೆ. ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹೊಂದಲು ಪ್ರಚೋದನೆ ನೀಡುವಂತಹ ಸನ್ನಿವೇಶಗಳನ್ನು ತಪ್ಪಿಸಲು ಪ್ರಯತ್ನಿಸಿ. ಕಠಿಣ ಪರಿಶ್ರಮದ ಹೊರತಾಗಿ ವಿದ್ಯಾರ್ಥಿಗಳು ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ. ಅನೈತಿಕ ಚಟುವಟಿಕೆಗಳಿಂದ ದೂರವಿರುವ ಅಗತ್ಯವಿದೆ. ಖರ್ಚುವೆಚ್ಚಗಳು ಹೆಚ್ಚಾಗುವ ಸಂಭವವಿದೆ.
ಸಿಂಹ :-
ಇಂದು ನೀವು ಆತ್ಮಿವಿಶ್ವಾಸದಿಂದ ತುಂಬಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ಕಾರ್ಯವನ್ನು ಕೈಗೊಳ್ಳಬೇಕೇ ಅಥವಾ ನಿರ್ದಿಷ್ಟ ಕಾರ್ಯಗಳನ್ನು ತಪ್ಪಿಸಬೇಕೆ ಎಂಬುದರ ಬಗ್ಗೆ ನೀವು ತ್ವರಿತ ನಿರ್ಧಾರವನ್ನು ಕೈಗೊಳ್ಳುವಿರಿ. ನಿಮ್ಮ ತಂದೆ ಮತ್ತು ಹಿರಿಯರಿಂದ ಲಾಭ ಉಂಟಾಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ನಿಮಗೆ ಖ್ಯಾತಿ ಮತ್ತು ಜನಪ್ರಿಯತೆ ಸಿಗಲಿದೆ. ದುರಾಕ್ರಮಣಕಾರಿ ಮನೋಭಾವವನ್ನು ತೊಡೆದುಹಾಕುವಂತೆ ಗಣೇಶ ನಿಮಗೆ ಸಲಹೆ ನೀಡುತ್ತಾರೆ. ನಿಮ್ಮ ಮಾತಿನ ಬಗ್ಗೆ ನಿಯಂತ್ರಣವಿರಿಸಿ. ನೀವು ಒಮ್ಮೆಲೇ ಸಿಟ್ಟುಗೊಳ್ಳಬಹುದು. ಎಚ್ಚರದಿಂದಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ.
ಕನ್ಯಾ :-
ಅಹಂ ಸಂಘರ್ಷಗಳು ಉಂಟಾಗುವ ಸಾಧ್ಯತೆಯಿದೆ ಎಚ್ಚರಿಕೆಯಿಂದಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ದಿನವಿಡೀ ನೀವು ದೈಹಿಕವಾಗಿ ಅನಾರೋಗ್ಯದಿಂದ ಹಾಗೂ ಮಾನಸಿಕವಾಗಿ ಅಸ್ಥಿರತೆಯಿಂದ ಕೂಡಿರಬಹುದು. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ನಡುವೆ ಕೆಲವು ಆದರ್ಶವಾದಕ್ಕೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ಉಂಟಾಗಬಹುದು ಮತ್ತು ಇದು ಬೇಸರವನ್ನುಂಟುಮಾಡಬಹುದು. ಕೋಪ ಮತ್ತು ದುರಾಕ್ರಮಣ ನಿಮ್ಮ ವಿನೋದಕೂಟವನ್ನು ಹಾಳುಮಾಡಬಹುದು. ಎಚ್ಚರಿಕೆಯಿಂದಿರಿ. ಧಾರ್ಮಿಕ ಚಟುವಟಿಕೆಗಳಿಗೆ ವೆಚ್ಚ ಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ. ಆಕಸ್ಮಿಕ ವೆಚ್ಚಗಳು ಉಂಟಾಗುತ್ತವೆ. ಸಾಧ್ಯವಿದ್ದರೆ, ಜನರೊಂದಿಗಿನ ವಾಗ್ವಾದವನ್ನು ತಪ್ಪಿಸಿ.
ತುಲಾ :-
ಈ ದಿನ ನಿಮ್ಮ ಅದೃಷ್ಟದ ದಿನ ಎಂಬುದಾಗಿ ಗಣೇಶ ಭಾವಿಸುತ್ತಾರೆ. ವಿವಿಧ ಕಡೆಗಳಿಂದ ಬರವು ಪ್ರಯೋಜನಗಳು ನಿಮ್ಮನ್ನು ಸಂತೋಷದಲ್ಲಿರಿಸುತ್ತದೆ. ಆದಾಯ ಹೆಚ್ಚಾಗುತ್ತದೆ. ಸ್ನೇಹಿತರು ಲಾಭದ ಮೂಲವಾಗಿರುತ್ತಾರೆ ಮತ್ತು ಅವರ ಹಿಂದೆಯೇ ನೀವು ಹಣವನ್ನು ವ್ಯಯಿಸುತ್ತೀರಿ. ಪ್ರವಾಸಗಳಿಗೆ ತೆರಳಬಹುದು. ಮಹಿಳೆಯರೊಂದಿಗಿ ಮಾತುಕತೆಗಳು ಖುಷಿಯನ್ನು ತರುತ್ತದೆ. ವಿವಾಹದ ಯೋಜನೆಯಲ್ಲಿರುವವರಿಗೆ ಹೊಸ ಸಂಬಂಧಗಳು ಕೂಡಿ ಬರಲಿವೆ. ಈ ದಿನ ನಿಮಗೆ ಸ್ವಾದಿಷ್ಟ ಭೋಜನ ಸಿಗಲಿದೆ.
ವೃಶ್ಚಿಕ :-
ಇಂದು ಪ್ರಯೋಜನವನ್ನು ನಿರೀಕ್ಷಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕಚೇರಿಯ ವಾತಾವರಣವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಕೆಯಾಗಲಿದೆ. ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಸಂತೋಷ ಹೊಂದುತ್ತಾರೆ. ಇಂದು, ನೀವು ನಿಮ್ಮ ಕೆಲಸವನ್ನು ಸುಲಭದಲ್ಲಿ ಪೂರ್ಣಗೊಳಿಸುವಿರಿ. ಗೌರವ ಸಂಪಾದಿಸುವಿರಿ. ಬಡ್ತಿ ಸಿಗುವ ಸಂಭವವಿದೆ. ನಿಮ್ಮ ಮನೆಯ ವಾತಾವರಣವು ಸಂತಸದಿಂದ ತುಂಬಿರುತ್ತದೆ.ಕಚೇರಿ ನಿಮಿತ್ತ ಪ್ರವಾಸ ತೆರಳಲಿದ್ದೀರಿ. ನಿಮ್ಮ ಮಕ್ಕಳ ಅಭಿವೃದ್ಧಿಯು ನಿಮಗೆ ತೃಪ್ತಿ ನೀಡಲಿದೆ.
ಧನು :-
ಇಂದು ನೀವು ನೂರು ಪ್ರತಿಶತ ಆರೋಗ್ಯದಿಂದ ಕೂಡಿರುವ ಸಾಧ್ಯತೆಯಿಲ್ಲ. ದೈಹಿಕ ಆಯಾಸ ಮತ್ತು ಆಲಸ್ಯವು ನಿಮ್ಮನ್ನು ಕಾಡಬಹುದು. ಇಂದು ನೀವು ಮಾನಸಿಕ ಅಸ್ಥಿರತೆ ಹಾಗೂ ಆತಂಕವನ್ನು ಹೊಂದಬಹುದು. ನಿರಾಶಾವಾದಿಯಾಗಿರುವುದನ್ನು ತಪ್ಪಿಸಿ. ನಿಮ್ಮ ಕಾರ್ಯದಲ್ಲಿ ಯೋಜನೆ ರೂಪಿಸುವಾಗ ನೀವು ಅತ್ಯಂತ ಎಚ್ಚರಿಕೆಯಿಂದಿರುವ ಅಗತ್ಯವಿದೆ. ನಿಮ್ಮ ಮತ್ತು ನಿಮ್ಮ ಮೇಲಾಧಿಕಾರಿಗಳ ನಡುವೆ ಸಂಘರ್ಷ ಏರ್ಪಡುವ ಸಾಧ್ಯತೆಯಿದೆ. ಸಾಧ್ಯವಿದ್ದರೆ, ನಿಮ್ಮ ಸ್ಪರ್ಧಿಗಳು ಹಾಗೂ ವಿರೋಧಿಗಳೊಂದಿಗಿನ ವಾಗ್ವಾದವನ್ನು ತಪ್ಪಿಸಿ.
ಮಕರ :-
ಆರೋಗ್ಯ ಸಂಬಂಧ ಆಕಸ್ಮಿಕ ಖರ್ಚು ಉಂಟಾಗುವ ಸಾದ್ಯತೆಯಿದೆ. ಸಾಮಾಜಿಕ ಮತ್ತು ದೈನಂದಿನ ಕಾರ್ಯಗಳು ಸಂಭವಿಸಲಿವೆ. ನೀವು ಏನು ತಿನ್ನುತ್ತೀರಿ ಅದರ ಬಗ್ಗೆ ಎಚ್ಚರದಿಂದಿರಿ. ದುರಾಕ್ರಮಣಕಾರಿ ಮನೋಭಾವದಿಂದ ದೂರವಿರಿ. ಆಶಾವಾದ ಹೊಂದುವ ಮೂಲಕ ಋಣಾತ್ಮಕ ಚಿಂತನೆಗಳನ್ನು ತೊಡೆದುಹಾಕಿ.ನಿಮ್ಮ ಕಚೇರಿಯ ವಾತಾವರಣವು ಅನುಕೂಲಕರವಾಗಿರುತ್ತದೆ. ನಿಮ್ಮ ಮತ್ತು ನಿಮ್ಮ ಉದ್ಯಮ ಪಾಲುದಾರರ ನಡುವಿನ ಭಿನ್ನಾಭಿಪ್ರಾಯಗಳು ಮತ್ತೆ ಕಾಣಿಸಿಕೊಳ್ಳಬಹುದು. ಜಾಗರೂಕರಾಗಿರಿ. ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ನಿಮ್ಮ ಕೌಶಲ್ಯವನ್ನು ನೀವು ಸಮರ್ಪಕವಾಗಿ ಬಳಸುತ್ತೀರಿ
ಕುಂಭ :-
ಇಂದು ನೀವು ನಿಮ್ಮ ಎಲ್ಲಾ ಕಾರ್ಯಗಳನ್ನು ಆತ್ಮವಿಶ್ವಾಸ ಮತ್ತು ದೃಢತೆಯಿಂದ ಕೈಗೊಳ್ಳುತ್ತೀರಿ. ಪ್ರಯಾಣದ ಸಂಭವವಿದೆ. ಸಮಾರಂಭಗಳು ನಿಮ್ಮ ಬಾಯಿರುಚಿಗೆ ಹಿಗ್ಗನ್ನು ತರಲಿದೆ ಮತ್ತು ನೀವು ನಿಮಗಿಷ್ಟವಾದ ಉಡುಪನ್ನು ಧರಿಸುವಿರಿ. ನಿಮ್ಮ ಪಾಲುದಾರರಿಂದ ನಿಮಗೆ ಸಂಭಾವ್ಯ ಲಾಭ ಉಂಟಾಗಲಿದೆ. ಇಂದು ನೀವು ವಾಹನ ಖರೀದಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ.
ಮೀನ :-
ಈ ದಿನವು ಇಂದು ಉತ್ಪಾದಕತೆಯಿಂದ ಕೂಡಿರುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನಿಮ್ಮ ಆತ್ಮವಿಶ್ವಾಸ ಮತ್ತು ದೃಢತೆಯು ಉಚ್ಛಾಯ ಸ್ಥಿತಿಯಲ್ಲಿರುತ್ತದೆ. ನಿಮ್ಮ ದೈಹಿಕ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡುವುದಿಲ್ಲ. ಕುಟುಂಬ ವಾತಾವರಣವು ಸೌಹಾರ್ದಯುತವಾಗಿರುತ್ತದೆ. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳಬಹುದು. ದುರಾಕ್ರಮಣಕಾರಿ ಮತ್ತು ಕಟುವಾಗಿರುವುದನ್ನು ತಪ್ಪಿಸಿ. ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ಸಹಕಾರಿ ಮನೋಭಾವವನ್ನು ಹೊಂದಿರುತ್ತಾರೆ. ನಿಮ್ಮ ಹೆತ್ತವರಿಂದ ಸುದ್ದಿಯನ್ನು ನಿರೀಕ್ಷಿಸಿ.
Horoscope Today : 08 ಜನವರಿ 2026ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now