Gruhalakshmi Scheme : ನಮಸ್ಕಾರ ಸ್ನೇಹಿತರೇ, ಪ್ರತಿ ತಿಂಗಳು ₹2,000 ಹಣ ಪಡೆದುಕೊಳ್ಳುತ್ತಿರುವ ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಮಹಿಳೆಯರಿಗೆ ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಹೊಸ ನಿಯಮ ಜಾರಿಗೊಳಿಸಲಾಗಿದೆ. ಪ್ರತಿ ತಿಂಗಳು ಗೃಹಿಣಿಯರ ಖಾತೆಗೆ ₹2,000 ರೂ. ಗಳನ್ನು ಜಮಾ ಮಾಡುವ ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಆರಂಭವಾಗಿ ಸುಮಾರು ಒಂಬತ್ತು ತಿಂಗಳು ಕಳೆದಿದೆ. ಈಗಾಗಲೇ ಎಂಟು ಮತ್ತು ಒಂಬತ್ತನೇ ಕಂತಿನ ಹಣವನ್ನ ಕೂಡ ಬಿಡುಗಡೆ ಮಾಡಲಾಗಿದೆ.
ಏಪ್ರಿಲ್ ತಿಂಗಳಿನಲ್ಲಿ ₹4,000 ರೂಪಾಯಿಗಳು ಮಹಿಳೆಯರ ಖಾತೆಗೆ ಜಮಾ ಆಗಿದೆ. ಹೌದು, ಪ್ರತಿ ತಿಂಗಳು 20ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆಯ(Gruhalakshmi Scheme) ಹಣ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಈ ಚುನಾವಣೆಯ ಹಿನ್ನಲೆಯಲ್ಲಿ ಒಂಬತ್ತನೇ ಕಂತಿನ ಹಣವನ್ನ ಮಾತ್ರ ಬಹಳ ಬೇಗ ಬಿಡುಗಡೆ ಮಾಡಲಾಗಿತ್ತು. ಸಾಕಷ್ಟು ಜನ ಏಪ್ರಿಲ್ ತಿಂಗಳಿನಲ್ಲಿಯೇ ಮೇ ತಿಂಗಳ ಹಣವನ್ನ ಪಡೆದುಕೊಂಡಿದ್ದಾರೆ. ಒಂಬತ್ತನೇ ಕಂತಿನ ಹಣ ಮೇ 20ನೇ ತಾರೀಖಿನ ಒಳಗಡೆ ಫಲಾನುಭವಿಗಳ ಖಾತೆ ತಲುಪುವ ನಿರೀಕ್ಷೆ ಇದೆ.
ಇದನ್ನೂ ಕೂಡ ಓದಿ : PM Vishwakarma : ಕೇಂದ್ರದ ಈ ಯೋಜನೆಯಲ್ಲಿ ನಿಮಗೂ ಸಿಗಲಿದೆ 3 ಲಕ್ಷ ರೂಪಾಯಿ ಸಾಲ. ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
ಸರ್ಕಾರ ಬಾಕಿಯಿರುವ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು. ಆದರೆ ಸದ್ಯ ಇದು ಸಾಧ್ಯ ಆಗಿಲ್ಲ. ಆದ್ರೂ ನೀವು ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಅಪ್ಡೇಟ್ ಗಳನ್ನ ಮಾಡಿಕೊಂಡ್ರೆ ಪ್ರತಿ ತಿಂಗಳು ತಪ್ಪದೆ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ. ನೀವು ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಬ್ಯಾಂಕ್ ಖಾತೆಗೆ ಈ-ಕೆವೈಸಿ ಆಗಿರಬೇಕು. ಅಗತ್ಯ ಇದ್ದಲ್ಲಿ ಎನ್ ಪಿಸಿಐ ಮ್ಯಾಪಿಂಗ್ ಆಗಿರಬೇಕು. ಜೊತೆಗೆ ಆಧಾರ್ ಕಾರ್ಡ್ ಅಪ್ ಡೇಟ್ ಕೂಡ ಬಹಳ ಮುಖ್ಯ ಆಗಿರುತ್ತದೆ.
ಅತ್ತೆ ಇಲ್ಲದಿದ್ದರೆ ಸೊಸೆ ಬ್ಯಾಂಕ್ ಖಾತೆಗೆ ಹಣ ಜಮಾ
ಮನೆಯ ಹಿರಿಯ ಯಜಮಾನ ಅತ್ತೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತೆ. ಆದರೆ ಒಂದು ವೇಳೆ ಅತ್ತೆ ಮರಣ ಹೊಂದಿದ್ದರೆ, ಮತ್ತೆ ಆ ಮನೆಯ ಹಿರಿಯ ಸೊಸೆ ಹೊಸದಾಗಿ ಅರ್ಜಿಯನ್ನ ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಕೂಡ ಓದಿ : Drought Relief Fund : ರೈತರ ಖಾತೆಗೆ ₹15000 ಸಾವಿರ ಬರ ಪರಿಹಾರ ಜಮಾ – ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಹಾಗಾಗಿ ಅತ್ತೆ ಇಲ್ಲದೆ ಇದ್ದಾಗ ಸೊಸೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬಹುದು. ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಘೋಷಿಸಿಲ್ಲ. ಹಾಗಾಗಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಅಗತ್ಯ ಇರುವವರು ಹಾಗು ಅರ್ಹರು ಮತ್ತೆ ಅರ್ಜಿ ಸಲ್ಲಿಸಿ ತಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- MGR ಚಿನ್ನದ ಖಡ್ಗ, ಜಯಲಲಿತಾ ಚಂಡಿಕಾಯಾಗ.. ಈಗ ಮುಕಾಂಬಿಕೆ ಸನ್ನಿದಿಯಲ್ಲಿ ‘ದಳಪತಿ’! ಇದರ ಹಿಂದಿನ ರಹಸ್ಯವೇನು?
- ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ನಂಬಿಕೆ ದುರುಪಯೋಗಪಡಿಸಿಕೊಂಡ ಅಂಚೆ ವಿತರಕ ಸುರೇಶ್ ಬಂಧನ,
- ಯುವತಿಯ ಅಶ್ಲೀಲ ಎಐ ವಿಡಿಯೋ ಮಾಡಿ ಹಣಕ್ಕೆ ಡಿಮ್ಯಾಂಡ್, ಇಬ್ಬರು ಕಿಡಿಗೇಡಿಗಳು ಅರೆಸ್ಟ್
- 40 ವರ್ಷದ ಬಳಿಕ ಮೊತ್ತೊಬ್ಬ ವೈಭವ್ ಸೂರ್ಯವಂಶಿ ಬರ್ತಾನೆ: ರಾಹುಲ್ ದ್ರಾವಿಡ್ ಹಿಂಗ್ ಹೇಳಿದ್ಯಾಕೆ.?
- RSS ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿಗೆ ಕಲ್ಲು ತೂರಾಟ: ಇಬ್ಬರು ಆರೋಪಿಗಳು ಅರೆಸ್ಟ್
- ಬಿಡದಿ ರೈತರು ಅಸಲಿ ರೈತರೋ ಅಲ್ಲವೋ? ನೊಂದ ಹಳ್ಳಿಗಳಿಗೆ ಬನ್ನಿ, ನಾನು ಬರುತ್ತೇನೆ : ಸಿಎಂ ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಸವಾಲು
- ಗಂಡನ ವಿರುದ್ಧ ಸುಳ್ಳು ವರದಕ್ಷಿಣೆ ಕೇಸ್, ದ್ವೇಷ ಮರೆತು ಮಾವನ ಪ್ರಾಣ ಉಳಿಸಿದ ಅಳಿಯ, ಕೋರ್ಟ್ ಅವರಣದಲ್ಲಿ ಒಂದಾದ ಗಂಡ-ಹೆಂಡತಿ
- ಇವೆಲ್ಲವೂ ಷಡ್ಯಂತ್ರ ನಂಬಬೇಡಿ; ಧರ್ಮಸ್ಥಳ ಪ್ರಕರಣದ ಆರೋಪಕ್ಕೆ ಪ್ರಕಾಶ್ ರಾಜ್ ರಿಯಾಕ್ಷನ್!
- ಸ್ಟಿಂಗ್ ಪೇಯ ಸೇವಿಸಿ ಯುವಕ ಮೃತ್ಯು ಆರೋಪ; ಬಾಟಲಿಗಳನ್ನು ಸುಟ್ಟು ಗ್ರಾಮಸ್ಥರಿಂದ ಆಕ್ರೋಶ
- ಮುಂದೆಯೂ ಡಿಕೆಶಿ ಸಿಎಂ ಆದರೆ ನನಗೆ ಗಾಬರಿ: ಲೇವಡಿ ಮಾಡಿದರಾ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ.!
- ಕೊಲ್ಲೂರು ದೇಗುಲದಲ್ಲಿ ಆ ಸಂಕಲ್ಪ ಮಾಡಿ, ಅರ್ಚಕರ ಮುಂದೆ ಅದೊಂದು ಮನವಿ ಮಾಡಿಕೊಂಡ ಸಿಎಂ ವಿಜಯ್!
- ಕೊಲ್ಲೂರು ಮೂಕಾಂಬಿಕೆಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ವಿಜಯ್; ಸಂಖ್ಯಾ ಶಾಸ್ತ್ರದ ಹಿಂದಿರುವ ರಹಸ್ಯವೇನು.?
- ಪ್ರಧಾನಿ ಮೋದಿ ಇಲ್ಲದೆ ಇದು ಆಗುತ್ತಿರಲಿಲ್ಲ!…ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ; ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ
- ರಾತ್ರಿಯ ಊಟದ ಬಳಿಕ ಮಾವಿನ ಹಣ್ಣು ಸೇವಿಸಿ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಸಾವು!
- ಧರ್ಮಸ್ಥಳ ಕೇಸ್ : ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖವಾದ ತಕ್ಷಣ ಅವರು ಕ್ರಿಮಿನಲ್ ಆಗಲ್ಲ : ಗೃಹ ಸಚಿವ ಪ್ರಿಯಾಂಕ್ ಖರ್ಗೆ
- ನಾನು ಸತ್ತಿಲ್ಲ; ಆರಾಮಾಗಿದ್ದೇನೆ: ಆತಂಕ ಬೇಡ ಎಂದು ಸ್ಪಷ್ಟನೆ ನೀಡಿದ ಹಿರಿಯ ನಟ ದೊಡ್ದಣ್ಣ
- ಆಸ್ಪತ್ರೆಯಲ್ಲಿ ಪುರುಷರ ಹೆಣದ ‘ಅದನ್ನ’ ನೋಡಿ ಎಂಜಾಯ್ ಮಾಡ್ತಿದ್ವಿ ಎಂದ ಲೇಡಿ ಡಾಕ್ಟರ್, ಆಮೇಲೇನಾಯ್ತು.?
- ಕೊಪ್ಪಳದಲ್ಲಿ ತಂದೆ, ಅಕ್ಕನ ಕೊಲೆಗೆ ಬಿಗ್ ಟ್ವಿಸ್ಟ್ : ಪೋಲೀಸರ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!
- ಸಾಲದ ಹಣ ವಾಪಸ್ ಕೊಡುವುದಾಗಿ ನಂಬಿಸಿ ವೃದ್ಧೆಯ ಭೀಕರ ಕೊಲೆ.! ಮೇ 17 ರಿಂದಲೇ ನಾಪತ್ತೆಯಾಗಿದ್ದ ವೃದ್ಧೆ.!
- ಗಡಿ ದಾಟಿದ ವಾತ್ಸಲ್ಯ: ದಾವಣಗೆರೆಯ ಅನಾಥ ಮಗುವನ್ನು ದತ್ತು ಪಡೆದ ಇಟಲಿ ದಂಪತಿ.!



















