ಮೇಷ :-
ಇಂದು ನೀವು ಸಮಾಧಾನಕರ ವರ್ತನೆಯನ್ನು ಅನುಸರಿಸಿದರೆ, ಇದು ಇತರರೊಂದಿಗಿನ ಸಂಘರ್ಷವನ್ನು ತಪ್ಪಿಸುತ್ತದೆ ಮತ್ತು ಇದರಿಂದ ನಿಮಗೆ ಮತ್ತು ಇತರರಿಗೆ ಪ್ರಯೋಜನ ಉಂಟಾಗಲಿದೆ ಎಂಬುದಾಗಿ ಗಣೇಶ ನಂಬುತ್ತಾರೆ. ಬರಹಗಾರರಿಗೆ ಮತ್ತು ಕಲಾವಿದರಿಗೆ ಈ ದಿನವು ಫಲಪ್ರದವಾಗಿರಲಿದೆ.
ಸಹೋದರರ ನಡುವೆ ಸಂಭ್ರಮದ ವಾತಾವರಣವಿರುತ್ತದೆ. ಮಧ್ಯಾಹ್ನದ ಬಳಿಕ ನೀವು ಮಾನಸಿಕ ಅಸ್ಥಿರತೆ ಮತ್ತು ಉತ್ಸಾಹದ ಕೊರತೆಯನ್ನು ಎದುರಿಸಬಹುದು. ಸ್ನೇಹಿತರೊಂದಿಗೆ ಸಣ್ಣ ಪ್ರವಾಸವನ್ನು ಕೈಗೊಳ್ಳಲು ಸಾಧ್ಯವಾಗಬಹುದು. ಇಂದು ನಿಮ್ಮ ಹಣಕಾಸನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಶಕ್ತರಾಗುವಿರಿ ಮತ್ತು ನಿಮ್ಮ ಮನೆಮಂದಿಯೊಂದಿಗೆ ಖುಷಿಯಿಂದ ಕಾಲಕಳೆಯುವಿರಿ.
ವೃಷಭ :-
ಎಲ್ಲಾ ಮುಖ್ಯವಾದ ಕೆಲಸಗಳಲ್ಲಿ ಭಾಗವಹಿಸಿ ಮತ್ತು ಪೂರ್ಣಗೊಳಿಸಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಇಂದು ನಿಮಗೆ ಹಣಕಾಸು ಪ್ರಯೋಜನಗಳು ಉಂಟಾಗುವ ಸಾಧ್ಯತೆಯಿದೆ. ಇಂದು ಮಾನಸಿಕವಾಗಿ ಮತ್ತು ದೈಹಿಕವಾಹಿ ನೀವು ಕ್ರಿಯಾಶೀಲರಾಗಿರುವಿರಿ ಮತ್ತು ನಿಮ್ಮ ಮನೆಮಂದಿಯೊಂದಿಗೆ ಖುಷಿಯಿಂದ ಕಾಲಕಳೆಯುವಿರಿ. ಮಧ್ಯಾಹ್ನದ ಬಳಿಕ ಸಾಮಾಜಿಕ ಕಾರಣಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳಲು ನಿಮಗೆ ಕಷ್ಟಕರವಾಗಬಹುದು ಮತ್ತು ಇದರಿಂದಾಗಿ ನೀವು ಸುವರ್ಣ ಅವಕಾಶವೊಂದನ್ನು ಕಳೆದುಕೊಳ್ಳಬೇಕಾಗಿ ಬರಬಹುದು. ನಿಮ್ಮ ಒರಟು ವರ್ತನೆಯಿಂದಾಗಿ ನೀವು ಇತರರ ಮುನಿಸಿಗೆ ಒಳಗಾಗಬಹುದು. ಸಾಧ್ಯವಿದ್ದರೆ ಎಲ್ಲಾ ಮುಖ್ಯ ಕೆಲಸಗಳನ್ನು ಮಧ್ಯಾಹ್ನದೊಳಗೇ ಮುಗಿಸಿಬಿಡಿ.
ಮಿಥುನ :-
ಜಾಗರೂಕತೆಯಿಂದ ಹೆಜ್ಜೆಯಿಡುವಂತೆ ಗಣೇಶ ನಿಮಗೆ ಎಚ್ಚರಿಕೆ ನೀಡುತ್ತಾರೆ. ಮನೆಯಲ್ಲಿ ಪ್ರತಿಕೂಲ ವಾತಾವರಣವು ತಲೆದೋರಬಹುದು. ನೀವು ಮಾನಸಿಕ ಮತ್ತು ದೈಹಿಕ ಅಸ್ಥಿರತೆಯನ್ನು ಹೊಂದಬಹುದು, ಏನೇ ಆದರೂ, ಮಧ್ಯಾಹ್ನದ ಬಳಿಕ ಪರಿಸ್ಥಿತಿಯು ಬದಲಾಗುತ್ತದೆ ಮತ್ತು ನೀವು ಸಾಕಷ್ಟು ಉಲ್ಲಾಸಿತರಾಗುವಿರಿ. ಮನೆಯಲ್ಲಿನ ವಾತಾವರಣವು ತಿಳಿಯಾಗುತ್ತದೆ ಮತ್ತು ನಿಮ್ಮ ಉತ್ಸಾಹವು ಇನ್ನಷ್ಟು ವರ್ಧಿಸುತ್ತದೆ. ಮನರಂಜನೆಯಲ್ಲಿ ಕಾಲಕಳೆಯುವ ಮೂಲಕ ನೀವು ಈ ದಿನವನ್ನು ಕೊನೆಗೊಳಿಸಬಹುದು.
ಕರ್ಕಾಟಕ :-
ಇಂದು ನೀವು ವ್ಯವಹಾರದಿಂದ ಲಾಭವನ್ನು ಪಡೆಯುವಿರಿ. ಇಂದು ನೀವು ಪ್ರವಾಸ ಅಥವಾ ಸುಂದರ ತಾಣಗಳಿಗೆ ತೆರಳುವ ಕುರಿತು ಯೋಜನೆ ರೂಪಿಸುವ ಸಾಧ್ಯತೆಗಳಿವೆ. ಮಧ್ಯಾಹ್ನದ ಬಳಿಕ ಮಾನಸಿಕ ತೊಂದರೆ ಮತ್ತು ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಕಣ್ಣುಗಳಿಗೆ ತೊಂದರೆ ಉಂಟಾಗಬಹುದು. ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಾಕಷ್ಟು ಹಣ ವೆಚ್ಚಮಾಡಬಹುದು. ಅಪಘಾತ ಮತ್ತು ಅವಘಡಗಳ ಬಗ್ಗೆ ಎಚ್ಚರವಾಗಿರಿ.
ಸಿಂಹ :-
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಶುಭಕರ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಅಪೂರ್ಣಗೊಂಡಿರುವ ಎಲ್ಲಾ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತವೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳಿಂದ ಉಡುಗೊರೆಗಳನ್ನು ಪಡೆಯಬಹುದು. ಫಲಪ್ರದ ಫಲಿತಾಂಶವನ್ನು ನೀಡುವಂತಹ ಹೊಸ ವ್ಯವಹಾರ ಒಪ್ಪಂದಗಳು ಉಂಟಾಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ನೀವು ಸಣ್ಣ ಮತ್ತು ಸಂತಸಭರಿತ ಪ್ರವಾಸ ಕೈಗೊಳ್ಳಬಹುದು. ಒಟ್ಟಾರೆಯಾಗಿ, ನೀವು ನಿಮ್ಮ ಮನೆಮಂದಿಯೊಂದಿಗೆ ಖುಷಿಯಲ್ಲಿ ಕಾಲಕಳೆಯುವಿರಿ.
ಕನ್ಯಾ :-
ನಿಮ್ಮ ವ್ಯವಹಾರದಿಂದ ಇತರರಿಗೆ ಲಾಭ ಉಂಟಾಗಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ದೂರಪ್ರವಾಸ ತೆರಳುವ ಸಾಧ್ಯತೆಗಳು ದಟ್ಟವಾಗಿವೆ. ನಿಮ್ಮ ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ. ದೂರದಲ್ಲಿ ನೆಲೆಸಿರುವ ನಿಮ್ಮ ರಕ್ತಸಂಬಂಧಿಗಳಿಂದ ಶುಭಸುದ್ದಿಯನ್ನು ಪಡೆಯುವಿರಿ. ಮಧ್ಯಾಹ್ನದ ಬಳಿಕ ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಬೆಂಬಲವನ್ನು ಪಡೆಯುವಿರಿ. ಮನೆಯಲ್ಲಿ ಖುಷಿಯ ವಾತಾವರಣವಿರುತ್ತದೆ ಮತ್ತು ಮಾನಸಿಕವಾಗಿ ಸಂತೋಷದಿಂದಿರುತ್ತೀರಿ. ಸೇವೆಯಲ್ಲಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.
ತುಲಾ :-
ಅತಿಯಾದ ಕಾರ್ಯದೊತ್ತಡ ಮತ್ತು ನಿಮ್ಮ ದೈಹಿಕ ಜಡತ್ವದಿಂದಾಗಿ ನೀವು ಮಾನಸಿಕ ಉದ್ವೇಗಕ್ಕೆ ಒಳಗಾಗಬಹುದು. ನಿಗದಿಪಡಿಸಿದ ಅವಧಿಯೊಳಗೆ ನೀವು ನಿಮ್ಮ ಕಾರ್ಯವನ್ನು ಪೂರ್ಣಗೊಳಿಸಲು ಶಕ್ತರಾಗುವಿರಿ. ಸಾಧ್ಯವಿದ್ದಷ್ಟು ಅನಾರೋಗ್ಯಕರ ಆಹಾರ ಸೇವನೆಯನ್ನು ತಪ್ಪಿಸಿ. ನಿಮ್ಮ ಪ್ರಯಾಣದಲ್ಲಿ ನೀವು ಕೆಲವು ತೊಂದರೆಗಳನ್ನು ಎದುರಿಸಬಹುದು. ಮಧ್ಯಾಹ್ನದ ಬಳಿಕ, ದೂರದಲ್ಲಿ ನೆಲೆಸಿರುವ ನಿಮ್ಮ ಸಂಬಂಧಿಗಳಿಂದ ಸುದ್ದಿಯನ್ನು ಪಡೆಯಬಹುದು.ಇದು ನಿಮ್ಮ ಹೃದಯದ ಚಿಪ್ಪನ್ನು ಬೆಚ್ಚಗಿರುಸುತ್ತದೆ. ಹೊಸ ಕಾರ್ಯ ಪ್ರಾರಂಭಿಸಲು ನೀವು ಸಾಕಷ್ಟು ಉತ್ಸಾಹವನ್ನು ಹೊಂದಿರುತ್ತೀರಿ. ವಿದೇಶ ಪ್ರವಾಸ ತೆರಳುವ ಸಾಧ್ಯತೆಗಳು ಕಂಡುಬರಬಹುದು. ವ್ಯವಹಾರದಿಂದ ಲಾಭ ಉಂಟಾಗವು ಸಾಧ್ಯತೆಗಳಿವೆ.
ವೃಶ್ಚಿಕ :-
ಇಂದು ನೀವು ಹುಮ್ಮಸ್ಸಿನಿಂದ ಎದ್ದು ಆರೋಗ್ಯವಾಗಿ ಮತ್ತು ಉಲ್ಲಾಸವಾಗಿ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ಸೊಗಸಾದ ಆಹಾರ ಸವಿಯುವ ಸಾಕಷ್ಟು ಸಮಾರಂಭಗಳಿರುತ್ತವೆ ಏನೇ ಆದರೂ, ಮಧ್ಯಾಹ್ನದ ಬಳಿಕ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಆಕಸ್ಮಿಕ ಇಳಿಮುಖವನ್ನು ಕಾಣುವಿರಿ. ಮಧ್ಯಾಹ್ನ ನೀವು ಏನು ತಿನ್ನುತ್ತೀರಿ ಅದರ ಬಗ್ಗೆ ಎಚ್ಚರವಹಿಸಿ. ನಿಮ್ಮ ಪ್ರಯಾಣದಲ್ಲಿ ತೊಡಕುಗಳುಂಟಾಗಬಹುದು. ಆಧ್ಯಾತ್ಮಿಕವಾಗಿ ಮತ್ತು ಧಾರ್ಮಿಕವಾಗಿ ಅಗತ್ಯವಿರುವ ಧೈರ್ಯವನ್ನು ಹೊಂದುವಂತೆ ಸಲಹೆ ನೀಡುತ್ತೇವೆ.
ಧನು :-
ಇಂದಿನ ಸೂರ್ಯೋದಯವು ನಿಮಗೆ ಸಂತಸದ ದಿನವನ್ನು ಸೂಚಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಕೈಗೊಂಡ ಎಲ್ಲಾ ಕಾರ್ಯಗಳನ್ನು ಮತ್ತು ಬಾಕಿ ಉಳಿದಿರುವ ಎಲ್ಲಾ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಇಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ. ಕುಟುಂಬ ಜೀವನವು ಸಂಭ್ರಮದಿಂದ ಕೂಡಿರುತ್ತದೆ. ನಿಮ್ಮೊಂದಿಗಿರುವ ಉದ್ಯಮಿಯು ವ್ಯಾಪಾರದಲ್ಲಿ ಏರಿಕೆಯನ್ನು ಕಾಣಬಹುದು. ಸಣ್ಣ ಔತಣಕೂಟವನ್ನು ಆಯೋಜಿವು ಬಗ್ಗೆ ನೀವು ಆಲೋಚಿಸಬಹುದು. ವಿದೇಶದಲ್ಲಿರುವ ನಿಮ್ಮ ಸಂಬಂಧಿಗಳಿಂದ ಶುಭ ಸುದ್ದಿಯನ್ನು ನೀವು ನಿರೀಕ್ಷಿಸಬಹುದು.
ಮಕರ :-
ಇಂದು ಕಾರ್ಮಿಕರು ಕಡಿಮೆ ಪ್ರತಿಫಲವನ್ನು ಹೊಂದುತ್ತಾರೆ. ಏನೇ ಆದರೂ, ಇದು ನಿಮ್ಮ ಕೆಲಸದಲ್ಲಿನ ಉತ್ಸಾಹ ಮತ್ತು ಹುರುಪಿನ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಇತರರೊಂದಿಗಿನ ನಿಮ್ಮ ಸಂಬಂಧಗಳು ಸಂಭ್ರಮದಿಂದ ಕೂಡಿರುತ್ತದೆ ಮತ್ತು ಸಾಮಾನ್ಯವಾಗಿ ನೀವು ಉತ್ತಮ ಆರೋಗ್ಯವನ್ನೇ ಹೊಂದುವಿರಿ. ಇಂದು ಹೊರಭಾಗದಲ್ಲಿ ಏನನ್ನೂ ತಿನ್ನಬೇಡಿ. ಮಧ್ಯಾಹ್ನದ ಬಳಿಕ ಅಪೂರ್ಣಗೊಂಡಿರುವ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಅನಾರೋಗ್ಯದಿಂದ ನರಳುತ್ತಿರುವವರು ಮಧ್ಯಾಹ್ನದ ಬಳಿಕ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಹಣಕಾಸು ಲಾಭ ಉಂಟಾಗಬಹುದು ಮತ್ತು ನಿಮ್ಮ ತಾಯಿಯ ಮನೆಯಿಂದ ಶುಭಸುದ್ದಿಗಳು ಬರಬಹುದು. ನಿಮ್ಮ ಸಹೋದ್ಯೋಗಿಗಳು ಬೆಂಬಲ ನೀಡುತ್ತಾರೆ.
ಕುಂಭ :-
ನಿಮ್ಮಲ್ಲಿರುವ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ, ಕ್ರೀಡಾಳುಗಳಿಗೆ ಇಂದು ಉತ್ತಮ ದಿನ ಎಂಬುದಾಗಿ ಗಣೇಶ ಹೇಳುತ್ತಾರೆ. ಸರಕಾರಿ ಮೂಲಗಳಿಂದ ಮತ್ತು ನಿಮ್ಮ ತಂದೆಯ ಮೂಲಗಳಿಂದ ನಿಮಗೆ ಲಾಭ ಉಂಟಾಗಲಿದೆ. ಮಾನಸಿಕವಾಗಿ ನೀವು ಇಂದು ಸ್ಥಿರವಾಗಿರುತ್ತೀರಿ ಆದ್ದರಿಂದ ಕಾರ್ಯದಲ್ಲಿ ನಿರೀಕ್ಷಿತ ಸಾಮರ್ಥ್ಯವನ್ನು ಹೊಂದುವಿರಿ. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ವ್ಯಾಧಿಗೊಳಪಡುವ ಸಾಧ್ಯತೆಯಿರುವುದರಿಂದ ಹೊರಭಾಗದಲ್ಲಿ ತಿನ್ನುವುದನ್ನು ತಪ್ಪಿಸಿ.ಓದು ಮತ್ತು ಬರಹದಲ್ಲಿನ ನಿಮ್ಮ ಆಸಕ್ತಿಯು ಇಂದು ಉತ್ತಮವಾಗಿರುತ್ತದೆ. ಇಂದು ನೀವು ಉತ್ತಮ ಹಣಕಾಸು ಸಿದ್ಧತೆಗಳನ್ನು ಮಾಡಿಕೊಳ್ಳುವಿರಿ.
ಮೀನ :-
ಇಂದು ನೀವು ತುಂಬಾ ಸಂತೋಷದಲ್ಲಿರುತ್ತೀರಿ. ನಿಮ್ಮ ಕ್ರಿಯಾತ್ಮಕ ಸಾಮರ್ಥ್ಯಗಳು ಗರಿಷ್ಠ ಮಿತಿಯಲ್ಲಿರುತ್ತದೆ. ನಿಮ್ಮ ಸ್ನೇಹಿತರು ಮತ್ತು ಮನೆಮಂದಿಯೊಂದಿಗೆ ಭೋಜನ ಹಂಚಿಕೊಳ್ಳಲು ಉತ್ತಮ ಸಮಾರಂಭವಿರುತ್ತದೆ. ನಿಮ್ಮ ದೈನಂದಿನ ಕಾರ್ಯಗಳನ್ನು ಏಕಾಗ್ರತೆ ಮತ್ತು ಆತ್ಮವಿಶ್ವಾಸದೊಂದಿಗೆ ನಿರ್ವಹಿಸಲು ಶಕ್ತರಾಗುವಿರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ದಿನ. ಮಕ್ಕಳಿಗೆ ತಂದೆಯಿಂದ ಪ್ರಯೋಜನಗಳು ಉಂಟಾಗುವ ಕಾರಣ ಮಕ್ಕಳಿಗೆ ಇಂದು ಲಾಭದಾಯಕ ದಿನ.
Dina Bhavishya : ಜನವರಿ 2 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
WhatsApp Group
Join Now