Horoscope Today : ಡಿಸೆಂಬರ್‌ 27 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ

Spread the love

ಮೇಷ :-

ಇಂದಿನ ದಿನವು ಅನನುಕೂಲತೆಯಿಂದ ಕೂಡಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮಾನಸಿಕ ಸ್ಥಿತಿ ಮತ್ತು ದೈಹಿಕ ಆರೋಗ್ಯವು ನಿಮ್ಮ ಉತ್ಸಾಹಗುಂದಿಸುತ್ತದೆ. ಅನಗತ್ಯ ಖರ್ಚುಗಳ ವೆಚ್ಚವೂ ವರ್ಧಿಸುವ ಸಾಧ್ಯತೆಯಿದೆ. ನಿಮ್ಮ ಉಳಿತಾಯದಲ್ಲಿ ಬಂಡವಾಳ ಹೂಡುವ ಬಗ್ಗೆ ಇಂದು ನೀವು ಯೋಜನೆ ರೂಪಿಸಬೇಕಾದ ಅಗತ್ಯವಿದೆ.

ನೀವು ಉದಾರಿಗಳಾದ ಕಾರಣ ನೀವು ಹೆಚ್ಚು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಎಚ್ಚರದಿಂದಿರಿ. ಕೊಡುಕೊಳ್ಳುವಿಕೆಯ ವಿಚಾರಗಳಲ್ಲಿ ವ್ಯವಹರಿಸುವಾಗ ನೀವು ಜಾಗರೂಕತೆಯಿಂದ ಇರಬೇಕಾಗುತ್ತದೆ. ಇಂದು ನೀವು ಆಧ್ಯಾತ್ಮದತ್ತ ಒಲವು ತೋರುತ್ತೀರಿ. ನಿರ್ಧಾರ ಕೈಗೊಳ್ಳಲು ನಿಮಗೆ ಇಂದು ಕಷ್ಟಕರವಾಗಬಹುದು ಪರಿಣಾಮವಾಗಿ ದಿನವಿಡೀ ವಿವಿಧ ರೀತಿಯ ಗೊಂದಲಗಳು ನಿಮ್ಮನ್ನು ಕಾಡುತ್ತಿರುತ್ತವೆ.

ವೃಷಭ :-

ಈ ದಿನವು ನಿಮ್ಮನ್ನು ಸಂಭಾವ್ಯ ಖುಷಿಯಲ್ಲಿರಿಸುತ್ತದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಲಕ್ಷ್ಮೀದೇವಿಯು ನಿಮ್ನನ್ನು ಹರಸುತ್ತಾಳೆ ಮತ್ತು ಇದರ ಪರಿಣಾಮವಾಗಿ ನಿಮ್ಮ ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಸ್ನೇಹಿತರು ಮತ್ತು ಪ್ರೀತಿಪಾತ್ರರು ಆತ್ಮೀಯತೆಯ ವಾತಾವರಣವನ್ನು ಸೃಷ್ಟಿಸಲಿದ್ದಾರೆ. ವ್ಯವಹಾರದಲ್ಲಿ ಮತ್ತು ವೃತ್ತಿಯಲ್ಲಿ ಹೊಸ ಸ್ನೇಹ ಅಥವಾ ಪರಿಚಯ ಉಂಟಾಗುವ ಸಾಧ್ಯತೆಯಿದೆ. ಸಣ್ಣ ಪ್ರವಾಸವು ನಿಮಗೆ ಸಾಕಷ್ಟು ಸಂತಸವನ್ನು ತರಬಹುದು. ಸಂಕ್ಷಿಪ್ತವಾಗಿ, ಈ ದಿನವು ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಆನಂದವನ್ನು ನೀಡಲಿದೆ.

ಮಿಥುನ :-

ಇಂದು ನೀವು ಮಾನಸಿಕವಾಗಿ ಆರಾಮದಾಯಕ ಹಾಗೂ ದೈಹಿಕವಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ. ವೃತ್ತಿಕ್ಷೇತ್ರಕ್ಕೆ ಸಂಬಂಧಿಸಿದಂತೆ, ನಿಮ್ಮ ಕೆಲಸದ ಬಗ್ಗೆ ನೀವು ಶ್ಲಾಘನೆ ಪಡೆದುಕೊಳ್ಳುವುದರಿಂದ ನಿಮ್ಮ ಉತ್ಸಾಹವು ಹೆಚ್ಚಲಿದೆ. ನಿಮ್ಮ ಸಹೋದ್ಯೋಗಿಗಳು ಕೂಡ ನಿಮಗೆ ಸಹಾಯ ಮಾಡಲಿದ್ದಾರೆ. ಸಾಮಾಜಿಕ ನೆಲೆಯಲ್ಲೂ ನಿಮ್ಮ ಗೌರವ ವೃದ್ಧಿಸಲಿದೆ. ವೈಯಕ್ತಿಕ ಜೀವನಕ್ಕೆ ಸಂಬಂಧಿಸಿ, ನೀವು ನಿಮ್ಮ ದಿನವನ್ನು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಉಲ್ಲಾಸದಿಂದ ಕಳೆಯಲಿದ್ದೀರಿ. ಬಡ್ತಿ ಸಿಗುವ ಸಾಧ್ಯತೆಯಿದೆ. ಸರಕಾರಿ ಅಥವಾ ಸರಕಾರಿ ಉದ್ಯೋಗಿಗಳೊಂದಿಗಿನ ನಿಮ್ಮ ವ್ಯವಹಾರವು ಯಶಸ್ವಿಯಾಗುತ್ತದೆ.

ಕರ್ಕಾಟಕ :-

ಈ ದಿನವು ಧಾರ್ಮಿಕ ಕೆಲಸಗಳಿಗಾಗಿ ಮೀಸಲಾಗಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ದೇವಾಲಯಗಳ ಭೇಟಿಯು ನಿಮ್ಮ ಬಲ ಹೆಚ್ಚಿಸಿ ನಿಮ್ಮನ್ನು ಮೇಲೆತ್ತಬಹುದು.ಮನೆಮಂದಿಯೊಂದಿಗೆ ಕಳೆದ ಸಮಯವು ಅತ್ಯಂತ ಸಂತೋಷ ಮತ್ತು ತೃಪ್ತಿಯ ಭರವಸೆ ಕೊಡಲಿದೆ. ನೀವು ದಿನ ಪೂರ್ತಿ ಆರೋಗ್ಯದಿಂದಿದ್ದು ಚಟುವಟಿಕೆಯಿಂದಿರುವಿರಿ.ಒಳ್ಳೆಯ ಉದ್ದೇಶಕ್ಕಾಗುವ ಒಂದು ಬದಲಾವಣೆಯ ಲಕ್ಷಣಗಳು ಪ್ರಬಲವಾಗಿವೆ.

ಸಿಂಹ :-

ಇಂದು ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಅಗತ್ಯವಿದೆ. ವೈದ್ಯಕೀಯ ವೆಚ್ಚಗಳುಂಟಾಗುವ ಸಾಧ್ಯತೆಯಿದೆ. ಇಂದು ಹೊರಗೆ ಹೋಗಿ ತಿನ್ನುವುದನ್ನು ನೀವು ತಪ್ಪಿಸಿ. ಕೆಲವು ಋಣಾತ್ಮಕ ಆಲೋಚನೆಗಳು ದಿನವಿಡೀ ನಿಮಗೆ ತೊಂದರೆ ನೀಡಲಿವೆ. ಅವುಗಳಿಂದ ದೂರವಿರಿ ಎಂಬುದಾಗಿ ಗಣೇಶ ಸಲಹೆ ನೀಡುತ್ತಾರೆ. ಧ್ಯಾನ ಮತ್ತು ಆಧ್ಯಾತ್ಮವು ನಿಮ್ಮ ಸಮಸ್ಯೆಗಳಿಂದ ಹೊರಬರಲು ಸಹಾಯಕವಾಗಲಿದೆ ಮತ್ತು ಮಾನಸಿಕವಾಗಿ ನಿಮ್ಮನ್ನು ಆರಾಮದಾಯಕವಾಗಿರಿಸುತ್ತದೆ.

ಕನ್ಯಾ :-

ಈ ದಿನವು ನಿಮಗೆ ಅತ್ಯಂತ ಶುಭದಿನವಾಗಿರುವ ಸಂಭವವಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ಇಂದು ನೀವು ಹೆಸರು ಮತ್ತು ಖ್ಯಾತಿಯನ್ನು ಸುಲಭವಾಗಿ ಗಳಿಸಬಹುದು. ಇಂದು ಉದ್ಯಮಿಗಳು ಮತ್ತು ಉದ್ಯಮ ಪಾಲುದಾರರ ನಡುವೆ ಸಾಕಷ್ಟು ಸಕಾರಾತ್ಮಕ ಮನೋಭಾವವಿರುತ್ತದೆ. ಹೊಸ ಬಟ್ಟೆಗಳ ಖರೀದಿಯು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ. ಸ್ನೇಹಿತರೊಂದಿಗೆ ಹರ್ಷದ ಪ್ರವಾಸ ತೆರಳಲಿದ್ದೀರಿ.

ತುಲಾ :-

ಇಂದು ದೈಹಿಕವಾಗಿ ನೀವು ಆರೋಗ್ಯದಿಂದಿರುತ್ತೀರಿ ಎಂಬುದಾಗಿ ಗಣೇಶ ಹೇಳುತ್ತಾರೆ. ವೃತ್ತಿ ಕ್ಷೇತ್ರದಲ್ಲೂ ನಿಮಗೆ ಪ್ರಯೋಜನ ಉಂಟಾಗಲಿದೆ. ನಿಮ್ಮ ಸಹೋದ್ಯೋಗಿಗಳು ಉತ್ತಮ ರೀತಿಯಲ್ಲಿ ಸಹಕರಿಸುತ್ತಾರೆ. ವೈಯಕ್ತಿಕ ನೆಲೆಯಲ್ಲಿ, ಇಂದು ನೀವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಉಲ್ಲಾಸದಿಂದ ನಿಮ್ಮ ದಿನವು ಕಳೆಯುವ ಸಂಭವವಿದೆ. ಜೊತೆಗೆ, ನೀವು ನಿಮ್ಮ ನಾಲಗೆಯ ಮೇಲೆ ಹತೋಟಿಯನ್ನಿಡುವುದು ಅತಿ ಮುಖ್ಯವಾಗಿದೆ. ಮಿತಿಮೀರಿದ ಖರ್ಚನ್ನು ತಪ್ಪಿಸಿ. ಇಂದು ನೀವು ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಕಾಣುವಿರಿ ಮತ್ತು ಇದು ನಿಮಗೆ ಹೆಸರು ಮತ್ತು ಖ್ಯಾತಿಯನ್ನು ತರುತ್ತದೆ.

ವೃಶ್ಚಿಕ :-

ಯಾವುದೇ ವ್ಯಕ್ತಿಗಳೊಂದಿಗೆ ಹಿಂಜರಿಕೆ ಮನೋಭಾವ ಹೊಂದುವುದನ್ನು ಆದಷ್ಟು ತಪ್ಪಿಸಿ ಎಂಬುದಾಗಿ ಗಣೇಶ ಹೇಳುತ್ತಾರೆ. ಮಕ್ಕಳಿಗೆ ಸಂಬಂಧಿಸಿದ ಚಿಂತೆಯು ನಿಮ್ಮನ್ನು ಬಾಧಿಸಬಹುದು. ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು ಮತ್ತು ಇದು ಓದಿನ ಮೇಲಿನ ನಿಮ್ಮ ಉತ್ಸಾಹವನ್ನು ಇನ್ನಷ್ಟು ಬೆಂಬಲಿಸುತ್ತದೆ. ಶೇರು ಮಾರುಕಟ್ಟೆ ಮತ್ತು ಬೆಟ್ಟಿಂಗ್ ಬಜಾರ್‌ಗಳಲ್ಲಿ ಬಂಡವಾಳ ಹೂಡುವುದನ್ನು ತಪ್ಪಿಸಿ. ಸಾಧ್ಯವಾದರೆ, ಪ್ರಯಾಣವನ್ನೂ ತಪ್ಪಿಸಿ. ಭವಿಷ್ಯದ ಬಂಡವಾಳದ ಕುರಿತಾಗಿ ಯೋಜನೆ ರೂಪಿಸಲು ಇದು ಸಕಾಲ. ಕಠಿಣ ಪರಿಶ್ರಮವು ಉತ್ತಮ ಫಲಿತಾಂಶವನ್ನು ನೀಡಲಿದೆ ಆದ್ದರಿಂದ ಶ್ರಮಪಟ್ಟು ದುಡಿಯಿರಿ.

ಧನು :-

ಮಾನಸಿಕ ತುಮುಲದಿಂದಾಗಿ ಇಂದು ನಿಮ್ಮ ಮನಸ್ಸು ಶಾಂತಿಯಿಂದಿರುವುದಿಲ್ಲ ಎಂಬುದಾಗಿ ಗಣೇಶ ಹೇಳುತ್ತಾರೆ. ದಿನವಿಡೀ ಕಾಡಲಿರುವ ಅಸ್ಥಿರ ಮನೆಯ ವಾತಾವರಣದಿಂದಾಗಿ, ನಿಮ್ಮ ಕುಟುಂಬ ಸದಸ್ಯರೊಂದಿಗೆ ನೀವು ಸಂಘರ್ಷಕ್ಕೆ ಒಳಗಾಗಬಹುದು. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ವ್ಯವಹರಿಸುವಾಗ ಎಚ್ಚರಿಕೆ ವಹಿಸಿ. ಆರ್ಥಿಕ ನಷ್ಟ ಉಂಟಾಗಲಿದೆ. ನಿಮ್ಮ ಹೆಸರಿಗೆ ಕಳಂಕ ತರುವ ಪರಿಸ್ಥಿತಿಯಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ನಿಮ್ಮ ತಾಯಿಯ ಆರೋಗ್ಯವು ನಿಮ್ಮನ್ನು ಚಿಂತೆಗೀಡುಮಾಡುತ್ತದೆ. ನಿಮಗೆ ಎದೆನೋವಿನ ಅನುಭವವಾಗಬಹುದು.

ಮಕರ :-

ಇಂದಿನ ದಿನವನ್ನು ನೀವು ನಿಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಉಲ್ಲಾಸದಿಂದ ಕಳೆಯುತ್ತೀರಿ.ಹರ್ಷದಾಯಕ ಪ್ರವಾಸ ತೆರಳುವ ಸಾಧ್ಯತೆಯಿದೆ. ಆಸ್ತಿ ಸಂಬಂಧಿತ ಎಲ್ಲಾ ವಿಚಾರಗಳಲ್ಲೂ ಜಾಗರೂಕರಾಗಿರಬೇಕು. ವೃತ್ತಿನಿರತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಇಂದು ನೀವು ನಿಮ್ಮ ಸ್ಪರ್ಧಾಗಳುಗಳನ್ನು ಮಣಿಸುತ್ತೀರಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವು ಇಂದು ನಿಮ್ಮನ್ನು ವ್ಯಾಕುಲತೆಗೆ ಒಳಪಡಿಸುವುದಿಲ್ಲ. ಸಂಭಾವ್ಯ ಧನಲಾಭದ ಯೋಗವಿದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಇಂದು ಸಕಾಲ.

ಕುಂಭ :-

ವಿವಿಧ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಇಂದು ನಿಮಗೆ ಕಷ್ಟವೆನಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ನಿಮ್ಮ ನಾಲಗೆಯನ್ನು ಹತೋಟಿಯಲ್ಲಿಡಲಾಗದ ನಿಮ್ಮ ಅಸಾಮರ್ಥ್ಯವು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂಘರ್ಷಕ್ಕೆ ಕಾರಣವಾಗುವ ಸಾದ್ಯತೆಯಿದೆ. ವಿದ್ಯಾರ್ಥಿಗಳು ತಮ್ಮ ಓದಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಬೇಕು. ಯಶಸ್ವಿಯಾಗಲು ಸ್ವಲ್ಪ ಸಮಯ ಬೇಕಾದೀತು. ತಾಳ್ಮೆಯಿಂದಿರಿ.

ಮೀನ :-

ನೀವು ಮಾನಸಿಕವಾಗಿ ಆರಾಮದಾಯಕ ಹಾಗೂ ದೈಹಿಕಾಗಿ ಆರೋಗ್ಯದಿಂದಿರುವ ಸಾಧ್ಯತೆಯಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಉತ್ಸಾಹವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿಮಗೆ ಉತ್ತೇಜನ ನೀಡುತ್ತದೆ. ನಿಮ್ಮ ಮನೆಯ ವಾತಾವರಣವು ಅನ್ಯೋನ್ಯವಾಗಿರುವ ಸಾಧ್ಯತೆಯಿದೆ. ನಿಮ್ಮ ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರವಾಸ ತೆರಳುವಿರಿ. ಆರ್ಥಿಕ ಲಾಭ ಉಂಟಾಗಲಿದೆ. ಧಾರ್ಮಿಕ ಚಟುವಟಿಕೆಗಳಿಗೆ ಮತ್ತು ಯಾತ್ರೆಗಳಿಗೆ ವೆಚ್ಚಮಾಡಬಹುದು.

WhatsApp Group Join Now

Spread the love

Leave a Reply